ಸುರತ್ಕಲ್ನಲ್ಲಿ ಮಳೆ: ಮುಂದುವರಿದ ಹೆದ್ದಾರಿ ಬದಿಯ ಚರಂಡಿ ಸಮಸ್ಯೆ
Team Udayavani, Jun 15, 2018, 2:53 PM IST
ಸುರತ್ಕಲ್ : ಸುರತ್ಕಲ್, ಪಣಂಬೂರಿನಲ್ಲಿ ಬುಧವಾರ ರಾತ್ರಿ ಭಾರೀ ಮಳೆ ಸುರಿದಿದ್ದು ಯಾವುದೇ ಹಾನಿ ಸಂಭವಿಸಿಲ್ಲ. ಆದರೆ ಹೆದ್ದಾರಿ ಬದಿಯ ಚರಂಡಿ ಸಮಸ್ಯೆ ಮುಂದುವರಿದಿದೆ. ಇಡ್ಯಾ ಶ್ರೀ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಬಳಿ ರಸ್ತೆ ತುಂಬಾ ನೀರು ನಿಂತು ಸಮಸ್ಯೆಯಾಯಿತು. ನವಗಿರಿ, ಬೈಲಾರೆ, ಬೈಕಂಪಾಡಿಯ ಜನ ವಸತಿ ಪ್ರದೇಶದಲ್ಲಿ ಈ ಬಾರಿಯ ಕೃತಕ ನೆರೆಯ ಸಮಸ್ಯೆ ಉಂಟಾಗಿಲ್ಲ. ಹೆದ್ದಾರಿ ಮಧ್ಯೆ ಡಿವೈಡರ್ನ್ನು ಅಗೆದು ಹಾಕಿದ್ದರೂ ಸ್ಲ್ಯಾಬ್ ತುಂಡುಗಳನ್ನು ರಸ್ತೆ ಮಧ್ಯೆಯೇ ಬಿಡಲಾಗಿದೆ. ಮಳೆ ಇನ್ನಷ್ಟು
ಬಿರುಸಾಗುವ ಲಕ್ಷಣವಿರುದರಿಂದ ಪಾಲಿಕೆ, ಮೆಸ್ಕಾಂ ಮತ್ತಿತರ ತುರ್ತು ಸಿಬಂದಿಯನ್ನು ಸನ್ನದ್ದ ಸ್ಥಿತಿಯಲ್ಲಿಡಲಾಗಿದೆ.
ರಸ್ತೆಯಲ್ಲಿ ಬಿದ್ದ ಸ್ಲ್ಯಾಬ್ಗಳು, ತೆಗೆದುಹಾಕಲು ಆಗ್ರಹ
ಹೊಸಬೆಟ್ಟು ಬಳಿ ಡಿವೈಡರ್ ಅಗೆದು ಹಾಕಿದ ಜಾಗದಲ್ಲಿಯೇ ತುಂಡುಗಳನ್ನು ಬಿಡಲಾಗಿದ್ದು, ರಾತ್ರಿ ಸಂಚಾರ ಸಮಯದಲ್ಲಿ ಬೀದಿ ದೀಪವಿಲ್ಲದೆ ಹೋದರೆ ಅಪಘಾತವಾಗುವ ಭೀತಿಯಿದೆ. ತತ್ಕ್ಷಣ ಡಿವೈಡರ್ ತುಂಡುಗಳನ್ನು ಸುರಕ್ಷತೆಗಾಗಿ ತೆಗೆಯಬೇಕಾಗಿದೆ ಎಂದು ಹೊಸಬೆಟ್ಟು ಮೊಗವೀರ ಸಂಘದ ಅಧ್ಯಕ್ಷ, ನ್ಯಾಯವಾದಿ ಗಂಗಾಧರ ಎಚ್. ಅವರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ