ಕೊರಿಯೋಗ್ರಫಿ 


Team Udayavani, Dec 5, 2018, 1:06 PM IST

5-december-10.gif

ತಾಳಕ್ಕೆ ತಕ್ಕಂತೆ ದೇಹವನ್ನು ಬಳುಕಿಸಿ ನವರಸಗಳಿಂದ ಭಾವನೆಗಳನ್ನು ತಮ್ಮ ನೃತ್ಯದ ಮೂಲಕ ತೋರ್ಪಡಿಸುವ ವಿದ್ಯೆ ಡ್ಯಾನ್ಸ್‌ ಅಥವಾ ನೃತ್ಯ. ಟಿ.ವಿ.ಗಳಲ್ಲಿ ಬರುವಂತಹ ಡ್ಯಾನ್ಸ್‌ ರಿಯಾಲಿಟಿ ಶೋಗಳು ಆಸಕ್ತ ಹಲವು ಯುವಕರಿಗೆ ವೇದಿಕೆ ಕಲ್ಪಿಸಿದೆ. ಹೌದು, ಡ್ಯಾನ್ಸರ್‌, ಡ್ಯಾನ್ಸ್‌ ಮಾಸ್ಟರ್‌ ಆಗಬೇಕು, ಕೊರಿಯೋಗ್ರಫ‌ರ್‌ ಆಗಬೇಕು, ನೃತ್ಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಉತ್ಸಾಹಿಗಳಿಗೆ ಇದೊಂದು ಸುವರ್ಣಾವಕಾಶ. ಏಕೆಂದರೆ ಶಾಲೆ, ಕಾಲೇಜುಗಳಿಂದ ಹಿಡಿದು ಸಿನೆಮಾ, ಮ್ಯೂಸಿಕಲ್‌ ಥಿಯೇಟರ್‌, ಜಿಮ್ಮ್ಯಾಸ್ಟಿಕ್ , ಫ್ಯಾಶನ್‌ಶೋ, ಕ್ಲಬ್‌ ಹೀಗೆ ಎಲ್ಲವೂ ಡ್ಯಾನ್ಸ್‌ ಕ್ಷೇತ್ರವಾಗಿದೆ.

ಕಲಿಕೆ ಹೇಗೆ
ಮುಖ್ಯವಾಗಿ ಆಸಕ್ತಿ ಹಾಗೂ ಸಾಧಿಸುವ ಗುರಿ ಹೊಂದಿದವರು ಡ್ಯಾನ್ಸ್‌ ಕಲಿತು ತಮ್ಮ ಸಾಮರ್ಥ್ಯ ತೋರಿಸಬೇಕು. ಜತೆಗೆ ಡ್ಯಾನ್ಸ್‌ ಕ್ಷೇತ್ರದಲ್ಲಿ ಪ್ರಾವೀಣ್ಯತೆ ಪಡೆಯಬೇಕು. ವಿವಿಧ ಡ್ಯಾನ್ಸ್‌ ಮಾದರಿಗಳು, ಅವುಗಳ ಟೆಕ್ನಿಕ್‌, ಸ್ಟೆಪ್ಸ್‌, ಸ್ಟೈಲ್‌, ಲೀಡರ್‌ಶಿಪ್‌, ಕ್ರಿಯೇಟಿವಿಟಿ, ಡಿಸಿಪ್ಲಿನ್‌ ಇದ್ದರೆ ಒಳ್ಳೆಯ ಡ್ಯಾನ್ಸ್‌ ಕೊರಿಯೋಗ್ರಫ‌ರ್‌ ಆಗಬಹುದು. ಡ್ಯಾನ್ಸ್‌ ಕ್ಷೇತ್ರದಲ್ಲೇ ಮುಂದೆ ಹೋಗಬೇಕೆನ್ನುವವರಿಗೆ ಬ್ಯಾಚುಲರ್ಸ್   ಡಿಗ್ರಿಯನ್ನು ಡ್ಯಾನ್ಸ್‌ ಸ್ಟೈಲ್‌, ಡ್ಯಾನ್ಸ್‌ ಥಿಯರಿ, ಕಂಪೋಸಿಶನ್‌, ಮಾಸ್ಟರ್ ಪ್ರೋಗ್ರಾಂ ಕೊರಿಯೋಗ್ರಫ‌ರ್‌ ಎಂಬ ವಿಷಯಗಳಲ್ಲಿ ಮಾಡಬಹುದು. ಇದು ವೃತ್ತಿಯನ್ನಾಗಿಸುವವರಿಗೆ ಪೂರಕವಾಗಿದೆ.

ಆಸಕ್ತಿಯನ್ನು ಪ್ರವೃತ್ತಿಯನ್ನಾಗಿಸಿ
ಡ್ಯಾನ್ಸ್‌ ಮೇಲಿನ ಆಸಕ್ತಿ ಇರುವವರು ಹವ್ಯಾಸಿಯಾಗಿ ಈ ನೃತ್ಯಗಳನ್ನು ಕೊರಿಯೋಗ್ರಫಿ ಮಾಡುವವರಿದ್ದಾರೆ. ಅಂತಹವರು ಯಾವುದೇ ಡಿಗ್ರಿ ಇಲ್ಲದೆ ಸ್ವ ಕಲಿಕೆಯಿಂದ ಡ್ಯಾನ್ಸ್‌ ಕಾರ್ಯಕ್ರಮಗಳನ್ನು ನೀಡಿ ತಮ್ಮದೇ ಶೈಲಿಯನ್ನು ಪ್ರಚಾರ ಮಾಡಿ ಅದೆಷ್ಟೋ ಮಂದಿ ದೊಡ್ಡ ಕೊರಿಯೋಗ್ರಫ‌ರ್ ಆಗಿದ್ದಾರೆ.

ಯುವಕರಿಗೆ ಆದ್ಯತೆ
ಯುವಕರೇ ಇದರ ರೂವಾರಿಗಳಾಗಿರುತ್ತಾರೆ. ಆದ್ದರಿಂದ ಶಾಲೆ-ಕಾಲೇಜುಗಳಲ್ಲಿ ನಡೆಯುವ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಮುಂದೆ ಇದೇ ಕ್ಷೇತ್ರದಲ್ಲಿ ಮುಂದುವರಿಯಲು ಕೊರಿಯೋಗ್ರಫಿಯಿಂದ ಸಹಾಯಕವಾಗುತ್ತದೆ.

ಎಲ್ಲರಿಗೂ ಅವಕಾಶ
ಇದು ಆಸಕ್ತ ಎಲ್ಲರಿಗೂ ಅವಕಾಶವನ್ನು ಕಲ್ಪಿಸಿದೆ. ಡ್ಯಾನ್ಸರ್‌ ಒಳ್ಳೆಯ ಹೆಸರು ಗಳಿಸಿದರೆ ಮುಂದೆ ಸ್ವಂತ ಡ್ಯಾನ್ಸ್‌ ಕ್ಲಾಸ್‌ಗಳನ್ನು ಮಾಡಬಹುದು. ಅಥವಾ ಸಿನೆಮಾಗಳಿಗೆ ಕೊರಿಯೋಗ್ರಫ‌ರ್‌ ಆಗಿ ಕೆಲಸ ಮಾಡಬಹುದು. ಶಾಲೆ- ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡಬಹುದು. ಟಿವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಬಹುದು. ಪಾರ್ಟ್‌ ಟೈಮ್‌ ರೀತಿಯಲ್ಲೂ ಕೆಲಸ ನಿರ್ವಹಿಸಬಹುದು. ಇದರಿಂದ ಬೇರೆ ಕೆಲಸದ ಜತೆಗೆ ಬಾಕಿ ಉಳಿದ ಸಮಯದಲ್ಲಿ ತರಗತಿಗಳನ್ನು ನೀಡುವುದು ಅಥವಾ ಯಾವುದಾದರೂ ಕಾರ್ಯಕ್ರಮಗಳಿಗೆ ಕೊರಿಯೋಗ್ರಫಿ ಮಾಡುವುದನ್ನು ರೂಢಿಸಿಕೊಂಡರೆ ಉತ್ತಮ ಸಂಭಾವನೆ ಪಡೆಯಬಹುದು. ಒಟ್ಟಿನಲ್ಲಿ ಡ್ಯಾನ್ಸ್‌ ಬಲ್ಲವರಿಗೆ ಹೆಸರು ಗಳಿಸಿ ಗುರುತಿಸಲು ಇದು ಉತ್ತಮ ವೇದಿಕೆ.

 ಭರತ್‌ ರಾಜ್‌ ಕರ್ತಡ್ಕ

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.