ಕುಮ್ಕಿ ಹಕ್ಕು ಈಗಲೂ ಕೃಷಿಕರು ಅತಂತ್ರ


Team Udayavani, Jul 23, 2017, 8:45 AM IST

raita.jpg

ವಿಶೇಷ ವರದಿ

ಪುತ್ತೂರು: ಒಂದೂವರೆ ಶತಮಾನದಿಂದ ಅವಿಭಜಿತ ಜಿಲ್ಲೆಯ 4.38 ಲಕ್ಷ ಕೃಷಿಕರ ಅನುಭೋಗದಲ್ಲಿರುವ ಕುಮ್ಕಿ ಭೂಮಿಯ ಹಕ್ಕು ನೀಡುವ ಸಂಬಂಧ ಆ. 23ರೊಳಗೆ ಕೋರ್ಟ್‌ಗೆ ಸರಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಿದೆ.

ಅವಿಭಜಿತ ದ.ಕ.ದಲ್ಲಿ 4.38 ಲಕ್ಷ ಮಂದಿ 2.15 ಲಕ್ಷ ಎಕ್ರೆ ಕುಮ್ಕಿ ಭೂಮಿ ಹೊಂದಿ ದ್ದಾರೆ. 9.2 ಲಕ್ಷ ಪಹಣಿ ಪತ್ರಗಳಿವೆ ಎನ್ನು ತ್ತದೆ  ಅಂದಾಜು ಅಂಕಿ- ಅಂಶ. 2011ರಲ್ಲಿ ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ ದ.ಕ.ದಲ್ಲಿ 2.86 ಲಕ್ಷ ಕುಮ್ಕಿದಾರರಿದ್ದಾರೆ.

ಒಂದು ವೇಳೆ ಸರಕಾರ ಕುಮ್ಕಿ ಹಕ್ಕು ರೈತರಿಗೆ ನೀಡಿದರೆ ಅದರಿಂದ ಸರಕಾರಕ್ಕೂ ಆದಾಯವಿದೆ. ಕುಮ್ಕಿದಾ ರನಿಗೆ ತಲಾ 5 ಎಕ್ರೆ ಅಥವಾ 100 ಗಜ ಮಿತಿಯಲ್ಲಿ ಅದರ ಹಕ್ಕು ನೀಡಿದರೆ ಸರಕಾರಕ್ಕೆ ವಾರ್ಷಿಕ 1,400 ಕೋಟಿ ರೂ. ಹೆಚ್ಚುವರಿ ಭೂ ಕಂದಾಯ ಸಿಗುತ್ತದೆ. 5 ಎಕ್ರೆಗಿಂತ ಹೆಚ್ಚುವರಿ ಕುಮ್ಕಿ ಭೂಮಿ ನೀಡುವುದಾದರೆ, ಆತ ಕಟ್ಟುವ ವಾರ್ಷಿಕ ಭೂ ಕಂದಾಯದ 500 ಪಟ್ಟು ಹೆಚ್ಚು ದಂಡ ವಿಧಿಸಬಹುದು. ಆದರೂ ಸರಕಾರಗಳು ಆಸಕ್ತಿ ವಹಿಸುತ್ತಿಲ್ಲ ಎನ್ನುತಾರೆ ನಾಗರಿಕರು.

ಅವಿಭಜಿತ ಜಿಲ್ಲೆ ಭತ್ತ ಪ್ರಧಾನ ಪ್ರದೇಶವಾಗಿತ್ತು. ಕೃಷಿಗೆ ಬೇಕಾದ ಸೊಪ್ಪು ಕಡಿಯಲೆಂದೇ ಬ್ರಿಟಿಷ್‌ ಸರಕಾರ ವರ್ಗದ ಪಕ್ಕದಲ್ಲಿ ಕುಮ್ಕಿ ಸವಲತ್ತು ನೀಡಿತ್ತು. ಆದರೆ ಭೂಮಿ ಹಕ್ಕು ನೀಡಿರಲಿಲ್ಲ. 

1885 ರ ಮಾರ್ಚ್‌ 10ರಿಂದ ಕುಮ್ಕಿ ಹಕ್ಕು ಉಡುಪಿ, ದ.ಕ. ಭಾಗದಲ್ಲಿ ನೀಡಲಾ ಗಿದೆ. ವರ್ಗಕ್ಕೆ ಲಗ್ತಿàಕರಿಸಿದ ಕುಮ್ಕಿಯನ್ನು ಹಕ್ಕಾಗಿ ನೀಡಬೇಕೆಂಬುದು ಕುಮ್ಕಿ ಹಕ್ಕು ಪರ ಹೋರಾಟಗಾರರ ಆಗ್ರಹ. ಆದರೆ ಈ ವಾದಕ್ಕೆ ಸರಕಾರ ಇನ್ನೂ ಮನ್ನಣೆ ನೀಡಿಲ್ಲ. ಪರಿಣಾಮ ಹೋರಾಟಗಾರರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ.

1905ರಲ್ಲಿ ಮೊದಲ ಬಾರಿಗೆ ಸಮಗ್ರ ಭೂಮಿ ಅಳತೆ ಪ್ರಕ್ರಿಯೆ ನಡೆದಿತ್ತು. ಸರಕಾರಿ, ಖಾಸಗಿ, ಅರಣ್ಯ, ಕುಮ್ಕಿ ಇತ್ಯಾದಿಗಳನ್ನು ವರ್ಗೀಕರಿಸಲಾಗಿತ್ತು. 1934ರಲ್ಲಿ ಎರಡನೇ ಸರ್ವೆ ನಡೆಯಿತು. ಪ್ರತೀ 30 ವರ್ಷಕ್ಕೊಮ್ಮೆ ಸರ್ವೆ ಮಾಡಬೇಕೆಂದು 1886ರ ಭೂ ಕಂದಾಯ ಕಾನೂನು ಹೇಳಿತ್ತಾದರೂ 1934ರ ಅನಂತರ ಆಗಿಲ್ಲ ಎನ್ನಲಾಗಿದೆ.

ನ್ಯಾಯಾಲಯಕ್ಕೆ ಮೊರೆ
2016ರ ಜನವರಿ 25ರಂದು ಭಾರತೀಯ ಕಿಸಾನ್‌ ಸಂಘ ಹೈಕೋರ್ಟ್‌ ನಲ್ಲಿ ಕುಮ್ಕಿದಾರರ ಪರ ದಾವೆ ಮಂಡಿಸಿತ್ತು. 2017ರ ಮೇ 25ರಂದು ಯಥಾಸ್ಥಿತಿ ಆದೇಶ ನೀಡಿ ರುವ ಕೋರ್ಟ್‌ ಸರಕಾರದ ಉತ್ತರ ಕೇಳಿತ್ತು. ಸರಕಾರಿ ನ್ಯಾಯವಾದಿಗಳು ಜೂ. 23ರಂದು 2 ತಿಂಗಳ ಸಮಯ ಕೇಳಿದ್ದರು. ಈಗಿನ ಸರಕಾರ ಕುಮ್ಕಿ ಹಕ್ಕು ನೀಡುವ ವಿಚಾರದಲ್ಲಿ ಯಾವ ನಿರ್ಧಾರ ತಳೆಯಲಿದೆ ಎಂಬುದು ಆಗಸ್ಟ್‌ 23ರೊಳಗೆ ಬಹಿರಂಗಗೊಳ್ಳಲಿದೆ.

ಈ ಮಧ್ಯೆ 1905ರಿಂದ 2004ರ ವರೆಗೆ ತೀರುವೆ ಕಟ್ಟಿದ ರಶೀದಿಗಳನ್ನು ಸುಳ್ಯದ 21 ಗ್ರಾಮಗಳ ರೈತರು ಹೈಕೋರ್ಟ್‌ಗೆ ದಾಖಲೆ ಸಲ್ಲಿಸಿದ್ದಾರೆ. ಇದು ನ್ಯಾಯಾಲಯದ ವಿಚಾರಣೆ ಸಂದರ್ಭ ಮಹತ್ವದ ದಾಖಲೆಯಾಗಬಹುದು ಎನ್ನಲಾಗಿದೆ.

ಟಾಪ್ ನ್ಯೂಸ್

Prajwal ಎಲ್ಲಿದ್ದೀಯಪ್ಪಾ? ಬಂದುಬಿಡು: ಎಚ್‌ಡಿಕೆ

Prajwal ಎಲ್ಲಿದ್ದೀಯಪ್ಪಾ? ಬಂದುಬಿಡು: ಎಚ್‌ಡಿಕೆ

1-ub

Uber ಬಸ್‌ಗಳು ದಿಲ್ಲಿಯ ರಸ್ತೆಯಲ್ಲಿ ಓಡಲಿದೆ!

IMD

Delhi ತಾಪ 47 ಡಿಗ್ರಿ: ಶಾಲೆಗಳಿಗೆ ಸುದೀರ್ಘ‌ ರಜೆ

Prajwal Revanna ಪಾಸ್‌ಪೋರ್ಟ್‌ ರದ್ದು ಕೋರಿ ಕೇಂದ್ರಕ್ಕೆ ಪತ್ರ

Prajwal Revanna ಪಾಸ್‌ಪೋರ್ಟ್‌ ರದ್ದು ಕೋರಿ ಕೇಂದ್ರಕ್ಕೆ ಪತ್ರ

covid

Covaxin ಸೈಡ್‌ಎಫೆಕ್ಟ್ ವರದಿಗೆ ಐಸಿಎಂಆರ್‌ ಕಿಡಿ

bCongress ಶಾಸಕರಿಂದಲೇ ಶಿಂಧೆ ಮಾದರಿ: ಬಿಜೆಪಿCongress ಶಾಸಕರಿಂದಲೇ ಶಿಂಧೆ ಮಾದರಿ: ಬಿಜೆಪಿ

Congress ಶಾಸಕರಿಂದಲೇ ಶಿಂಧೆ ಮಾದರಿ: ಬಿಜೆಪಿ

1-rava

Vote ನೀಡದವರಿಗೆ ತೆರಿಗೆ ಹೆಚ್ಚು ಮಾಡಿ: ನಟ ಪರೇಶ್‌ ರಾವಲ್‌ ಸಲಹೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

Belthangady ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿ: ಕೋಟ

Belthangady ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿ: ಕೋಟ

Belthangady ವಿದ್ಯುತ್‌ ತಂತಿ ಮೇಲೆ ಬಿದ್ದ ಮರ; ವ್ಯಕ್ತಿಗೆ ಗಾಯ

Belthangady ವಿದ್ಯುತ್‌ ತಂತಿ ಮೇಲೆ ಬಿದ್ದ ಮರ; ವ್ಯಕ್ತಿಗೆ ಗಾಯ

1-asdsad

Bantwal; ರಿಕ್ಷಾ ಪಲ್ಟಿಯಾಗಿ ರಸ್ತೆಗೆ ಎಸೆಯಲ್ಪಟ್ಟ ಯುವಕ ಮೃತ್ಯು

1wewqewq

Bantwal; ಮಂಚಿಯಲ್ಲಿ ಹಿಟ್ ಆ್ಯಂಡ್ ರನ್: ಸ್ಕೂಟರ್ ಸವಾರ ಮೃತ್ಯು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Prajwal ಎಲ್ಲಿದ್ದೀಯಪ್ಪಾ? ಬಂದುಬಿಡು: ಎಚ್‌ಡಿಕೆ

Prajwal ಎಲ್ಲಿದ್ದೀಯಪ್ಪಾ? ಬಂದುಬಿಡು: ಎಚ್‌ಡಿಕೆ

1-ub

Uber ಬಸ್‌ಗಳು ದಿಲ್ಲಿಯ ರಸ್ತೆಯಲ್ಲಿ ಓಡಲಿದೆ!

IMD

Delhi ತಾಪ 47 ಡಿಗ್ರಿ: ಶಾಲೆಗಳಿಗೆ ಸುದೀರ್ಘ‌ ರಜೆ

Prajwal Revanna ಪಾಸ್‌ಪೋರ್ಟ್‌ ರದ್ದು ಕೋರಿ ಕೇಂದ್ರಕ್ಕೆ ಪತ್ರ

Prajwal Revanna ಪಾಸ್‌ಪೋರ್ಟ್‌ ರದ್ದು ಕೋರಿ ಕೇಂದ್ರಕ್ಕೆ ಪತ್ರ

covid

Covaxin ಸೈಡ್‌ಎಫೆಕ್ಟ್ ವರದಿಗೆ ಐಸಿಎಂಆರ್‌ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.