ಇತಿಹಾಸ ತಿರುಚುವುದು, ಸೃಷ್ಟಿಸುವುದು ಭಯೋತ್ಪಾದನೆ: ಶ್ರೀಮಾಲಿ
Team Udayavani, Jan 1, 2018, 12:09 PM IST
ಕೋಲ್ಕತ : ಇತಿಹಾಸವನ್ನು ತಿರುಚುವುದು ಮತ್ತು ಸೃಷ್ಟಿಸುವುದು ಭಯೋತ್ಪಾದನೆಯ ಇನ್ನೊಂದು ನಮೂನೆಯಾಗಿದೆ ಎಂದು ಭಾರತೀಯ ಇತಿಹಾಸ ಸಮ್ಮೇಳನದ ಸರ್ವಾಧ್ಯಕ್ಷ ಕೆ ಎಂ ಶ್ರೀಮಾಲಿ ಹೇಳಿದ್ದಾರೆ.
ಅಂತೆಯೇ ಈ ಕುರಿತು ಯಾವುದೇ ತರ್ಕ ಮತ್ತು ಚರ್ಚೆ ನಡೆಯುವ ಅವಕಾಶವು ದೇಶದಲ್ಲೀಗ ತೀವ್ರವಾಗಿ ಕ್ಷೀಣಿಸಿದೆ ಎಂದವರು ವಿಷಾದಿಸಿದ್ದಾರೆ.
ಆರ್ಎಸ್ಎಸ್ ಮತ್ತು ಬಿಜೆಪಿಯ ಹಿಂದಿನ ಏಕೈಕ ಅಜೆಂಡಾ ಎಂದರೆ ಇತಿಹಾಸದ ಪುನರ್ ಲೇಖನ ಮತ್ತು ಆ ಮೂಲಕ ಹಿಂದೂ ರಾಷ್ಟ್ರ ನಿರ್ಮಾಣವೇ ಆಗಿದೆ; ಹಾಗಾಗಿ ದೇಶದಲ್ಲಿನ ಅಲ್ಪಸಂಖ್ಯಾಕರನ್ನು ಎರಡನೇ ದರ್ಜೆಯ ಪೌರರನ್ನಾಗಿ ಪರಿಗಣಿಸುವಂತಾಗಿದೆ ಎಂದವರು ಟೀಕಿಸಿದರು.
ಇತಿಹಾಸದ ಬಗ್ಗೆ ಯಾವುದೇ ತಿಳಿವಳಿಕೆ, ಜ್ಞಾನ ಇಲ್ಲದವರು ಕೂಡ ಇತಿಹಾಸವನ್ನು ಸೃಷ್ಟಿಸುವ ಮತ್ತು ತಮ್ಮ ಆಲೋಚನೆಗಳನ್ನು ಅದರಲ್ಲಿ ತುಂಬಿಸುವ ಯತ್ನ ಮಾಡುತ್ತಿದ್ದಾರೆ. ಇತಿಹಾಸ ಕುರಿತ ಯಾವುದೇ ಚರ್ಚೆ ಮತ್ತು ತರ್ಕಕ್ಕೆ ಇಷ್ಟೊಂದು ಕಡಿಮೆ ಅವಕಾಶ ಹಿಂದೆಂದೂ ಇರಲಿಲ್ಲ. ಇತಿಹಾಸವನ್ನು ತಿರುಚುವುದು, ಸೃಷ್ಟಿಸುವುದು ವಸ್ತುತಃ ಇನ್ನೊಂದು ಬಗೆಯ ಭಯೋತ್ಪಾದನೆಯೇ ಆಗಿದೆ ಎಂದು ದಿಲ್ಲಿ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಆಗಿರುವ ಶ್ರೀಮಾಲಿ ಹೇಳಿದರು.
ಆರ್ಎಸ್ಎಸ್ ಮತ್ತು ಬಿಜೆಪಿ ದೇದವನ್ನು ಧಾರ್ಮಿಕ ನೆಲೆಯಲ್ಲಿ ಒಡೆಯಲು ಸಂಕಲ್ಪಿತವಾಗಿವೆ. ಇತಿಹಾಸ ಎನ್ನುವುದು ತರ್ಕದ ಶಿಸ್ತಿರುವ ಮಾನವಿಕ ವಿಷಯವಾಗಿದೆ.ಅದನ್ನು ಪುನರ್ ಲೇಖನ ಮಾಡುವುದಾಗಲೀ ಸತ್ಯಗಳನ್ನು ಸೃಷ್ಟಿಸುವುದಕ್ಕಾಗಲೀ ಕಪೋಲ ಕಲ್ಪಿತವನ್ನಾಗಿ ಮಾಡಲಾಗಲೀ ಸಾಧ್ಯವಿಲ್ಲ ಎಂದವರು ಹೇಳಿದರು.
ಮುಂದುವರಿದು ಶ್ರೀಮಾಲಿ ಅವರು ಹಿಂದುತ್ವ ಮತ್ತು ಹಿಂದು ಧರ್ಮ ಎನ್ನುವುದು ವಿಭಿನ್ನ ಪರಿಕಲ್ಪನೆಗಳು; ಹಿಂದುತ್ವ ಎನ್ನುವುದು ರಾಜಕೀಯ ಸಿದ್ಧಾಂತ ಎಂದು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
GalaxEye; ರಾತ್ರಿಯಲ್ಲೂ ಭೂಮಿ ಚಿತ್ರ ಕ್ಲಿಕ್ಕಿಸುವ ಟೆಕ್ನಾಲಜಿ ಪರೀಕ್ಷೆ
Loksabha; ಬಿಜೆಪಿಗೆ 300 ಕ್ಷೇತ್ರಗಳಲ್ಲಿ ಜಯ ನಿಶ್ಚಿತ: ಪ್ರಶಾಂತ್ ಕಿಶೋರ್ ಭವಿಷ್ಯ
Kanhaiya Kumar ಕ್ಯಾಂಪೇನ್ಗೆ 47 ಲಕ್ಷ ರೂ. ದೇಣಿಗೆ ಸಂಗ್ರಹ!
ಗುಣಮಟ್ಟ ಪರೀಕ್ಷೆಯಲ್ಲಿ ಎಂಡಿಎಚ್, ಎವರೆಸ್ಟ್ ಉತ್ಪನ್ನಗಳು ಪಾಸ್!
Kerala; ಕೇಂದ್ರದ ಸವಾಲು ನಡುವೆ ರಾಜ್ಯದ ಆದಾಯ ಹೆಚ್ಚಳ: ಕೇರಳ ಸಚಿವ
MUST WATCH
ಹೊಸ ಸೇರ್ಪಡೆ
GalaxEye; ರಾತ್ರಿಯಲ್ಲೂ ಭೂಮಿ ಚಿತ್ರ ಕ್ಲಿಕ್ಕಿಸುವ ಟೆಕ್ನಾಲಜಿ ಪರೀಕ್ಷೆ
Loksabha; ಬಿಜೆಪಿಗೆ 300 ಕ್ಷೇತ್ರಗಳಲ್ಲಿ ಜಯ ನಿಶ್ಚಿತ: ಪ್ರಶಾಂತ್ ಕಿಶೋರ್ ಭವಿಷ್ಯ
Kanhaiya Kumar ಕ್ಯಾಂಪೇನ್ಗೆ 47 ಲಕ್ಷ ರೂ. ದೇಣಿಗೆ ಸಂಗ್ರಹ!
ಗುಣಮಟ್ಟ ಪರೀಕ್ಷೆಯಲ್ಲಿ ಎಂಡಿಎಚ್, ಎವರೆಸ್ಟ್ ಉತ್ಪನ್ನಗಳು ಪಾಸ್!
Kerala; ಕೇಂದ್ರದ ಸವಾಲು ನಡುವೆ ರಾಜ್ಯದ ಆದಾಯ ಹೆಚ್ಚಳ: ಕೇರಳ ಸಚಿವ