ನೀವೂ ಉಂಗುರ ಧರಿಸುತ್ತೀರಾ?


Team Udayavani, Nov 9, 2018, 6:00 AM IST

15.jpg

2500 ವರ್ಷಗಳ ಹಿಂದೆ ಬೆರಳಿನ ಉಂಗುರಗಳ ಇತಿಹಾಸವಿದೆ. ಈಜಿಪ್ಟಿನ ನಾಗರಿಕರು ಮೊದಲು ಬೆರಳುಗಳಿಗೆ ಉಂಗುರಗಳನ್ನು ಧರಿಸುತ್ತಿದ್ದರು. ಈಗಿನ ಕಾಲದಲ್ಲಿ ಹುಡುಗ-ಹುಡುಗಿಯರ ಕೈಯಲ್ಲಿ ವಿಧವಿಧವಾದ ಉಂಗುರಗಳು ಕಾಣಿಸುತ್ತಿದೆ. ಆಮೆ ಪ್ರತಿಮೆಯು ಅಂಗಡಿಗಳಲ್ಲಿ , ಮನೆಯ ಶೋಕೇಸ್‌ಗಳಲ್ಲಿ ಆಲಂಕಾರಿಕ ವಸ್ತುವಾಗಿ ಇರುವುದನ್ನು ನಾವು ನೋಡಿದ್ದೇವೆ. ಆದರೆ, ಇತ್ತೀಚೆಗೆ ಹೊಸ ಬಗೆಯ ಉಂಗುರ ಚಾಲ್ತಿಯಲ್ಲಿದ್ದು, ಹೊಸ ಟ್ರೆಂಡ್‌ ಆಗಿದೆ. ಅದೇ ಆಮೆ ಆಕಾರದ ಉಂಗುರ. 

ಆಮೆ ಆಕಾರದ ಉಂಗುರ ಧರಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ದೋಷಗಳು ನಿವಾರಣೆಯಾಗುತ್ತದೆ. ಹಾಗೇ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆಮೆ ಪ್ರಗತಿಯ ಸಂಕೇತ, ಸಮೃದ್ಧಿಯ ಪ್ರತೀಕ. ಆಮೆ ವಿಷ್ಣುವಿನ ಅವತಾರ ಎಂದು ನಾವು ಕೇಳಿದ್ದೇವೆ. ಹಾಗೆ ಸಮುದ್ರಮಥನದ ಸಮಯದಲ್ಲಿ ಆಮೆ ಉತ್ಪನ್ನವಾಗಿದೆ, ಆದ್ದರಿಂದ ಆಮೆಗೆ ಮಹಾಲಕ್ಷ್ಮೀಯ ಕೃಪೆ ಇದೆ. ಇದನ್ನು ಧರಿಸುವುದರಿಂದ ಧನ ಲಾಭವಾಗುತ್ತದೆ. ಜೊತೆಗೆ ಧೈರ್ಯ, ಶಾಂತಿ, ಸಮಾಧಾನ ಎಂದು ಹೇಳಲಾಗಿದೆ. ಹೇಗೆ ಆಮೆ ಸುದೀರ್ಘ‌ವಾಗಿ ಜೀವಿಸುತ್ತದೋ? ಹಾಗೆ ಈ ಆಕರದ ಉಂಗುರ ಧರಿಸುವುದರಿಂದ ವ್ಯಕ್ತಿಯ ಆಯುಷ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. 

ಆಮೆ ಉಂಗುರವನ್ನು ಚಿನ್ನ, ಬೆಳ್ಳಿ, ವಜ್ರದಿಂದ ತಯಾರಿಸುತ್ತಾರೆ.ಆದರೆ, ಬೆಳ್ಳಿ ಉಂಗುರ ಒಳ್ಳೆಯದು ಎಂದು ಹೇಳುತ್ತಾರೆ. ಅದನ್ನು ಬಲ ಕೈಗೆ ಧರಿಸುವುದು ಒಳ್ಳೆಯದು. ಆಮೆಯ ಮುಖವನ್ನು ನಮ್ಮತ್ತ ಕಾಣುವಂತೆ ಧರಿಸಬೇಕು. ಏಕೆಂದರೆ, ಅದನ್ನು ಎದುರುಮುಖವಾಗಿ ಧರಿಸಿದರೆ ನಮ್ಮಿಂದ ಹಣ, ಶಾಂತಿ ಎಲ್ಲವೂ ಹೋಗುತ್ತದೆ. ನಮ್ಮ ಕಡೆಗೆ ಅದರ ಮುಖ ಬರುವಂತೆ ಧರಿಸಿದರೆ ಹಣ, ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಧರಿಸಿದ ನಂತರ ಅದನ್ನು ಯಾವತ್ತೂ ತಿರುಗಿಸಬಾರದು ಅಥವಾ ತೆಗೆದು ಹಾಕಬಾರದು. ಅದರ ಶಕ್ತಿ ಹೋಗುತ್ತದೆ ಎಂಬ ನಂಬಿಕೆ ಇದೆ. ಈ ಆಮೆ ಉಂಗುರವನ್ನು ನಾವು ಖರೀದಿಸುವುದಕ್ಕಿಂತ ಇನ್ನೊಬ್ಬರು ಉಡುಗೊರೆಯಾಗಿ ನೀಡುವುದು ಉತ್ತಮ.

 ಈಗಿನ ಹೊಸ ಟ್ರೆಂಡ್‌ ಕಾಲದಲ್ಲಿ ಆಮೆ ಉಂಗುರ ಎಲ್ಲರ ಕೈಯಲ್ಲಿ ರಾರಾಜಿಸುತ್ತಿದೆ. ಕೆಲವರು ಅಂದಕ್ಕಾಗಿ ಬಳಸುತ್ತಾರೆ. ಇನ್ನು ಕೆಲವರು ಟ್ರೆಂಡ್‌ ಎಂದು ಹಾಕುತ್ತಾರೆ. ಶಾಂತಿ-ನೆಮ್ಮದಿಗಾಗಿ ಧರಿಸುತ್ತಾರೆ, ಇದರಿಂದ ಸಮೃದ್ಧಿಯಾಗುತ್ತದೋ ಅಥವಾ ಬದಲಾವಣೆಯಾಗುತ್ತದೋ ಗೊತ್ತಿಲ್ಲ. ಅದೆಲ್ಲ ನಮ್ಮ ನಮ್ಮ ಮನಸ್ಸಿಗೆ, ನಂಬಿಕೆಗೆ ಸಂಬಂಧ ಪಟ್ಟಿದ್ದು. ಕೆಲವರಿಗೆ ಧನಾಗಮನ, ಶಾಂತಿ ದೊರಕಿದ್ದೂ ಇದೆ. ಇನ್ನು ಕೆಲವರು ಅದನ್ನು ನಂಬದೆ ಇರುವವರು ಫ್ಯಾಷನ್‌ ಮಾತ್ರ ಎಂದು ಧರಿಸಿದವರು ಇದ್ದಾರೆ.

ಆದೇನೆ ಇರಲಿ, ಆಮೆ ಉಂಗುರ ಈಗಿನ ಹೊಸ ಟ್ರೆಂಡ್‌ ಆಗಿ ಚಾಲ್ತಿಯಲ್ಲಿದ್ದು , ಬಹು ಬೇಡಿಕೆಯ ಉಂಗುರವಾಗಿದೆ.

ಚೈತ್ರಾ
ತೃತೀಯ ಬಿಎ., ಪತ್ರಿಕೋದ್ಯಮ ವಿದ್ಯಾರ್ಥಿ,
ಎಂಜಿಎಂ ಕಾಲೇಜು, ಉಡುಪಿ

ಟಾಪ್ ನ್ಯೂಸ್

T20 World Cup; Cricket mega event threatened by Pakistani militants

T20 World Cup; ಕ್ರಿಕೆಟ್ ಮೆಗಾ ಕೂಟಕ್ಕೆ ಪಾಕ್ ಉಗ್ರರಿಂದ ಬೆದರಿಕೆ

Bharamasagara: ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು; ಇಬ್ಬರು ಸ್ಥಳದಲ್ಲೇ ಸಾವು

Bharamasagara: ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು; ಇಬ್ಬರು ಸ್ಥಳದಲ್ಲೇ ಸಾವು

Paris Olympics: ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮಹಿಳಾ ಪುರುಷರ ರಿಲೇ ತಂಡ

Paris Olympics: ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮಹಿಳಾ, ಪುರುಷರ ರಿಲೇ ತಂಡ

Cipla and Glenmark; ಭಾರತದಲ್ಲಿ ತಯಾರಾದ ಅಸ್ತಮಾ ಔಷಧ ವಾಪಸ್‌

Cipla and Glenmark; ಭಾರತದಲ್ಲಿ ತಯಾರಾದ ಅಸ್ತಮಾ ಔಷಧ ವಾಪಸ್‌

3

ಕ್ರಿಕೆಟ್‌ ಆಡುವಾಗ ಖಾಸಗಿ ಅಂಗಕ್ಕೆ ತಾಗಿದ ಚೆಂಡು: ಕುಸಿದು ಬಿದ್ದು 11 ವರ್ಷದ ಬಾಲಕ ಮೃತ್ಯು

ED raids; ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿತ್ತು ಕಂತೆ ಕಂತೆ ಹಣ, ಬೆಚ್ಚಿ ಬಿದ್ದ ಅಧಿಕಾರಿ

ED Raids; ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿತ್ತು ಕಂತೆ ಕಂತೆ ಹಣ, ಬೆಚ್ಚಿ ಬಿದ್ದ ಅಧಿಕಾರಿ

Samantha: ಬೆತ್ತಲೆ ಫೋಟೋ ಹಾಕಿ ಡಿಲೀಟ್‌ ಮಾಡಿದ್ರಾ ಸಮಂತಾ?: ಟ್ರೆಂಡ್‌ ಆದ ಸ್ಯಾಮ್

Samantha: ಬೆತ್ತಲೆ ಫೋಟೋ ಹಾಕಿ ಡಿಲೀಟ್‌ ಮಾಡಿದ್ರಾ ಸಮಂತಾ?: ಟ್ರೆಂಡ್‌ ಆದ ಸ್ಯಾಮ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

LS Polls: “ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ’: ಗಾಯತ್ರಿ ಸಿದ್ದೇಶ್ವರ್‌

LS Polls: “ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ’: ಗಾಯತ್ರಿ ಸಿದ್ದೇಶ್ವರ್‌

T20 World Cup; Cricket mega event threatened by Pakistani militants

T20 World Cup; ಕ್ರಿಕೆಟ್ ಮೆಗಾ ಕೂಟಕ್ಕೆ ಪಾಕ್ ಉಗ್ರರಿಂದ ಬೆದರಿಕೆ

Bharamasagara: ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು; ಇಬ್ಬರು ಸ್ಥಳದಲ್ಲೇ ಸಾವು

Bharamasagara: ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು; ಇಬ್ಬರು ಸ್ಥಳದಲ್ಲೇ ಸಾವು

ಡ್ರಗ್ಸ್‌ ಕೊಟ್ಟು, ಸಂಸದೆಗೇ ಲೈಂಗಿಕ ಕಿರುಕುಳ ಆರೋಪ; ಆಸ್ಟ್ರೇಲಿಯಾ ಎಂಪಿ ಅಳಲು

ಡ್ರಗ್ಸ್‌ ಕೊಟ್ಟು, ಸಂಸದೆಗೇ ಲೈಂಗಿಕ ಕಿರುಕುಳ ಆರೋಪ; ಆಸ್ಟ್ರೇಲಿಯಾ ಎಂಪಿ

Paris Olympics: ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮಹಿಳಾ ಪುರುಷರ ರಿಲೇ ತಂಡ

Paris Olympics: ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮಹಿಳಾ, ಪುರುಷರ ರಿಲೇ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.