ಶೌಚಕ್ಕೆ ಹೋಗಿದ್ದಕ್ಕೆ 526 ರೂ! ಬೆಂಗಳೂರಿಗೆ ಹೊಸಬರಾಗಿದ್ದರೆ ಹುಷಾರ್‌


Team Udayavani, Jul 29, 2017, 5:02 PM IST

101.jpg

ಬೆಂಗಳೂರು ಎಲ್ಲರ ಪಾಲಿಗೂ ಕನಸಿನ ನಗರಿ. ಈ ಮಹಾನಗರಕ್ಕೆ ಒಮ್ಮೆಯಾದರೂ ಭೇಟಿ ನೀಡಬೇಕು. ಸಾಧ್ಯವಾದರೆ ಕೆಲಸ ತೆಗೆದುಕೊಂಡು ಇಲ್ಲಿಯೇ ಬದುಕಬೇಕೆಂಬ ಹಂಬಲ ಎಲ್ಲರಿಗೂ ಇರುತ್ತದೆ. ಅದಕ್ಕಾಗಿ ಇಲ್ಲಿಗೆ ಬರುವವರು ಹಲವರು. ಅದರೆ, ಒಂದು ನೌಕರಿ ಹಿಡಿಯಲು ಈ ಊರಿನಲ್ಲಿ ನಡೆಸುವ ಅಲೆದಾಟ, ಆ ಸಂದರ್ಭದಲ್ಲಿ ಎದುರಾಗುವ ಸಂಕಷ್ಟಗಳು ಸಾವಿರಾರು. ಪ್ರತಿದಿನ ಎದ್ದರೆ ಸಾಕು; ತಲೆಯಲ್ಲಿ ಒಂದೇ ಟೆನÒನ್‌. ಕೆಲಸ, ಕೆಲಸ ಕೆಲಸ… ಎಷ್ಟು ಸಂದರ್ಶನ ಮುಗಿಸಿದರೂ ಸಿಗುವ ಉತ್ತರ ಒಂದೇ. “´ೋನ್‌ ಮಾಡುತ್ತೀವಿ ಹೋಗಿ ಬನ್ನಿ’! ಇದರ ನಡುವೆ ಕೆಲಮೊಮ್ಮೆ ಸುತ್ತಿದ ಜಾಗದಲ್ಲೇ ಸುತ್ತಿ ಸುತ್ತಿ ಸಿಕ್ಕಾಪಟ್ಟೆ ಬೇಸರಗೊಳ್ಳುವುದು ತೀರಾ ಸಾಮಾನ್ಯ ಎಂಬಂಥ ಸಂಗತಿ. 

ಒಮ್ಮೆ ಬೆಂಗಳೂರಿನ ಒಂದು ಪ್ರತಿಷ್ಟಿತ ಕಂಪನಿಯೊಂದರ ಸಂದರ್ಶನಕ್ಕೆ ಹೋಗಬೇಕಾಗಿ ಬಂತು. ಆಗಲೇ ತಿಳಿದಿದ್ದು ಬೆಂಗಳೂರು ಎಷ್ಟು ಕಾಸ್ಟಿ$É ಅಂತ.  ಒಂದು ಯೂರಿನ್‌ ಪಾಸ್‌ಗಾಗಿ ನಾವು ಪಾವತಿಸಿದ್ದು 526 ರೂ. ಆಶ್ಚರ್ಯ ಆಗುತ್ತಿದೆಯಲ್ಲವೇ? ಅರೆರೆ, ಬೆಂಗಳೂರು ಅ,rಂದು ದುಬಾರಿಯೇ? ಶೌಚಾಲಯ ಬಳಸಿದ್ದಕ್ಕೆ 526 ರೂ. ಪಡೆಯುವ ಆ ಜಾಗ ಎಲ್ಲಿದೆ ಅಂತ ಕೇಳುತ್ತೀರಾ? ಅದಿರುವುದು ವಸಂತನಗರದ ರೈಲ್ವೆ ಸ್ಟೇಷನ್‌ನಲ್ಲಿ! ಸಾಮಾನ್ಯವಾಗಿ ರೈಲ್ವೇ ಸ್ಟೇಷನ್ನುಗಳಲ್ಲಿ ಚಿಲ್ಲರೆ ಕಾಸು ತೆಗೆದುಕೊಳ್ಳುತ್ತಾರೆ. ಅಂಥದ್ದರಲ್ಲಿ ನಾನು 526 ರೂ. ಕೊಟ್ಟಿದ್ದೇಕೆ ಎಂಬುದರ ಹಿಂದೆ ಒಂದು ಕತೆ ಇದೆ. 

ಸಂದರ್ಶನಕ್ಕೆ ಹೊರಟಿದ್ದೆ ಅಂದೆನಲ್ಲವೆ? ದಾರಿಯಲ್ಲಿ ಹೋಗುತ್ತಿದ್ದಾಗ ನನಗೆ ಶೌಚಕ್ಕೆ ಅವಸರವಾಯಿತು. ಶೌಚಾಲಯಕ್ಕೆ ಹೋಗೋಣವೆಂದರೆ ಹತ್ತಿರದಲ್ಲೆಲ್ಲೂ ಕಾಣಲಿಲ್ಲ. ರಸ್ತೆ ಬದಿ ಮಾಡಲು ನನ್ನ ಮನಸ್ಸು ಒಪ್ಪಲಿಲ್ಲ. ಈಗ ಏನಪ್ಪಾ ಮಾಡೋದು ಅಂತ ಯೋಚನೆ ಮಾಡಿಕೊಂಡು ಕೂತಿದ್ದಾಗ ಹತ್ತಿರದಲ್ಲೇ ರೈಲ್ವೇ ಸ್ಟೇಷನ್‌  ಇರೋದು ನೆನಪಿಗೆ ಬಂದಿತ್ತು. ಸೀದಾ ಒಳ ನುಗ್ಗಿ ಅಲ್ಲಿನ ಶೌಚಾಲಯಕ್ಕೆ ಹೋದೆ. ಹೋಗುವಾಗ ತಡೆಯದಿದ್ದ ಪೊಲೀಸಮ್ಮ ವಾಪಸ್ಸಾಗುವಾಗ ನಮ್ಮನ್ನು ತಡೆದರು. “ರೈಲು ಟಿಕೆಟ್‌ ತೋರಿಸಿ’ ಎಂದು ಕೇಳಿದರು. ನಮ್ಮ ಬಳಿ ಟಿಕೆಟ್‌ ಎಲ್ಲಿತ್ತು?! ನಿಜ ವಿಷಯವನ್ನು ಹೇಳಿದೆ. ಅವಳ ಮನ ಕರಗಲೇ ಇಲ್ಲ. ಬದಲಾಗಿ ಟಿಕೆಟ್‌ ಇಲ್ಲದೆ ನಿಲ್ದಾಣವನ್ನು ಪ್ರವೇಶಿಸಿದ್ದಕ್ಕೆ ದಂಡ ಹಾಗೂ ಶೌಚಾಲಯದ ಬಿಲ್ಲು ಸೇರಿಸಿ 526 ರೂ. ದಂಡ ವಿಧಿಸಿದರು.

ನಿಜಕ್ಕೂ ನಮಗೆ ರೈಲು ನಿಲ್ದಾಣದ ಒಳಹೋಗಲು ಟಿಕೆಟ್‌ ತೆಗೆದುಕೊಳ್ಳಬೇಕೆಂದು ಗೊತ್ತಿರಲಿಲ್ಲ. ಎಷ್ಟು ಕೇಳಿಕೊಂಡರೂ ಅವರು ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ನಮ್ಮ ಬಳಿ ಇದ್ದದು ಕೇವಲ 120 ರೂ. ಅಷ್ಟೇ. ಅದನ್ನೂ ಕೊಟ್ಟು ಬರಲು ಸಿದ್ಧರಿದ್ದೆವು. ಆದರೆ, ಅವರು ಪೂರ್ತಿ ಹಣ ಕಟ್ಟುವವರೆಗೂ ಬಿಡಲಿಲ್ಲ. ಕಡೆಗೆ, ಹತ್ತಿರದಲ್ಲಿದ್ದ ಎ.ಟಿ.ಎಂ. ಗೆ ಹೋಗಿ ಸ್ನೇಹಿತನ ಕಾರ್ಡ್‌ನಿಂದ ಹಣ ಡ್ರಾ ಮಾಡಿ ಆ ಪೊಲೀಸಮ್ಮನಿಗೆ ಕೊಟ್ಟು ಬಂದೆವು. ಈ ನಡುವೆ ನನ್ನ ಸ್ನೇಹಿತ ಆ ಬಿಲ್‌ ´ೋಟೋ ತಗೆದು, ವಾಟ್ಸಪ್‌ ಗ್ರೂಪ್‌ನಲ್ಲಿ ಹಾಕಿ ಪೂರ್ತಿ ದಿನ ನಗುವಿನಲ್ಲಿ ತೇಲಿಸಿದ್ದ. 

– ಚಂದ್ರಶೇಖರ ಜಿ., ಮಧುಗಿರಿ 

ಟಾಪ್ ನ್ಯೂಸ್

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.