ಕುಂದಾಪುರ ತಾಲೂಕು ಗಾವಳಿ : ಡುಬ್ಬದ ಗೂಳಿಯ (ನಂದಿ) ಚಿತ್ರ ಪತ್ತೆ


Team Udayavani, Oct 3, 2018, 1:30 AM IST

nandi-3-10.jpg

ಕಾಪು: ಕುಂದಾಪುರ ತಾಲೂಕಿನ ಹಳ್ಳಾಡಿ – ಹರ್ಕಾಡಿ ಗ್ರಾಮ ಪಂಚಾಯತ್‌ಗೆ ಒಳಪಟ್ಟ ಗಾವಳಿಯ ಅರಿಕಲ್‌ ನೆಲೆಯ ಬಂಡೆಗಳಲ್ಲಿ ಮರು ಅಧ್ಯಯನ ನಡೆಸಿದ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿದ್ಯಾರ್ಥಿಗಳಾದ ಸುಭಾಸ್‌ ನಾಯಕ್‌ ಬಂಟಕಲ್ಲು ಮತ್ತು ಶ್ರುತೇಶ್‌ ಆಚಾರ್ಯ ಮೂಡುಬೆಳ್ಳೆ ಬಂಡೆಯ ಪೂರ್ವ ದಿಕ್ಕಿಗೆ ಮುಖ ಮಾಡಿಕೊಂಡಿರುವ ಸಣ್ಣ ಗಾತ್ರದ ಡುಬ್ಬದ ಗೂಳಿಯ (ನಂದಿ) ಚಿತ್ರವನ್ನು ಗುರುತಿಸಿದ್ದಾರೆ.

ಪೂರ್ವಕ್ಕೆ ಮುಖಮಾಡಿ ನಿಂತಿರುವ ಈ ನಂದಿಯು 28 ಇಂಚು ಉದ್ದ ಹಾಗೂ 22 ಇಂಚು ಎತ್ತರದ ಹಾಗೂ 1 ಸೆಂ.ಮೀ. ದಪ್ಪದಲ್ಲಿ ಕೊರೆಯಲಾಗಿದೆ. ನಂದಿಯು ಎತ್ತರದ ಡುಬ್ಬ, ಉದ್ದನೆಯ ಅಂಡಾಕಾರದ ಕೊಂಬುಗಳನ್ನು ಹೊಂದಿದ್ದು ಸವೆದ ಕಾರಣ ಅಸ್ಪಷ್ಟವಾಗಿದೆ. ನಂದಿಯ ಹಿಂಬದಿಯ ಕಾಲುಗಳನ್ನು ಉದ್ದವಾಗಿ ಚಿತ್ರಿಸಲಾಗಿದೆ. ಈ ನೆಲೆಯಲ್ಲಿ ಇದುವರೆಗೆ ದೊರೆತ ಬಂಡೆ ಚಿತ್ರಗಳು 2 ಮತ್ತು 3 ಸೆಂ. ಮೀ. ದಪ್ಪವಾಗಿ ಕೊರೆಯಲ್ಪಟ್ಟಿದ್ದು, ಈ ಚಿತ್ರವು ಇತರ ಬಂಡೆ ಚಿತ್ರಗಳಿಗಿಂತ ಪ್ರಾಚೀನವಾಗಿರುವ ಸಾಧ್ಯತೆಯೇ ಹೆಚ್ಚು ಎಂದು ಹೇಳಲಾಗಿದೆ.

ಹಿಂದೆಯೂ ನಡೆದಿತ್ತು ಸಂಶೋಧನೆ 
ಗಾವಳಿಯ ಅರಿಕಲ್‌ ನೆಲೆಯ ಬಂಡೆಗಳಲ್ಲಿ ಚಿತ್ರಗಳ ಕುರಿತಂತೆ ಮೊದಲಿಗೆ ಡಾ| ಬಿ. ವಸಂತ ಶೆಟ್ಟಿ ಹಾಗೂ ಡಾ| ಜಗದೀಶ್‌ ಶೆಟ್ಟಿ ಅವರು 1983ರಲ್ಲಿ ಸಂಶೋಧಿಸಿ ದಾಖಲಿಸಿದರು. ನಂತರದಲ್ಲಿ ಅ. ಸುಂದರ, ಟಿ. ಮುರುಗೇಶಿ, ಪ್ರೊ| ಎಸ್‌.ಎ. ಕೃಷ್ಣಯ್ಯ, ಅವರು ಅಧ್ಯಯನ ನಡೆಸಿದ್ದಾರೆ. ಇಲ್ಲಿನ  ಬಂಡೆಗಳ ಮೇಲೆ ನಂದಿ, ನಂದಿ ಮಂಡಲ, ಗುಳಿಗಳು, ಚೆನ್ನಮಣೆ, ಇತರ ಜ್ಯಾಮೀತಿಯ ಬಂಡೆ ಚಿತ್ರಗಳು, ಶಿರಚ್ಛೇಧಗೊಂಡಿರುವ ಮಾನವ, ಕೂಡಿಸು ರೀತಿಯ ಚಿತ್ರ ಹಾಗೂ ಇತರ ಅಸ್ಪಷ್ಟ ಚಿತ್ರಗಳನ್ನು ಕಾಣಬಹುದಾಗಿದೆ.

ಆರಂಭದಲ್ಲಿ ಈ ನಿವೇಶನವನ್ನು ಬೃಹತ್‌ ಶಿಲಾಯುಗದ ನೆಲೆಯೆಂದು ಗುರುತಿಸಲಾಗಿದ್ದರೂ, 2010ರಲ್ಲಿ ಪ್ರೊ| ಟಿ. ಮುರುಗೇಶಿ ಮತ್ತು ತಂಡ ಹೊಸ ಬಂಡೆ ಚಿತ್ರಗಳ ಆವಿಷ್ಕಾರದೊಂದಿಗೆ, ನೂತನ ಶಿಲಾಯುಗದ ಡಾಲರೈಟ್‌ ಶಿಲೆಯಿಂದ ತಯಾರಿಸಿದಂತಹ ಕಲ್ಲಿನ ಕೊಡಲಿ, ಸುತ್ತಿಗೆ, ಮಧ್ಯದಲ್ಲಿ ತೂತಿರುವ ದುಂಡನೆಯ ಕಲ್ಲಿನ ರಿಂಗುಗಳನ್ನು ಸಂಶೋಧಿಸಿದರು. ಹಾಗೆಯೇ ಇದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಳೆ ಶಿಲಾಯುಗದಿಂದ ಆರಂಭಗೊಂಡ ಸಂಸ್ಕೃತಿಯ ಅವಶೇಷಗಳಿಂದ ಹಿಡಿದು ಬೃಹತ್‌ ಶಿಲಾಯುಗದ ಕಂಡಿಕೋಣೆ ಗೋರಿಗಳು (ಕರ್ಕುಂಜೆ ಪ್ರದೇಶದಲ್ಲಿ ಡಾ| ಬಿ. ವಸಂತ ಶೆಟ್ಟಿ ಹಾಗೂ ಡಾ|  ಜಗದೀಶ್‌ ಶೆಟ್ಟಿಯವರ ಶೋಧನೆ) ಹಾಗೆಯೇ ಪ್ರಾಚ್ಯಾವಶೇಷಗಳು ದೊರೆತಿವೆ. ಈ ನೆಲೆಯ ಮರು ಅಧ್ಯಯನಕ್ಕೆ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ| ಜಗದೀಶ್‌ ಶೆಟ್ಟಿ ಹಾಗೂ ಉಡುಪಿ ಸೈಂಟ್‌ ಮೇರಿಸ್‌ ಕನ್ನಡ ಶಾಲೆಯ ಉಡುಪಿ ಇಲ್ಲಿನ ನಿವೃತ್ತ ಶಿಕ್ಷಕ ಶ್ರೀಧರ್‌ ಭಟ್‌ ಸಹಕಾರ ನೀಡಿದ್ದಾರೆ.

ಟಾಪ್ ನ್ಯೂಸ್

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ

MASIDI

Fiscal Crisis: ಅಯೋಧ್ಯೆ ಮಸೀದಿ ಟ್ರಸ್ಟ್‌ ಸಮಿತಿಗಳ ವಿಸರ್ಜನೆ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

POlice

Kundapura: ನಿಂದನೆ, ಜೀವ ಬೆದರಿಕೆ: ಕೇಸು ದಾಖಲು

13

Udupi: ಅಪಾಯಕಾರಿಯಾಗಿ ಬಸ್‌ ಚಾಲನೆ: ಪ್ರಕರಣ ದಾಖಲು

Udupi: ರೈಲು ಹತ್ತುತ್ತಿದ್ದಾಗ ಬಿದ್ದ ಮಹಿಳೆಯ ರಕ್ಷಣೆ

Udupi: ರೈಲು ಹತ್ತುತ್ತಿದ್ದಾಗ ಬಿದ್ದ ಮಹಿಳೆಯ ರಕ್ಷಣೆ

sand

Malpe: ಮರಳು ಅಕ್ರಮ ಸಂಗ್ರಹ, ಕೇಸು ದಾಖಲು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.