ಹಿತ್ತಲ ಹೊನ್ನು ! ಪೈಪ್‌ ಕಾಂಪೋಸ್ಟ್‌


Team Udayavani, Jul 30, 2018, 12:24 PM IST

pipe.png

ಅಡುಗೆಮನೆಯಲ್ಲಿ ಸಿಗುವ ಹಣ್ಣು ಮತ್ತು ತರಕಾರಿಗಳ ಸಿಪ್ಪೆ ಮತ್ತಿತರ ತ್ಯಾಜ್ಯಗಳು, ಮಜ್ಜಿಗೆ ಇದನ್ನೆಲ್ಲ ಪೈಪಿನೊಳಗೆ ತುಂಬಬಹುದು. ಆದರೆ ಗಟ್ಟಿಯಾಗಿರುವ ಚಿಪ್ಪುಗಳು, ಗೆರಟೆ, ಬೆಣ್ಣೆಹಣ್ಣಿನ ಬೀಜ, ಲಿಂಬೆ, ಕಿತ್ತಳೆ ಇತ್ಯಾದಿ ಸಿಟ್ರಸ್‌ ಅಂಶವಿರುವ ಹಣ್ಣುಗಳ ತ್ಯಾಜ್ಯ, ಬೇಯಿಸಿದ ಆಹಾರಗಳು, ಸಾಂಬಾರು, ಈರುಳ್ಳಿ ಸಿಪ್ಪೆ ಇದೊಂದನ್ನೂ ತುಂಬಿಸಬಾರದು. 

ಮನೆಯೊಳಗಿನ ತ್ಯಾಜ್ಯಗಳನ್ನು ತಿಪ್ಪೆಗೆ ಎಸೆದರೆ ದುರ್ವಾಸನೆ ಬೀರುತ್ತವೆ. ರೋಗಕಾರಕ ಅಣುಗಳ ಸೃಷ್ಟಿಗೆ ಕಾರಣವಾಗುತ್ತವೆ. ಆದರೆ ಇದೇ ತ್ಯಾಜ್ಯವನ್ನು ಗೊಬ್ಬರವಾಗಿಸಿದರೆ ಹಿತ್ತಲಿನಲ್ಲಿ ಹಸಿರಿನ ಹೊನ್ನು ಬೆಳೆಯಬಹುದು. ಇದರ ಪ್ರತ್ಯಕ್ಷ ನಿದರ್ಶನವೆಂದರೆ ರಾಜಗೋಪಾಲ ಭಟ್ಟರು.

ಗುರುವಾಯನಕೆರೆಯ ಹವ್ಯಕ ಭವನದ ಬಳಿ ಅವರ ಮನೆ, ಸಣ್ಣ ಹಿತ್ತಿಲು, ಒಂದು ಅಂಗಡಿ ಇದೆ. ಕೆಲವು ವರ್ಷಗಳ ಹಿಂದೆಯೇ ಅವರು ಕಸವನ್ನು ರಸವಾಗಿಸುವ ವಿದ್ಯೆಯಲ್ಲಿ ಪರಿಣತರು. ಏನಿದು ಈ ವಿದ್ಯೆಯೆಂದು ತಿಳಿಯಬೇಕಾದರೆ, ಅವರ ಮನೆಯಂಗಳದ ಸುತ್ತಲೂ ಇರುವ ವೈವಿಧ್ಯಮಯ ಗಿಡಗಳ ಸಾಲಿನಲ್ಲೊಮ್ಮೆ ಸುತ್ತಬೇಕು. ಕಣ್ಣಿಗೆ ರಾಚುವ ಹಚ್ಚ ಹಸಿರಿನ ನಡುವೆ ನೆಲದಲ್ಲಿ ಅಲ್ಲಲ್ಲಿ ಹೂಳಿದ ಪಿಸಿ ಪೈಪುಗಳು ಗಮನ ಸೆಳೆಯುತ್ತವೆ.

ಈ ಪೈಪುಗಳಲ್ಲಿದೆ ರಾಜಗೋಪಾಲ ಭಟ್ಟರು ತ್ಯಾಜ್ಯವನ್ನು ಹಸಿರ ಸಿರಿಯ ಚಿನ್ನವಾಗಿಸುವ ಗುಟ್ಟು. ಅದು ಪೈಪು ಕಾಂಪೋಸ್ಟ್‌. ವರ್ಷಗಳ ಹಿಂದೆಯೇ ಗ್ರಾಮ ಪಂಚಾಯಿತಿಗಳಿಗೆ ಇದರ ಪ್ರಯೋಜನದ ಬಗೆಗೆ ಜನರ ಗಮನ ಸೆಳೆಯುವಂತೆ ಆದೇಶಗಳು ಬಂದಿದ್ದರೂ ಅಳವಡಿಸಿದ ಅಧಿಕಾರಿ ವರ್ಗ ಅಪರೂಪ. ಆದರೆ ಭಟ್ಟರು ಅದನ್ನು ಅಳವಡಿಸಿದ್ದಾರೆ. ಹತ್ತು ಮಂದಿ ತಮ್ಮಲ್ಲೂ ಅನುಷ್ಠಾನಗೊಳಿಸಲು ಪ್ರೇರೇಪಿಸಿದ್ದಾರೆ. ಅವರ ಮಡದಿ, ನಿವೃತ್ತ ಶಿಕ್ಷಕಿ ಜಯಶ್ರೀ ಆಸ್ಥೆಯಿಂದ ಅದರ ನಿರ್ವಹಣೆ ಮಾಡುತ್ತಾರೆ.

ಪೇಟೆ-ಪಟ್ಟಣಗಳಲ್ಲಿರುವವರು ಕೂಡ ಪೈಪು ಕಾಂಪೋಸ್ಟಿನ ಲಾಭ ಹೊಂದಬಹುದೆಂದು ಹೇಳುತ್ತಾರೆ. ನಾಲ್ಕು ಮಿಲಿ ಲೀಟರ್‌ ದಪ್ಪವಿರುವ ಉತ್ತಮ ಗುಣಮಟ್ಟದ ಬಲವಾದ ಪಿವಿಸಿ ಪೈಪು ಆಯ್ದುಕೊಳ್ಳಬೇಕು. ಹತ್ತು ಇಂಚು ಅಗಲವಾದ ಬಾಯಿ ಇದ್ದರೆ ಉತ್ತಮ. ಒಂದೂವರೆ ಮೀಟರ್‌ ಉದ್ದದ ಪೈಪಿನ ಕಾಲುಭಾಗವನ್ನು ಮಣ್ಣಿನ ಗುಂಡಿ ತೋಡಿ ಹೂಳಬೇಕು. ಗ್ರಾನೈಟ್‌ ತುಂಡು ಮತ್ತು ಮರಳು ಬಳಸಿ ಬುಡವನ್ನು ಗಟ್ಟಿ ಮಾಡಿದರೆ ಒಳ್ಳೆಯದು. ಇಲ್ಲವಾದರೆ ಒಳಗೆ ಎರೆಹುಳಗಳಿದ್ದರೆ ಬುಡದಲ್ಲಿ ಇಲಿಗಳು ಕೊರೆದು ಹಾನಿ ಮಾಡುತ್ತವೆ.

ಅಡುಗೆಮನೆಯಲ್ಲಿ ಸಿಗುವ ಹಣ್ಣು ಮತ್ತು ತರಕಾರಿಗಳ ಸಿಪ್ಪೆ ಮತ್ತಿತರ ತ್ಯಾಜ್ಯಗಳು, ಮಜ್ಜಿಗೆ ಇದನ್ನೆಲ್ಲ ಪೈಪಿನೊಳಗೆ ತುಂಬಬಹುದು. ಆದರೆ ಗಟ್ಟಿಯಾಗಿರುವ ಚಿಪ್ಪುಗಳು, ಗೆರಟೆ, ಬೆಣ್ಣೆಹಣ್ಣಿನ ಬೀಜ, ಲಿಂಬೆ, ಕಿತ್ತಳೆ ಇತ್ಯಾದಿ ಸಿಟ್ರಸ್‌ ಅಂಶವಿರುವ ಹಣ್ಣುಗಳ ತ್ಯಾಜ್ಯ, ಬೇಯಿಸಿದ ಆಹಾರಗಳು, ಸಾಂಬಾರು, ಈರುಳ್ಳಿ ಸಿಪ್ಪೆ ಇದೊಂದನ್ನೂ ತುಂಬಿಸಬಾರದು. ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ ಜೀವಾಣುಗಳಿಗೆ ಇದೆಲ್ಲವೂ ಹಾನಿ ಮಾಡುತ್ತವೆಯಂತೆ. ನೀರಿನಂಶ ಶೇ. 50ಕ್ಕಿಂತ ಹೆಚ್ಚಿದ್ದರೂ ಗೊಬ್ಬರ ಚೆನ್ನಾಗಿರುವುದಿಲ್ಲ. ಪೈಪು ಭರ್ತಿಯಾದ ಬಳಿಕ ಲಭ್ಯವಿದ್ದರೆ ಎರೆಹುಳಗಳ ಮರಿಗಳನ್ನು ಒಳಗೆ ಬಿಡಬಹುದು. ಬಳಿಕ ಮುಚ್ಚಳ ಹಾಕಬೇಕು. ಆದರೆ ಭದ್ರವಾಗಿ ಮುಚ್ಚಳ ಹಾಕಬಾರದು. ಒಳಗೆ ಗಾಳಿಯಾಡಲು ಅವಕಾಶ ಬೇಕು. ಇದರಿಂದ ತುಂಬಿದ ತ್ಯಾಜ್ಯವನ್ನು ನಾವು ಕಲಸುವ ಪ್ರಕ್ರಿಯೆ ಅಗತ್ಯ ಬೀಳುವುದಿಲ್ಲ. ಗಾಳಿಯೇ ಆ ಕ್ರಿಯೆಯನ್ನು ನಡೆಸಿ ಮೂರು ತಿಂಗಳಲ್ಲಿ ಹದನಾದ ಗೊಬ್ಬರವಾಗಿ ಮಾರ್ಪಡಿಸುತ್ತದೆಂಬುದು ಭಟ್ಟರು ಹೇಳುವ ವಿವರಣೆ.

ಲಭ್ಯವಿದ್ದರೆ ವಾರಕೊಮ್ಮೆ ಸೆಗಣಿಯನ್ನು ಕರಗಿಸಿ ಪೈಪಿನೊಳಗೆ ಹಾಕಬಹುದು. ಇನ್ನು ಇದರೊಳಗಿಂದ ದುರ್ವಾಸನೆ ಬರತೊಡಗಿದರೆ ಒಳಗೆ ಕೊಳೆಯುವ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿಲ್ಲ ಎಂದರ್ಥವಂತೆ. ಚಳಿಗಾಲದಲ್ಲಿ ಗೊಬ್ಬರವಾಗಲು ಸ್ವಲ್ಪ ಹೆಚ್ಚು ಅವಧಿ ಬೇಕು.  ಬೇಸಿಗೆಯಲ್ಲಿ ಬೇಗನೆ ಆಗುತ್ತದೆ. ಹಲಸಿನಂತಹ ಮರಗಳು ಪೈಪಿನ ಬಳಿ ಇದ್ದರೆ ಅದರ ಬೇರುಗಳು ಒಳಗೆ ಪ್ರವೇಶಿಸಿ ಗೊಬ್ಬರವನ್ನು ಮೊದಲೇ ತಿಂದುಬಿಡುತ್ತವೆ. ಹೀಗಾಗಿ ಸ್ಥಳದ ಆಯ್ಕೆ ಎಚ್ಚರಿಕೆಯಿಂದ ಮಾಡಬೇಕು.

ಜಾಗವಿದ್ದರೆ, ಹೆಚ್ಚು ತ್ಯಾಜ್ಯ ಸಿಗುವುದಾದರೆ ಒಂದಕ್ಕಿಂತ ಹೆಚ್ಚು ಪೈಪುಗಳ ಮೂಲಕ ಗೊಬ್ಬರ ತಯಾರಿಸಬಹುದೆಂಬುದು ಭಟ್ಟರ ಹಿತ್ತಿಲಿನಲ್ಲಿರುವ ಪೈಪುಗಳನ್ನು ನೋಡಿದರೆ ತಿಳಿಯುತ್ತದೆ.

ಒಂದು ಪೈಪಿನಲ್ಲಿ ಒಂದು ಅಡಿ ವ್ಯಾಸದಷ್ಟು ಹುಡಿ ಗೊಬ್ಬರ ಸಿಗುತ್ತದೆ. ಭಟ್ಟರು ರಾಸಾಯನಿಕ ಬಳಸದೆ ಇದೇ ಗೊಬ್ಬರ ಮಾತ್ರ ಬಳಸಿ ತೊಂಡೆ, ಬೆಂಡೆ, ಬಸಳೆಯಂತಹ ತರಕಾರಿಗಳು, ಬಾಳೆ, ವಿಧವಿಧದ ಹೂಗಿಡಗಳನ್ನು ಬೆಳೆಯಬಹುದೆಂಬುದನ್ನು ಸುಂದರವಾದ ತಮ್ಮ ಹಿತ್ತಿಲಿನ ಗಿಡಗಳ ಸಾಕ್ಷ್ಯದ ಮೂಲಕ ತೋರಿಸುತ್ತಾರೆ. ಈ ಸಾವಯವ ಸಣ್ತೀವನ್ನುಂಡ ತರಕಾರಿಗಳಿಗೆ ಒಳ್ಳೆಯ ಬಣ್ಣ, ಮೃದುವಾಗಿ ಬೇಯುವ ಗುಣ, ಪರಿಮಳ, ರುಚಿಗಳ ಹಿರಿಮೆ ಇದೆ. ಒಂದು ಸ್ಥಾವರಕ್ಕೆ ಸುಮಾರು ಎರಡು ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಆದರೂ ಅದರಿಂದ ಪರಿಸರವೂ ಸ್ವತ್ಛವಾಗುತ್ತದೆ. ಕೃಷಿಗೂ ಲಾಭವಾಗುತ್ತದೆಂಬ ಲೆಕ್ಕಾಚಾರ ಭಟ್ಟರದು. 
ಎಲ್ಲರ ಮನೆಯ ಹಿತ್ತಿಲಲ್ಲೂ ಇದರ ಅಳವಡಿಕೆ ಬಲು ಸುಲಭ.

– ಪ. ರಾಮಕೃಷ್ಣ ಶಾಸ್ತ್ರೀ

ಟಾಪ್ ನ್ಯೂಸ್

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

9-kushtagi

Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.