ಸುಪ್ರೀಂ ಆದೇಶ ಪಾಲನೆಗೆ ಹಿಂದೇಟು
Team Udayavani, Apr 21, 2018, 7:00 AM IST
ಬೆಂಗಳೂರು: ಎಸ್ಸಿ, ಎಸ್ಟಿ ನೌಕರರ ಹಿಂಭಡ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ವಿಧಾನ ಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅವರು ಸುಪ್ರೀಂ ಕೋರ್ಟ್ ಆದೇಶ ಪಾಲಿಸದೆ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ವಿಧಾನಸಭೆ ಸಚಿವಾಲಯದ ಸಿಬಂದಿ ಪತ್ರ ಬರೆದಿದ್ದಾರೆ.
ಎಸ್.ಮೂರ್ತಿ ಅವರು ಸುಪ್ರೀ ಕೋರ್ಟ್ ಅದೇಶದಂತೆ ಅಧಿಕೃತ ಪಟ್ಟಿ ಸಿದ್ದಪಡಿಸಲು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.