ಉರ್ವಸ್ಟೋರ್-ಚಿಲಿಂಬಿ: ವಿದ್ಯುತ್ ಕಂಬ ರಸ್ತೆಯ ಬದಿಗೆ ಸರಿಸಿ
Team Udayavani, Apr 29, 2018, 10:05 AM IST
ಮಹಾನಗರ: ಉರ್ವಸ್ಟೋರ್-ಚಿಲಿಂಬಿ ರಸ್ತೆಯ ಎಡಭಾಗದಲ್ಲಿ, ವಾಹನಗಳ ನಿಲುಗಡೆಗೆ ಮೀಸಲಿಟ್ಟಿರುವ ರಸ್ತೆಯ ಜಾಗದಲ್ಲಿ ಕೆಲವು ಕಡೆ ವಿದ್ಯುತ್ ಕಂಬಗಳಿದೆ. ಅದಕ್ಕೆ ತಾಗಿಕೊಂಡೇ ಹಂಪ್ ಸೇರಿದಂತೆ ಇನ್ನಿತರ ಸೂಚನ ಫಲಕವನ್ನು ಇರಿಸಿರುವುದು ಅಪಾಯವನ್ನು ಆಹ್ವಾನಿಸಿದಂತಿದೆ.
ಬಹಳ ಸಂಖ್ಯೆಯಲ್ಲಿ ಬಸ್ಗಳು ಮತ್ತು ದೊಡ್ಡ ವಾಹನಗಳು ಆ ರಸ್ತೆಯಲ್ಲಿ ಸಾಗುವುದರಿಂದ ರಸ್ತೆಯಿಂದ ಸ್ವಲ್ಪ ಎಡಗಡೆಗೆ ಬಂದರೆ ಫಲಕಕ್ಕೆ ಮತ್ತು ಅದರ ಕೆಳಗೆ ಅಳವಡಿಸಿದಂತಹ ಕಬ್ಬಿಣದ ರಾಡ್ ಗೆ ತಾಗುವ ಸಾಧ್ಯತೆಯಿದ್ದು, ಇದರಿಂದಾಗಿ ವಾಹನಗಳಿಗೆ ಮತ್ತು ನಾಗರಿಕರಿಗೆ ತೊಂದರೆಯಾಗಬಹುದು.
ಆದುದರಿಂದ ವಿದ್ಯುತ್ ದೀಪದ ಕಂಬಗಳನ್ನು ರಸ್ತೆಯ ಬದಿಗೆ ಸರಿಸು ವುದರೊಂದಿಗೆ ಫಲಕವನ್ನು ಚಾಲಕರಿಗೆ ಸರಿಯಾಗಿ ಕಾಣುವಂತೆ ಕಂಬದ ಸಮೀ ಪವೇ ಅಳವಡಿಸಿದರೆ ವಾಹನ, ನಾಗರಿಕರಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ.
ಒಂದು ವೇಳೆ ಕಂಬಗಳನ್ನು ಈಗಿರುವ ಜಾಗದಿಂದ ಸರಿಸಲು ಸಾಧ್ಯವಿಲ್ಲವಾದರೆ ಕಂಬದ ಸುತ್ತಲೂ ತಡೆ ಬೇಲಿಯನ್ನು ನಿರ್ಮಿಸಬೇಕು. ಸೂಚನ ಫಲಕ ಗಳನ್ನು ರಸ್ತೆ ಬದಿಯಿಂದ ಫುಟ್ಪಾತ್ ಬದಿಗೆ ಸ್ಥಳಾಂತರಿಸಿದರೆ ಅಪಾಯ ಕಡಿಮೆ ಯಾಗಬಹುದು. ಸಂಬಂಧಪಟ್ಟಂತಹ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುವಂತೆ ಸ್ಥಳಿಯರಾದ ವಿಶ್ವನಾಥ್ ಕೋಟೆಕಾರ್ ಅವರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಹೊಸ ಸೇರ್ಪಡೆ
Davanagere; ಭಾರೀ ಮಳೆಗೆ ನೆಲಕಚ್ಚಿದ ಭತ್ತದ ಬೆಳೆ
Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ
Rain: ಕಳಸ ತಾಲೂಕಿನಾದ್ಯಂತ ಭಾರೀ ಗಾಳಿ-ಮಳೆ; ಜನಜೀವನ ಅಸ್ತವ್ಯಸ್ತ, ವಿದ್ಯುತ್ ಸಂಪರ್ಕ ಕಡಿತ
Hubli; ರಾಜ್ಯ ಯಾವ ದಿಕ್ಕಿನತ್ತ ಸಾಗುತ್ತಿದೆ…: ಪ್ರದೀಪ ಶೆಟ್ಟರ
Panaji: ಅಪಾಯಕಾರಿ ಮರ ಕಡಿಯಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚನೆ