ನ್ಯಾಯಾಧಿಕರಣಕ್ಕೆ ಕರ್ನಾಟಕ ವಿರುದ್ಧ ಆಕ್ಷೇಪಣೆ ಸಲ್ಲಿಕೆ
Team Udayavani, Jan 16, 2018, 6:55 AM IST
ಪಣಜಿ: ಮಹದಾಯಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕದ ವಿರುದ್ಧ ಗೋವಾ ಸರ್ಕಾರ ನವದೆಹಲಿಯಲ್ಲಿರುವ ನ್ಯಾಯಾಧಿಕರಣದಲ್ಲಿ ಸೋಮವಾರ ಅಹವಾಲು ಸಲ್ಲಿಕೆ ಮಾಡಿದೆ.
ಗೋವಾ ಸರ್ಕಾರವನ್ನು ಪ್ರತಿನಿಧಿಸುವ ನ್ಯಾಯವಾದಿ ಆತ್ಮಾರಾಮ ನಾಡಕರ್ಣಿ 531 ಪುಟಗಳಲ್ಲಿ ಕರ್ನಾಟಕದ ವಿರುದ್ಧ ಇರುವ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ಫೆಬ್ರವರಿ ಮೊದಲ ವಾರದಲ್ಲಿ ಅದರ ವಿಚಾರಣೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.