ಡಾಕ್ಟರೇಟ್ ಪಡೆದ ಶ್ರೀಗಳಿಗೆ ಸಚಿವರ ಗೌರವ
Team Udayavani, Jul 23, 2018, 12:40 PM IST
ತಿ.ನರಸೀಪುರ: ತಾಲೂಕಿನ ವಾಟಾಳು ಶ್ರೀ ಮಠಕ್ಕೆ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಪುಟ್ಟರಂಗಶೆಟ್ಟಿ ಭೇಟಿ ನೀಡಿ ಗೌರವ ಡಾಕ್ಟರೇಟ್ ಪಡೆದುಕೊಂಡ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯವರನ್ನು ಸನ್ಮಾನಿಸಿದರು.
ಶ್ರೀ ಮಠಕ್ಕೆ ಭೇಟಿ ನೀಡಿದ ಸಚಿವ ಪುಟ್ಟರಂಗಶೆಟ್ಟಿ ಶ್ರೀಗಳ ಜೊತೆ ಅರ್ಧಗಂಟೆಗೂ ಹೆಚ್ಚುಕಾಲ ಉಭಯ ಕುಶಲೋಪರಿ ನಡೆಸಿದರು. ಮಠಕ್ಕೆ ತೆರಳಿದ ಸಚಿವರಿಗೆ ಶ್ರೀ ಮಠದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಚಾಮರಾಜನಗರ ಕೆಪಿಸಿಸಿ ಸದಸ್ಯ ಗೌಡಳ್ಳಿ ಸೋಮಪ್ಪ, ತಾಪಂ ಮಾಜಿ ಸದಸ್ಯ ನಾಗಯ್ಯ, ಮುಖಂಡರಾದ ಶಂಭಪ್ಪ, ಕಮಲೇಶ್. ಕೇತಹಳ್ಳಿ ಸಿದ್ದಶೆಟ್ಟಿ, ಮಹದೇವಸ್ವಾಮಿ ಇತರರು ಇದ್ದರು.