ಇತ್ತ ದರಿ, ಅತ್ತ ಸುಂದರಿ


Team Udayavani, Oct 3, 2018, 12:26 PM IST

6005.jpg

(ಅಂತರಗಂಗೆ) ರಾಜೂ ಹೆಂಡತಿಯದ್ದು “ಏತಿ ಅಂದರೆ ಪ್ರೇತಿ’ ಸ್ವಭಾವ. ಕೆಲಸಕ್ಕೆ ಹೋಗು ಅಂದರೆ, “ನಾನು ಮನೆಯಲ್ಲಿ ಆರಾಮವಾಗಿರುವುದು ನಿಮಗೆ ಇಷ್ಟ ಇಲ್ಲಾ ಅಲ್ವಾ?’ ಅಂತ ಜಗಳ. ಸರಿ, ಕೆಲಸಕ್ಕೆ ಹೋಗಬೇಡ ಎಂದರೆ, “ನಾನು ಕೆಲಸಕ್ಕೆ ಹೋಗಿ ಯಶಸ್ವಿಯಾಗುವುದು ನಿಮಗೆ ಬೇಡ. ಮನೆಕೆಲಸಕ್ಕೆ ನಾನು ಆಳು ಅಲ್ವಾ?’ ಅಂತ ಬೈಗುಳ…

ನಲವತ್ತರ ರಾಜೂಗೆ ಕೆಲಸದೊತ್ತಡ ಇರಲಿಲ್ಲ. ಆದರೆ, ಮನೆಯಲ್ಲಿ ನಡೆದ ಘಟನೆ ಅವರ ಮನಸ್ಸಿಗೆ ತುಂಬಾ ನೋವು ತಂದಿದೆ. ತಂದೆ ತೀರಿಕೊಂಡು 20 ದಿನಗಳಾಗಿದ್ದವು. ಸತ್ತ ನಾಲ್ಕನೇ ದಿನ, ರಾಜೂ ಅವರ ಅಕ್ಕಂದಿರು ತಮ್ಮನಿಗೆ ಸಾಂತ್ವನ ಹೇಳುವ ಬದಲು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಮದುವೆಯಾದಾಗಿನಿಂದ ರಾಜೂ ಹೆಂಡತಿಗೇ ಪ್ರಾಶಸ್ತ್ಯ ಕೊಟ್ಟು, ತಂದೆ- ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ ಎಂದು ಅವರ ಕಂಪ್ಲೇಂಟು. ಮದುವೆಗೆ ಹುಡುಗಿ ಹುಡುಕಿದ್ದು ಅಕ್ಕಂದಿರೇ. ಆದರೆ, ಸೊಸೆ ಹೊಂದಿಕೊಳ್ಳಲೇ ಇಲ್ಲ. ಈ ಕಾರಣದಿಂದ ಅಪ್ಪ- ಅಮ್ಮ ಬೇರೆ ಮನೆಯಲ್ಲಿ ಇದ್ದರು.  ಅಪ್ಪನಿಗೆ ಸಾವು ಬರುವುದಕ್ಕೆ ಮಗನಿಂದ ದೂರ ಇದ್ದದ್ದೇ ಕಾರಣ ಎಂದು ಅಕ್ಕಂದಿರ ವಾದ.
  ರಾಜೂ ಹೆಂಡತಿಯದ್ದು “ಏತಿ ಅಂದರೆ ಪ್ರೇತಿ’ ಸ್ವಭಾವ. ಕೆಲಸಕ್ಕೆ ಹೋಗು ಅಂದರೆ, “ನಾನು ಮನೆಯಲ್ಲಿ ಆರಾಮವಾಗಿರುವುದು ನಿಮಗೆ ಇಷ್ಟ ಇಲ್ಲಾ ಅಲ್ವಾ?’ ಅಂತ ಜಗಳ. ಸರಿ, ಕೆಲಸಕ್ಕೆ ಹೋಗಬೇಡ ಎಂದರೆ, “ನಾನು ಕೆಲಸಕ್ಕೆ ಹೋಗಿ ಯಶಸ್ವಿಯಾಗುವುದು ನಿಮಗೆ ಬೇಡ. ಮನೆಕೆಲಸಕ್ಕೆ ನಾನು ಆಳು ಅಲ್ವಾ?’ ಅಂತ ಬೈಗುಳ. ರಾಜೂಗೆ ಒಬ್ಬಳು ಸ್ನೇಹಿತೆ ಇರಬಹುದೆಂದು ಗುಮಾನಿ ಮತ್ತು ಮಾವನವರು ತನ್ನ ಮೇಲೆ ಲೈಂಗಿಕ ಕಿರುಕುಳ ನೀಡುತ್ತಾರೆ ಎಂದು ಸುಳ್ಳು ಹೇಳಿ, ಅತ್ತೆ-ಮಾವನನ್ನು ದೂರ ಮಾಡಿದ್ದಳು.

  ದೊಡ್ಡ ಮಗಳು ತಾಯಿಯನ್ನು ಚೆನ್ನಾಗಿ ನೋಡಿಕೊಂಡರೂ ರಾಜೂ ಬಗ್ಗೆ ಸ್ವಲ್ಪ ಅಸಹನೆ. ಇದ್ದದ್ದಕ್ಕೆ- ಇಲ್ಲದಿದ್ದಕ್ಕೆ ತಾಯಿಯ ಬಳಿ ಅವನನ್ನು ಬಯ್ಯುತ್ತಿದ್ದಳು. ಪಾಪದ ರಾಜೂವನ್ನು ಬಯ್ದರೆ ತಾಯಿಯ ಕರುಳು ಚುರ್‌ ಎನ್ನುತ್ತಿತ್ತು. ತಾಯಿ ಮಗನಿಗೆ ಫೋನ್‌ ಮಾಡಿ ಅಕ್ಕ ನಿನ್ನನ್ನು ಬಯ್ಯುತ್ತಾಳೆ ಎಂದು ದುಃಖೀಸುತ್ತಿದ್ದರು.
  ಅಂದು ರಾತ್ರಿ ಮನೆಗೆ ಬಂದಾಗ, ಹೆಂಡತಿ ತನ್ನ ತಂದೆಯ ಮೇಲೆ ಪುನಃ ಆಪಾದನೆ ಹೊರಿಸಿದ್ದಾಳೆ. ಸತ್ತೇ ಹೋದ ತಂದೆಯ ಮೇಲೆ ಏನಿದು ಆರೋಪ ಎಂದು ರಾಜೂ ಕಿರುಚಾಡಿದ್ದಾರೆ. ಆಗ ಎದೆ ಬಡಿತ ಜಾಸ್ತಿಯಾಗಿ, ಹೊಟ್ಟೆಯಲ್ಲಿ ಸಂಕಟ, ವಾಂತಿಯಾಯಿತು. ಯಾಕೋ ಎಡಗೈ ಭಾಗ ಊತವಾಗಿ, ಆಸ್ಪತ್ರೆಗೆ ಬಂದು ಅಡ್ಮಿಟ್‌ ಆಗಿದ್ದರು. ತಪಾಸಣೆ ಎಲ್ಲಾ ಮುಗಿದ ಮೇಲೆ ಹೃದ್ರೋಗ ತಜ್ಞರು ಮಾನಸಿಕ ಒತ್ತಡದಿಂದಾಗಿ ಈ ರೀತಿ ಹೃದಯದ ಕಾರ್ಯಚಟುವಟಿಕೆಯಲ್ಲಿ ಏರುಪೇರಾಗುತ್ತದೆಯೆಂದು, ಕೌನ್ಸೆಲಿಂಗ್‌ಗಾಗಿ ನನ್ನ ಬಳಿ ಕಳಿಸಿದ್ದರು.

  ರಾಜೂ ವ್ಯವಹಾರದಲ್ಲಿ ಚಾಣಾಕ್ಷ. ಆದರೆ, ತನ್ನ ಸುತ್ತ ಇರುವ ಹೆಣ್ಣು ಹೃದಯಗಳ ನಡುವೆ ಆತ ಅಸಹಾಯಕ. ತಂದೆಯ ಸಾವು, ತಾಯಿಯ ನೋವು, ಹೆಂಡತಿಯ ನಡವಳಿಕೆ, ಅಕ್ಕಂದಿರ ಅರೋಪ ಮೃದು ಹೃದಯಿ ರಾಜೂರನ್ನು ಪೇಚಿಗೆ ಸಿಲುಕಿಸಿದೆ. ಯಾರು ಸರಿ- ಯಾರು ತಪ್ಪು ಗೊತ್ತಾಗುತ್ತಿಲ್ಲ. ರಾಜೂಗೆ ಮೊದಲು ಧ್ಯಾನ ಮಾಡುವುದನ್ನು ಕಲಿಸಿದೆ. ಹೆಂಡತಿಗೆ “ಬಾರ್ಡರ್‌ ಲೈನ್‌ ಪರ್ಸನಾಲಿಟಿ’ ಇರುವುದರಿಂದ ಪರಿಚಯವಿರುವ ಮತ್ತೂಬ್ಬ ಮನೋವೈದ್ಯರ ಬಳಿ ಕಳಿಸಿದ್ದೇನೆ. ಚಿಕಿತ್ಸೆ ಸಕಾರಾತ್ಮಕವಾಗಿ ಪ್ರಗತಿಯಲ್ಲಿದೆ.

– ಶುಭಾ ಮಧುಸೂದನ್‌

ಟಾಪ್ ನ್ಯೂಸ್

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.