ಕುಲಭೂಷಣ್ ಕೇಸ್: ಭಾರತದ ಉತ್ತರ ಪರಿಗಣಿಸುತ್ತೇವೆ: ಪಾಕ್
Team Udayavani, Nov 18, 2017, 7:14 PM IST
ಹೊಸದಿಲ್ಲಿ : ಕುಲಭೂಷಣ್ ಜಾಧವ್ ಕೇಸಿನಲ್ಲಿ ಭಾರತದಿಂದ ತನಗೆ ಉತ್ತರ ಬಂದಿದ್ದು ತಾನದನ್ನು ಪರಿಗಣಿಸುತ್ತಿದ್ದೇನೆ ಎಂದು ಪಾಕಿಸ್ಥಾನ ಹೇಳಿದೆ.
ಪಾಕ್ ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ಡಾ. ಮೊಹಮ್ಮದ್ ಫೈಸಲ್ ಅವರು ಈ ವಿಷಯವನ್ನು ದೃಢೀಕರಿಸಿದ್ದಾರೆ.
ಅಚ್ಚರಿಯ ನಡೆಯೊಂದರಲ್ಲಿ ಪಾಕಿಸ್ಥಾನ ಕಳೆದ ವಾರ 46ರ ಹರೆಯದ ಭಾರತೀಯ ಬೇಹು ಆರೋಪಿ ಜಾಧವ್ ಅವರನ್ನು ಭೇಟಿಯಾಗುವುದಕ್ಕೆ ಅವರ ಪತ್ನಿಗೆ ಅನುಮತಿ ನೀಡಿತ್ತು. ಜಾಧವ್ ಅವರ ತಾಯಿಗೆ ಮಾನವೀಯ ನೆಲೆಯಲ್ಲಿ ತನ್ನ ಮಗನನ್ನು ಕಾಣಲು ವೀಸಾ ನೀಡುವಂತೆ ಮತ್ತು ಜಾಧವ ಪತ್ನಿಗೆ ಪತಿಯನ್ನು ಕಾಣುವುದಕ್ಕೆ ಭಾರತ ಪಾಕಿಸ್ಥಾನಕ್ಕೆ ಹಲವು ತಿಂಗಳ ಹಿಂದೆ ಮನವಿ ಮಾಡಿತ್ತು.
ಪಾಕಿಸ್ಥಾನವು ಭಾರತದಿಂದ ಜಾಧವ್ ಕೇಸಿನ ಬಗ್ಗೆ ಉತ್ತರವನ್ನು ಎದುರು ನೋಡುತ್ತಿದೆ ಎಂದು ಡಾ. ಫೈಸಲ್ ಅವರು ಈಚಿನ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದ್ದರು.
ಇಂದಿನ ಹೊಸ ವಿದ್ಯಮಾನವನ್ನು ದೃಢೀಕರಿಸುತ್ತಾ ಡಾ. ಫೈಸಲ್ ಅವರು, “ಕಮಾಂಡರ್ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ಥಾನದಲ್ಲಿ ಪತ್ನಿಯನ್ನು ಭೇಟಿಯಾಗುವುದಕ್ಕೆ, ಮಾನವೀಯ ನೆಲೆಯಲ್ಲಿ ಅನುಮತಿ ನೀಡಲು ಪಾಕ್ ಸರಕಾರ ನಿರ್ಧರಿಸಿದೆ. ಈ ಕುರಿತ ಟಿಪ್ಪಣಿಯೊಂದನ್ನು ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ಹೈಕಮಿಶನ್ಗೆ ಕಳುಹಿಸಲಾಗಿದೆ’ ಎಂದು ಹೇಳಿದರು.
ಭಾರತದ ಮಾಜಿ ನೌಕಾಪಡೆ ಅಧಿಕಾರಿ ಜಾಧವ್ಗೆ ಪಾಕ್ ಮಿಲಿಟರಿ ಕೋರ್ಟ್ 2017ರ ಎಪ್ರಿಲ್ನಲ್ಲಿ “ಬೇಹುಗಾರಿಕೆ ಮತ್ತು ಭಯೋತ್ಪಾದನೆ’ ಆರೋಪದ ಮೇಲೆ ಮರಣ ದಂಡನೆಯನ್ನು ವಿಧಿಸಿತ್ತು. ಹೇಗ್ ನಲ್ಲಿನ ಅಂತಾರಾಷ್ಟ್ರೀಯ ನ್ಯಾಯಾಲಯ ಭಾರತದ ಕೋರಿಕೆಯನ್ನು ಮನ್ನಿಸಿ ಜಾಧವ್ ಮರಣದಂಡನೆ ಶಿಕ್ಷೆ ಜಾರಿಗೆ ತಡೆ ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kerala; ಕೇಂದ್ರದ ಸವಾಲು ನಡುವೆ ರಾಜ್ಯದ ಆದಾಯ ಹೆಚ್ಚಳ: ಕೇರಳ ಸಚಿವ
Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ
Malabar group ಬಗ್ಗೆ ಅಪಪ್ರಚಾರ: ಮುಂಬಯಿ ಹೈಕೋರ್ಟ್ ಕಠಿನ ತೀರ್ಪು
Election; ವೋಟಿಗಾಗಿ ತಮಿಳರಿಗೆ ಮೋದಿ ಅವಹೇಳನ: ಸಿಎಂ ಸ್ಟಾಲಿನ್ ಕಿಡಿ
Sambit Patra; ಜಗನ್ನಾಥನೇ ಮೋದಿ ಭಕ್ತ ಎಂದಿದ್ದಕ್ಕೆ 3 ದಿನ ಉಪವಾಸ ಪ್ರಾಯಶ್ಚಿತ್ತ: ಪಾತ್ರಾ
MUST WATCH
ಹೊಸ ಸೇರ್ಪಡೆ
Kerala; ಕೇಂದ್ರದ ಸವಾಲು ನಡುವೆ ರಾಜ್ಯದ ಆದಾಯ ಹೆಚ್ಚಳ: ಕೇರಳ ಸಚಿವ
Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ
Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ
ಲೀಡ್ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ
Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ