ಮಂತ್ರಿಗಳ ಪರ ಸಿಎಂ ಕಾಗದ ಪತ್ರ ಮಂಡನೆ
Team Udayavani, Feb 24, 2018, 8:20 AM IST
ವಿಧಾನಸಭೆ:ಸದನದಲ್ಲಿ ಶಾಸಕರ ಜತೆಗೆ ಬಹುತೇಕ ಸಚಿವರೂ ಗೈರು ಹಾಜರಾಗಿದ್ದರು. ಶುಕ್ರವಾರ ಬೆಳಗ್ಗೆ ಕೋರಂ ಕೊರತೆಯಿಂದಾಗಿ ಸ್ವಲ್ಪ ತಡವಾಗಿಯೇ ಕಲಾಪ ಆರಂಭವಾದರೂ ಹಾಜರಿರಬೇಕಿದ್ದ ಹೆಚ್ಚಿನ ಸಚಿವರು ಆಗಮಿಸಿರಲಿಲ್ಲ. ಸಭೆಯ ಮುಂದಿಡಲಾಗುವ ಕಾಗದ ಪತ್ರಗಳನ್ನು ಅವರವರ ಖಾತೆಯ ಸಚಿವರು ಮಂಡಿಸಬೇಕಿತ್ತು ಆದರೆ ಸಚಿವರು ಸಕಾಲಕ್ಕೆ ಹಾಜರಿರದ ಕಾರಣ ಮಂತ್ರಿಗಳ ಪರವಾಗಿ ಮುಖ್ಯಮಂತ್ರಿಗಳೇ ಕಾಗದ ಪತ್ರಗಳನ್ನು ಮಂಡಿಸಿದರು.
ಮೊದಲು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಕೈಗಾರಿಕೆ ಸಚಿವ ದೇಶಪಾಂಡೆ ಸೇರಿ ಮೂರ್ನಾಲ್ಕು ಸಚಿವರ ಪರವಾಗಿ ಸಿಎಂ ಕಾಗದ ಪತ್ರ ಮಂಡಿಸಿದರು. ನಂತರ ಇತರ ಸಚಿವರೂ ಸದನದಲ್ಲಿ ಇರದೇ ಇರುವುದನ್ನು ಗಮನಿಸಿದ ಸಿದ್ದರಾಮಯ್ಯ ಅವರು, “ಇದೇನ್ರಿ ಒಬ್ಬರೂ ಇಲ್ವಲ್ಲ…’ ಎಂದು ಹೇಳಿ ತಾವೇ ಗೈರು ಹಾಜರಾಗಿದ್ದ ಮಂತ್ರಿಗಳ ಪರವಾಗಿ ಕಾಗದ ಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ ಕೃಷಿ ಸಚಿವ ಕೃಷ್ಣ ಬೈರೇಗೌಡ ಸದನದಲ್ಲಿ ಇದ್ದುದ್ದನ್ನು ಗಮನಿಸಿದ ಸಿಎಂ ಕೃಷಿ ಇಲಾಖೆಯ ಕಾಗದ ಪತ್ರವನ್ನು ಕೃಷ್ಣ ಬೈರೇಗೌಡರಿಗೆ ಮಂಡಿಸಲು ಸೂಚಿಸಿದರು. ಸಚಿವರಾದ ಬಸವವರಾಜ ರಾಯರಡ್ಡಿ, ದೇಶಪಾಂಡೆ, ಎಚ್.ಕೆ. ಪಾಟೀಲ್, ಎಚ್.ಎಂ ರೇವಣ್ಣ, ಎ. ಕೃಷ್ಣಪ್ಪ ಸೇರಿ 10 ಸಚಿವರು ಕಾಗದ ಪತ್ರ ಮಂಡಿಸಲು ಹಾಜರಾಗಿರಲಿಲ್ಲ.
ಸಚಿವರ ಗೈರುಹಾಜರಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್, ಸಚಿವರ ಪರವಾಗಿ ಮುಖ್ಯಮಂತ್ರಿಗಳು ಕಾಗದ ಪತ್ರ ಮಂಡಿಸುವ ಪರಿಸ್ಥಿತಿ ಬಂದಿತಲ್ಲ ಎಂದು ಆಡಳಿತ ಪಕ್ಷವನ್ನು ಛೇಡಿಸಿದರು. ಹಿರಿಯ ಶಾಸಕ ಸುರೇಶ್ ಕುಮಾರ್ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೂ ಮುಖ್ಯಮಂತ್ರಿಗಳು ಒಬ್ಬರೇ ಸಚಿವ ಸಂಪುಟ ಸಭೆ ನಡೆಸಿದ್ದರು. ಅಧಿವೇಶನದ ಕೊನೆಯ ದಿನ ಸಹ ಮುಖ್ಯಮಂತ್ರಿಗಳು ಸದನದಲ್ಲಿ ಒಬ್ಬರೇ ಕಾಗದ ಪತ್ರ ಮಂಡಿಸುತ್ತಿದ್ದಾರೆಂದು ಮಾರ್ಮಿಕವಾಗಿ ನುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
2nd PUC ಪರೀಕ್ಷೆ-2 ಫಲಿತಾಂಶ ಪ್ರಕಟ; ಶೇ. 35.25 ವಿದ್ಯಾರ್ಥಿಗಳು ಉತ್ತೀರ್ಣ
ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಹಾಳು ಮಾಡುತ್ತಿದೆ:ವಿ.ಪ. ಸದಸ್ಯ ಎಸ್.ವಿ. ಸಂಕನೂರ
Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ
ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಸರ್ಕಾರದ ಪರ ಮೃದು ಧೋರಣೆ ಇಲ್ಲ: ಮೃತ್ಯುಂಜಯ ಸ್ವಾಮೀಜಿ
Hasan: ಲೈಂಗಿಕ ದೌರ್ಜನ್ಯ ಪ್ರಕರಣ; 20 ದಿನಗಳ ನಂತರ ತವರಿಗೆ ಆಗಮಿಸಿದ ಎಚ್.ಡಿ.ರೇವಣ್ಣ
MUST WATCH
ಹೊಸ ಸೇರ್ಪಡೆ
Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!
Swindon Borough ಕೌನ್ಸಿಲ್ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ
W.Bengal; ಬಿಜೆಪಿ ಅಭ್ಯರ್ಥಿಗೆ 24 ಗಂಟೆ ಕಾಲ ಪ್ರಚಾರ ಮಾಡದಂತೆ ತಡೆ ನೀಡಿದ ಚುಣಾವಣಾ ಆಯೋಗ
Mollywood: 5 ತಿಂಗಳಿನಲ್ಲಿ 1000 ಕೋಟಿಗೂ ಅಧಿಕ ಗಳಿಕೆ: ಈ 3 ಸಿನಿಮಾಗಳ ಕೊಡುಗೆಯೇ ಹೆಚ್ಚು
Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ