ಸೂಪ್‌ ಸೂಪರ್‌


Team Udayavani, Aug 2, 2017, 10:33 AM IST

02-VALU-7.jpg

ಜಿಟಿ ಜಿಟಿ ಮಳೆ ಬೀಳುವಾಗ ಬಿಸಿ ಬಿಸಿಯಾದ ಸೂಪ್‌ ಕುಡಿಯುವುದು ಅಂದರೆ, ಅದು ಖುಷ್‌ ಖುಷಿಯಾಗಿ “ವಾಹ್‌ ವಾಹ್‌ ವಾಹ್‌’ ಎನ್ನುತ್ತಾ ಬಾಯಿ ಚಪ್ಪರಿಸುವಂಥ ಸಂದರ್ಭ. ಇಂಥ ಸುಮಧುರ ಕ್ಷಣಗಳು ಯಾರಿಗೆ ತಾನೇ ಇಷ್ಟವಿಲ್ಲ? ಬಾಯಿಗೆ ರುಚಿ, ದೇಹಕ್ಕೆ ಆರೋಗ್ಯ ನೀಡುವ ಬಗೆಬಗೆಯ ಸೂಪ್‌ ರೆಸಿಪಿಗಳ ಪರಿಚಯ ಇಲ್ಲಿದೆ…

1. ಓಟ್ಸ್‌ ಸೂಪ್‌
ಬೇಕಾಗುವ ಸಾಮಗ್ರಿ: ಓಟ್ಸ್‌- 3 ಚಮಚ, ಹಾಲು- 1 ಕಪ್‌, ಈರುಳ್ಳಿ- 1, ಪೆಪ್ಪರ್‌ ಪೌಡರ್‌- ಸ್ವಲ್ಪ, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ- 1 ಚಮಚ.

ಮಾಡುವ ವಿಧಾನ: ಬಾಣಲೆಗೆ ಎಣ್ಣೆ ಹಾಕಿ. ಸ್ವಲ್ಪ ಕಾದ ಮೇಲೆ ಅದಕ್ಕೆ, ಹೆಚ್ಚಿಕೊಂಡ ಈರುಳ್ಳಿಯನ್ನು ಹಾಕಿ ಹುರಿಯಿರಿ, ಬೇರೆ ಪಾತ್ರೆಯಲ್ಲಿ ಓಟ್ಸ್‌ ಅನ್ನು 1 ಕಪ್‌ ನೀರು ಹಾಕಿ ಬೇಯಿಸಿಕೊಳ್ಳಿ, ಇದಕ್ಕೆ ಹಾಲು ಹಾಕಿ ಕುದಿಸಿ. ನಂತರ ಇದಕ್ಕೆ ಹುರಿದುಕೊಂಡ ಈರುಳ್ಳಿ ಹಾಕಿ, ಪೆಪ್ಪರ್‌ ಪೌಡರ್‌, ಸಾಲ್ಟ್ ಹಾಕಿ ಬಿಸಿಯಿರುವಾಗಲೇ ಸವಿಯಿರಿ. 

2. ಕ್ಯಾರೆಟ್‌ ಸೂಪ್‌
ಬೇಕಾಗುವ ಸಾಮಗ್ರಿ: ಕ್ಯಾರೆಟ್‌ (ಹೆಚ್ಚಿಕೊಂಡಿದ್ದು)- 1 ಕಪ್‌, ಶುಂಠಿ- 1 ತುಂಡು, ಈರುಳ್ಳಿ- 1, ಎಣ್ಣೆ- 1 ಚಮಚ, ಪೆಪ್ಪರ್‌ ಪೌಡರ್‌, ಉಪ್ಪು- ರುಚಿಗೆ ತಕ್ಕಷ್ಟು. 

ಮಾಡುವ ವಿಧಾನ: ಕುಕ್ಕರ್‌ನಲ್ಲಿ ಒಂದು ಸ್ಪೂನ್‌ ಎಣ್ಣೆ ಹಾಕಿ ಈರುಳ್ಳಿ ಹುರಿಯಿರಿ. ಇದಕ್ಕೆ ಹೆಚ್ಚಿಕೊಂಡ ಕ್ಯಾರೆಟ್‌ ಮತ್ತು ಶುಂಠಿಯನ್ನು ಹಾಕಿ, ಉಪ್ಪು ಬೆರೆಸಿ, 2 ವಿಷಲ್‌ ಕೂಗಿಸಿ. ಇದು ಆರಿದ ನಂತರ, ಮಿಕ್ಸಿಯಲ್ಲಿ ನುಣ್ಣಗೆ ಬ್ಲೆಂಡ್‌ ಮಾಡಿಕೊಳ್ಳಿ. ಅರ್ಧ ಕಪ್‌ ನೀರು ಸೇರಿಸಿ, ಪೆಪ್ಪರ್‌ ಪೌಡರ್‌ ಹಾಕಿ ಬಿಸಿ ಇರುವಾಗಲೇ ಕುಡಿಯಿರಿ.

3. ಸ್ವೀಟ್‌ ಕಾರ್ನ್ ಸೂಪ್‌
ಬೇಕಾಗುವ ಸಾಮಗ್ರಿ: ಸ್ವೀಟ್‌ ಕಾರ್ನ್- 1 ಕಪ್‌, ಕ್ಯಾರೆಟ್‌-ಅರ್ಧ ಕಪ್‌, ಸಣ್ಣದಾಗಿ ಹೆಚ್ಚಿಕೊಂಡ ಹುರುಳಿಕಾಯಿ- ಅರ್ಧ ಕಪ್‌, ಕಾರ್ನ್ಫ್ಲೋರ್‌ 2 ಚಮಚ, ಪೆಪ್ಪರ್‌ ಪೌಡರ್‌, ಉಪ್ಪು, ಕೊತ್ತಂಬರಿ ಸೊಪ್ಪು ಸ್ವಲ್ಪ.

ಮಾಡುವ ವಿಧಾನ: ಮೊದಲು ಅರ್ಧ ಕಪ್‌ ಕಾರ್ನ್ ಅನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಬಾಣಲೆಯಲ್ಲಿ ಹೆಚ್ಚಿಕೊಂಡ ಹುರುಳಿಕಾಯಿ, ಕ್ಯಾರೆಟ್‌ ಜೊತೆಗೆ ಕಾರ್ನ್ ಪೇಸ್ಟ್‌ ಸೇರಿಸಿ ನೀರು ಹಾಕಿ, ಹತ್ತು ನಿಮಿಷ ಬೇಯಿಸಿ. ಇದಕ್ಕೆ ಕಾರ್ನ್ಫ್ಲೋರ್‌ ಹಾಕಿ ಕಲಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ. ನಂತರ ಪೆಪ್ಪರ್‌ ಪೌಡರ್‌ ಬೆರೆಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿಯಾಗಿ ಸರ್ವ್‌ ಮಾಡಿ. 

4. ಕ್ರೀಮೀ ಟೊಮೇಟೊ ಸೂಪ್‌
ಬೇಕಾಗುವ ಸಾಮಗ್ರಿ: ಟೊಮೇಟೊ- 3, ಈರುಳ್ಳಿ- 1, ಬೆಣ್ಣೆ- 2 ಚಮಚ, ಫ್ರೆಶ್‌ ಕ್ರೀಂ- 100 ಮಿ.ಲೀ., ಮೈದಾ- 1 ಚಮಚ, ಪೆಪ್ಪರ್‌ ಪೌಡರ್‌ ಮತ್ತು ಉಪ್ಪು ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಕುಕ್ಕರ್‌ನಲ್ಲಿ ಬೆಣ್ಣೆ ಹಾಕಿ, ಈರುಳ್ಳಿಯನ್ನು ಹುರಿಯಿರಿ. ಇದಕ್ಕೆ ಹೆಚ್ಚಿದ ಟೊಮೇಟೊ, ಉಪ್ಪು, ನೀರು ಹಾಕಿ ಒಂದು ವಿಷಲ್‌ ಕೂಗಿಸಿ. ತಣ್ಣಗಾದ ನಂತರ ಮಿಕ್ಸಿಯಲ್ಲಿ ನುಣ್ಣಗೆ ಬ್ಲೆಂಡ್‌ ಮಾಡಿಕೊಳ್ಳಿ. ಬಾಣಲೆಯಲ್ಲಿ ಬೆಣ್ಣೆಯನ್ನು ಕರಗಿಸಿ ಇದಕ್ಕೆ ಮೈದಾ ಹಿಟ್ಟು ಸೇರಿಸಿ ಕಲಸಿ. ಈಗ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ, ಕಲಸುತ್ತಿರಬೇಕು. ನಂತರ ಅದಕ್ಕೆ ಪೆಪ್ಪರ್‌ ಪೌಡರ್‌ ಹಾಕಿ, ಫ್ರೆಷ್‌ ಕ್ರೀಂ ಹಾಕಿ ಸರ್ವ್‌ ಮಾಡಿ. 

ಶ್ರುತಿ ಕೆ.ಎಸ್‌., ತುರುವೇಕೆರೆ

ಟಾಪ್ ನ್ಯೂಸ್

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.