ನಗರೀಕರಣಕ್ಕೆ ಪೂರಕ ಮಿಕ್ಸ್ಡ್ ಯೂಸ್ಡ್ ಬಿಲ್ಡಿಂಗ್ಸ್
Team Udayavani, Aug 26, 2018, 3:03 PM IST
ನಗರೀಕರಣದ ಬೆಳವಣಿಗೆ ಈಗ ತೀವ್ರ ಗತಿಯಲ್ಲಿ ನಡೆಯುತ್ತಿದೆ. ಅಭಿವೃದ್ಧಿಯ ಮಾನದಂಡವಿದ್ದರೂ ಯಾವುದೇ ಚೌಕಟ್ಟು ಇಲ್ಲದೇ ಬೆಳೆಯುತ್ತಿರುವುದರಿಂದ ಇದು ಅನೇಕ ಅವಘಡಗಳಿಗೂ ಕಾರಣವಾಗುತ್ತಿದೆ.
ಮಹಾನಗರಗಳಲ್ಲಿ ಗಗನ ಚುಂಬಿ ಕಟ್ಟಡಗಳು ಸಾಮಾನ್ಯ. ಇದು ನಗರದ ಪ್ರಮುಖ ಆಕರ್ಷಣೆಯೂ ಹೌದು. ನಮ್ಮ ನಗರಗಳಲ್ಲಿ ಬಹು ಅಂತಸ್ತಿನ ಕಟ್ಟಡಗಳು ಒಂದು ಸೀಮಿತ ಉದ್ದೇಶಕ್ಕೆ ಸೀಮಿತವಾಗುತ್ತಿವೆ. ಉದಾಹರಣೆ ಹೊಟೇಲ್ ಉದ್ಯಮ, ಆಫೀಸ್, ವಸತಿ ಇತ್ಯಾದಿ. ಕೆಲವರು ಇಡಿ ಮಹಡಿಯನ್ನೇ ಪಡೆದು ಅಲ್ಲಿ ತಮ್ಮ ಸ್ವಂತ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಾರೆ. ಇದು ಇನ್ನೊಬ್ಬರು ವಾಸಿಸುವ ಜಾಗವನ್ನು ನಾವು ವಶಪಡಿಸಿಕೊಂಡಂತಾಗುತ್ತದೆ. ನಮ್ಮ ದೇಶದಲ್ಲಿ ಜನ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚಿನವರಿಗೆ ವಾಸಿಸಲು ಮನೆಯೇ ಸಿಗುತ್ತಿಲ್ಲ. ಕಾರಣ ಇದುವೇ.
ಇದಕ್ಕೆ ಸುಲಭವಾದ ಪರಿಹಾರವೇ ಮಿಕ್ಸ್ಡ್ ಯೂಸ್ಡ್ ಬಿಲ್ಡಿಂಗ್ಸ್. ಬೆಳೆಯುತ್ತಿರುವ ನಗರಕ್ಕೆ ಇದು ಅತ್ಯಂತ ಸೂಕ್ತವಾದುದು. ಅನೇಕ ರಾಷ್ಟ್ರಗಳಿಂದು ಮಿಕ್ಸ್ಡ್ ಯೂಸ್ಡ್ ಬಿಲ್ಡಿಂಗ್ಸ್ ಎಂಬ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳುತ್ತಿವೆ. ಮುಖ್ಯವಾಗಿ ಮೆಕ್ಸಿಕೋ, ಜಪಾನ್ ರಾಷ್ಟ್ರಗಳು ಇದನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿವೆ.
ಏನಿದು ಮಿಕ್ಸ್ಡ್ ಯೂಸ್ಡ್ ಬಿಲ್ಡಿಂಗ್ಸ್ ?
ಮಿಕ್ಸ್ಡ್ ಯೂಸ್ಡ್ ಬಿಲ್ಡಿಂಗ್ಸ್ ಈ ಕಲ್ಪನೆ ಪುರಾತನವಾಗಿದ್ದು, ರೋಮ್ ಸಾಮ್ರಾಜ್ಯದ್ದಾಗಿದೆ. ಯಾವುದೇ ಬಹು ಅಂತಸ್ತಿನ ಕಟ್ಟಡಗಳನ್ನು ನಿರ್ಮಿಸುವಾಗ ಅದನ್ನು, ಕೇವಲ ಒಂದೇ ಉಪಯೋಗಕ್ಕೆ ಬಳಕೆ ಮಾಡಿಕೊಳ್ಳದೇ ಅನೇಕ ರೀತಿಯಲ್ಲಿ ಬಳಸಿಕೊಳ್ಳುವುದು. ಅಂದರೆ ಉದ್ಯಮ, ವಸತಿ, ಹೊಟೇಲ್, ಥೀಯೇಟರ್, ಜಿಮ್ ಸೆಂಟರ್ ಮೊದಲಾದ ಎಲ್ಲ ಸೌಲಭ್ಯ, ಅವಕಾಶಗಳನ್ನೂ ಒಂದು ಕಟ್ಟಡ ಹೊಂದಿರುತ್ತದೆ.
ಉಪಯೋಗವೇನು?
ಇಂತಹ ಕಟ್ಟಡಗಳ ನಿರ್ಮಾಣದಿಂದ ಸಾಕಷ್ಟು ಪ್ರಯೋಜನಗಳಿವೆ. ಬೆಳೆಯುತ್ತಿರುವ ನಗರಗಳಲ್ಲಿ ಇಂದು ವಸತಿ ಸಮಸ್ಯೆಯೇ ಬಹು ದೊಡ್ಡ ಸಮಸ್ಯೆ. ಇದರಿಂದ ಜಾಗದ ಅತಿಕ್ರಮಣವನ್ನು ತಡೆಯಬಹುದು. ಜತೆಗೆ ಒಂದೇ ಬಿಲ್ಡಿಂಗ್ ನಲ್ಲಿ ಎಲ್ಲ ವ್ಯವಸ್ಥೆಯೂ ಇರುವುದರಿಂದ ಬೇರೆ ಉದ್ದೇಶಕ್ಕಾಗಿ ಬೇರೊಂದು ಕಡೆ ಜಾಗದ ಬಳಕೆಯನ್ನು ಕಡಿಮೆ ಮಾಡಬಹುದು. ಉದಾ- ಒಂದು ಕಟ್ಟಡದಲ್ಲಿ ಕಚೇರಿ ಇದ್ದರೆ ಅಲ್ಲಿಯ ಸಿಬಂದಿಗೆ ವಸತಿ ಸೌಲಭ್ಯವನ್ನು ಬೇರೊಂದು ಜಾಗದಲ್ಲಿ ನಿರ್ಮಾಣ ಮಾಡಿರುತ್ತಾರೆ. ಅದರ ಬದಲು ಅದೇ ಕಟ್ಟಡದಲ್ಲಿ ಅವರಿಗೆ ವಸತಿ ವ್ಯವಸ್ಥೆಯನ್ನು ನೀಡಿದರೆ ಬೇರೆ ಜಾಗವನ್ನು ಇನ್ನೊಂದು ಕಾರ್ಯಕ್ಕೆ ಬಳಸಬಹುದು. ಇದು ಬೆಳೆಯುತ್ತಿರುವ ನಗರೀಕರಣಕ್ಕೆ ಧನಾತ್ಮಕ ಚಿಂತನೆಯೇ ಸರಿ. ಅಲ್ಲದೇ ಮಾನವ ಸಂಪನ್ಮೂಲ ಹಾಗೂ ಪರಿಸರ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿಡಲು ಈ ಪರಿಕಲ್ಪನೆ ತುಂಬಾ ಉಪಯೋಗಕಾರಿ.
ಮಂಗಳೂರು ನಗರವೂ ಸ್ಮಾರ್ಟ್ ನಗರಿಯಾಗಿ ಬೆಳೆಯುತ್ತಿದೆ. ಈಗಲೇ ನಗರದೊಳಗೆ ಜಾಗದ ಕೊರತೆ ಕಾಡುತ್ತಿದೆ. ಹೀಗಾಗಿ ಮುಂದೆ ನಿರ್ಮಾಣವಾಗುವ ಕಟ್ಟಡಗಳಲ್ಲಿ ಇಂತಹ ಎಲ್ಲ ಸೌಲಭ್ಯ ಇರುವಂತೆ ನೋಡಿ ಮಂಗಳೂರು ಮಹಾನಗರಕ್ಕೆ ಸಾಕಷ್ಟು ಪ್ರಯೋಜನವಾಗಲಿದೆ.
ಶಿವ ಸ್ಥಾವರಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ