ಒಂಟೆ- ಕುದುರೆ ರೇಸ್‌


Team Udayavani, Jan 31, 2019, 12:30 AM IST

z-7.jpg

ಕುದುರೆ ಮತ್ತು ಒಂಟೆ ಒಳ್ಳೆಯ ಗೆಳೆಯರಾಗಿದ್ದವು. ಜೊತೆಯಾಗಿ ಆಹಾರ ಹುಡುಕಿ ತಿನ್ನುತ್ತಿದ್ದವು. ಒಮ್ಮೆ ಕುದುರೆಯ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಿತು. “ನಮ್ಮಿಬ್ಬರಲ್ಲಿ ಯಾರು ಹೆಚ್ಚು?’ ಎಂದು ಅದು ಒಂಟೆಯನ್ನ ಕೇಳಿತು. ಅದಕ್ಕೆ ಒಂಟೆ “ಕುದುರೆಯಣ್ಣ, ನಾವಿಬ್ಬರೂ ಸಮಾನರಲ್ಲವೇ?’ ಎಂದು ಹೇಳಿತು. ಆ ಮಾತಿನಿಂದ ಕುದುರೆಗೆ ಸಮಾಧಾನವಾಗಲಿಲ್ಲ. ಆನೆಯನ್ನು ಕೇಲೋಣವೆಂದು ಕುದುರೆ ಒತ್ತಾಯ ಮಾಡಿತು. 

ಆನೆಯು ಸ್ವಲ್ಪ ಹೊತ್ತು ಯೋಚಿಸಿ “ತಮ್ಮಂದಿರಾ, ಯಾರು ಹೆಚ್ಚು ಎಂದು ಸುಮ್ಮನೆ ಹೇಳುವುದು ಸರಿಯಲ್ಲ. ನಿಮ್ಮಿಬ್ಬರಿಗೆಎರಡು ಬಾರಿ ಓಟದ ಸ್ಪರ್ಧೆ ಏರ್ಪಡಿಸೋಣ. ನಂತರ ತೀರ್ಮಾನಿಸೋಣ’ ಎಂದು ಸಲಹೆ ನೀಡಿತು. ಸ್ನೇಹಿತರಿಬ್ಬರೂ ಒಪ್ಪಿಕೊಂಡರು. 

ಗದ್ದೆಯಲ್ಲಿ ಓಟ ಶುರುವಾಯಿತು. ಕುದುರೆ ವೇಗವಾಗಿ ಓಡಿ ಮೊದಲು ಗುರಿ ಮುಟ್ಟಿತು. ಓಟದ ಸ್ಪರ್ಧೆಯಲ್ಲಿ ಗೆದ್ದ ಕುದುರೆಯು ಜಂಭದಿಂದ “ನೋಡಿದಿರಾ? ನಾನೇ ಗೆದ್ದೆ. ಈಗ ಗೊತ್ತಾಯಿತೇ, ಯಾರು ಹೆಚ್ಚು ಶಕ್ತಿವಂತರೆಂದು’ ಎಂದು ಬೀಗಿತು. ಆಗ ಆನೆಯು “ಕುದುರೆಯಣ್ಣ ಇನ್ನೂ ಒಂದು ಪಂದ್ಯ ಬಾಕಿ ಇದೆ. ನಂತರ ಹೇಳಬಹುದು ಯಾರು ಶಕ್ತಿವಂತರೆಂದು’ ಎಂದಿತು. 

ಎರಡನೇ ಓಟದ ಸ್ಪರ್ಧೆಯನ್ನು ಆನೆ ಮರಳಿನಲ್ಲಿ ಆಯೋಜಿಸಿತು. ಈ ಬಾರಿ ಕುದುರೆಗೆ ಮಿಳಿನ ಮೇಲೆ ಓಡಲಾಗಲೇ ಇಲ್ಲ. ಒಂಟೆಯೇ ಸರಾಗವಾಗಿ ಓಡಿ ಗೆದ್ದುಬಿಟ್ಟಿತು. ಸೋತ ಕುದುರೆಗೆ ತನ್ನ ತಪ್ಪಿನ ಅರಿವಾಯಿತು. ಅದು ಆನೆ ಮತ್ತು ಒಂಟೆಯ ಹತ್ತಿರ ಕ್ಷಮೆ ಕೇಳಿತು. ಆನೆ “ನಿಮ್ಮಲ್ಲಿ ಯಾರೂ, ಹೆಚ್ಚು ಶಕ್ತಿವಂತರಲ್ಲ ಯಾರೂ ಬಲಹೀನರೂ ಅಲ್ಲ. ಪ್ರತಿಯೊಬ್ಬರಲ್ಲೂ ಅವರದೇ ಆದ ವಿಶೇಷತೆಯಿರುತ್ತದೆ. ಗೆಳೆತನದ ಆನಂದವನ್ನು ಹಂಚಿಕೊಂಡು ಬಾಳಿರಿ’ ಎಂದು ಹೇಳಿತು. ಕುದುರೆ ಮತ್ತು ಒಂಟೆ ಆನೆಗೆ ಧನ್ಯವಾದಗಳನ್ನು ತಿಳಿಸಿದವು.  

ಉಮ್ಮೆ ಕೆ. ಅಸ್ಮಾ

ಟಾಪ್ ನ್ಯೂಸ್

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.