ಫಿಟ್ ಇಂಡಿಯಾ: ಮೋದಿ ಕರೆ
Team Udayavani, Mar 26, 2018, 6:35 AM IST
ಹೊಸದಿಲ್ಲಿ: ದೇಶದ ಯುವಜನತೆ ಹೊಸ ಚಳವಳಿ ಆರಂಭಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಅದು ಯಾವುದೆಂದರೆ, ‘ಫಿಟ್ ಇಂಡಿಯಾ ಚಳವಳಿ’. ಅಂತಾರಾಷ್ಟ್ರೀಯ ಯೋಗ ದಿನಕ್ಕೆ 3 ತಿಂಗಳಷ್ಟೇ ಬಾಕಿ ಇದ್ದು, ಯೋಗ ಎನ್ನುವುದು ಒಂದು ಸಾಮೂಹಿಕ ಚಳವಳಿಯಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದರು.
ರವಿವಾರ ತನ್ನ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ನಲ್ಲಿ ಮಾತನಾಡಿದ ಅವರು, ಯುವಜನತೆ ಯೋಗಾಭ್ಯಾಸ ಮಾಡುವುದರ ಜತೆಗೆ ತಮ್ಮ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಇತರರಿಗೂ ಯೋಗ ಮಾಡುವಂತೆ ಉತ್ತೇಜನ ನೀಡಿ. ಈ ಕುರಿತು ಜಾಗೃತಿ ಮೂಡಿಸುವಂಥ ‘ಫಿಟ್ ಇಂಡಿಯಾ ಚಳವಳಿ’ ಆರಂಭಿಸಬೇಕು ಎಂದರು. ಯೋಗ ಎನ್ನುವುದು ರೋಗಗಳನ್ನು ತಡೆಯುವಂಥ ಆರೋಗ್ಯ ಸೇವೆಯಾಗಿದೆ. ಇದು ವೆಚ್ಚದಾಯಕವೂ ಅಲ್ಲ, ಜತೆಗೆ ಸರಳವೂ ಆಗಿದೆ. ಆರೋಗ್ಯಕರ ಭಾರತ ಮತ್ತು ಸ್ವತ್ಛ ಭಾರತ ಒಂದಕ್ಕೊಂದು ಸಂಬಂಧ ಹೊಂದಿವೆ ಎಂಬುದನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದರು.
ಮೋದಿಯೇ ಯೋಗ ಮಾಸ್ಟರ್: ಪ್ರಧಾನಿ ಅವರ ಮನ್ ಕೀ ಬಾತ್ ಕಾರ್ಯಕ್ರಮದ ಬೆನ್ನಲ್ಲೇ ಅವರ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ತ್ರಿಕೋನಾಸನದ ‘3ಡಿ ಆ್ಯನಿಮೇಟೆಡ್ ವೀಡಿಯೋ’ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪ್ರಧಾನಿ ಮೋದಿ ಅವರೇ ಯೋಗಾಸನ ಮಾಡುವಂಥ ಆ್ಯನಿಮೇಷನ್ ಇದೆ. ನೀಲಿ ಬಣ್ಣದ ಟಿ-ಶರ್ಟ್ ಧರಿಸಿರುವ ಮೋದಿ ಅವರು, ತ್ರಿಕೋನಾಸನ ಮಾಡುವ ವೀಡಿಯೋ ಇದರಲ್ಲಿದೆ. ಸದ್ಯಕ್ಕೆ ಇದು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿದ್ದು, ಮುಂದಿನ ದಿನಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲೂ ಲಭ್ಯವಿರಲಿದೆ. ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಪ್ರಧಾನಿ, ‘ನಾನು ಯೋಗಾಭ್ಯಾಸ ಮಾಡುತ್ತಿರುವುದನ್ನು 3ಡಿ ಆ್ಯನಿಮೇಟೆಡ್ ವೀಡಿಯೋವಾಗಿ ಪರಿವರ್ತಿಸಿರುವ ಕೆಲವು ಯುವಕರ ಕ್ರಿಯಾಶೀಲತೆ ನೋಡಿ ಖುಷಿಯಾಗಿದೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Excise Policy Case: ಕೇಜ್ರಿಗೆ ಅಲ್ಪ ರಿಲೀಫ್; ಮಧ್ಯಂತರ ಜಾಮೀನು ನೀಡಿದ ಸುಪ್ರೀಂ
2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, ಮೂವರು ಖುಲಾಸೆ
Pak ಬಳಿ ಅಣುಬಾಂಬ್ ಇದೆ ಅವರಿಗೆ ಗೌರವ ಕೊಡಿ… ಕಾಂಗ್ರೆಸ್ ನಾಯಕನ ವಿವಾದಾತ್ಮಕ ಹೇಳಿಕೆ
Controversy: ಬಿಜೆಪಿ ನಾಯಕನ ಅಪ್ರಾಪ್ತ ಪುತ್ರನಿಂದ ಮತದಾನ; ವಿವಾದಿತ ವಿಡಿಯೋ ವೈರಲ್
Sandeshkhali ಪ್ರಕರಣಕ್ಕೆ ದಿಢೀರ್ ತಿರುವು : ಇಬ್ಬರು ಸಂತ್ರಸ್ತೆಯರಿಂದ ದೂರು ವಾಪಸ್!
MUST WATCH
ಹೊಸ ಸೇರ್ಪಡೆ
Delhi Excise Policy Case: ಕೇಜ್ರಿಗೆ ಅಲ್ಪ ರಿಲೀಫ್; ಮಧ್ಯಂತರ ಜಾಮೀನು ನೀಡಿದ ಸುಪ್ರೀಂ
Rank: ಕುಂದಾಪುರ ತಾಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದ ಶುಕ್ತಿಜಾ
KGF-3 ಸ್ಕ್ರಿಪ್ಟ್ ಸಿದ್ದವಿದೆ, ಆದರೆ….: ಬಿಗ್ ಅಪ್ಡೇಟ್ ನೀಡಿದ ಪ್ರಶಾಂತ್ ನೀಲ್
2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, ಮೂವರು ಖುಲಾಸೆ
Retired; ಟಿ20 ವಿಶ್ವಕಪ್ ನಲ್ಲಿ ಸಿಗದ ಸ್ಥಾನ; ವೃತ್ತಿಜೀವನಕ್ಕೆ ತೆರೆಎಳೆದ ಕಿವೀಸ್ ಬ್ಯಾಟರ್