ಸಂಶೋಧನ ಕ್ಷೇತ್ರದಲ್ಲಿ ಅವಕಾಶಗಳು ಅಪಾರ 


Team Udayavani, Dec 12, 2018, 12:30 PM IST

12-december-8.gif

. ವಿಜ್ಞಾನ ಕ್ಷೇತ್ರದಲ್ಲಿ ಅವಕಾಶಗಳು ಹೇಗಿವೆ? ಇದರ ಸದ್ಬಳಕೆ ಹೇಗಿದೆ?
ವಿಜ್ಞಾನ ಕ್ಷೇತ್ರದಲ್ಲಿ ಹಿಂದೆಂದಿಗಿಂತಲೂ ಈಗ ಅವಕಾಶಗಳು ಜಾಸ್ತಿ ಇವೆ. ಈ ಕ್ಷೇತ್ರದ ವ್ಯಾಪ್ತಿ ಅಗಾಧವಾಗಿರುವುದೇ ಇದಕ್ಕೆ ಕಾರಣ. ಒಂದು ಕ್ಷೇತ್ರದಲ್ಲಿ ಪರಿಣತಿ ಹೊಂದಿದವರು ಇನ್ನೊಂದು ಕ್ಷೇತ್ರದಲ್ಲಿ ಅಷ್ಟೇ ಮಟ್ಟಿನ ಪರಿಣತಿ ಪಡೆಯುವ ಮತ್ತು ಸಂಶೋಧಾನಾತ್ಮಕವಾಗಿ ತೊಡಗಿಸಿಕೊಳ್ಳುವ ಅವಕಾಶಗಳು ಈಗ ಹೆಚ್ಚಿವೆ.

. ಇಂದಿನ ವಿದ್ಯಾರ್ಥಿಗಳಲ್ಲಿ ಸಂಶೋಧನ ಆಸಕ್ತಿ ಕಡಿಮೆಯಾಗಿದೆ ಎನಿಸುತ್ತಿಲ್ಲವೇ?
ಖಂಡಿತಾ ಇಲ್ಲ. ಆದರೆ ಸಂಶೋಧನೆ ಮಾಡಿದ ಮೇಲೆ ಮುಂದೇನು ಎಂಬ ಯೋಚನೆ ಇದೆ. ಈಗ ಸಂಶೋಧನೆ ಮಟ್ಟವೂ ಅಷ್ಟೇ ಎತ್ತರಕ್ಕೆ ಬೆಳೆದಿರುವುದರಿಂದ ಸ್ಪರ್ಧೆ ಮತ್ತು ಸವಾಲುಗಳು ಹೆಚ್ಚಿವೆ. ಅದಕ್ಕೆ ಬೇಕಾಗುವ ಯಂತ್ರ, ಅನುಕೂಲತೆಗಳನ್ನು ವಿಶ್ಲೇಷಿಸಿಕೊಂಡು ಮುಂದುವರಿಯಬೇಕಿದೆ.

. ಭಾರತದಲ್ಲಿ ಸಂಶೋಧನ ಕ್ಷೇತ್ರದಲ್ಲಿನ ಸವಾಲು- ಸಾಧ್ಯತೆಗಳೇನು?
ನಮ್ಮ ದೇಶದಲ್ಲಿ ಎಲ್ಲ ಸಂಶೋಧನೆಗಳಿಗೆ ಬೇಕಾದ ಪೂರಕ ವಾತಾವರಣ ಮೂಡಿಸಬೇಕಾದರೆ ವೆಚ್ಚವೂ ಹೆಚ್ಚು. ಸಂಶೋಧನಾ ವಿದ್ಯಾರ್ಥಿಗಳಿಗೆ ಅವಕಾಶಗಳು ನಮ್ಮದೇ ದೇಶದಲ್ಲಿ ಸಿಗುತ್ತದೆ ಎಂಬುದೂ ಕಷ್ಟ. ಅದರಿಂದ ಅವರು ವಿದೇಶಗಳಿಗೆ ಹೋಗುವ ಅನಿವಾರ್ಯತೆ ಇದೆ. ಎಲ್ಲ ಉಪಕರಣಗಳು ನಮ್ಮಲ್ಲಿ ಇಲ್ಲದ ಕಾರಣ ಹೊಂದಿಸಿಕೊಳ್ಳಲು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಆದರೆ ಮೇಕ್‌ ಇನ್‌ ಇಂಡಿಯಾ, ಇನ್‌ಕ್ಯುಬೇಶನ್‌ ಸೆಂಟರ್‌, ಇನ್‌ಸ್ಪೈರ್‌ ಅವಾರ್ಡ್‌ ಮುಂತಾದ ಯೋಜನೆಗಳು ಯಶಸ್ವಿಯಾದರೆ ನಮಗೆ ಬೇಕಾದ ಮಟ್ಟದ ವಿದ್ಯಾರ್ಥಿಗಳು ಮುಂದೆ ಸಿಗಬಹದು.

. ಅವಕಾಶಗಳ ಕೊರತೆಯಿಂದಾಗಿ ಸ್ವಂತ ಸಂಶೋಧನೆಗಿಂತ ಉದ್ಯೋಗದೆಡೆಗೆ ಒತ್ತು ಕೊಡುತ್ತಿದ್ದಾರೆ?
ಭಾರತೀಯ ವಿದ್ಯಾರ್ಥಿಗಳ ಮನೋಭಾವನೆ ಹೇಗಿರುತ್ತದೆ ಎಂದರೆ ಕಲಿಯುವುದು, ಪರಿಣತಿ ಪಡೆಯುವುದು, ಉದ್ಯೋಗ ಪಡೆಯುವುದು. ಅದರಿಂದಾಚೆಗಿನ ಹೊಸ ಸಾಧ್ಯತೆ, ಹೊಸ ಯೋಚನೆಗಳನ್ನು ಕಲಿಸುವಂತ ಪರಿಪಾಠ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲೂ ಇಲ್ಲ. ಪಠ್ಯದಾಚೆಗಿನ ಹೊಸತನಗಳನ್ನು ಕಲಿಸುವ ಮನೋಭೂಮಿಕೆ ಶಿಕ್ಷಣ ವ್ಯವಸ್ಥೆಯಲ್ಲೇ ರೂಪುಗೊಳ್ಳಬೇಕು. ಆದರೂ ಹಠ, ಸವಾಲುಗಳೊಂದಿಗೆ ಸಂಶೋಧನೆಯಲ್ಲಿ ಪಳಗಿಕೊಂಡವರೂ ಸಾಕಷ್ಟಿದ್ದಾರೆ.

. ವಿಜ್ಞಾನ ಕ್ಷೇತ್ರಕ್ಕೆ ಕಾಲಿಡುವ ಹೊಸಬರಿಗೆ ನಿಮ್ಮ ಸಲಹೆ?
ಬಾಹ್ಯಾಕಾಶ, ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿವೆ. ಸರಿಯಾಗಿ ಯೋಚಿಸಿ, ನಿರ್ಧರಿಸಿ. ಜತೆಗೆ ಬೇಕಾದ ಪೂರಕ ಪ್ರಯತ್ನ ಮಾಡಿ. ಯಾವ ಕ್ಷೇತ್ರ, ಯಾವ ಉದ್ಯೋಗ, ಯಾವ ಸಂಶೋಧನೆ ಅಂತ ನಿರ್ಧರಿಸಿ ಮುಂದೆ ಸಾಗಿ. ಜಗತ್ತಿನಲ್ಲೇ ನಾವು ಪ್ರಥಮ ಶ್ರೇಣಿಯಲ್ಲಿದ್ದೇವೆ ಅನ್ನಲು ಅಂತಹ ಪೂರಕ ವಾತಾವರಣ ರೂಪಿಸಬೇಕು. ಅದು ಯುವ ತಲೆಮಾರಿನಿಂದ ಸಾಧ್ಯ.

ಧನ್ಯಾ ಬಾಳೆಕಜೆ 

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.