ಎಸ್‌. ಇದು ದೇವು ಮೆಸ್‌


Team Udayavani, Nov 13, 2017, 11:42 AM IST

Devu-mess-nammura-hotel.jpg

ದೂರದಿಂದ ನೋಡಿದರೆ ಇದು ಹೋಟೆಲ್ಲಾ ? ಅನ್ನೋ ಅನುಮಾನ ಬರುತ್ತದೆ. ಏಕೆಂದರೆ ಫ‌ಳ, ಫ‌ಳ ಹೊಳೆಯೋ ಕಟ್ಟಡವಿಲ್ಲ.  ತೆಂಗಿನ ಗರಿಯ ಚಿಕ್ಕ ಗುಡಿಸಲು. ಆದರೆ, ಹೊರಗೆ ತಿಂಡಿಗಾಗಿ ಕಾದು ನಿಲ್ಲೋದೆಲ್ಲ ಶ್ರೀಮಂತರ ಕಾರು, ಮಧ್ಯಮ ವರ್ಗದವರ ಬೈಕುಗಳು. 

ಎಸ್‌. ಇದು ದೇವು ಮೆಸ್‌. ಇದು ಇರೋದು ಚಾಮರಾಜನಗರದಿಂದಾಚೆ ರಾಮಸಮುದ್ರ ಎಂಬ ನಗರಸಭೆಗೆ ಸೇರಿದ ಹಳ್ಳಿಯಲ್ಲಿ. ಇದು ಸೆಟ್‌ ದೋಸೆಗೆ ಪ್ರಸಿದ್ಧ.  ಅಂಗೈ ಅಗಲದ, ತೆಳುವಾದ ಸೆಟ್‌ ದೋಸೆ, ಚಟ್ನಿ, ಸಾಗು, ನಂದಿನಿ ಬೆಣ್ಣೆ ನೆನೆಸಿಕೊಂಡ್ರೆ ಬಾಯಲ್ಲಿ ನೀರು ಗ್ಯಾರಂಟಿ!

ದಶಕಗಳ ಹಿಂದೆ ಚಾಮರಾಜನಗರದ ಹೃದಯ ಭಾಗದಲ್ಲಿದ್ದ ಪಚ್ಚಪ್ಪ ಹೋಟೆಲ್‌ನಲ್ಲಿ ಈ ರೀತಿಯ ಸೆಟ್‌ ದೋಸೆ ಪ್ರಸಿದ್ಧಿಯಾಗಿತ್ತು. ಈಗ ಪಚ್ಚಪ್ಪ ಹೋಟೆಲ್‌ ಇಲ್ಲ. ಆದ್ರೆ ಅದೇ ರುಚಿಯನ್ನ ಬಹಳ ಕಡಿಮೆ ಬೆಲೆಗೆ ನೀಡುತ್ತಿದ್ದಾರೆ ದೇವು ಮೆಸ್‌ನ ಓನರ್‌ ದೇವಣ್ಣ.  

ಸೆಟ್‌ ದೋಸೆ ಅಲ್ಲದೆ ಬೆಣ್ಣೆ ರೋಸ್ಟ್‌, ಚಪಾತಿ ಕೂಡ ಬಹಳ ರುಚಿಕರ. ಹೊಟ್ಟೆ ಬಿರಿಯುವ ಹಾಗೆ ತಿಂದರೂ ಬಿಲ್‌ ಮಾತ್ರ ಬಹಳ ಹಗುರ. ದೊಡ್ಡ ಹೋಟೆಲ್‌ಗ‌ಳಲ್ಲಿ ಬೆಣ್ಣೆ ಅಂದ್ರೆ ಗ್ರಾಹಕರು ಭಯ ಪಡುವಂತಾಗಿದೆ. ಆದ್ರೆ ಇಲ್ಲಿ ಕಣ್ಣ ಮುಂದೆಯೇ ನಂದಿನಿ ಬೆಣ್ಣೆಯನ್ನ ಪ್ಯಾಕೆಟ್‌ ಒಡೆದು ಹಾಕಿಕೊಡ್ತಾರೆ. 

ಮೂಲತಃ ರಾಮಸಮುದ್ರವರೇ ಆದ ದೇವಣ್ಣ ಈ ಗುಡಿಸಲು ಹೋಟೆಲ್‌  ಆರಂಭಿಸುವ ಮುಂಚೆ ಚಾಮರಾಜನಗರದ ಗುಂಡ್ಲುಪೇಟೆ ವೃತ್ತದಲ್ಲಿ ಇನ್ನೊಂದು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ನಂತರ ರಾಮಸಮುದ್ರದಲ್ಲಿ ಹೋಟೆಲ್‌ ಆರಂಭಿಸಿದರು. ಈಗ ನಲವತ್ತು ವರ್ಷ ಆಗಿದೆ. ಆಗ  10 ಪೈಸೆಗೆ ಒಂದು ದೋಸೆ, 30 ಪೈಸೆಗೆ ಒಂದು ಚಪಾತಿ ಕೊಡುತ್ತಿದ್ದ ಕಾಲ.  

ಈಗ ಒಂದು ಸೆಟ್‌ ದೋಸೆಗೆ 20 ರೂ. ಬೆಣ್ಣೆ ಮಸಾಲೆಗೆ 30 ರೂ. ಬೆಣ್ಣೆ ರಹಿತ ಮಸಾಲೆಗೆ 20 ರೂ. ಚಪಾತಿಗೆ 10 ರೂ. ದೇವು ಮೆಸ್‌ ದೋಸೆಯ ರುಚಿಗೆ ಹೋಲಿಸಿದರೆ ಈ ದರ ಕಡಿಮೆಯೇ. ದೇವಣ್ಣನವರ ಹೋಟೆಲಿನ ಸಕ್ಸಸ್‌ಗೆ ಅವರ ಪುತ್ರ ಮಂಜುನಾಥ್‌. ಹಿಂದೆ ದೋಸೆ ಹಾಕುತ್ತಿದ್ದ ರಾಜಪ್ಪ, ಈಗ ದೋಸೆ ಹಾಕುತ್ತಿರುವ ಪುಟ್ಟಮಾದಪ್ಪ ಕಾಣಿಕೆಯೂ ಅಪಾರ.

ತಮ್ಮ ಹೋಟೆಲಿನಲ್ಲಿ ಸೌದೆ ಒಲೆಯ ಬಳಸುವುದರಿಂದ ದೋಸೆಯ ರುಚಿ ಹೆಚ್ಚಾಗುತ್ತದೆ ಎನ್ನುತ್ತಾರೆ ದೇವಣ್ಣ. ಚಾಮರಾಜನಗರದಲ್ಲಿ ಅನೇಕ ಹೋಟೆಲ್‌ಗ‌ಳು ಸಿಟಿ ಮಧ್ಯೆ ಇದ್ರೂ, ಅನೇಕರು ರಾಮಸಮುದ್ರದ ಈ ಗುಡಿಸಲು ಹೋಟೆಲಿನ ಕ್ವಾಲಿಟಿ, ಟೇಸ್ಟ್‌ಗೆ ಮನಸೋತಿದ್ದಾರೆ. ಅನೇಕ ರಾಜಕಾರಣಿಗಳು, ಉದ್ಯಮಿಗಳು ಇದರ ರುಚಿಗೆ ಮನಸೋತು ಹುಡುಕಿಕೊಂಡು ಬರುತ್ತಾರೆ.

ಕೆಲವರು ನಿತ್ಯದ ಗ್ರಾಹಕರಾಗಿ ಬಿಟ್ಟಿದ್ದಾರೆ. ಒಮ್ಮೆ ತಿಂದವರು, ಮನೆಯಲ್ಲಿ ತಿಂಡಿ ಮಾಡಿದ್ರೂ, ವಾರಕ್ಕೊಮ್ಮೆ ಏನಾದ್ರೂ ನೆಪ ಮಾಡಿಕೊಂಡು ದೇವು ಮೆಸ್‌ಗೆ ಬರದೇ ಇರುವುದಿಲ್ಲ! ಚಾಮರಾಜನಗರಕ್ಕೆ ಬಂದ್ರೆ ಬಿ.ಆರ್‌.ಲ್ಸ್‌ ರಸ್ತೆಯಲ್ಲಿ ರಾಮಸಮುದ್ರಕ್ಕೆ ಹೋಗಿ ಬಸ್‌ಸ್ಟಾಪ್‌ ಪಕ್ಕದಲ್ಲೇ ಇರುವ ದೇವು ಮೆಸ್‌ಗೆ ಭೇಟಿ ನೀಡಿ.

* ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.