ಲಕ್ವಾ: ಅಪಾಯಕರ ಅಂಶಗಳು, ಪೂರ್ವ ಸೂಚನೆಗಳು ಮತ್ತು ಚಿಕಿತ್ಸೆಯ ಸಮಯ


Team Udayavani, Nov 11, 2018, 6:00 AM IST

heart-disease-diabetes.jpg

ಹಿಂದಿನ ವಾರದಿಂದ
3. ಹೃದ್ರೋಗ
ಕೊರೊನರಿ ಆರ್ಟರಿ ಕಾಯಿಲೆ, ವಾಲ್‌Ì ವೈಕಲ್ಯಗಳು, ಅನಿಯಮಿತ ಹೃದಯ ಬಡಿತ (ಆರ್ಟೀರಿಯಲ್‌ ಫಿಬ್ರಿಲೇಶನ್‌) ಮತ್ತು ಹೃದಯದ ಭಾಗಗಳಲ್ಲಿ ಒಂದು ದೊಡ್ಡದಾಗುವುದರಿಂದ ರಕ್ತ ಹೆಪ್ಪುಗಟ್ಟಬಹುದು. ಇದು ಅಲ್ಲಿನ ಜಾರಿ ಮಿದುಳಿಗೆ ರಕ್ತ ಸರಬರಾಜು ಮಾಡುವ ರಕ್ತನಾಳಗಳಲ್ಲಿ ತಡೆ ಉಂಟು ಮಾಡಬಹುದು. ಮರುಕಳಿಸುವ ಹೃದಯ ಕಾಯಿಲೆಗಳು ಮತ್ತು ಲಕ್ವಾ ತಡೆಯಲು ವೈದ್ಯರು ಶಿಫಾರಸು ಮಾಡುವ ರಕ್ತ ತೆಳುಗೊಳಿಸುವ ಔಷಧಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

4. ಮಧುಮೇಹ
ಲಕ್ವಾಕ್ಕೆ ಸಂಬಂಧಿಸಿದ ಹೇಳುವುದಿದ್ದರೆ ಮಧುಮೇಹ ಹೊಂದಿರುವುದು 15 ವರ್ಷ ವಯಸ್ಸಾದಷ್ಟು ಪರಿಣಾಮ ಹೊಂದಿರುತ್ತದೆ. ಮಧುಮೇಹವು ಸಕ್ಕರೆ ಅಥವಾ ಗುÉಕೋಸನ್ನು ದೇಹ ಉಪಯೋಗಿಸುವ ಸಾಮರ್ಥ್ಯವನ್ನು ಮಾತ್ರ ಬಾಧಿಸುತ್ತದೆ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. ಮಧುಮೇಹವು ಮಿದುಳು ಸಹಿತ ದೇಹಾದ್ಯಂತ ರಕ್ತನಾಳಗಳಲ್ಲಿ ಹಾನಿಕರ ಬದಲಾವಣೆಗಳನ್ನು ಉಂಟು ಮಾಡುತ್ತದೆ. ಅಲ್ಲದೆ, ಲಕ್ವಾ ಉಂಟಾದ ಸಂದರ್ಭದಲ್ಲಿ ರಕ್ತದ ಸಕ್ಕರೆಯ ಅಂಶ ಹೆಚ್ಚಿದ್ದರೆ ಮಿದುಳಿಗೆ ಉಂಟಾಗುವ ಹಾನಿಯೂ ಹೆಚ್ಚು ತೀವ್ರ ಮತ್ತು ತೀಕ್ಷ್ಣವಾಗಿರುತ್ತದೆ. ಮಧುಮೇಹಕ್ಕೆ ಚಿಕಿತ್ಸೆ ನೀಡುವುದರಿಂದ ಅದರ ಸಂಕೀರ್ಣ ಸಮಸ್ಯೆಗಳನ್ನು ವಿಳಂಬಿಸಬಹುದು, ಇದರಿಂದ ಲಕ್ವಾದ ಅಪಾಯ ಕಡಿಮೆಯಾಗುತ್ತದೆ.

5. ಕೊಲೆಸ್ಟರಾಲ್‌ ಅಸಮತೋಲನ
ಕಡಿಮೆ ಸಾಂದ್ರತೆಯ ಲಿಪೊಪ್ರೊಟೀನ್‌ (ಎಲ್‌ಡಿಎಲ್‌) ಕೊಲೆಸ್ಟರಾಲನ್ನು ರಕ್ತದ ಮೂಲಕ ಕೊಂಡೊಯ್ದು ಜೀವಕೋಶಗಳಿಗೆ ಸರಬರಾಜು ಮಾಡುತ್ತದೆ. ಎಲ್‌ಡಿಎಲ್‌ ಪ್ರಮಾಣ ಹೆಚ್ಚಿದರೆ ಅದು ರಕ್ತನಾಳಗಳಲ್ಲಿ ಕೊಲೆಸ್ಟರಾಲ್‌ ಶೇಖರವಾಗಲು ಕಾರಣವಾಗುತ್ತದೆ. ಇದರಿಂದ ಎಥೆರೊಸ್ಲೆರೋಸಿಸ್‌ ಉಂಟಾಗುತ್ತದೆ. ಎಥೆರೊಸ್ಲೆರೋಸಿಸ್‌ ರಕ್ತನಾಳಗಳು ಕಿರಿದಾಗಲು ಮುಖ್ಯ ಕಾರಣವಾಗಿದ್ದು, ಇದರಿಂದ ಹೃದಯಾಘಾತ, ಲಕ್ವಾ ಎರಡೂ ಉಂಟಾಗುತ್ತವೆ.

6. ದೈಹಿಕ ಚಟುವಟಿಕೆಗಳ ಕೊರತೆ, ಬೊಜ್ಜು ಮತ್ತು ಒತ್ತಡ
ಬೊಜ್ಜು ಮತ್ತು ದೈಹಿಕ ಚಟುವಟಿಕೆಗಳ ಕೊರತೆಗೂ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದ್ರೋಗಗಳಿಗೂ ಹತ್ತಿರದ ಸಂಬಂಧವಿದೆ. ಬ್ಯಾಂಕರುಗಳು, ಕಂಪ್ಯೂಟರ್‌ ಎಂಜಿನಿಯರ್‌ಗಳು, ಇತರ ಕಚೇರಿಯಲ್ಲೇ ಕುಳಿತು ಕೆಲಸ ಮಾಡುವ ಉದ್ಯೋಗಿಗಳು ದೀರ್ಘ‌ಕಾಲ ಕುಳಿತು ಕೆಲಸ ಮಾಡಬೇಕಾಗುತ್ತದೆ. ಇದರಿಂದಾಗಿ ಅವರಲ್ಲಿ ದೈಹಿಕ ಚಟುವಟಿಕೆಗಳ ಪ್ರಮಾಣ ಕುಂಠಿತವಾಗುತ್ತದೆಯಲ್ಲದೆ ಮಾನಸಿಕ ಒತ್ತಡ ಅಧಿಕವಾಗಿರುತ್ತದೆ. ಇಂತಹ ಜನರಲ್ಲಿ ಸೊಂಟ ಮತ್ತು ಪೃಷ್ಠದ ಸುತ್ತಳತೆ ಸಮಾನವಾಗಿರುವುದು ಅಥವಾ ಮಧ್ಯಮ ಕ್ರಮಾಂಕಕ್ಕಿಂತ ಹೆಚ್ಚಿರುವುದು ಇಶೆಮಿಕ್‌ ಲಕ್ವಾದ ಅಪಾಯವನ್ನು ಮೂರುಪಟ್ಟು ವೃದ್ಧಿಸುತ್ತದೆ. 

– ಮುಂದಿನ ವಾರಕ್ಕೆ

ಟಾಪ್ ನ್ಯೂಸ್

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.