ಬೃಹತ್‌ ಗೆಲುವಿನ ನಿರೀಕ್ಷೆಯಲ್ಲಿ ಭಾರತ


Team Udayavani, Sep 21, 2017, 10:44 AM IST

21STATE-30.jpg

ಕೋಲ್ಕತಾ: ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ಗುರುವಾರ ನಡೆಯುವ ಎರಡನೇ ಏಕದಿನ ಪಂದ್ಯದಲ್ಲೂ ಬೃಹತ್‌ ಗೆಲುವಿನ ನಿರೀಕ್ಷೆಯನ್ನು ಭಾರತ ಇಟ್ಟುಕೊಂಡಿದೆ. ಅಗ್ರ ಕ್ರಮಾಂಕದ ಆಟಗಾರರು ಉತ್ತಮ ನಿರ್ವಹಣೆ ನೀಡಿದರೆ ಮತ್ತು ಸ್ಪಿನ್ನರ್ ಮತ್ತೆ ಆಸ್ಟ್ರೇಲಿಯದ ಓಟಕ್ಕೆ ಕಡಿವಾಣ ಹಾಕಿದರೆ ಭಾರತ ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಭಾರತದ ಹೊಸ ಸ್ಪಿನ್‌ ತಾರೆಯರಾದ ಕುಲದೀಪ್‌ ಯಾದವ್‌ ಮತ್ತು ಯುಜ್ವೇಂದ್ರ ಚಾಹಲ್‌ ದಾಳಿಗೆ ಆಸ್ಟ್ರೇಲಿಯದ ಆಟಗಾರರು ಬಹಳಷ್ಟು ಒದ್ದಾಟ ನಡೆಸಿದ್ದರು. ಸರಣಿಯ ಮುಂದಿನ ಪಂದ್ಯಗಳಲ್ಲೂ ಅವರಿಬ್ಬರು ಇಂತಹ ದಾಳಿಯನ್ನು ಮುಂದುವರಿಸುವ ವಿಶ್ವಾಸವನ್ನು ಭಾರತ ಇಟ್ಟುಕೊಂಡಿದೆ. ಒಂದು ವೇಳೆ ಕುಲದೀಪ್‌ ಮತ್ತು ಚಾಹಲ್‌ ತಮ್ಮ ಮ್ಯಾಜಿಕ್‌ ದಾಳಿ ಮುಂದುವರಿಸಿದರೆ ಭಾರತ ಮೇಲುಗೈ ಸಾಧಿಸಬಹುದು.

ಕುಲದೀಪ್‌ ಮತ್ತು ಚಾಹಲ್‌ ದಾಳಿಯನ್ನು ನಿಭಾಯಿಸಲು ಪ್ರವಾಸಿ ತಂಡ ನೆಟ್‌ ಅಭ್ಯಾಸದ ವೇಳೆ ಭಾರತೀಯ ಬೌಲರ್‌ಗಳ ನೆರವನ್ನು ಪಡೆದಿದ್ದಾರೆ. ಕೇರಳದ ಕೆಕೆ ಜಿಯಾಸ್‌ ಚೆನ್ನೈ ಏಕದಿನ ಪಂದ್ಯದ ಮೊದಲು ಆಸ್ಟ್ರೇಲಿಯ ಆಟ ಗಾರರಿಗೆ ನೆರವಾಗಿದ್ದರೆ ಇಲ್ಲಿ ಸ್ಥಳೀಯ ಕ್ಲಬ್‌ ಬೌಲರ್‌ಗಳಾದ ಅಶುತೋಷ್‌ ಶಿಬ್ರಾಮ್‌ ಮತ್ತು ರುಪಾಕ್‌ ಗುಹ ಅಭ್ಯಾಸದ ವೇಳೆ ಬೌಲಿಂಗ್‌ ನಡೆಸಿ ಆಸೀಸ್‌ ಆಟಗಾರರಿಗೆ ನೆರವಾಗಿದ್ದಾರೆ. 

ಚೆನ್ನೈ ಪಂದ್ಯದಲ್ಲಿ ಒಂದು ವೇಳೆ ಮಳೆ ಬಾರದಿರುತ್ತಿದ್ದರೆ ನಾವು ಗೆಲ್ಲುವ ಪ್ರಯತ್ನ ನಡೆಸುತ್ತಿದ್ದೆವು. ಆದರೆ ಮಳೆಯಿಂದಾಗಿ 21 ಓವರ್‌ಗಳಲ್ಲಿ 164 ರನ್‌ ಗಳಿಸುವ ಗುರಿ ಸಿಕ್ಕಿದ ಕಾರಣ ನಮ್ಮ ಪ್ರಯತ್ನಕ್ಕೆ ತೊಂದರೆಯಾಯಿತು. ಇದು ಟ್ವೆಂಟಿ20 ಪಂದ್ಯವಾಗಿ ಬದಲಾದ ಕಾರಣ ಸೋಲು ಕಾಣುವಂತಾಯಿತು ಎಂದು ಸ್ಟೀವನ್‌ ಸ್ಮಿತ್‌ ಹೇಳಿರುವುದನ್ನು ಗಂಭೀರವಾಗಿ ಗಮ ನಿಸಬೇಕಾಗಿದೆ. ವಾರ್ನರ್‌ ಮತ್ತು ಮ್ಯಾಕ್ಸ್‌ವೆಲ್‌ ಮಾತ್ರ ಭಾರತೀಯ ದಾಳಿಯನ್ನು ಸ್ವಲ್ಪಮಟ್ಟಿಗೆ ನಿಭಾಯಿಸಲು ಯಶಸ್ವಿಯಾಗಿದ್ದರು. 

ಒಂದು ಹಂತದಲ್ಲಿ 35 ರನ್ನಿಗೆ 4 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿದ್ದ ಆಸ್ಟ್ರೇಲಿಯ ತಂಡಕ್ಕೆ ಮ್ಯಾಕ್ಸ್‌ವೆಲ್‌ ಆಸರೆಯಾಗಿದ್ದರು. ಆದರೆ ಚಾಹಲ್‌ ಮತ್ತು ಕುಲದೀಪ್‌ ಅವರ ನಿರಂತರ ದಾಳಿಯಿಂದಾಗಿ ಭಾರತ ಅಂತಿಮವಾಗಿ ಡಕ್‌ವರ್ತ್‌ ಲೂಯಿಸ್‌ ನಿಯಮದಡಿ 26 ರನ್ನುಗಳಿಂದ ಗೆಲ್ಲುವಂತಾಯಿತು.

ಭಾರತ ಗೆಲುವಿನಲ್ಲಿ ಹಾರ್ದಿಕ್‌ ಪಾಂಡ್ಯ ಅವರ ಆಲ್‌ರೌಂಡ್‌ ನಿರ್ವಹಣೆ ಪ್ರಮುಖ ಪಾತ್ರ ವಹಿಸಿತ್ತು. ಒಂದು ಹಂತದಲ್ಲಿ 76 ರನ್ನಿಗೆ 6 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿದ್ದ ತಂಡವನ್ನು ಪಾಂಡ್ಯ ಸಹಿತ ಧೋನಿ ಮತ್ತು ಭುವನೇಶ್ವರ್‌ ಆಧರಿಸಿದ್ದರು. ಹ್ಯಾಟ್ರಿಕ್‌ ಸಿಕ್ಸರ್‌ ಸಹಿತ 66 ಎಸೆತಗಳಿಂದ 83 ರನ್‌ ಸಿಡಿಸಿದರಲ್ಲದೇ ಧೋನಿ ಜತೆ 118 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ಭಾರತದ ಉತ್ತಮ ಮೊತ್ತಕ್ಕೆ ನೆರವಾಗಿದ್ದರು.

2015ರ ಐಪಿಎಲ್‌ ಬಳಿಕ ಪಾಂಡ್ಯ ಅವರು ಬೆಳೆದ ರೀತಿ ಅಮೋಘವಾದದ್ದು. ಆರಂಭದಲ್ಲಿ ಒಟ್ಟಾರೆ ಹೊಡೆಯುತ್ತಿದ್ದ ಪಾಂಡ್ಯ ಇದೀಗ ನುರಿತ ಆಟಗಾರರಾಗಿ ಮೂಡಿ ಬರುತ್ತಿದ್ದಾರೆ. ಬ್ಯಾಟಿಂಗ್‌ ಮಾತ್ರವಲ್ಲದೇ ಬೌಲಿಂಗ್‌ ನಲ್ಲೂ ಮಿಂಚುತ್ತಿರುವ ಅವರು ಆಲ್‌ರೌಂಡರ್‌ ಆಗಿ ತಂಡಕ್ಕೆ ಆಧಾರವಾಗಿದ್ದಾರೆ. ಅವರೊಬ್ಬ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿ ಮಿಂಚುವ ಎಲ್ಲ ಲಕ್ಷಣವಿದೆ.

ಪ್ರಚಂಡ ಫಾರ್ಮ್ನಲ್ಲಿರುವ ಭಾರತೀಯ ಬ್ಯಾಟಿಂಗ್‌ ಶಕ್ತಿಗೆ ಆಸ್ಟ್ರೇಲಿಯದ ಸ್ಪಿನ್ನರ್‌ಗಳು ಯಾವ ರೀತಿ ಬ್ರೇಕ್‌ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ. ನಮ್ಮ ದಾಳಿ ಯಲ್ಲಿ ಬಹಳಷ್ಟು ವೈವಿಧ್ಯವಿದೆ ಆದರೆ ನಮ್ಮ ಯೋಜನೆಯನ್ನು ಯಾವ ರೀತಿ ಕಾರ್ಯಗತಗೊಳಿಸುವುದೆಂದು ತಿಳಿಯುತ್ತಿಲ್ಲ ಎಂದು ಸ್ಪಿನ್ನರ್‌ ಆ್ಯಡಂ ಝಂಪ ಹೇಳಿದ್ದಾರೆ. ಅವರಿಗೆ ಮ್ಯಾಕ್ಸ್‌ವೆಲ್‌, ಹೆಡ್‌ ನೆರವಾಗಲಿದ್ದಾರೆ.

ಸವಾಲಿನ ಸಮಯ
ಮೊದಲ ಏಕದಿನ ಪಂದ್ಯ ಸೋತಿರುವ ಆಸ್ಟ್ರೇಲಿಯ ತಿರುಗೇಟು ನೀಡಲು ಶತಪ್ರಯತ್ನ ನಡೆಸುವ ಸಾಧ್ಯತೆಯಿದೆ. ಹಾಗಾಗಿ ಇದು ನಾಯಕ ಸ್ಟೀವನ್‌ ಸ್ಮಿತ್‌ ಅವರಿಗೆ ಸವಾಲಿನ ಸಮಯ ವಾಗಿದೆ. ಅವರ ಸಹಿತ ಡೇವಿಡ್‌ ವಾರ್ನರ್‌ ಸಿಡಿಯಬೇಕಾಗಿದೆ ಮತ್ತು ಈ ಮೂಲಕ ಉತ್ತಮ ಅಡಿಪಾಯ ಹಾಕಲು ಪ್ರಯತ್ನಿಸಬೇಕಾಗಿದೆ. 

ಹಿಲ್ಟನ್‌ ಕಾರ್ಟ್‌ರೈಟ್‌ ಚೆನ್ನೈಯಲ್ಲಿ ವೈಫ‌ಲ್ಯ ಅನುಭವಿಸಿದ್ದರಿಂದ ಟ್ರ್ಯಾವಿಸ್‌ ಹೆಡ್‌ ಅವರನ್ನು ಆರಂಭಿಕನಾಗಿ ಕಳುಹಿಸುವ ಸಾಧ್ಯತೆಯಿದೆ. ನಾಲ್ಕನೇ ಕ್ರಮಾಂಕದಲ್ಲಿ ಮ್ಯಾಕ್ಸ್‌ವೆಲ್‌ ಅಥವಾ ಸ್ಟೋಯಿನಿಸ್‌ ಆಗ ಆಡಬಹುದು. ಆಲ್‌ರೌಂಡರ್‌ಗಳಾದ ಫಾಕ್ನರ್‌, ಸ್ಟೋಯಿನಿಸ್‌ ಮತ್ತು ಮ್ಯಾಕ್ಸ್‌ವೆಲ್‌ ಅವರಿಂದ ಗಮನಾರ್ಹ ಕೊಡುಗೆ ನಿರೀಕ್ಷೆಯನ್ನು ಆಸ್ಟ್ರೇಲಿಯ ಇಟ್ಟುಕೊಂಡಿದೆ.

ಉತ್ತಮ ಆರಂಭ
ಶಿಖರ್‌ ಧವನ್‌ ಬದಲಿಗೆ ಆರಂಭಿಕ ಸ್ಥಾನ ಕ್ಕೇರಿದ ಅಜಿಂಕ್ಯ ರಹಾನೆ ಮತ್ತು ರೋಹಿತ್‌ ಶರ್ಮ ಉತ್ತಮ ಆರಂಭ ಒದಗಿಸುವ ಭರವಸೆ ಇಡಲಾಗಿದೆ. ಚೆನ್ನೈಯಲ್ಲಿ ವೈಫ‌ಲ್ಯ ಅನುಭವಿಸಿದ ನಾಯಕ ವಿರಾಟ್‌ ಕೊಹ್ಲಿ ಮತ್ತೆ ರನ್‌ ಮಳೆ ಹರಿಸುವ ವಿಶ್ವಾಸದಲ್ಲಿದ್ದಾರೆ. ಕೊಹ್ಲಿ ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ಆಡಿದ 19 ಇನ್ನಿಂಗ್ಸ್‌ಗಳಿಂದ 4 ಶತಕ ಮತ್ತು ಆರು ಅರ್ಧಶತಕ ಸಹಿತ 1017 ರನ್‌ ಗಳಿಸಿದ್ದಾರೆ.
ಈ ಪಂದ್ಯಕ್ಕೆ ಮಳೆ ತೊಂದರೆ ನೀಡುವ  ಸಾಧ್ಯತೆಯಿದೆ.

ನಾಯಕ ಸ್ಮಿತ್‌ಗೆ  100ನೇ ಏಕದಿನ
ಕೋಲ್ಕತಾ: ಆಸ್ಟ್ರೇಲಿಯ ತಂಡದ ನಾಯಕ ಸ್ಟೀವನ್‌ ಸ್ಮಿತ್‌ಗೆ ಗುರುವಾರ ಭಾರತದ ವಿರುದ್ಧ ಈಡನ್‌ನಲ್ಲಿ ನಡೆಯಲಿರುವ ಏಕದಿನ ಪಂದ್ಯ 100ನೇ ಪಂದ್ಯವಾಗಲಿದೆ. 28 ವರ್ಷದ ಸ್ಮಿತ್‌ಗೆ ಚಿಕ್ಕ ವಯಸ್ಸಿನಲ್ಲಿಯೇ ನಾಯಕತ್ವ ಸಿಕ್ಕಿದೆ. ನಾಯಕನಾಗಿ, ಆಟಗಾರನಾಗಿ ಭಾರೀ ಯಶಸ್ಸು ಪಡೆದಿದ್ದಾರೆ. ಇದಕ್ಕೂ ಮುನ್ನ 99 ಏಕದಿನ ಪಂದ್ಯ ಆಡಿರುವ ಸ್ಮಿತ್‌ 3188 ರನ್‌ ಬಾರಿಸಿದ್ದಾರೆ. ಅದರಲ್ಲಿ 8 ಶತಕ, 17 ಅರ್ಧಶತಕ ಸೇರಿದೆ.

ಟಾಪ್ ನ್ಯೂಸ್

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.