ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಸಾವು ಕೂಡಾ ಮೊದಲೇ ನಿರ್ಣಯವಾಗಿರುತ್ತದೆ. ಯಾವುದೇ ವ್ಯಕ್ತಿಯ ಸಾವು ಆಕಸ್ಮಿಕವಾಗಿರುವುದಿಲ್ಲ.

Team Udayavani, Nov 24, 2021, 1:07 PM IST

jjhgfd

ಒಬ್ಬ ವ್ಯಕ್ತಿಯ ಜೀವನದಲ್ಲಿ ಹುಟ್ಟಿನಿಂದ ಹಿಡಿದು ಸಾವಿನ ತನಕ ನಡೆಯುವ ಪ್ರತಿಯೊಂದು ಘಟನೆಗಳಿಗೆ ಗ್ರಹಗಳ ಪ್ರೇರಣೆಯೇ ಕಾರಣ. ಹುಟ್ಟಿದ ಸಮಯವು ಆತ್ಮದ ಹಿಂದಿನ ಜನ್ಮದ ಪ್ರಾರಬ್ಧ ಕರ್ಮದ ಫಲಕ್ಕೆ ಅನುಗುಣವಾಗಿ ನಿಗದಿಯಾಗಿರುತ್ತದೆ. ಅದೇ ರೀತಿ ಒಬ್ಬ ಮನುಷ್ಯನ ಸಾವು ಕೂಡಾ ಮೊದಲೇ ನಿರ್ಣಯವಾಗಿರುತ್ತದೆ. ಯಾವುದೇ ವ್ಯಕ್ತಿಯ ಸಾವು ಆಕಸ್ಮಿಕವಾಗಿರುವುದಿಲ್ಲ. ಜ್ಯೋತಿಷ್ಯದಲ್ಲಿ ಆಯುಷ್ಯವನ್ನು ಮೂರು ವಿಧವಾಗಿ ವಿಂಗಡಣೆ ಮಾಡಿರುತ್ತಾರೆ. ಅಷ್ಠಮಾಧಿಪತಿಯ ಉಚ್ಛ, ನೀಚ, ಮಿತ್ರ, ಶತ್ರು ಸ್ಥಾನಗಳನ್ನು ವಿಶ್ಲೇಷಿಸಿ ಅದಕ್ಕೆ ಅನುಸಾರವಾಗಿ, ಅಲ್ಫಾಯು, ಮಧ್ಯಾಯು ಮತ್ತು ಪೂರ್ಣಾಯು ಎಂದು ನಿರ್ಧರಿಸುತ್ತಾರೆ. ಆದ ಕಾರಣ ಯಾವುದೇ ವ್ಯಕ್ತಿಯ ಸಾವನ್ನು ಅಕಾಲಿಕ ಮರಣ ಎಂದು ಹೇಳಲಾಗುವುದಿಲ್ಲ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಅಷ್ಠಮ ಸ್ಥಾನವನ್ನು ಆಯುಷ್ಯ ಸ್ಥಾನ ಎಂದು ಪರಿಗಣಿಸಲಾಗುವುದು. ಅದೇ ರೀತಿ ಅಷ್ಠಮ ಸ್ಥಾನದಿಂದ ಅಷ್ಠಮ, ಮೂರನೇ ಮನೆಯನ್ನೂ ಆಯುಷ್ಯ ಸ್ಥಾನ ಎಂದು ಪರಿಗಣಿಸಲಾಗುವುದು(ಭವತ್ ಭವಂ). 12ನೇ ಮನೆಯನ್ನು ಮೋಕ್ಷ ಸ್ಥಾನವೆಂದೂ, ವ್ಯಯ ಸ್ಥಾನ ಎಂದೂ ಹೇಳುತ್ತೇವೆ. 8ನೇ ಮನೆ (ಆಯುಷ್ಯ ಸ್ಥಾನ), ವ್ಯಯಸ್ಥಾನ 7ನೇ ಮನೆ ಆಗಿರುತ್ತದೆ. ಅದೇ ರೀತಿ 3ನೇ ಮನೆಯ ವ್ಯಯಸ್ಥಾನ 2ನೇ ಮನೆ ಆಗಿರುತ್ತದೆ.

ಆದ ಕಾರಣ 7ನೇ ಮತ್ತು 2ನೇ ಮನೆಯನ್ನು ಮಾರಕ ಸ್ಥಾನ ಎಂದು ಪರಿಗಣಿಸಲಾಗುವುದು. ಮಾರಕ ಸ್ಥಾನದ ಅಧಿಪತಿಗಳ ದಶಾ ಮತ್ತು ಭುಕ್ತಿಯ ಸಮಯದಲ್ಲಿ, ವ್ಯಕ್ತಿಗೆ ಸಾವನ್ನು ಕೊಡುವಷ್ಟು ಗ್ರಹಗಳು ಶಕ್ತರಾಗಿರುತ್ತಾರೆ. ಅದೇ ರೀತಿ ಭಾದಕಾಧಿಪತಿಗಳು ಅಂದರೆ ದೇಹ ಭಾದೆಯನ್ನು ಕೊಡುವ ಗ್ರಹಗಳು. ಜ್ಯೋತಿಷ್ಯ ಶಾಸ್ತ್ರದಲ್ಲಿ 12 ರಾಶಿಗಳನ್ನು ಮೂರು ರೀತಿಯಲ್ಲಿ ವಿಂಗಡಣೆ ಮಾಡಿರುತ್ತಾರೆ.

ಚರ, ಸ್ಥಿರ, ಉಭಯ ರಾಶಿಗಳು ಎಂದು. ಮೇಷ, ಕರ್ಕಾಟಕ, ತುಲಾ, ಮಕರ ಚರ ರಾಶಿಗಳು. ವೃಷಭ, ಸಿಂಹ, ವೃಶ್ಚಿಕ, ಕುಂಭ ಸ್ಥಿರ ರಾಶಿಗಳು. ಮಿಥುನ, ಕನ್ಯಾ, ಧನು, ಮೀನ ಉಭಯ ರಾಶಿಗಳು. ಚರ ರಾಶಿಗೆ, 11ನೇ ಮನೆ ಅಧಿಪತಿ ಭಾದಕಾಧಿಪತಿ, ಸ್ಥಿರ ರಾಶಿಗೆ, 9ನೇ ಮನೆ, ಅಧಿಪತಿ ಭಾದಕಾಧಿಪತಿ. ಉಭಯ ರಾಶಿಗೆ, 7ನೇ ಮನೆ ಅಧಿಪತಿ ಭಾದಕಾಧಿಪತಿಯಾಗಿರುತ್ತಾನೆ.

ಉದಾಹರಣೆಗೆ:

ಮೇಷ ಲಗ್ನಕ್ಕೆ, 11ರ ಅಧಿಪತಿ, ಶನಿ ಭಾದಕಾಧಿಪತಿಯಾಗಿರುತ್ತಾನೆ. ಅದೇ ರೀತಿ 2ನೇ ಮತ್ತು 7ನೇ ಅಧಿಪತಿಗಳಾದ, ಶುಕ್ರನು ಮಾರಕಾಧಿಪತಿಯಾಗಿರುತ್ತಾನೆ. ಆಗ ಶನಿದಶಾ, ಶುಕ್ತ ಭುಕ್ತಿ ಯಾ ಶುಕ್ರ ದಶಾ, ಶನಿ ಭುಕ್ತೆ ಮತ್ತು ರೋಗ ಸ್ಥಾನಾಧಿಪತಿಯಾದ 6ನೇ ಮನೆ ಮತ್ತು ವ್ಯಯ ಸ್ಥಾನಾಧಿಪತಿಯಾದ 12ನೇ ಮನೆಯ ಅಧಿಪತಿಗಳ ದಶಾ ಭುಕ್ತಿ, ಅಂತರ್ ಭುಕ್ತಿ, ಪ್ರಾಣ ಭುಕ್ತಿ ಮತ್ತು ಸೂಕ್ಷ್ಮ ಭುಕ್ತಿಗಳ ಸಮಯದಲ್ಲಿ ಜಾತಕನ ಆಯುಷ್ಯಕ್ಕೆ ಕಂಟಕ ಬರುವ ಸಾಧ್ಯತೆ ಇದೆ. ಆದರೆ ನಂತರ ಬರುವ ದಶಾ ಭುಕ್ತಿಗಳು, ಯೋಗಕಾರಕರಾಗಿದ್ದರೆ, ಈ ಕಂಟಕದಿಂದ ಪಾರಾಗಬಹುದು. ನುರಿತ ಜ್ಯೋತಿಷಿಗಳ ಮಾರ್ಗದರ್ಶನದಿಂದ ಪರಿಹಾರಗಳನ್ನು ಕಂಡುಕೊಳ್ಳಬಹುದು.

ರವೀಂದ್ರ.ಎ. ಜ್ಯೋತಷ್ಯ ವಿಶಾರದ

ಬಿಎಸ್ಸಿ, ಎಲ್ ಎಲ್ ಬಿ

ಜ್ಯೋತಿಷ್ಯ ವಿಶ್ಲೇಷಕರು, ಉಡುಪಿ

ಟಾಪ್ ನ್ಯೂಸ್

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ದಶಾ ಸಂಧಿ ಕಾಲ ಎಂದರೇನು? ಮೂರು ದಶಾ ಸಂಧಿಗೆ ಹೆಚ್ಚು ಪ್ರಾಮುಖ್ಯತೆ

ದಶಾ ಸಂಧಿ ಕಾಲ ಎಂದರೇನು? ಮೂರು ದಶಾ ಸಂಧಿಗೆ ಹೆಚ್ಚು ಪ್ರಾಮುಖ್ಯತೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.