ನೆಹ್ರ ವೀಕ್ಷಕ ವಿವರಣೆಕಾರ
Team Udayavani, Nov 16, 2017, 6:15 AM IST
ಕೋಲ್ಕತಾ: ನ್ಯೂಜಿಲ್ಯಾಂಡ್ ವಿರುದ್ಧ ದಿಲ್ಲಿಯಲ್ಲಿ ನ. 1ರಂದು ನಡೆದ ಮೊದಲ ಟ್ವೆಂಟಿ20 ಪಂದ್ಯದ ಬಳಿಕ ಎಲ್ಲ ಮಾದರಿಯ ಕ್ರಿಕೆಟಿನಿಂದ ನಿವೃತ್ತಿಯಾದ ವೇಗಿ ಆಶಿಷ್ ನೆಹ್ರ ಗುರುವಾರದಿಂದ ಹೊಸ ಇನ್ನಿಂಗ್ಸ್ ಆರಂಭಸಲಿದ್ದಾರೆ.
ಇಲ್ಲಿನ ಈಡನ್ ಗಾರ್ಡನ್ಸ್ನಲ್ಲಿ ಗುರುವಾರದಿಂದ ಆರಂಭವಾಗುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಅವರು ವೀಕ್ಷಕವಿವರಣೆಕಾರರಾಗಿ ಪಾದಾರ್ಪಣೆಗೈಯಲಿದ್ದಾರೆ.
ಹೊಸ ಇನ್ನಿಂಗ್ಸ್ ಆರಂಭಿಸಲಿರುವ ನೆಹ್ರ ಅವರನ್ನು ವೀರೇಂದ್ರ ಸೆಹವಾಗ್ ಟ್ವೀಟ್ ಮೂಲಕ ಸ್ವಾಗತಿಸಿದ್ದಾರೆ.
ವೀಕ್ಷಕವಿವರಣೆಕಾರರಾಗಿ ಕಾರ್ಯ ನಿರ್ವಹಿಸಲಿರುವ ನೆಹ್ರ ಅವರನ್ನು ನಿಮ್ಮದೇ ರೀತಿಯಲ್ಲಿ ಸಂಭ್ರಮದಿಂದ ಸ್ವಾಗತಿಸಿ ಎಂದು ಸೆಹವಾಗ್ ಟ್ವೀಟ್ ಮಾಡಿದ್ದಾರೆ.
ಕುಟುಂಬದ ಜತೆ ನಾನು ಸಮಯ ಕಳೆಯಬೇಕಾಗಿದೆ. ಆದರೆ ಕ್ರಿಕೆಟ್ಗೆ ಸಂಬಂಧಿಸಿ ಏನಾದರೂ ಕೆಲಸ ಮಾಡುವ ಮನಸ್ಸಿದೆ. ಯಾಕೆಂದರೆ ಕಳೆದ 25 ವರ್ಷಗಳಿಂದ ಆನು ಕ್ರಿಕೆಟ್ ಆಟವನ್ನು ಆನಂದಿಸಿದ್ದೇನೆ. ಆದರೆ ಯಾವ ರೀತಿಯ ಕೆಲಸವೆಂದು ತೀರ್ಮಾನಿಸಿಲ್ಲ. ಇದು ಕೋಚಿಂಗ್ ಅಥವಾ ವೀಕ್ಷಕವಿವರಣೆಕಾರರಾಗಿ ಇರಬಹುದು. ಕಲವೇ ದಿನಗಳಲ್ಲಿ ಇದು ನಿಮಗೆ ತಿಳಿಯಲಿದೆ ಎಂದು ನೆಹ್ರ ನಿವೃತ್ತಿಯಾದ ತತ್ಕ್ಷಣ ಪ್ರತಿಕ್ರಿಯೆ ನೀಡಿದ್ದರು.
2003ರ ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯ ಅವರ ಸ್ಮರಣೀಯ ಪಂದ್ಯಗಳಲ್ಲಿ ಒಂದಾಗಿದೆ. ಈ ಪಂದ್ಯದಲ್ಲಿ ಅವರು ತನ್ನ ಶ್ರೇಷ್ಠ ನಿರ್ವಹಣೆ 23 ರನ್ನಿಗೆ 6 ವಿಕೆಟ್ ಕಿತ್ತು ಭಾರತದ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡಿದ್ದರು.
199ರಲ್ಲಿ ಶ್ರೀಲಂಕಾ ವಿರುದ್ಧ ಕೊಲಂಬೋದಲ್ಲಿ ನಡೆದ ಟೆಸ್ಟ್ನಲ್ಲಿ ಆಡುವ ಮೂಲಕ ನೆಹ್ರ ಟೆಸ್ಟ್ಗೆ ಪಾದಾರ್ಪಣೆಗೈದಿದ್ದರು. ಭಾರತ ಪರ 17 ಟೆಸ್ಟ್ ಆಡಿರುವ ಅವರು 44 ವಿಕೆಟ್ ಉರುಳಿಸಿದ್ದಾರೆ. 2001ರಲ್ಲಿ ಏಕದಿನ ಕ್ರಿಕೆಟಿಗೆ ಪಾದಾರ್ಪಣೆಗೆದಿದ್ದ ಅವರು 120 ಏಕದಿನ ಪಂದ್ಯವನ್ನಾಡಿ 157 ವಿಕೆಟ್ ಹಾರಿಸಿದ್ದಾರೆ. ನೆಹ್ರ 27 ಟ್ವೆಂಟಿ20 ಪಂದ್ಯ ಆಡಿದ್ದು34 ವಿಕೆಟ್ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
147-year ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆದ ಆರ್.ಅಶ್ವಿನ್
IPL 2025: ಮತ್ತೆ ರಾಹುಲ್ ದ್ರಾವಿಡ್ ಜತೆ ಸೇರಿದ ವಿಕ್ರಮ್ ರಾಥೋರ್
INDvsBAN: ಭಾರತದ ಬಿಗು ದಾಳಿಗೆ ಬೆದರಿದ ಬಾಂಗ್ಲಾ: 149 ರನ್ ಗೆ ಆಲೌಟ್
INDvsBAN: ಟೆಸ್ಟ್ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ
Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.