ಜೀವನ ನಾಟಕ ರಂಗ


Team Udayavani, Jan 12, 2018, 1:57 PM IST

12-35.jpg

ಹೈಸ್ಕೂಲಿನಲ್ಲಿ ಏಕಾಂತವನ್ನು ಸಂಭ್ರಮಿಸುತ್ತಿದ್ದ ನಾನು ಪಿಯು ಕಾಲೇಜಿನಲ್ಲಿಯೂ ಹಿಮಾಲಯದಿಂದ ಬಂದ ಭಯಂಕರ ಬೈರಾಗಿಯಂತೆ ಇರಲು ಇಚ್ಛಿಸಿದ್ದೆ. ಮೊದಲ ದಿನ ನನ್ನ ಕ್ಲಾಸಿನಿಂದ ಹೊರಗೆ ಬರುವಾಗ ಮುಂದಿನಿಂದ ಬಂದ ಮೂರು ಜನ ಅತ್ಯಂತ ಉತ್ಸಾಹದಿಂದ “”ಹಾಯ್‌ ರಕ್ಷಾ , ನಿನ್ನನ್ನು ಎಷ್ಟು ಮಿಸ್‌ ಮಾಡಿದ್ವಿ ಗೊತ್ತಾ? ನಾಟಕ ಮಾಡುವಾಗಲೆಲ್ಲಾ ನಿನ್ನದೇ ನೆನಪು” ಎನ್ನುವಾಗ ಸ್ವಲ್ಪ ಮುಜುಗರ ಅನ್ನಿಸಿದ್ದು ಸುಳ್ಳಲ್ಲ. ಅಂದಿನಿಂದ ನಮ್ಮ ಬಾಲ್ಯದ ಗೆಳೆತನ, ಮರೆಯಲಾಗದ ಸಂಬಂಧವಾಗಿ ಮಾರ್ಪಟ್ಟಿತು. ಹೇಗೆ ಎಂದು ನನಗೆ ತಿಳಿಯಲಿಲ್ಲ.

ನಾನು ನನ್ನನ್ನು ಮರೆತು ಅವರೊಂದಿಗೆ ಬೆರೆತು, ಅವರೇ ನಾನಾಗಿರುವಾಗ, ಅವರು ಅವರಲ್ಲಿ ನನ್ನನ್ನು ಉಳಿಸಿಕೊಂಡರು. ಪ್ರತಿಯೊಂದು ವಿಷಯದಲ್ಲೂ ತರ್ಕ ಹುಡುಕುತ್ತಿದ್ದ ನಾವು, ಊಟ ಮುಗಿಸಿ ಚರ್ಚೆಗೆ ಕುಳಿತುಬಿಡುತ್ತಿದ್ದೆವು. ನಮ್ಮ ಚರ್ಚೆ ನಮ್ಮ ತರಗತಿಗೆ ಸೀಮಿತವಾಗದೆ, ನಮ್ಮ ಪ್ರಾಧ್ಯಾಪಕರ ಕೊಠಡಿಗೂ ತಲುಪುತ್ತಿತ್ತು. (ಅದು ನಮ್ಮ ತಪ್ಪಲ್ಲ, ಇಂದಿಗೂ ವಾಯ್ಸ ಪಿಚ್‌ನ ಸಮಸ್ಯೆಯಿದೆ)ಒಂದು ಬಾರಿ ನಮ್ಮ ಭೌತಶಾಸ್ತ್ರ ಉಪನ್ಯಾಸಕರು ಬಂದು, “”ರೇಖಾ, ಯು ಫಾಟ್‌ ವಿದ್‌ ಯುವರ್‌ ಫ್ರೆಂಡ್ಸ್‌ ರೈಟ್‌?” ಎಂದಾಗ ನಾಚಿಕೆಯಿಂದ, “”ಇಲ್ಲ ಸಾರ್‌, ಚರ್ಚೆ ಮಾಡಿದ್ದು” ಎಂದು ಕಿಸಿಕ್‌ ಎಂದು ನಕ್ಕುಬಿಟ್ಟೆ. ಉಳಿದವರೆಲ್ಲಾ ಗೋಳ್ಳೋ ಎಂದು ನಕ್ಕರು. ಅಂದಿನಿಂದ ಧ್ವನಿ ಜಾಸ್ತಿಯಾದಾಗಲೆಲ್ಲ ನಾವು ಒಬ್ಬರನ್ನೊಬ್ಬರು ಎಚ್ಚರಿಸುತ್ತಿದ್ದೆವು. ಹೇಗೂ ಗೆಳೆತನ ಎಂದರೆ ಇದೇ ತಾನೆ? ಒಬ್ಬರನ್ನೊಬ್ಬರು ಎಚ್ಚರಿಸುವುದು. ಅದು ನೀರಸ ಗಣಿತಶಾಸ್ತ್ರ ತರಗತಿಯಲ್ಲಿರಬಹುದು ಅಥವಾ ಜೀವನದಲ್ಲಿಯೂ ಆಗಿರಬಹುದು.

ಜೀವನ ನಾಟಕ ರಂಗ ಎಂಬಂತೆ ನಮಗೆ ನಾಟಕವೇ ಜೀವನವಾಗಿತ್ತು. ನಾವು ಕಾಲೇಜಿನಲ್ಲಿ ನಾಟಕದ ಹಿಂದೆ ಅಲೆದಾಡಿದ್ದು ಅಷ್ಟಿಷ್ಟಲ್ಲ. ನಾಟಕದಲ್ಲಿ ಭಯಂಕರ ಆಸಕ್ತಿ ಇಲ್ಲದ ನನಗೆ ಮೊದಲು ನನ್ನ ಗೆಳೆತಿಯರ ನಾಟಕದ ಹುಚ್ಚು ವಿಲಕ್ಷಣವೆನಿಸುತ್ತಿತ್ತು. ಆದರೆ ಅದರ ಆನಂದ ಮತ್ತೆ ತಿಳಿಯಿತು. ತರಗತಿ ತಪ್ಪಿಸಿ ನಾಟಕ ಅಭ್ಯಾಸ ಮಾಡುವುದು, ಸುತ್ತಾಟ, ಅಲೆದಾಟ, ಹೊಗಳಿಕೆ, ತೆಗಳಿಕೆ ಎಲ್ಲವೂ. ಮತ್ತೆ ಕೆಲವೊಮ್ಮೆ ಶೂನ್ಯ. ಎಲ್ಲಾ ಗೆಳೆಯರಂತೆ ನಾವೂ ಎಂದೆಂದೂ ಒಂದಾಗಿ ಬದುಕೋಣ ಎಂದು ಶಪಥ ಮಾಡಿದ್ದೆವು. ಇದು ತರ್ಕರಹಿತವಾಗಿರಲಿಲ್ಲ. ಏಕೆಂದರೆ, ಪ್ರತೀ ಬಾರಿ ನಮ್ಮ ಹುಸಿ ಮುನಿಸನ್ನು ನಾಟಕ ಎಂಬ ಅಸ್ತ್ರ ಪುಡಿ ಪುಡಿ ಮಾಡಿ, ನಮ್ಮನ್ನು ಒಂದೆಡೆ ಸೇರಿಸುತ್ತಿತ್ತು. ಇದೇ ನಾಟಕ ಅಸ್ತ್ರದ ನಂಬಿಕೆಯಲ್ಲಿ ಕಾಲೇಜಿನಿಂದ ಹೊರಗೆ ಬಂದೆವು. ನಾಟಕದ ಹುಚ್ಚು ಬಿಡಲಿಲ್ಲ. ಆದರೆ ಪರಿಸ್ಥಿತಿ ಬದಲಾಯಿತು. ಒಬ್ಬಳು ಕೋಳಿ ಗೂಡಿಗೆ (ಯೂನಿವರ್ಸಿಟಿ), ಇನ್ನೊಬ್ಬಳು ಜೈಲಿಗೆ (ಮದುವೆಯೆಂಬುದು ಬಂಧನವಂತೆ) ಮತ್ತೂಬ್ಬಳು ಮತ್ತು ನಾನು ಸಮುದ್ರಕ್ಕೆ (ಉದ್ಯೋಗ ಹುಡುಕುತ್ತಾ, ಜೀವನವೆಂಬ ಸಮುದ್ರ) ನಾಟಕ ಕರೆದರೆ ಎಲ್ಲವನ್ನೂ ಬಿಟ್ಟು ಓಡುತ್ತಿದ್ದ ನಮಗೆ ಪರಿಸ್ಥಿತಿಯನ್ನು ಡಬಲ್‌ಶೂಟ್‌ ಮಾಡಲಾಗಲಿಲ್ಲ. ಮೊನ್ನೆ ಅರೆಹೊಳೆ ರಂಗ ಹಬ್ಬದ “ಜರ್ನಿ ಥಿಯೇಟರ್‌’ನ ನಾಟಕ ನೋಡುತ್ತಿದ್ದ ನನಗೆ, ನನ್ನ ಅಕ್ಕಪಕ್ಕದ ಕುರ್ಚಿಗಳನ್ನು ಖಾಲಿ ನೋಡಿ ಏನೋ ಹೊಟ್ಟೆಯೊಳಗೆ ನೋವಾದಂತೆ ತೋರಿತು. ಕಾಲೇಜಿನಿಂದ ಹೊರಬರುವಾಗ ನಿನ್ನನ್ನು ಮಿಸ್‌ ಮಾಡಲ್ಲ ಎಂದಿದ್ದ ನಾನು, ಮೊನ್ನೆ “ಮಿಸ್‌ಯೂ’ ಪದದ ಅರ್ಥ ತಿಳಿದುಕೊಂಡೆ. ಆಗ ನನಗೆ ಭಯಂಕರ ಬೈರಾಗಿ ಜೀವನವೇ ಒಳ್ಳೆದಿತ್ತು. ಅಯ್ಯೋ ಹಾಳು ಮಾಡಿದರಲ್ಲ ನನ್ನ, ಈಗ ಈ ಹೊಟ್ಟೆನೋವಿಗೆ ಏನು ಮಾಡಲಿ ಎಂದು ಯೋಚಿಸುತ್ತಾ ನನ್ನ ಗೆಳತಿಗೆ ಫೋನ್‌ ರಿಂಗಿಸಿದೆ. “ಹಲೋ’ ಎನ್ನುವ ಬದಲು “ನಾಟಕ ನೋಡಿದೆ’ ಎಂದೆ. ಒಂದು ತಾಸು ಮಾತನಾಡಿದ ನಂತರ ಅವಳೂ, “”ನಾನೂ ಮಿಸ್‌ ಮಾಡ್ತಾ ಇದ್ದೇನೆ’ ಎಂದಳು. ಆಗ ಹೊಟ್ಟೆನೋವು ಸ್ವಲ್ಪ ಸರಿ ಹೋಯಿತು.

ರಕ್ಷಾ ವಿ. ವಿ. ಕಾಲೇಜು, ಮಂಗಳೂರು

ಟಾಪ್ ನ್ಯೂಸ್

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

9-kushtagi

Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.