ಜೀವನದ ಅಮೂಲ್ಯ ಕ್ಷಣಗಳಷ್ಟೇ ಶಾಶ್ವತ
Team Udayavani, Nov 19, 2018, 1:11 PM IST
ಜೀವನದ ಯೋಚನೆ, ಯೋಜನೆಯೇ ಹಾಗೆ ನಾವುಂದು ಕೊಂಡತೆ ಇರುವುದಿಲ್ಲ. ಇದರಲ್ಲ ಕೆಲವರಿಗೆ ಯಶಸ್ಸು ಸಿಕ್ಕರೆ ಇನ್ನು ಕೆಲವರು ಯಶಸ್ಸಿಗಾಗಿ ಪರಿತಪಿಸುತ್ತಾ ದಿನ ಕಳೆಯುತ್ತಾರೆ. ಇಲ್ಲಿ ಅವರಿಗೆ ಹತ್ತಾರು ಸಂಗತಿಗಳು ಎದುರಾಗುತ್ತದೆ. ಆದರೆ ಅವರಿಟ್ಟ ಯೋಚನೆ, ಯೋಜನೆ ಎಲ್ಲವೂ ಅಂದು ಕೊಂಡತೇಯೆ ಆಗುತ್ತದೆ. ಬಾಲ್ಯ, ಪ್ರೌಢ, ಯೌವನ ಮುಖ್ಯ ಪಾತ್ರ ವಹಿಸುತ್ತದೆ. ನಾವು ಮತ್ತು ಮನಸ್ಸಿನ ಹೊಂದಾಣಿಕೆ ಭಿನ್ನವಾಗಿರುತ್ತದೆ. ಮಕ್ಕಳು ಹಿರಿಯರಂತೆ ಯೋಚಿಸಬಹುದು; ಹಿರಿಯರು ಮಕ್ಕಳಂತೆಯೂ ಆಲೋಚಿಸಬಹುದು ಇವೆಲ್ಲವೂ ಮನಸ್ಸಿಗೆ ಬಿಟ್ಟ ಸಂಗತಿಗಳು. ಆದರೆ ನಾವು ಇಟ್ಟ ಹೆಜ್ಜೆ ಎಚ್ಚರಿಕೆಯಿಂದಿರಬೇಕಷ್ಟೇ. ಧನಾತ್ಮಕ ಆಲೋಚನೆಯೊಂದೇ ಮಾನದಂಡವಲ್ಲ ಅದರಾಚೆಗಿನ ವಾಸ್ತವ ಸ್ಥಿತಿಯನ್ನೂ ಅರ್ಥೈಸಿಕೊಳ್ಳುವುದು ಜೀವನದಲ್ಲಿ ಅತೀ ಅಗತ್ಯ.
ಕಲೆವೊಂದು ನೈಜ್ಯ ಘಟನೆಗಳು, ಉದಾಹರಣೆಗಳು, ಇತಿಹಾಸಗಳು, ಘಟಿಸಿ ಹೋದ ಘಟನೆಗಳಂತಹ ಇತರ ಅಂಶಗಳು ಕಣ್ಣೆದುರಲ್ಲಿ ತಟ್ಟನೆ ಹಾದು ಹೋಗುತ್ತದೆ. ಆದರೆ ನಾನು ಆಯ್ಕೆಮಾಡುವ ದಾರಿ ತುಸು ವಿಶೇಷ, ಭಿನ್ನವಾಗಿರಬೇಕು ಎಂಬುವುದಷ್ಟೇ ಇಲ್ಲಿ ಮಹತ್ತರ. ಅದಕ್ಕಾಗಿ ಈ ಕಥೆ.
ಒಬ್ಬ ಬಹಳ ಒಳ್ಳೆಯ ವ್ಯಕ್ತಿ. ಕೈಲಾದಷ್ಟು ಸಮಾಜ ಸೇವೆ ಹಾಗೂ ಇನ್ನಿತರ ಒಳ್ಳೆಯ ಚಟುವಟಿಕೆಗಳನ್ನು ಮಾಡುತ್ತ ದಿನ ಕಳೆಯುತ್ತಾನೆ. ಆದರೆ ನೋಡುವವರಿಗೆ ಆತನ ವರ್ತನೆಯ ಬಗ್ಗೆ ಏನೋ…ಸಂದೇಹ. ಯಾಕೆಂದರೆ ಇಲ್ಲಿ ಪ್ರತಿ ಭೆಗೆ ಬೆಲೆ ಇಲ್ಲ. ವ್ಯಕ್ತಿಯ ಆಸ್ತಿ ಗಷ್ಟೇ ಬೆಲೆಯಂತಾಗಿದೆ. ಈ ರೀತಿಯ ಅಸಮಾನತೆಯೇ ಒಳ್ಳೆಯವರನ್ನು ಕೆಟ್ಟವರನ್ನಾಗಿಸಿಬಿಡುತ್ತದೆ. ಕೆಟ್ಟವರು ಒಳ್ಳೆಯವರೂ ಆಗಬಹುದು!
ಅವಲಂಬನೆ
ಜೀವನದ ಯೋಜನೆಗಳು ಅಗಾಧ ನಾವು ಅಂದು ಕೊಂಡದ್ದು, ಅನಿಸಿದ್ದು, ಗಳಿಸಿದ್ದು, ಗಳಿಸುವಂತದ್ದು ಅಪಾರ. ಇಲ್ಲಿ ನಮಗೆ ಸಿಗುವಂತಹ ಗೆಳೆತನ ಹಾಗೂ ಸ್ನೇಹಿತರು ಕೂಡ ಅತೀ ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ ಅವರ ಯೋಚನೆಗಳು ನಮಗಿಂತ ಭಿನ್ನವಾಗಿರಬಹುದು; ಇಲ್ಲವೇ ನಾವಂದು ಕೊಂಡಂತೆಯೇ ಅವರಿರಲೂಬಹುದು. ಈ ಕಾರಣಕ್ಕೆ ಕೆಲವರು ಕೆಲವೊಂದು ಸಂದರ್ಭದಲ್ಲಿ ಕಾರಣವಿಲ್ಲದೆ ಇಷ್ಟವಾಗಿಬಿಡುತ್ತಾರೆ. ಇಲ್ಲಿ ಕೂಡ ಮನಸ್ಸು ಮುಖ್ಯ ಪಾತ್ರವಹಿಸುತ್ತದೆ.
ಸಾಧಿಸುವ ಹಂಬಲವಿರಲಿ
ಭೂಮಿಯಲ್ಲಿ ಯೋಚನೆ ಮಾಡುವವರು ಹಲವಾರು ಮಂದಿ. ಆದರೆ ಜೀವಮಾನದ ಕೊನೆಯಲ್ಲಿ ಅವೆಲ್ಲವೂ ಶೂನ್ಯ. ಬದುಕು ನಾವು ಚಮಚದಲ್ಲಿ ತಿನ್ನುವ ಆಹಾರದಂತೆ ಭೂಮಿ ನಮ್ಮನ್ನು ಆ ಕ್ಷಣಕ್ಕೆ ಮರೆತು ಬಿಡುತ್ತದೆ. ಇನ್ನೊಂದು ಕಡೆ ನಮ್ಮನ್ನು ವರ್ಗಾಹಿಸುವ ಕೆಲಸ ನಡೆಯುತ್ತದೆ. ಈ ರೀತಿ ಜೀವನದ ಚಕ್ರ ತಿರುಗುತ್ತದೆ. ಆದರೆ ನಾವು ಅಂದು ಕೊಂಡದ್ದನ್ನು ಸಾಧಿಸಿ, ಯೋಚಿಸಿದ್ದನ್ನು ಗಳಿಸಿ ಒಂದಷ್ಟು ಮಧುರ ಕ್ಷಣಗಳನ್ನು ಉಳಿದವರಿಗೆ ಬಿಟ್ಟು ಹೋಗುವಂತಿರಬೇಕು. ಈ ಮೂಲಕ ಜೀವನದ ಅಮೂಲ್ಯ ಕ್ಷಣಗಳನ್ನು ಶಾಶ್ವತವಾಗಿರಿಸಬೇಕು.
ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ