ಆಸೆ ಪೂರೈಸುವ ಉಂಗುರ


Team Udayavani, Nov 8, 2018, 7:00 AM IST

ungura.png

ಸೀತಾಪುರ ಎಂಬ ಊರಿನಲ್ಲಿ ಬಡತನವೇ ತುಂಬಿ ತುಳುಕುತ್ತಿತ್ತು. ಅಲ್ಲಿ ವೆಂಕಟಪ್ಪ ಮತ್ತು ದೇವಮ್ಮ ಎಂಬ ಬಡ ದಂಪತಿಗಳು ವಾಸಿಸುತ್ತಿದ್ದರು. ಅವರು ಕಾಡಿನ ಕಟ್ಟಿಗೆಗಳನ್ನು ಮಾರಿ ಜೀವನ ಸಾಗಿಸುತ್ತಿದ್ದರು. ಒಂದು ದಿನ ಕಟ್ಟಿಗೆಗಳಿಗಾಗಿ ಕಾಡಿನಲ್ಲಿ ಬಹಳ ದೂರ ಪ್ರಯಾಣಿಸಿದರೂ ಕಟ್ಟಿಗೆಗಳು ಸಿಗಲಿಲ್ಲ. ಆಯಾಸಗೊಂಡ ದಂಪತಿಗಳು ಒಂದು ದೊಡ್ಡ ಮರದ ಕೆಳಗಿದ್ದ  ಕುಳಿತುಕೊಂಡರು.

ವೆಂಕಟಪ್ಪನ ಹೆಂಡತಿ, ಒಣಗಿದ ಕಟ್ಟಿಗೆಗಳಿಗಾಗಿ ಇಷ್ಟು ದೂರ ಬರುವುದಕ್ಕಿಂತ ಒಂದು ಕೊಡಲಿಯನ್ನು ಕೊಂಡು ಹತ್ತಿರದಲ್ಲಿರುವ ಮರಗಳನ್ನು ಕಡಿದು ಜೀವನ ಸಾಗಿಸುವುದು ಒಳ್ಳೆಯದು ಎಂದಳು. ಅದಕ್ಕೆ ವೆಂಕಟಪ್ಪ “ಕೊಡಲಿ ಖರೀದಿಸುವಷ್ಟು ಹಣ ನಮ್ಮ ಹತ್ತಿರ ಇಲ್ಲ. ಆದರೂ ನೀನು ಹೇಳಿದ್ದು ಸರಿ’ ಎಂದನು. 

ವನದೇವತೆ ಪ್ರತ್ಯಕ್ಷಗೊಂಡು “ಮರಗಳನ್ನು ಕಡಿಯುವುದೆಂದರೆ ಪ್ರಕೃತಿಯನ್ನು ನಾಶ ಮಾಡಿದಂತೆ. ಪ್ರಕೃತಿಯಿಲ್ಲದೆ ಈ ಪ್ರಪಂಚ ಉಳಿಯದು’ ಎಂದು ಹೇಳಿದಳು.

ಆಗ ದೇವಮ್ಮ “ನಿನಗೇನಮ್ಮ, ನೀನು ಸಂತೋಷವಾಗಿದ್ದೀಯ. ನಮ್ಮ ಕಷ್ಟ ನಿನಗೆಲ್ಲಿ ಗೊತ್ತಾಗಬೇಕು?’ ಎಂದಳು. ಆಗ ವನದೇವತೆ ಉಂಗುರವೊಂದನ್ನು ನೀಡಿ “ನೀವು ನಿಸ್ವಾರ್ಥತೆಯಿಂದ ಬೇಡಿಕೊಂಡಾಗ ಈ ಉಂಗುರ ನಿಮ್ಮ ಇಷ್ಟಾರ್ಥವನ್ನು ಪೂರೈಸುತ್ತದೆ’ ಎಂದು ಹೇಳಿ ಮಾಯವಾದಳು. 

ಆ ಉಂಗುರವನ್ನು ಸ್ವೀಕರಿಸಿದ ದಂಪತಿಗಳು ಆ ಕೂಡಲೆ ಮನೆಗೆ ತೆರಳಿ ದೇವರಿಗೆ ಪೂಜೆ ಮಾಡಿದರು. ನಂತರ ಒಳ್ಳೆಯ ಸಮಯ ನೋಡಿ ಉಂಗುರ ಹಿಡಿದು ತಮಗೆ ಸಾಕೆನಿಸುವಷ್ಟು ಬಂಗಾರ ಬೇಕು ಎಂದು ಕೋರಿಕೊಂಡರು. ಆದರೆ ಅವರ ಕೋರಿಕೆ ಫ‌ಲಿಸಲಿಲ್ಲ. ಮತ್ತೆ ಉಂಗುರವನ್ನು ಮುಟ್ಟಿ ತಾವು ಕೋಟ್ಯಾಧೀಶ್ವರರಾಗ ಬೇಕೆಂದು ಬೇಡಿಕೊಂಡರು. ಅದೂ ನೆರವೇರಲಿಲ್ಲ. ಕೋಪಗೊಂಡ ದಂಪತಿಗಳಿಬ್ಬರೂ ಮೋಸ ಮಾಡಿದಳೆಂದು ವನದೇವತೆಯನ್ನು ಬೈಯತೊಡಗಿದರು. ವನದೇವತೆಯೊಡನೆ ನಡೆದ ಸಂಭಾಷಣೆಯಷ್ಟನ್ನೂ ಜನರಿಗೆ ವರದಿಯೊಪ್ಪಿಸಿದರು. ಆಗ ಅಲ್ಲಿ ಸೇರಿದ್ದವರಲ್ಲಿ ಒಬ್ಬ ಮುದುಕ ಮುಂದೆ ಬಂದು “ವನದೇವತೆ ನಿಮಗೆ ನಿಸ್ವಾರ್ಥತೆಯಿಂದ ಕೋರಿಕೊಳ್ಳಿ ಎಂದು ಹೇಳಿರುವುದು.’ ಎಂದು ಸಲಹೆ ನೀಡಿದಾಗ ದಂಪತಿಗಳಿಗೆ ಜ್ಞಾನೋದಯವಾಯಿತು. ದಂಪತಿಗಳು ಉಂಗುರವನ್ನು ಮುಟ್ಟಿಕೊಂಡು ಊರವರಿಗೆಲ್ಲಾ ಹಬ್ಬದೂಟ ಸಿಗಲಿ ಎಂದು ಕೋರಿಕೊಂಡರು. ತಕ್ಷಣ ವಿವಿಧ ಬಗೆಯ ಆಹಾರಭಕ್ಷ್ಯಗಳು ಪ್ರತ್ಯಕ್ಷಗೊಂಡವು. ಅಂದಿನಿಂದ ಊರು ಸುಭಿಕ್ಷವಾಯಿತು. 

– ಅಕ್ರಂ ಪಾಷಾ

ಟಾಪ್ ನ್ಯೂಸ್

T20 World Cup: India jersey sold for Rs 6000!

T20 World Cup: ಭಾರತದ ಜೆರ್ಸಿ 6000 ರೂ.ಗೆ ಮಾರಾಟ!

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

Patanjali case; Supreme directive to self-declare before advertisement

Patanjali case; ಜಾಹೀರಾತಿಗೆ ಮುನ್ನ ಸ್ವ ಘೋಷಣೆ ಮಾಡಲು ಸುಪ್ರೀಂ ಸೂಚನೆ

Israel captures Hamas last stronghold rafah

Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್‌ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್‌ ಪಡೆ

We will make crores of people millionaires: Rahul Gandhi

Election; ಕೋಟ್ಯಂತರ ಜನರನ್ನು ನಾವು ಲಕ್ಷಾಧಿಪತಿ ಮಾಡುತ್ತೇವೆ: ರಾಹುಲ್‌ ಗಾಂಧಿ

Get rid of hate mongers, vote for Congress: Sonia gandhi

Election; ದ್ವೇಷದ ಪ್ರತಿಪಾದಕರನ್ನು ತೊಲಗಿಸಿ, ಕಾಂಗ್ರೆಸ್‌ಗೆ ಮತ ನೀಡಿ: ಸೋನಿಯಾ ಗಾಂಧಿ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

T20 World Cup: India jersey sold for Rs 6000!

T20 World Cup: ಭಾರತದ ಜೆರ್ಸಿ 6000 ರೂ.ಗೆ ಮಾರಾಟ!

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

Patanjali case; Supreme directive to self-declare before advertisement

Patanjali case; ಜಾಹೀರಾತಿಗೆ ಮುನ್ನ ಸ್ವ ಘೋಷಣೆ ಮಾಡಲು ಸುಪ್ರೀಂ ಸೂಚನೆ

Israel captures Hamas last stronghold rafah

Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್‌ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್‌ ಪಡೆ

We will make crores of people millionaires: Rahul Gandhi

Election; ಕೋಟ್ಯಂತರ ಜನರನ್ನು ನಾವು ಲಕ್ಷಾಧಿಪತಿ ಮಾಡುತ್ತೇವೆ: ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.