12 ವರ್ಷದ ಬಳಿಕ ಭೀಮಾ ನದಿಯಲ್ಲಿ ಪುಷ್ಕರ ಸಂಭ್ರಮ
Team Udayavani, Oct 13, 2018, 10:11 AM IST
ಯಾದಗಿರಿ: ಪುಷ್ಕರ ವೇಳೆ ನದಿಯಲ್ಲಿ ಪುಣ್ಯ ಸ್ನಾನದಿಂದ ಸಕಲ ಇಷ್ಟಾರ್ಥಗಳು ಈಡೇರುತ್ತವೆ ಎಂದು ಅಬ್ಬೆ ತುಮಕೂರಿನ ಸಿದ್ಧ ಸಂಸ್ಥಾನದ ಪೀಠಾಧಿಪತಿ ಡಾ| ಗಂಗಾಧರ ಸ್ವಾಮೀಜಿ ಹೇಳಿದರು.
ಶುಕ್ರವಾರ ಜಿಲ್ಲಾ ಕಮ್ಮ ಜನಸೇವಾ ಸಮಿತಿ ನಗರದ ಹೊರವಲಯದ ಭೀಮಾನದಿಯ ಗುಲಸರಂ ಸೇತುವೆ ಬಳಿ ಹಮ್ಮಿಕೊಂಡ ಪುಷ್ಕರಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, 12 ವರ್ಷಗಳಿಗೊಮ್ಮೆ ಬರುವ ಪುಷ್ಕರ ಈ ಬಾರಿ ಭೀಮಾನದಿಗೆ ಪ್ರವೇಶವಾಗಿರುವುದು ನಮ್ಮೆಲ್ಲರ ಸುದೈವ. ನೆರೆಯ ತೆಲಂಗಾಣ ಹಾಗೂ ಆಂಧ್ರಪ್ರದೇಶದ ಕಮ್ಮ ಹಾಗೂ ರಡ್ಡಿ ಬಳಗದ ರೈತರು ನದಿ ತೀರದ ಭಾಗಗಳಿಗೆ ವಲಸೆ ಬಂದು ಇಲ್ಲಿರುವ ಭೂಮಿಯಲ್ಲಿ ಪರಿಶ್ರಮದಿಂದ ಕಾಯಕ ಮಾಡಿ ಕೃಷಿಯಲ್ಲಿ ಅಪಾರ ಬದಲಾವಣೆ ತರುವುದನ್ನು ತೋರಿಸಿಕೊಟ್ಟಿದ್ದಾರೆ. ಇದರಿಂದ ದೇಶದ ಆಹಾರ ಉತ್ಪನ್ನ ಕೂಡ ಹೆಚ್ಚಾಗಿದೆ ಎಂದರು.
ಪುಷ್ಕರ ವೇಳೆ ಪ್ರತಿನಿತ್ಯ ನಾರಾಯಣ, ಸೂರ್ಯ, ಭೀಮಾ ಪೂಜೆ ಸೇರಿದಂತೆ ಸಕಲ ದೈವ ಪೂಜೆಗಳನ್ನು ನೆರವೇರಿಸುವುದರ ಜೊತೆಗೆ ಪುಣ್ಯ ಸ್ನಾನದ ಬಳಿಕ ಹೋಮ ಹವನ ಮಾಡುವುದುಲ್ಲದೇ ಹಿರಿಯರ ಆತ್ಮ ಶಾಂತಿಗಾಗಿ ಪಿಂಡ ಪ್ರದಾನದಂತಹ ಹಲವು ಕಾರ್ಯಗಳು ನೆರವೇರಲಿದೆ ಎಂದು ಪುರೋಹಿತ ಸತ್ಯನಾರಾಯಣ ಶರ್ಮಾ ವಿವರಿಸಿದರು.
ಪ್ರಭಾಕರ ಸ್ವಾಮೀಜಿ, ಸಂಸದ ಬಿ.ವಿ. ನಾಯಕ್, ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಶಾಸಕ ವೆಂಕಟರೆಡ್ಡಿ
ಮುದ್ನಾಳ, ಡಾ.ವೀರಬಸಂತರಡ್ಡಿ ಮುದ್ನಾಳ, ಭೀಮರಡ್ಡಿ ಕೂಡೂರ, ಶಾಂತರಡ್ಡಿ ದೇಸಾಯಿ, ಲೀಲಾಕೃಷ್ಣ, ಪೂರ್ಣಬಾಬು, ಪ್ರಸಾದ, ಶರಣಗೌಡ ಕಾಳೆಬೆಳಗುಂದಿ, ಉಮಾರಡ್ಡಿ ನಾಯ್ಕಲ್, ಪರಮಶ್ವರ, ಕೋಟೇಶ್ವರರಾವ್, ಆರ್. ಮಹಾದೇವಪ್ಪ ಅಬ್ಬೆತುಮಕೂರ, ಎಸ್.ಎನ್. ಮಿಂಚಿನಾಳ. ಲಲಿತಾ ಅನಪುರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.