ಅಡುಗೆ ಕೋಣೆಯ ಶಿಸ್ತಲ್ಲಿದೆ ಮನೆಯ ನೆಮ್ಮದಿ…


Team Udayavani, Nov 20, 2017, 1:10 PM IST

20-26.jpg

ಮನೆಯ ವಾಸ್ತುವಿನ ಕುರಿತಾದ ವಿಚಾರದಲ್ಲಿ ಸಾಮಾನ್ಯವಾಗಿ ಎಲ್ಲರೂ ಮನೆಯ ಬಾಗಿಲು ಯಾವ ದಿಕ್ಕು ಎಂಬುದರ ಬಗೆಗೇ ಹೆಚ್ಚಿನ ಮುತುವರ್ಜಿ ವಹಿಸುತ್ತಾರೆ. ಬಿಟ್ಟರೆ ಮನೆಯಲ್ಲಿನ ಇತರ ವಿಚಾರಗಳ ಬಗೆಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಾರರು. ಪ್ರಮುಖವಾಗಿ ಬೆಂಕಿಯ ಬಗೆಗೂ, ನೀರಿನ ಬಗೆಗೂ ಹಲವು ವಿಚಾರಗಳನ್ನು ಗಮನಿಸಲೇಬೇಕು. ಬೆಂಕಿಯು ಸದಾ ಉರಿಯುವ ಘಟಕ. ಅದು ಒಂದನ್ನು ಉಪಯೋಗಿಸಿಕೊಂಡು ತಾನು ಉರಿಯುತ್ತದೆ.

ಯಾವುದನ್ನು ಉಪಯೋಗಿಸಿಕೊಳ್ಳುತ್ತದೋ ಅದರಲ್ಲಿ ತಾನೇ ಸ್ಥಾಯಿಯಾಗಿ ಆಶ್ರಯವನ್ನು ಪಡೆದಿರುತ್ತದೆ. ರುದ್ರನ ನೇತೃತ್ವದಲ್ಲಿ ಮಧ್ಯದ ಮೂರನೆಯ ನೇತ್ರ ಬೆಂಕಿಯನ್ನು ಒಳಗೊಂಡು ಸುಡುತ್ತದೆ.  ಹೀಗಾಗಿ ತಂದದ್ದು ಜೀರ್ಣವಾಗುವುದಕ್ಕೆ ಪಾಚಕ ರಸಗಳ ಸುಡುವ ಗುಣವೇ ಕಾರಣವಾಗಿವೆ. ಸೂರ್ಯನು ಉದಯಿಸುವ ಪೂರ್ವಕ್ಕೆ ಮುಖಮಾಡಿ ಆಗ್ನೇಯದತ್ತ ಒಲೆಗಳು ಬರುವಂತಿದ್ದು ಅಡುಗೆಯನ್ನು ಮಾಡುವುದು ಸೂಕ್ತ. ಈಶಾನ್ಯಕ್ಕೆ ಅಡುಗೆ ಮನೆಯಿದ್ದರೂ ಅದು ಸರಿಯೇ. ಆದರೆ ಈಶಾನ್ಯವು ಬೆಳೆಯದಂತೆ ಮೊಟುಕುಗೊಳಿಸಿ ಈಶಾನ್ಯದ ಕಡೆ ಅಡುಗೆ ಕೋಣೆ ಸಮಾವೇಶಗೊಳ್ಳುವುದು ಸ್ವಾಗತಾರ್ಹವಲ್ಲ. ಅಡುಗೆ ಕೋಣೆಯು ಪೂರ್ವದ ಕಡೆ ಕಿಟಕಿ ಹೊಂದಿರುವುದು ಅವಶ್ಯವಾಗಿದೆ.

ಅಡುಗೆಗೆ ಒಂದು ಕಟ್ಟೆ ಇರಲಿ. ಕಟ್ಟೆ ಮೇಲೆ ಒಲೆಗಳು ಬರಲಿ. ಆಧುನಿಕತೆಯು ನಮ್ಮ ಶಾಸ್ತ್ರೀಯವಾದ ಅಡುಗೆ ಒಲೆಗಳ ವಿನ್ಯಾಸಕ್ಕೆ ತೊಂದರೆ ತರುತ್ತದೆ. ಹೀಗಾಗಿ ಕಟ್ಟೆಯು ಹೆಚ್ಚಾಗಿ ದಕ್ಷಿಣದ ಮೂಲೆಯಿಂದ ಹತ್ತು ಅಡಿಗಿಂತಲೂ ಕಡಿಮೆ ಅಂತರದಲ್ಲಿ ಕಟ್ಟಲ್ಪಡಲಿ. ಅಡುಗೆ ಮನೆಯು ಈಶಾನ್ಯದ ಕಡೆ ತುಸು ಬೆಳೆದಿದ್ದರೆ ಅದು ತೊಂದರೆಯಾಗುವಂಥದ್ದಲ್ಲ. ಪೂರ್ವದ ಗೋಡೆಯ ಬದಿಗೆ ಒಂದು ಕನ್ನಡಿ ಇರುವುದೂ ಸೂಕ್ತ. ಆವರಿಸಿಕೊಂಡ ಒಲೆಯ ಬೆಂಕಿಯನ್ನು ಅದು ಹಿಂತಿರುಗಿ ಪ್ರತಿಫ‌ಲಿಸುವ ವಿಚಾರ ಒಂದು ರೀತಿಯ ಸಂಪನ್ನತೆಯನ್ನು ಆಹಾರದ ಘಟಕಗಳ ಬಗೆಗೆ ವೈಶಿಷ್ಟ ನಿರ್ಮಿಸಲು ಅನುಕೂಲವಾಗುತ್ತದೆ. ಈಗ ಅನಿಲದ ಸಿಲಿಂಡರಿನ ಕಾಲವಾದುದರಿಂದ ಅಡುಗೆ ಕೋಣೆಯ ಆಗ್ನೇಯ ದಿಕ್ಕಿನಲ್ಲಿ ಅದು ಇರಲಿ.

ಇನ್ನು ಮನೆಯ ಉಪಯೋಗಕ್ಕಾಗಿನ ನೀರು ಸಂಗ್ರಹದ ಕೊಳಾಯಿ, ಸಂಪು, ಬೋರ್‌ ಈಶಾನ್ಯವನ್ನು ಬಳಸಿಕೊಳ್ಳುವಂತೆ ಹೊಮ್ಮಿಕೊಳ್ಳಲಿ. ಎಲ್ಲಾ ಸಂದರ್ಭದಲ್ಲಿ ಇದು ಸಾಧ್ಯವಾಗುತ್ತದೆ ಎಂಬುದು ನಿರ್ದಿಷ್ಟವಲ್ಲ. ಹೀಗಾಗಿ ನೈಋತ್ಯವನ್ನೋ, ವಾಯುವ್ಯವನ್ನೋ ಕೂಡ ಇದಕ್ಕಾಗಿ ಬಳಸಿಕೊಳ್ಳಬಹುದು. ಆದರೂ ಈಶಾನ್ಯವೇ ಹೆಚ್ಚು ಸೂಕ್ತ ಎಂಬುದು ನೆನಪಿರಲಿ. ನೀರಿರುವ ಸ್ಥಳದಲ್ಲಿ ಬಿಸಿಲು ಉತ್ತಮವಾಗಿ ಪಸರಿಸಿ ಕೊಂಡಿರುವುದು ಸ್ವಾಗತಾರ್ಹ. ಬಿಸಿಲಿಗೆ ಶುದ್ದಗೊಳಿಸುವ ಸಂವಿಧಾನವಿದೆ. ಕಣ್ಣಿಗೆ ಕಾಣದ ಸೂಕ್ಷ್ಮಾಣುಗಳು ಬಿಸಿಲಿಗೆ, ಶಾಖದಿಂದಾಗಿ ಸಾಯುತ್ತವೆ. ನೀರಿನ ಪರಿಶುದ್ಧತೆಗೆ ಇದು ಉಪಯೋಗಕಾರಕ ಸಂಗತಿ.
ಬಿಸಿಲಿರುವ ಈಶಾನ್ಯ ಮೂಲೆಗೆ ನೀರಿನ ಕೊಳ, ಸಂಪು, ಬೋರ್‌ ಇರುವುದೇ ಕ್ಷೇಮ. 

ನೀರಿನ ಸಂಬಂಧವಾದ ವಿಚಾರ, ಅಗ್ನಿಯ ಸಂಬಂಧವಾದ ವಿಚಾರದಲ್ಲಿ ರಾಹು ಗ್ರಹದ ಪಾತ್ರ ಪ್ರಧಾನವಾದದ್ದು. ಹೀಗಾಗಿ ಕೆಲ ನ್ಯೂನತೆಗಳೇನಾದರೂ ಇದ್ದರೆ ರಾಹುವಿಗೆ ಸಂಬಂಧಿಸಿದ ಆರಾಧನೆ ನಡೆಸುವುದು ಸೂಕ್ತ. ಹೋಮ, ಹವನಾದಿಗಳು ಬೇಕಾಗಿಲ್ಲ. ಸುಲಭವಾಗುವಂತೆ ಮನೆಯ ಯಜಮಾನ ಅಥವಾ ಜವಾಬ್ದಾರಿಯುತ ಸದಸ್ಯ ರಾಹು ಪೀಡನಿವಾರಣಾ ಸ್ತೋತ್ರವನ್ನೋ, ರಾಹು ಕವಚವನ್ನೋ, ಓದಲಿ. ರಾಹು ಸ್ತೋತ್ರ ಪಠಣವೂ ಯುಕ್ತ ಅನುಷ್ಠಾನವೇ ಆಗಿದೆ. ಉತ್ತರ ಹಾಗೂ ದಕ್ಷಿಣಗಳು ಭಿನ್ನ ದ್ರುವಗಳಾಗಿ ಒಂದು ಇನ್ನೊಂದನ್ನು ಆಕರ್ಷಿಸುವ ಆಕರ್ಷಣ ಶಕ್ತಿ ಜಾಸ್ತಿ. ಹೀಗಾಗಿ ನೀರು, ಬೆಂಕಿ ಪರಸ್ಪರ ಭಿನ್ನ ಸ್ವಭಾವ ಧಾತುಗಳಾಗಿರುವುದರಿಂದ ರಾಹುವಿನ ಕುರಿತಾದ ಅನುಷ್ಠಾನ ಉತ್ತರ ಹಾಗೂ ದಕ್ಷಿಣದಿಕ್ಕಿನ ಸಮನ್ವಯವನ್ನೂ, ಬೆಂಕಿ ಹಾಗೂ ನೀರಿಗೆ ಬೇಕಾದ ಅನಿವಾರ್ಯವಾದ ಅಂತರವನ್ನೂ ಒಟ್ಟಿಗೆ ನಡೆಸುತ್ತದೆ. 

ಅನಂತಶಾಸ್ತ್ರಿ ಅನಂತಶಾಸ್ತ್ರಿ

ಟಾಪ್ ನ್ಯೂಸ್

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.