‘ಸೋನೆ’ ಚುಟುಕು ಸಂಕಲನ ಬಿಡುಗಡೆ
Team Udayavani, Jan 7, 2018, 3:49 PM IST
ಪಡುವನ್ನೂರು: ಲೇಖಕನ ಭಾವ ಸ್ಪರ್ಶದಿಂದ ಲೇಖನಿ ಸಶಕ್ತವಾಗುವುದು. ಕೃತಿಗಳಿಂದ ಸಮಾಜದ ದೃಷ್ಟಿಕೋನವೂ ಬದಲಾಗುವುದು ಎಂದು ಪೆರ್ನಾಜೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ ಆಚಾರ್ಯ ಹೇಳಿದರು. ಶ್ಯಾಮ್ ಪಟ್ಟಾಜೆ ಅವರ ‘ಸೋನೆ’ ಚುಟುಕು ಸಂಕಲನ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸುಶೀಲಾ ನಾರಾಯಣ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಪತ್ರಕರ್ತ, ಸಾಹಿತಿ ವಿ.ಬಿ. ಅರ್ತಿಕಜೆ ಮುಖ್ಯ ಅತಿಥಿಯಾಗಿ ಮಾತನಾಡಿ, ಅನುಭವ, ತಣ್ತೀ ಹಾಗೂ ಸತ್ವವಿಲ್ಲದೆ ಕವನ ಬರೆಯಲು ಸಾಧ್ಯವಿಲ್ಲ, ಮಕ್ಕಳಲ್ಲಿ ಸಾಹಿತ್ಯ ಪ್ರೀತಿ ಬೆಳೆಸುವ ಕೆಲಸವಾಗಬೇಕು ಎಂದರು.
ಕೇರಳ ಶಾಲಾ ಕನ್ನಡ ಉಪನ್ಯಾಸಕ ಜೆ.ಸಿ. ಗೋಪಾಲಕೃಷ್ಣ ಭಟ್, ಪಡುಮಲೆ ಶಾಲೆಯ ಮುಖ್ಯ ಶಿಕ್ಷಕ ದೇವಿಪ್ರಸಾದ್
ಕೆ.ಸಿ. ಮಾತನಾಡಿದರು. ನಿವೃತ್ತ ಶಿಕ್ಷಕ ಸುಬ್ರಹ್ಮಣ್ಯ ಭಟ್ ಪಟ್ಟಾಜೆ ಪ್ರಾಸ್ತಾವಿಕ ಮಾತನಾಡಿದರು. ಕೃತಿಕಾರ ಶ್ಯಾಮ್
ಪಟ್ಟಾಜೆ ಸ್ವಾಗತಿಸಿ, ವಂದಿಸಿದರು. ಮಂಗಳೂರು ಎಸ್ಡಿಎಂ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಸೂರ್ಯ ನಾರಾಯಣ ಭಟ್ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ
MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ
Belthangady ಕಾಂಗ್ರೆಸ್ನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿ: ಕೋಟ
Belthangady ವಿದ್ಯುತ್ ತಂತಿ ಮೇಲೆ ಬಿದ್ದ ಮರ; ವ್ಯಕ್ತಿಗೆ ಗಾಯ
Bantwal; ರಿಕ್ಷಾ ಪಲ್ಟಿಯಾಗಿ ರಸ್ತೆಗೆ ಎಸೆಯಲ್ಪಟ್ಟ ಯುವಕ ಮೃತ್ಯು