ಕುಂಕುಮ ಕೋಮಲೆ


Team Udayavani, Jan 16, 2019, 12:30 AM IST

w-3.jpg

ಈಗಿನ ಕುಂಕುಮಗಳು ತಕ್ಷಣವೇ ಅಳಿಸಿ ಹೋಗುವುದಿಲ್ಲ. ಮುಖಕ್ಕೆಲ್ಲ ಕುಂಕುಮದ ಬಣ್ಣ ಹರಡುವ ಆತಂಕವಿಲ್ಲ. ಬೇಕಾದಾಗ ಅಂಟಿಸಿ, ಬೇಡದಾಗ ತೆಗೆಯಬಹುದು…

ಕುಂಕುಮಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ತರವಾದ ಸ್ಥಾನವಿದೆ. ಭಾರತೀಯ ನಾರಿಗೆ ಕುಂಕುಮ ಹಣೆಯಲ್ಲಿ ಧರಿಸಿ ಸಂಭ್ರಮಿಸುವುದೇ ಖುಷಿಯ ಸಂತಸದ ಸಂಗತಿ. “ಅಟ್ಟದ ಮೇಲೆ ಪುಟ್ಟ ಲಕ್ಷ್ಮೀ’ ಎಂಬ ಒಗಟಿಗೆ ಉತ್ತರವಾದ ಕುಂಕುಮದ ಹೆಗ್ಗಳಿಕೆ, ಇತಿಹಾಸ, ಉಪಯೋಗ ಬಹಳ ಹಿರಿದು. ಹೆಣ್ಣಿಗೆ ಅಲಂಕಾರ ಭೂಷಣವಾಗಿರುವ ಕುಂಕುಮವನ್ನು ಮನೆಗೆ ಬಂದ ಮುತ್ತೈದೆಯರಿಗೆ ನೀಡುವುದು ಗೌರವದ, ಸತ್ಸಂಪ್ರದಾಯದ ಸಂಕೇತ. 

ಭಾರತದ ಹಲವೆಡೆ ಮದುವೆಯಾದ ಹೆಂಗಸರು ಬೈತಲೆ ಹತ್ತಿರ ಕೆಂಪು ಸಿಂಧೂರ ಇಡುವ ಪದ್ಧತಿ ಇದೆ. ಪೂಜೆ- ಪುನಸ್ಕಾರ, ಹೋಮ ಹವನಗಳಲ್ಲಿ, ಹಿಂದೂ ದೇವತೆಗಳ ಆರಾಧನೆಯಲ್ಲಿ ಹೆಚ್ಚಾಗಿ ಶಕ್ತಿದೇವತೆ, ಲಕ್ಷ್ಮೀ ಪೂಜೆಗಳ ಸಂದರ್ಭದಲ್ಲಿ ಕುಂಕುಮವನ್ನು ಹೆಚ್ಚಿನ ಪ್ರಮಾಣದಲ್ಲಿ ಭಕ್ತಿಯಿಂದ ಬಳಸಲಾಗುತ್ತದೆ. ಕುಂಕುಮದಲ್ಲಿ ದೈವೀಶಕ್ತಿ ತುಂಬಿರುವುದರಿಂದ ಧರಿಸಿದವರ ಮನಸ್ಸನ್ನು ಪರಿಶುದ್ಧಗೊಳಿಸುತ್ತದೆ. ಅಷ್ಟೇ ಅಲ್ಲ, ಕುಂಕುಮ ಯಾವುದೇ ಋಣಾತ್ಮಕ ಶಕ್ತಿಗಳ ಪ್ರವೇಶಕ್ಕೆ ಅವಕಾಶ ಕೊಡುವುದಿಲ್ಲವೆಂದು ನಂಬಿಕೆಯೂ ಇದೆ.

ಕುಂಕುಮ ಕೆಂಪು ಬಣ್ಣದ್ದಾದರೂ ಅದನ್ನು ತಯಾರಿಸುವುದು ಅರಿಶಿನ, ಸುಣ್ಣ  ಮತ್ತು ಎಣ್ಣೆಯನ್ನು ಬಳಸಿ. ಅದಕ್ಕೂ ಕಲಬೆರಕೆಯ ಗಾಳಿ ಸೋಕಿರುವುದು ಆತಂಕದ ಸಂಗತಿ. 50 ವರ್ಷಗಳ ಹಿಂದೆ ನಮ್ಮಮ್ಮ ಮಕ್ಕಳಿಗೆ ಹಣೆಗೆ ಇಡಲೆಂದು ಕಪ್ಪು ಸಾದು ಸ್ವತಃ ತಾನೇ ತಯಾರಿಸುತ್ತಿದ್ದರು. ಅಕ್ಕಿಯನ್ನು ಕಬ್ಬಿಣದ ಬಾಣಲೆಯಲ್ಲಿ ಕಪ್ಪಾಗುವವರೆಗೂ ಹುರಿದು ಅದನ್ನು ಬೆಲ್ಲದೊಂದಿಗೆ ಒರಳುಕಲ್ಲಿನಲ್ಲಿ ರುಬ್ಬಿ ಕುದಿಸಿ ಡಬ್ಬಿಗೆ ಹಾಕಿಡುತ್ತಿದ್ದರು. ಅದು ಅನೇಕ ತಿಂಗಳುಗಳವರೆಗೂ ಹಾಳಾಗದೆ ಹಾಗೇ ಇರುತ್ತಿತ್ತು. ಅದರಿಂದ ಚುಕ್ಕಿಚಿತ್ತಾರ, ಗುಂಡಗೆ, ತಿಲಕದ ರೀತಿ, ಕಡ್ಡಿಯಿಂದ ಉದ್ದಕ್ಕೆ… ಹೀಗೆಲ್ಲಾ ವಿಧ ವಿಧ ಆಕಾರ ಮತ್ತು ವಿನ್ಯಾಸಗಳನ್ನು ನಾನು ನನ್ನ ತಂಗಿಯಂದಿರು ಬಿಡಿಸಿ ಸಂಭ್ರಮಿಸುತ್ತಿದ್ದೆವು. ದಿನವಿಡೀ ಇದ್ದರೂ ಅಳಿಸಿಹೋಗದ ಅಂಟಾದ ಕಪ್ಪು ಸಾದಿನ ನಂಟು ಈಗ ನೆನಪಿನ ಗಂಟು!

ಇತ್ತೀಚಿನ ವರ್ಷಗಳಲ್ಲಿ ಹಣೆಗೆ ಕುಂಕುಮ ಇಡುವ ಸಂಪ್ರದಾಯ ಬಹಳವೇ ಕಡಿಮೆಯಾಗಿ ಬಿಂದಿ ಅಂಟಿಸಿಕೊಳ್ಳುವ ಸಂಸ್ಕೃತಿ ಬಂದಿದೆ. ಈಗಿನ ಕುಂಕುಮಗಳು ತಕ್ಷಣವೇ ಅಳಿಸಿ ಹೋಗುವುದಿಲ್ಲ. ಮುಖಕ್ಕೆಲ್ಲ ಕುಂಕುಮದ ಬಣ್ಣ ಹರಡುವ ಆತಂಕವಿಲ್ಲ. ಬೇಕಾದಾಗ ಅಂಟಿಸಿ, ಬೇಡದಾಗ ತೆಗೆಯಬಹುದು. ಬಳಕೆ ತುಂಬಾ ಸುಲಭ. ಅದರಲ್ಲಿಯೂ ಅಲರ್ಜಿಯಾಗುವ ಸಾಧ್ಯತೆಗಳಿವೆ. ಮೊದಲು ಕಪ್ಪು, ಕೆಂಪು ಬಣ್ಣಗಳಲ್ಲಿ ಮಾತ್ರ ದೊರೆಯುತ್ತಿದ್ದ ಬಿಂದಿ, ಬೊಟ್ಟು ಕ್ರಮೇಣ ನಾನಾ ಬಣ್ಣಗಳಲ್ಲಿ ವಿವಿಧ ಆಕಾರ ವಿನ್ಯಾಸ, ಮುತ್ತುಗಳಿಂದ ಅಲಂಕೃತ, ಬಣ್ಣದ ಹರಳುಗಳಿಂದ ಕೂಡಿದ ಸ್ಟಿಕ್ಕರ್‌ ಮಾದರಿಯಲ್ಲಿ ಸಿಗಲು ಶುರುವಾದವು. 

ಬದಲಾದ ಕಾಲದಲ್ಲೂ ಕುಂಕುಮ ಮಾರ್ಪಾಡುಗಳಿಗೆ ಒಳಗಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ಅದರ ಹೆಗ್ಗಳಿಕೆ. 

ಶಾರದಾ ಮೂರ್ತಿ

ಟಾಪ್ ನ್ಯೂಸ್

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.