ಕೊಚ್ಚಿಹೋಗಿದ್ದ 9 ಕಿ.ಮೀ ರಸ್ತೆ ಮರುನಿರ್ಮಿಸಿದ ಲಕ್ಷ್ಮಣ


Team Udayavani, Nov 6, 2018, 6:00 AM IST

road-lax.jpg

ಗಜಪತಿ: ಅದು ಅಕ್ಟೋಬರ್‌ 11. ತಿತ್ಲಿ ಚಂಡಮಾರುತವು ಒಡಿಶಾಗೆ ಅಪ್ಪಳಿಸಿದ ದಿನ. ಅಂದು ಬೆಳಗ್ಗೆ ಶುರುವಾದ ಮಳೆ ರಾತ್ರಿಯಾದರೂ ನಿಂತಿರಲಿಲ್ಲ. ಭಯಭೀತರಾಗಿದ್ದ ಜನ ಕಿಟಕಿ, ಬಾಗಿಲುಗಳನ್ನು ಭದ್ರವಾಗಿ ಮುಚ್ಚಿಕೊಂಡು ಮನೆಯೊಳಗೆ ಸೇರಿದ್ದರು. ರಾತ್ರಿಪೂರ್ತಿ ತಿತ್ಲಿಯ ಅಬ್ಬರ. ಮರುದಿನ ಬೆಳಗ್ಗೆ ಎಲ್ಲವೂ ಶಾಂತವಾಗಿತ್ತು. ಆದರೆ, ಬಾಗಿಲು ತೆರೆದು ನೋಡಿದ ಜನರಿಗೆ ಆಘಾತ ಕಾದಿತ್ತು. ಅವರ ಓಡಾಟದ ಆಸರೆಯಾಗಿದ್ದ ಕೊಯಿನ್‌ಪುರ – ಕಿಂಚಿಲಿಂಗಿ ರಸ್ತೆಯೇ ಮಾಯವಾಗಿತ್ತು!

ಚಂಡಮಾರುತ ಮತ್ತು ಧಾರಾಕಾರ ಮಳೆಯಿಂದ ಕೊಚ್ಚಿಕೊಂಡು ಹೋಗಿದ್ದ ರಸ್ತೆಯನ್ನು ಕಂಡು ಗ್ರಾಮಸ್ಥರು ಬೆಚ್ಚಿಬಿದ್ದರು. ಆ ಗ್ರಾಮವನ್ನು ಕಿಂಚಿÉಂಗಿಗೆ ಸಂಪರ್ಕಿಸಲು ಇದ್ದ ಒಂದು ಮಾರ್ಗವೂ ಸಂಪೂರ್ಣ ಹಾನಿಗೀಡಾಗಿದೆ. ಈ ರಸ್ತೆ ಹಿಂದಿನ ಸ್ಥಿತಿಗೆ ತಲುಪಲು ಇನ್ನೆಷ್ಟು ತಿಂಗಳುಗಳು ಬೇಕೋ ಎಂಬ ಆತಂಕದಲ್ಲಿದ್ದ ಗ್ರಾಮಸ್ಥರಿಗೆ ಅಂದು ಬೆಳಕಾದವರೇ ಲಕ್ಷ್ಮಣ್‌ ಸಾಬಾರ್‌.

ಮನಸ್ಸಿದ್ದರೆ ಮಾರ್ಗ ಎಂಬ ಮಾತಿನಂತೆ ಗ್ರಾಮಸ್ಥರಲ್ಲಿ ಧೈರ್ಯ ತುಂಬಿ, ಬರೋಬ್ಬರಿ 9 ಕಿ.ಮೀ. ರಸ್ತೆಯನ್ನು ಮರುನಿರ್ಮಿಸಿದ್ದಾರೆ ಲಕ್ಷ್ಮಣ್‌. ಮರಗಳು ಧರೆಗುರುಳಿ, ಗುಡ್ಡಗಳು ಕುಸಿದು ಬಿದ್ದ ಕಾರಣ, ಅಲ್ಲೊಂದು ರಸ್ತೆಯಿತ್ತು ಎಂಬುದೇ ಗೊತ್ತಾಗದಂತೆ ಹಾನಿಗೀಡಾಗಿದ್ದ ರಸ್ತೆಯನ್ನು ಕೇವಲ ಎರಡೂವರೆ ದಿನದಲ್ಲಿ ಮೊದಲಿನಂತೆ ಮಾಡುವಲ್ಲಿ ಲಕ್ಷ್ಮಣ್‌ ಯಶಸ್ವಿಯಾಗಿದ್ದಾರೆ.

ಎರಡೂವರೆ ದಿನ, 70 ಜನರ ಪರಿಶ್ರಮ:ತಮ್ಮ ಕೆಲಸದ ಕುರಿತು ಮಾತನಾಡಿರುವ ಲಕ್ಷ್ಮಣ್‌, “ಹಾನಿಗೀಡಾದ ರಸ್ತೆ ನೋಡಿ ಎಲ್ಲರಂತೆ ನಾನೂ ಬೆಚ್ಚಿಬಿದ್ದಿದ್ದೆ. ಸಂಪರ್ಕವನ್ನು ಮರುಸ್ಥಾಪಿಸದ ಹೊರತು, ಹೊರಗಿನ ಯಾವುದೇ ಸಹಾಯವನ್ನೂ ನಾವು ಪಡೆಯಲು ಸಾಧ್ಯವಿಲ್ಲ ಎಂಬುದು ನನ್ನ ಅರಿವಿಗೆ ಬಂತು. ರಕ್ಷಣಾ ತಂಡವಾಗಲೀ, ವೈದ್ಯಕೀಯ ಸಹಾಯವಾಗಲೀ ನಮ್ಮನ್ನು ತಲುಪುವಂತಿರಲಿಲ್ಲ. ಇದರಿಂದ ಜನರ ಸಂಕಷ್ಟ ಇನ್ನಷ್ಟು ಹೆಚ್ಚುತ್ತದೆ ಎಂದು ಗೊತ್ತಾಯಿತು. ಒಂದು ಕ್ಷಣವನ್ನೂ ವ್ಯರ್ಥ ಮಾಡದೇ, ಗ್ರಾಮಸ್ಥರ ಮನವೊಲಿಸಲು ಯತ್ನಿಸಿದೆ. ಆರಂಭದಲ್ಲಿ, ಈ ಕೆಲಸ ನಮ್ಮಿಂದ ಸಾಧ್ಯವಾ ಎಂದು ಪ್ರಶ್ನಿಸಿದರೂ, ಕೊನೆಗೆ ನನ್ನ ಮಾತು ಕೇಳಿ 70 ಮಂದಿ ಮುಂದೆ ಬಂದರು. ಅಂದೇ ನಾವು ರಸ್ತೆಯಲ್ಲಿ ಬಿದ್ದಿದ್ದ ಅವಶೇಷಗಳನ್ನು ತೆರವು ಮಾಡುವ ಕೆಲಸಕ್ಕೆ ಇಳಿದೆವು.
 
ರಾಜಕೀಯ ಭೇದ ಮರೆತು ಟಂಬೋ, ಕೊಯಿನ್‌ಪುರ ಮತ್ತು ಆಶಿಲಿಂಗಿ ಗ್ರಾಮದ ಹಲವರು ಕೈಜೋಡಿಸಿ ಸತತ ಪರಿಶ್ರಮ ವಹಿಸಿದ ಕಾರಣ, 9 ಕಿ.ಮೀ. ರಸ್ತೆಯನ್ನು ಎರಡೂವರೆ ದಿನದಲ್ಲಿ ದುರಸ್ತಿಗೊಳಿಸಲು ಸಾಧ್ಯವಾಯಿತು. ಜತೆಗೆ ಗ್ರಾಮದಲ್ಲಿ ಒಬ್ಬರ ಬಳಿ ಜೆಸಿಬಿ ಯಂತ್ರ ಇದ್ದ ಕಾರಣ, ಅವರ ಸಹಾಯ ಪಡೆದು ಮೂರು ಅಡಿಗಾಲುವೆಗಳನ್ನೂ ರಿಪೇರಿ ಮಾಡಿದೆವು’ ಎಂದಿದ್ದಾರೆ. 

ತಿತ್ಲಿಯ ಹೀರೋಗೆ ಸಿಎಂ ಅಭಿನಂದನೆ
ಕೆಲಸ ಮುಗಿಯುವ ಹೊತ್ತಿಗೆ ಲಕ್ಷ್ಮಣ್‌ ನೇತೃತ್ವದ 70 ಜನರ ತಂಡವು ಧರೆಗುರುಳಿದ್ದ 500 ಮರಗಳನ್ನು ತೆರವುಗೊಳಿಸಿ, ಅವಶೇಷಗಳನ್ನು ವಿಲೇವಾರಿ ಮಾಡಿ, ಸಂಪರ್ಕವನ್ನು ಮರುಸ್ಥಾಪಿಸಿತು. ಎರಡೂವರೆ ದಿನದ ಸತತ ಕಾಮಗಾರಿ ಯಶಸ್ವಿಯಾಗಿ ಪೂರ್ಣ ಗೊಂಡೊಡನೆ ಗ್ರಾಮಸ್ಥರು ಲಕ್ಷ್ಮಣ್‌ರ ನಾಯಕತ್ವವನ್ನು ಹಾಡಿ ಹೊಗಳಿದರು. ಇವರ ಸಾಧನೆಗೆ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರೂ ನಿಬ್ಬೆರಗಾಗಿದ್ದು, ಲಕ್ಷ್ಮಣ್‌ರನ್ನು “ತಿತ್ಲಿಯ ಹೀರೋ’ ಎಂದು ಕರೆದಿದ್ದಾರೆ.

ಟಾಪ್ ನ್ಯೂಸ್

mango

ಧಾರವಾಡ ಮಾವು ಮೇಳಕ್ಕೆ ಉತ್ತಮ‌ ಸ್ಪಂದನೆ: 40 ಟನ್ ಮಾರಾಟ, ಮತ್ತೆ ಮೂರು ದಿನ‌ ವಿಸ್ತರಣೆ

Mangaluru ಎಂಡಿಎಂಎ ಡ್ರಗ್ಸ್ ಸಾಗಾಟ: ನಾಲ್ವರ ಸೆರೆ

Mangaluru ಎಂಡಿಎಂಎ ಡ್ರಗ್ಸ್ ಸಾಗಾಟ: ನಾಲ್ವರ ಸೆರೆ

Davanagere: ಕೆರೆಗೆ ವಿಷ ಹಾಕಿದ ದುಷ್ಕರ್ಮಿಗಳು… ಸಾವಿರಾರು ಮೀನುಗಳ ಮಾರಣಹೋಮ

Davanagere: ಕೆರೆಗೆ ವಿಷ ಹಾಕಿದ ದುಷ್ಕರ್ಮಿಗಳು… ಸಾವಿರಾರು ಮೀನುಗಳ ಮಾರಣಹೋಮ

ಜೈಲಿಂದ ಬಿಡುಗಡೆಯಾದ ರೇವಣ್ಣ ತವರು ಜಿಲ್ಲೆ ಭೇಟಿ ದಿಢೀರ್‌ ರದ್ದು

ಜೈಲಿಂದ ಬಿಡುಗಡೆಯಾದ ರೇವಣ್ಣ ತವರು ಜಿಲ್ಲೆ ಭೇಟಿ ದಿಢೀರ್‌ ರದ್ದು

CM.. ನಿಮ್ಮ ಸರ್ಕಾರದ ವಿರುದ್ಧ ಮಹಿಳೆಯರು ವಿಶ್ವಾಸವಿಡಬಹುದೇ?

CM.. ನಿಮ್ಮ ಸರ್ಕಾರದ ವಿರುದ್ಧ ಮಹಿಳೆಯರು ವಿಶ್ವಾಸವಿಡಬಹುದೇ?

Fraud Case ಕೆನರಾ ಬ್ಯಾಂಕ್‌ ಹೆಸರಲ್ಲಿ ಸಂದೇಶ ಕಳುಹಿಸಿ 3.27 ಲಕ್ಷ ರೂ. ವಂಚನೆ

Fraud Case ಕೆನರಾ ಬ್ಯಾಂಕ್‌ ಹೆಸರಲ್ಲಿ ಸಂದೇಶ ಕಳುಹಿಸಿ 3.27 ಲಕ್ಷ ರೂ. ವಂಚನೆ

Hassan ಮುಸ್ಸಂಜೆಯಿಂದ ಮುಂಜಾನೆವರೆಗೂ ಎಸ್‌ಐಟಿ ಶೋಧನೆ

Hassan ಮುಸ್ಸಂಜೆಯಿಂದ ಮುಂಜಾನೆವರೆಗೂ ಎಸ್‌ಐಟಿ ಶೋಧನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

32 ಕೋಟಿ ರೂ. ಅಕ್ರಮ ಹಣ ಪತ್ತೆ: ಜಾರ್ಖಂಡ್‌ ಸಚಿವ ಆಲಂಗೀರ್‌ ಸೆರೆ

32 ಕೋಟಿ ರೂ. ಅಕ್ರಮ ಹಣ ಪತ್ತೆ: ಜಾರ್ಖಂಡ್‌ ಸಚಿವ ಆಲಂಗೀರ್‌ ಸೆರೆ

INDIA ಒಕ್ಕೂಟಕ್ಕೆ ಬಾಹ್ಯ ಬೆಂಬಲವಿದೆ ಆದರೆ ಎಡಪಕ್ಷಗಳು ಹೊರಗಿರಲಿ: ಮಮತಾ

INDIA ಒಕ್ಕೂಟಕ್ಕೆ ಬಾಹ್ಯ ಬೆಂಬಲವಿದೆ ಆದರೆ ಎಡಪಕ್ಷಗಳು ಹೊರಗಿರಲಿ: ಮಮತಾ

ರಾಜಸ್ಥಾನ ತಾಮ್ರ ಗಣಿಯಲ್ಲಿ ಲಿಫ್ಟ್ ಕುಸಿತ: ಹಿರಿಯ ಅಧಿಕಾರಿ ಮೃತ್ಯು, 15 ಮಂದಿಗೆ ಗಾಯ

ರಾಜಸ್ಥಾನ ತಾಮ್ರ ಗಣಿಯಲ್ಲಿ ಲಿಫ್ಟ್ ಕುಸಿತ: ಹಿರಿಯ ಅಧಿಕಾರಿ ಮೃತ್ಯು, 15 ಮಂದಿಗೆ ಗಾಯ

ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆಯ 2.73 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆಯ 2.73 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

CAA ಅಡಿಯಲ್ಲಿ ಮೊದಲ ಬಾರಿಗೆ 14 ಜನರಿಗೆ ಭಾರತೀಯ ಪೌರತ್ವ ಪ್ರಮಾಣಪತ್ರ ವಿತರಣೆ

CAA ಅಡಿಯಲ್ಲಿ ಮೊದಲ ಬಾರಿಗೆ 14 ಜನರಿಗೆ ಭಾರತೀಯ ಪೌರತ್ವ ಪ್ರಮಾಣಪತ್ರ ವಿತರಣೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

mango

ಧಾರವಾಡ ಮಾವು ಮೇಳಕ್ಕೆ ಉತ್ತಮ‌ ಸ್ಪಂದನೆ: 40 ಟನ್ ಮಾರಾಟ, ಮತ್ತೆ ಮೂರು ದಿನ‌ ವಿಸ್ತರಣೆ

Mangaluru ಎಂಡಿಎಂಎ ಡ್ರಗ್ಸ್ ಸಾಗಾಟ: ನಾಲ್ವರ ಸೆರೆ

Mangaluru ಎಂಡಿಎಂಎ ಡ್ರಗ್ಸ್ ಸಾಗಾಟ: ನಾಲ್ವರ ಸೆರೆ

Davanagere: ಕೆರೆಗೆ ವಿಷ ಹಾಕಿದ ದುಷ್ಕರ್ಮಿಗಳು… ಸಾವಿರಾರು ಮೀನುಗಳ ಮಾರಣಹೋಮ

Davanagere: ಕೆರೆಗೆ ವಿಷ ಹಾಕಿದ ದುಷ್ಕರ್ಮಿಗಳು… ಸಾವಿರಾರು ಮೀನುಗಳ ಮಾರಣಹೋಮ

ಜೈಲಿಂದ ಬಿಡುಗಡೆಯಾದ ರೇವಣ್ಣ ತವರು ಜಿಲ್ಲೆ ಭೇಟಿ ದಿಢೀರ್‌ ರದ್ದು

ಜೈಲಿಂದ ಬಿಡುಗಡೆಯಾದ ರೇವಣ್ಣ ತವರು ಜಿಲ್ಲೆ ಭೇಟಿ ದಿಢೀರ್‌ ರದ್ದು

CM.. ನಿಮ್ಮ ಸರ್ಕಾರದ ವಿರುದ್ಧ ಮಹಿಳೆಯರು ವಿಶ್ವಾಸವಿಡಬಹುದೇ?

CM.. ನಿಮ್ಮ ಸರ್ಕಾರದ ವಿರುದ್ಧ ಮಹಿಳೆಯರು ವಿಶ್ವಾಸವಿಡಬಹುದೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.