ಮಹಿಳೆಯರೇ,ಹಿಂದೆ ಬೀಳದಿರಿ ನೀವೂ ಹಣ  ಹೂಡಿ


Team Udayavani, Aug 6, 2018, 6:00 AM IST

leed-2.jpg

ಉಳಿತಾಯ ಮತ್ತು ಹೂಡಿಕೆ ಎಂಬ ಎರಡು ಪದಗಳನ್ನು ಭಾರತದಲ್ಲಿ ಅರ್ಥೈಸಿಕೊಳ್ಳುವಲ್ಲಿ ಆಚೀಚೆ ಆಗುತ್ತದೆ. ಇವೆರಡರ ಮಧ್ಯೆ ವ್ಯತ್ಯಾಸವಿದೆ ಎಂಬುದನ್ನು ಹೆಚ್ಚಿನವರು ಗಮನಿಸುವುದಿಲ್ಲ. ಉಳಿತಾಯದಲ್ಲಿ ಗಳಿಕೆ ತೀರಾ ಕಡಿಮೆ ಇರುತ್ತದೆ ಅಥವಾ ಇರುವುದೇ ಇಲ್ಲ. ಆದರೆ ಹೂಡಿಕೆ ಎಂಬುದು ಸಂಪತ್ತು ವರ್ಧನೆಗಾಗಿ ನಡೆಸುವ ವ್ಯವಸ್ಥಿತವಾದ ವಿಧಾನವಾಗಿದೆ. ಸಾಂಪ್ರದಾಯಿಕವಾಗಿ ಭಾರತ ಉಳಿತಾಯ ಕೇಂದ್ರಿತ ದೇಶ. 2016ರಲ್ಲಿ ದೇಶದಲ್ಲಿ ಕುಟುಂಬದ ಉಳಿತಾಯದ ದರ ಕುಟುಂಬದ ಆದಾಯದ ಶೇ.26ರಷ್ಟಿತ್ತು. ಕುಟುಂಬದ ಉಳಿತಾಯ ಎಂದರೆ, ಅದನ್ನು ಮಹಿಳೆಯೇ ನಿರ್ವಹಿಸುತ್ತಾಳೆ. ಪ್ರಾಥಮಿಕ ಉಳಿತಾಯ ಖಾತೆ, ನಗದು ಉಳಿತಾಯ ಅಥವಾ ಆರ್‌ಡಿ ಖಾತೆಗಳ ರೂಪದಲ್ಲೇ ಇದು ಬಹುತೇಕ ಇರುತ್ತದೆ.

ಸೀಮಾ ಮಧ್ಯಮ ವರ್ಗದ ಗೃಹಿಣಿ. ಪ್ರತಿವಾರ ಮನೆಯ ಗಳಿಕೆಯ ತುಸು ಹಣವನ್ನು ಬ್ಯಾಗ್‌ನಲ್ಲಿ ಇಡುವ ಮೂಲಕ ಉಳಿತಾಯ ಮಾಡುವುದು ಆಕೆಯ ಹವ್ಯಾಸ. ಕೆಲವೊಮ್ಮೆ ಈ ಹಣದ ತುಸು ಭಾಗವನ್ನು ಚಿನ್ನದಲ್ಲಿ ಹೂಡಿಕೆ ಮಾಡುತ್ತಾಳೆ. ಪ್ರತಿ ತಿಂಗಳು ಚಿಟ್‌ ಫ‌ಂಡ್‌ ರೂಪದ ಉಳಿತಾಯ ಯೋಜನೆಯಲ್ಲಿ ಪಾಲ್ಗೊಳ್ಳಲು ಕಿಟ್ಟಿ ಪಾರ್ಟಿಗೂ ಹೋಗುತ್ತಾಳೆ. ಆಕೆಯ ಗಂಡ ಮ್ಯೂಚುವಲ್‌ ಫ‌ಂಡ್‌, ಷೇರುಪೇಟೆಯಲ್ಲಿ ಹೂಡಿಕೆ ಮಾಡುತ್ತಾನೆ. ಇವರಿಬ್ಬರ ಈ ಪ್ರವೃತ್ತಿಯಿಂದಾಗಿ ಇಳಿವಯಸ್ಸಿನಲ್ಲಿ, ಗಂಡ ಬಳಿಯಲ್ಲಿಲ್ಲದೇ ಹೋದರೆ ಅಂತಹ ವೇಳೆ ವೈಯಕ್ತಿಕ ಉಳಿತಾಯ ಖಾಲಿಯಾಗಿ ಸೀಮಾಗೆ ಹಣಕಾಸಿನ ನಿರ್ವಹಣೆ ಕಷ್ಟವಾಗಲಿದೆ. 

25ರ ಹರೆಯದ ಅಕ್ಷತಾ ಇವರಿಗಿಂತ ಭಿನ್ನ. ಈಕೆ ಮೆಟ್ರೋಪಾಲಿಟನ್‌ ಮಹಿಳೆ. ಮಾರ್ಕೆಟಿಂಗ್‌ ಕೆಲಸದಲ್ಲಿದ್ದಾಳೆ. ಮ್ಯೂಚುವಲ್‌ ಫ‌ಂಡ್‌, ವಿಮೆ ಖರೀದಿ, ಇತ್ಯಾದಿ ಹೂಡಿಕೆಯ ಬಗ್ಗೆ ತುಸು ತಿಳಿದುಕೊಂಡಿದ್ದಾಳೆ. ಆದರೆ ಯಾರ ಮೂಲಕ ಹೂಡಿಕೆ ಮಾಡಬೇಕು ಎಂಬುದರ ಅರಿವು ಹೊಂದಿಲ್ಲ. ಅದಕ್ಕೆ ತಂದೆಯನ್ನು ಅವಲಂಬಿಸುತ್ತಾಳೆ. ತಾನು ತಿಳ್ಕೊಳ್ಳುವುದು ಯಾವಾಗ ಎಂದರೆ, ಮುಂದೆ ನೋಡೋಣ ಎಂದುಕೊಳ್ಳುತ್ತಾಳೆ.

ಸೀಮಾ ಹಾಗೂ ಆಕ್ಷತಾರ ಸ್ಥಿತಿಯೇ ಭಾರತದ ಬಹುತೇಕ ಮಹಿಳೆಯರದ್ದಾಗಿದೆ. ಉದ್ಯೋಗಸ್ಥ ಮಹಿಳೆಯರಲ್ಲೂ ಶೇ.23 ಮಂದಿ ಮಾತ್ರ ಹೂಡಿಕೆ ಕುರಿತು ಸ್ವಂತ ನಿರ್ಧಾರ ಕೈಗೊಳ್ಳುತ್ತಾರೆ. ಉಳಿದ ಶೇ.77 ಮಂದಿ ತಂದೆ ಅಥವಾ ಪತಿಯನ್ನು ಅವಲಂಬಿಸುತ್ತಾರೆ. ಮಹಿಳೆಯರಲ್ಲಿ ಹಣಕಾಸು ಸಾಕ್ಷರತೆಯ ಕೊರತೆಯಿರುವುದೇ ಇದಕ್ಕೆ ಕಾರಣ. ಮಹಿಳೆಯರ ಸಬಲೀಕರಣದ ಮೊದಲ ಹೆಜ್ಜೆಯಾಗಿ ಅವರನ್ನೂ ಹೂಡಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. 
ಹಾಗಾದರೆ ಮಹಿಳೆ ಹೂಡಿಕೆಯನ್ನು ಸಕ್ರಿಯವಾಗಿ ಆರಂಭಿಸುವುದು ಹೇಗೆ? 

1. ಹಣಕಾಸು ಶಿಕ್ಷಣ
ಹೂಡಿಕೆ ಜಗತ್ತಿನತ್ತ ತೆರೆದುಕೊಳ್ಳಲು ಸ್ವಯಂ ಶಿಕ್ಷಣವೇ ಮೊದಲ ಮೆಟ್ಟಿಲು. ಹೂಡಿಕೆ ವಿಧಾನಗಳು ಹಾಗೂ ಯೋಜನೆಗಳ ಕುರಿತು ಸಾಧ್ಯವಾದಷ್ಟು ಓದಲು ಹಾಗೂ ಅರ್ಥ ಮಾಡಿಕೊಳ್ಳಲು ಮಹಿಳೆ ಸ್ವತಃ ತಾವೇ ಪ್ರಯತ್ನಿಸಬೇಕು. ಆನ್‌ಲೈನ್‌ ಮತ್ತು ಆಫ್ಲೈನ್‌ಲ್ಲಿ ಉಚಿತವಾಗಿ ಸಾಕಷ್ಟು ಸಂಪತ್ತು ನಿರ್ವಹಣಾ ಆಪ್‌ಗ್ಳು, ಕಮ್ಯುನಿಟಿಗಳು, ವೈಯಕ್ತಿಕ ಹಣಕಾಸು ಕಾರ್ಯಾಗಾರಗಳು ಮತ್ತು ಕೋರ್ಸ್‌ಗಳು ಲಭ್ಯ ಇವೆ. 

2. ಸಣ್ಣ ಮತ್ತು ಯೋಜಿತ ಹೂಡಿಕೆ ಆರಂಭ
ವಿವಿಧ ಕಡಿಮೆ ಅಪಾಯದ ಆಯ್ಕೆಗಳಾದ ಪಬ್ಲಿಕ್‌ ಪ್ರಾವಿಡೆಂಟ್‌ ಫ‌ಂಡ್‌ (ಪಿಪಿಪಿ) ಮತ್ತು ಆರ್‌ಡಿ ಮೊದಲಿಗೆ ಹೂಡಿಕೆ ಆರಂಭಿಸಲು ಸೂಕ್ತ. ವರ್ಷಕ್ಕೆ ಕನಿಷ್ಠ 500 ರೂ.ನಿಂದ ಕೂಡಾ ಹೂಡಿಕೆ ಆರಂಭಿಸಬಹುದು. ಪಿಪಿಎಫ್ ಗರಿಷ್ಠ 1.5 ಲಕ್ಷ ರೂ. ತನಕ ತೆರಿಗೆ ಅನುಕೂಲವನ್ನೂ ನೀಡುತ್ತದೆ. 1 ಲಕ್ಷದಷ್ಟು ದೊಡ್ಡ ಮೊತ್ತವನ್ನು ಎಫ್ಡಿಯಲ್ಲಿ ಹೂಡಿಕೆ ಮಾಡಬಹುದು. ಶೇ.5- ಶೇ.8.25ರ ತನಕ ಇದರಲ್ಲಿ ಬಡ್ಡಿ ಪಡೆದುಕೊಳ್ಳಬಹುದು.
 
3. ವಿಮೆಯ ಖಾತ್ರಿ ಮಾಡಿ
ವಿಮೆಯನ್ನು ನಿರ್ಲಕ್ಷಿಸುವುದು ಮಹಿಳೆಯರು ಮಾಡುವ ಅತಿದೊಡ್ಡ ತಪ್ಪಾಗಿದೆ. ಹಣಕಾಸು ಭದ್ರತೆಗಾಗಿ ಆರೋಗ್ಯ ಹಾಗೂ ಜೀವ ವಿಮೆ ಮಾಡಿಸಿಕೊಳ್ಳುವುದು ಉತ್ತಮ. ಇದು ತೆರಿಗೆ ಅನುಕೂಲವನ್ನೂ ಒದಗಿಸುತ್ತದೆ.

4.  ನಿಮ್ಮ ಹೂಡಿಕೆ ವರ್ಧಿಸಿ
ಆರಂಭದ ಸಣ್ಣ ಹೂಡಿಕೆಯಿಂದ ಕ್ರಮೇಣವಾಗಿ ಮುಂದುವರಿಯಿರಿ. ಎಸ್‌ಐಪಿಗಳು, ಮ್ಯೂಚುವಲ್‌ ಫ‌ಂಡ್‌ಗಳು, ಈಕ್ವಿಟಿಗಳಂತಹ ವಿವಿಧ ಹೂಡಿಕೆಗಳ ಅವಕಾಶವನ್ನು ಕಂಡುಕೊಳ್ಳಿ. ಆದರೆ ಹೂಡುವ ಮುನ್ನ ಅದರ ಲಾಭ-ಅಪಾಯ ಅರಿತುಕೊಳ್ಳಿ. ಒಮ್ಮೆ ಅರ್ಥವಾದರೆ ಅದರ ನಿರ್ವಹಣೆ ಸುಲಭವಾಗುತ್ತದೆ. 

– ರಾಧ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.