ಗಾನ-ನಾಟ್ಯ-ಸಂಗೀತ ಸಂಗಮ
Team Udayavani, Jan 7, 2019, 10:08 AM IST
ಲಕ್ಷ್ಮೇಶ್ವರ: ಪುಲಿಗೆರೆ ಉತ್ಸವದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರಾದ ಬೆಂಗಳೂರಿನ ಭರತನಾಟ್ಯ ಪ್ರವೀಣ ಅಶೋಕ ಕುಮಾರ ಗರಡಿಯಲ್ಲಿ ಪ್ರಾವಿಣ್ಯತೆ ಹೊಂದಿದ ನಾಟ್ಯಾಂಜಲಿ ನೃತ್ಯಶಾಲೆ ಕಲಾವಿದರು ಪ್ರಸ್ತುತಪಡಿಸಿದ ಭರತನಾಟ್ಯ ನೆರೆದಿದ್ದ ಅಪಾರ ಪ್ರೇಕ್ಷಕರನ್ನು ಸೆಳೆಯಿತು. ಆರಂಭದಲ್ಲಿ ಕಾರ್ಯಕ್ರಮಕ್ಕೆ ಶುಭ ಕೋರುವ ಪುಷ್ಪಾಂಜಲಿ ನೃತ್ಯವನ್ನು ರಾಗ ಅಮೃತವರ್ಷಿಣಿ ಆದಿತಾಳದಲ್ಲಿ ಪ್ರಸ್ತುತಪಡಿಸಿದರು. ನಂತರ ವಿಘ್ನನಾಶಕ ಗಣಪತಿ ವಂದನೆ ಆರಭಿ ರಾಗದಲ್ಲಿ ನೃತ್ಯದ ಮೂಲಕ ಗಣಪತಿಯ ಆಶೀರ್ವಾದ ಕೇಳಿದ ಭಂಗಿಗೆ ಮನ ಸೋತರು. ಹೀಗೆ ವಿವಿಧ ರೀತಿಯ ಪ್ರದರ್ಶನ ನೀಡಿದರು.
ಸುಬೇಂದ್ರ ಜೈನ್, ಆದಿತಿ ಶೋಕ, ಸ್ಫೂರ್ತಿ ಅಶೋಕ, ಚಂದನಾ, ರೋಶನಿ, ವರ್ಷಿನಿ, ಸನ್ಮತಿ ಇವರು ಉತ್ಸವದ ಎರಡನೇ ದಿನಕ್ಕೆ ರಂಗು ತಂದರು. ಎರಡು ಗಂಟೆಗೂ ಅಧಿಕ ಕಾಲ ವಿವಿಧ ರೂಪಕ ಪ್ರಸ್ತುತಪಡಿಸಿದರು.
ಮಂತ್ರ ಮುಗ್ಧಗೊಳಿಸಿದ ಭರತನಾಟ್ಯ
ಲಕ್ಷ್ಮೇಶ್ವರ: ಪುಲಿಗೆರೆ ಉತ್ಸವದ ಎರಡನೇ ದಿನ ಸಂಜೆ ಬೆಂಗಳೂರಿನ ಪ್ರೀತಿ ಸುಂದರರಾಜನ್ ನೇತೃತ್ವದಲ್ಲಿ ಪ್ರಸ್ತುತ ಪಡಿಸಲ್ಪಟ್ಟ ಭರತನಾಟ್ಯದ ವಿವಿಧ ಭಂಗಿಗಳು ನೋಡುಗರನ್ನು ಮಂತ್ರ ಮುಗ್ಧಗೊಳಿಸಿತು.
ಗಣಪತಿ ಸ್ತುತಿಯೊಂದಿಗೆ ನೃತ್ಯ ಆರಂಭಿಸಿ ಪುಷ್ಪಾಂಜಲಿ ನೃತ್ಯ ಪ್ರಸ್ತುತಪಡಿಸಿದರು. ಶಿವಸ್ತುತಿಯನ್ನು ತಾಂ, ತಾಂ ಎನ್ನುತ್ತ ನೃತ್ಯ ಮಾಡುತ್ತ ಅಚ್ಚರಿಯ ರೀತಿಯಲ್ಲಿ ಹೆಜ್ಜೆಹಾಕಿ ಪ್ರೇಕ್ಷಕರಿಗೆ ಮುದ ನೀಡಿದರು. ನಂತರ ದಶಾವತಾರ, ಕೃಷ್ಣಾವತಾರದಲ್ಲಿ ಅದ್ಬುತವಾಗಿ ನೃತ್ಯ ಪ್ರದರ್ಶನ ನೀಡಿ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಚ್. ಆಂಜನೇಯ, ಎಂ.ಡಿ. ಲಕ್ಷ್ಮೀನಾರಾಯಣ ಅವರಿಗೆ ಎಂಎಲ್ಸಿ ಚುನಾವಣೆಗೆ ಅವಕಾಶ ನೀಡುವಂತೆ ಆಗ್ರಹ
ಭೀಕರ ರಸ್ತೆ ಅಪಘಾತ; ಬಿತ್ತನೆ ಬೀಜ ಖರೀದಿಸಲು ಬಂದಿದ್ದ ರೈತರಿಬ್ಬರು ಸ್ಥಳದಲ್ಲೇ ಮೃತ್ಯು
RTO ಅಧಿಕಾರಿಗಳಿಂದ ಬಸ್ ಸೀಜ್… ಗದಗದಲ್ಲಿ ಆಂಧ್ರ ಪ್ರವಾಸಿಗರ ಪರದಾಟ!
Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!
ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಹಾಳು ಮಾಡುತ್ತಿದೆ:ವಿ.ಪ. ಸದಸ್ಯ ಎಸ್.ವಿ. ಸಂಕನೂರ
MUST WATCH
ಹೊಸ ಸೇರ್ಪಡೆ
Legislative Council Polls; ಪದವೀಧರ ಮತದಾರರ ನಿರಾಸಕ್ತಿ!
Manipal: ಕೆಎಂಸಿ ಆಸ್ಪತ್ರೆಗೆ ಮತ್ತೊಂದು ಮನ್ನಣೆ
Rohini Sindhuri ವೇತನದಲ್ಲಿ 77 ಸಾವಿರ ರೂ. ಕಡಿತಕ್ಕೆ ಸರಕಾರದ ಕಾರ್ಯದರ್ಶಿಗೆ ಪತ್ರ
ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ, ಕ್ರಿಯಾಶೀಲವಾಗಿ ದುಡಿಯುವೆ: ರಘುಪತಿ ಭಟ್
ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್ ಅನುದಾನ ನೀಡಿಲ್ಲ; ಪ್ರತಾಪಸಿಂಹ ನಾಯಕ್