ಒನ್ ಮ್ಯಾನ್ ಶೋ, ಟೂ ಮೆನ್ ಆರ್ಮಿ: ಮೋದಿ, ಶಾ ಬಗ್ಗೆ ಶತ್ರು
Team Udayavani, Dec 14, 2017, 3:54 PM IST
ಹೊಸದಿಲ್ಲಿ : ”ಗುಜರಾತ್ ಚುನಾವಣಾ ಪ್ರಚಾರಾಭಿಯಾನದ ಹೊಣೆಗಾರಿಕೆಯನ್ನು ಏಕಾಂಗಿಯಾಗಿ ಹೆಗಲಿಗೇರಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರದ್ದು ಒನ್ ಮ್ಯಾನ್ಶೋ; ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಮೋದಿ ಅವರದ್ದು ಟೂ ಮೆನ್ ಆರ್ಮಿ ಕಾರ್ಯಶೈಲಿ” ಎಂದು ಬಿಜೆಪಿಯವರೇ ಆಗಿರುವ, ರಾಜಕಾರಣಿಯಾಗಿ ಪರಿವರ್ತಿತರಾಗಿರುವ, ಮಾಜಿ ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ವ್ಯಂಗ್ಯವಾಡಿದ್ದಾರೆ.
“ಗುಜರಾತ್ನಲ್ಲಿ ಒಂದರ ಮೇಲೊಂದು ಟ್ರಿಕ್ಗಳು, ಸುಳ್ಳು ಹೇಳಿಕೆಗಳು ಮತ್ತು ಆಗಸದೆತ್ತರದ ಭರವಸೆಗಳನ್ನು ನೀಡಿ ನೀವು ದಣಿದಿರುವುದರಿಂದ ಬೇಗನೆ ದಿಲ್ಲಿಗೆ ಮರಳಬೇಕು ಎಂಬುದು ನನ್ನ ಮನವಿಯಾಗಿದೆ” ಎಂದು ಮೋದಿ ಮತ್ತು ಶಾ ವಿರುದ್ದ ಸಿನ್ಹಾ ಕಟಕಿಯಾಡಿದ್ದಾರೆ.
“ಗುಜರಾತ್ನಲ್ಲಿ ಒಂದೊಮ್ಮೆ ನಾವು ವಿಜಯಿಗಳಾದರೆ, ಅದರ ಫುಲ್ ಕ್ರೆಡಿಟ್ ನಿಮಗೇ ಎಂದು ನಮಗೆಲ್ಲ ಗೊತ್ತು. ಕೈಚಪ್ಪಾಳೆ ನಾಯಕನಿಗಾದರೆ, ಬೈಗುಳಗಳು ಕೂಡ ನಾಯಕನಿಗೇ’ ಎಂಬ ಹಳೇ ಮಾತಿದೆ. ಆದರೆ ನಮಗೆ ಗುಜರಾತ್ ಚುನಾವಣೆಗಳಲ್ಲಿ ಕೈ ಚಪ್ಪಾಳೆ ಮಾತ್ರವೇ ಸಿಗಲಿ ಎಂದು ಆಶಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ; ಜೈ ಹಿಂದ್’ ಎಂದು ಶತ್ರುಘ್ನ ಸಿನ್ಹಾ ವ್ಯಂಗ್ಯವಾಡಿದ್ದಾರೆ.
ಶತ್ರುಘ್ನ ಸಿನ್ಹಾ ಅವರು ಬಿಜೆಪಿಯಲ್ಲಿ ಬದಿಗೆ ಒತ್ತಲ್ಪಟ್ಟಂದಿನಿಂದಲೂ ಪಕ್ಷ ಹಾಗೂ ಪಕ್ಷದ ನಾಯಕರ ವಿರುದ್ಧ ವ್ಯಂಗ್ಯದ, ಟೀಕೆಯ ಮಾತುಗಳನ್ನು ಆಡುವ ಚಾಳಿಯನ್ನೇ ಬೆಳೆಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ
Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್
Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್ ವಿರುದ್ಧ ಮೋದಿ ವಾಗ್ದಾಳಿ
Heavy Rain: ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್ಮೆಂಟ್ನ ಗೋಡೆ ಕುಸಿದು 7 ಮಂದಿ ಸಾವು
ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು
ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ
Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ
ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ
Sangeeth Sivan: ಮಾಲಿವುಡ್, ಬಾಲಿವುಡ್ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ