ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಸಾವು ಕೂಡಾ ಮೊದಲೇ ನಿರ್ಣಯವಾಗಿರುತ್ತದೆ. ಯಾವುದೇ ವ್ಯಕ್ತಿಯ ಸಾವು ಆಕಸ್ಮಿಕವಾಗಿರುವುದಿಲ್ಲ.

Team Udayavani, Nov 24, 2021, 1:07 PM IST

jjhgfd

ಒಬ್ಬ ವ್ಯಕ್ತಿಯ ಜೀವನದಲ್ಲಿ ಹುಟ್ಟಿನಿಂದ ಹಿಡಿದು ಸಾವಿನ ತನಕ ನಡೆಯುವ ಪ್ರತಿಯೊಂದು ಘಟನೆಗಳಿಗೆ ಗ್ರಹಗಳ ಪ್ರೇರಣೆಯೇ ಕಾರಣ. ಹುಟ್ಟಿದ ಸಮಯವು ಆತ್ಮದ ಹಿಂದಿನ ಜನ್ಮದ ಪ್ರಾರಬ್ಧ ಕರ್ಮದ ಫಲಕ್ಕೆ ಅನುಗುಣವಾಗಿ ನಿಗದಿಯಾಗಿರುತ್ತದೆ. ಅದೇ ರೀತಿ ಒಬ್ಬ ಮನುಷ್ಯನ ಸಾವು ಕೂಡಾ ಮೊದಲೇ ನಿರ್ಣಯವಾಗಿರುತ್ತದೆ. ಯಾವುದೇ ವ್ಯಕ್ತಿಯ ಸಾವು ಆಕಸ್ಮಿಕವಾಗಿರುವುದಿಲ್ಲ. ಜ್ಯೋತಿಷ್ಯದಲ್ಲಿ ಆಯುಷ್ಯವನ್ನು ಮೂರು ವಿಧವಾಗಿ ವಿಂಗಡಣೆ ಮಾಡಿರುತ್ತಾರೆ. ಅಷ್ಠಮಾಧಿಪತಿಯ ಉಚ್ಛ, ನೀಚ, ಮಿತ್ರ, ಶತ್ರು ಸ್ಥಾನಗಳನ್ನು ವಿಶ್ಲೇಷಿಸಿ ಅದಕ್ಕೆ ಅನುಸಾರವಾಗಿ, ಅಲ್ಫಾಯು, ಮಧ್ಯಾಯು ಮತ್ತು ಪೂರ್ಣಾಯು ಎಂದು ನಿರ್ಧರಿಸುತ್ತಾರೆ. ಆದ ಕಾರಣ ಯಾವುದೇ ವ್ಯಕ್ತಿಯ ಸಾವನ್ನು ಅಕಾಲಿಕ ಮರಣ ಎಂದು ಹೇಳಲಾಗುವುದಿಲ್ಲ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಅಷ್ಠಮ ಸ್ಥಾನವನ್ನು ಆಯುಷ್ಯ ಸ್ಥಾನ ಎಂದು ಪರಿಗಣಿಸಲಾಗುವುದು. ಅದೇ ರೀತಿ ಅಷ್ಠಮ ಸ್ಥಾನದಿಂದ ಅಷ್ಠಮ, ಮೂರನೇ ಮನೆಯನ್ನೂ ಆಯುಷ್ಯ ಸ್ಥಾನ ಎಂದು ಪರಿಗಣಿಸಲಾಗುವುದು(ಭವತ್ ಭವಂ). 12ನೇ ಮನೆಯನ್ನು ಮೋಕ್ಷ ಸ್ಥಾನವೆಂದೂ, ವ್ಯಯ ಸ್ಥಾನ ಎಂದೂ ಹೇಳುತ್ತೇವೆ. 8ನೇ ಮನೆ (ಆಯುಷ್ಯ ಸ್ಥಾನ), ವ್ಯಯಸ್ಥಾನ 7ನೇ ಮನೆ ಆಗಿರುತ್ತದೆ. ಅದೇ ರೀತಿ 3ನೇ ಮನೆಯ ವ್ಯಯಸ್ಥಾನ 2ನೇ ಮನೆ ಆಗಿರುತ್ತದೆ.

ಆದ ಕಾರಣ 7ನೇ ಮತ್ತು 2ನೇ ಮನೆಯನ್ನು ಮಾರಕ ಸ್ಥಾನ ಎಂದು ಪರಿಗಣಿಸಲಾಗುವುದು. ಮಾರಕ ಸ್ಥಾನದ ಅಧಿಪತಿಗಳ ದಶಾ ಮತ್ತು ಭುಕ್ತಿಯ ಸಮಯದಲ್ಲಿ, ವ್ಯಕ್ತಿಗೆ ಸಾವನ್ನು ಕೊಡುವಷ್ಟು ಗ್ರಹಗಳು ಶಕ್ತರಾಗಿರುತ್ತಾರೆ. ಅದೇ ರೀತಿ ಭಾದಕಾಧಿಪತಿಗಳು ಅಂದರೆ ದೇಹ ಭಾದೆಯನ್ನು ಕೊಡುವ ಗ್ರಹಗಳು. ಜ್ಯೋತಿಷ್ಯ ಶಾಸ್ತ್ರದಲ್ಲಿ 12 ರಾಶಿಗಳನ್ನು ಮೂರು ರೀತಿಯಲ್ಲಿ ವಿಂಗಡಣೆ ಮಾಡಿರುತ್ತಾರೆ.

ಚರ, ಸ್ಥಿರ, ಉಭಯ ರಾಶಿಗಳು ಎಂದು. ಮೇಷ, ಕರ್ಕಾಟಕ, ತುಲಾ, ಮಕರ ಚರ ರಾಶಿಗಳು. ವೃಷಭ, ಸಿಂಹ, ವೃಶ್ಚಿಕ, ಕುಂಭ ಸ್ಥಿರ ರಾಶಿಗಳು. ಮಿಥುನ, ಕನ್ಯಾ, ಧನು, ಮೀನ ಉಭಯ ರಾಶಿಗಳು. ಚರ ರಾಶಿಗೆ, 11ನೇ ಮನೆ ಅಧಿಪತಿ ಭಾದಕಾಧಿಪತಿ, ಸ್ಥಿರ ರಾಶಿಗೆ, 9ನೇ ಮನೆ, ಅಧಿಪತಿ ಭಾದಕಾಧಿಪತಿ. ಉಭಯ ರಾಶಿಗೆ, 7ನೇ ಮನೆ ಅಧಿಪತಿ ಭಾದಕಾಧಿಪತಿಯಾಗಿರುತ್ತಾನೆ.

ಉದಾಹರಣೆಗೆ:

ಮೇಷ ಲಗ್ನಕ್ಕೆ, 11ರ ಅಧಿಪತಿ, ಶನಿ ಭಾದಕಾಧಿಪತಿಯಾಗಿರುತ್ತಾನೆ. ಅದೇ ರೀತಿ 2ನೇ ಮತ್ತು 7ನೇ ಅಧಿಪತಿಗಳಾದ, ಶುಕ್ರನು ಮಾರಕಾಧಿಪತಿಯಾಗಿರುತ್ತಾನೆ. ಆಗ ಶನಿದಶಾ, ಶುಕ್ತ ಭುಕ್ತಿ ಯಾ ಶುಕ್ರ ದಶಾ, ಶನಿ ಭುಕ್ತೆ ಮತ್ತು ರೋಗ ಸ್ಥಾನಾಧಿಪತಿಯಾದ 6ನೇ ಮನೆ ಮತ್ತು ವ್ಯಯ ಸ್ಥಾನಾಧಿಪತಿಯಾದ 12ನೇ ಮನೆಯ ಅಧಿಪತಿಗಳ ದಶಾ ಭುಕ್ತಿ, ಅಂತರ್ ಭುಕ್ತಿ, ಪ್ರಾಣ ಭುಕ್ತಿ ಮತ್ತು ಸೂಕ್ಷ್ಮ ಭುಕ್ತಿಗಳ ಸಮಯದಲ್ಲಿ ಜಾತಕನ ಆಯುಷ್ಯಕ್ಕೆ ಕಂಟಕ ಬರುವ ಸಾಧ್ಯತೆ ಇದೆ. ಆದರೆ ನಂತರ ಬರುವ ದಶಾ ಭುಕ್ತಿಗಳು, ಯೋಗಕಾರಕರಾಗಿದ್ದರೆ, ಈ ಕಂಟಕದಿಂದ ಪಾರಾಗಬಹುದು. ನುರಿತ ಜ್ಯೋತಿಷಿಗಳ ಮಾರ್ಗದರ್ಶನದಿಂದ ಪರಿಹಾರಗಳನ್ನು ಕಂಡುಕೊಳ್ಳಬಹುದು.

ರವೀಂದ್ರ.ಎ. ಜ್ಯೋತಷ್ಯ ವಿಶಾರದ

ಬಿಎಸ್ಸಿ, ಎಲ್ ಎಲ್ ಬಿ

ಜ್ಯೋತಿಷ್ಯ ವಿಶ್ಲೇಷಕರು, ಉಡುಪಿ

ಟಾಪ್ ನ್ಯೂಸ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ದಶಾ ಸಂಧಿ ಕಾಲ ಎಂದರೇನು? ಮೂರು ದಶಾ ಸಂಧಿಗೆ ಹೆಚ್ಚು ಪ್ರಾಮುಖ್ಯತೆ

ದಶಾ ಸಂಧಿ ಕಾಲ ಎಂದರೇನು? ಮೂರು ದಶಾ ಸಂಧಿಗೆ ಹೆಚ್ಚು ಪ್ರಾಮುಖ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.