ಮಹೇಂದ್ರ ಕುಮಾರ್ ಖುಲಾಸೆ
Team Udayavani, Feb 7, 2019, 12:35 AM IST
ಮಂಗಳೂರು: ಹತ್ತು ವರ್ಷಗಳ ಹಿಂದೆ ಕ್ರೈಸ್ತ ಧಾರ್ಮಿಕ ಕೇಂದ್ರಗಳ ಮೇಲೆ ನಡೆದಿದ್ದ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆಗ ಬಜರಂಗದಳದ ರಾಜ್ಯ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್ ಅವರನ್ನು ಮಂಗಳೂರಿನ ಜೆಎಂಎಫ್ಸಿ 2ನೇ ನ್ಯಾಯಾಲಯದ ನ್ಯಾಯಾಧೀಶರಾದ ಮಹೇಶ್ ಬಿ. ಟಿ. ಬುಧವಾರ ಖುಲಾಸೆಗೊಳಿಸಿದ್ದಾರೆ.
2008ರ ಸೆ. 14ರಂದು ಬೆಳಗ್ಗೆ 10.10ಕ್ಕೆ ಮಂಗಳೂರಿನ ಫಳ್ನೀರ್ ರಸ್ತೆಯ ಎಡೋರೇಶನ್ ಮೊನಾಸ್ಟರಿಯಲ್ಲಿ ಕ್ರೈಸ್ತ ಧರ್ಮದವರು ಮೌನ ಪ್ರಾರ್ಥನೆ ಮಾಡುತ್ತಿದ್ದಾಗ 10ರಿಂದ 15 ಜನರು ಅಕ್ರಮ ಪ್ರವೇಶ ಮಾಡಿ ಮರದ ದೊಣ್ಣೆಯಿಂದ ಮಂದಿರದ ಕಿಟಿಕಿ ಗಾಜು ಇತ್ಯಾದಿಗಳನ್ನು ಹಾಗೂ ಪರಮ ಪ್ರಸಾದ ಮತ್ತು ಏಸು ಕ್ರಿಸ್ತ ದೇವರ ವಿಗ್ರಹದ ಎಡಗೈಯನ್ನು ತುಂಡರಿಸಿದ್ದಲ್ಲದೆ ಕೆಲವರಿಗೆ ಹೊಡೆದು, ಕಾರುಗಳನ್ನು ಹಾನಿ ಮಾಡಿ ಕ್ರೈಸ್ತಧರ್ಮದ ಕೋಮು ಸೌಹಾರ್ದಕ್ಕೆ ಧಕ್ಕೆ ಮಾಡುವ ಪ್ರಯತ್ನ ನಡೆಸಿದ್ದರು. ಅಲ್ಲಿ ಅಶಾಂತಿಯ ವಾತಾವರಣ ನಿರ್ಮಿಸಿ ಮಂಗಳೂರು ನಗರ,ಬಂಟ್ವಾಳ, ಬೆಳ್ತಂಗಡಿ ಮತ್ತು ಉಡುಪಿ ಜಿಲ್ಲೆಯಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ಮಾಡಿರುವುದಾಗಿ ಆರೋಪಿಸಲಾಗಿತ್ತು.
ಅದೇ ದಿನ ಪತ್ರಿಕಾಗೋಷ್ಠಿ ಕರೆದು ಘಟನೆಯನ್ನು ಸಮರ್ಥಿಸಿ ಹೇಳಿಕೆ ನೀಡಿದ್ದ ಆರೋಪ ಮಹೇಂದ್ರ ಕುಮಾರ್ ಮೇಲಿತ್ತು.
ಈ ಪ್ರಕರಣದಲ್ಲಿ ಕೆಲವು ಪತ್ರಿಕಾ ವರದಿಗಾರರ ಸಹಿತ ಒಟ್ಟು 12 ಜನ ಸಾಕ್ಷಿ ನುಡಿದಿದ್ದರು. ಮಹೇಂದ್ರಕುಮಾರ್ ಅವರನ್ನು ಆಗಿನ ಸಿಸಿಬಿ ಇನ್ಸ್ಪೆಕ್ಟರ್ ವೆಂಕಟೇಶ್ ಪ್ರಸನ್ನ ಬಂಧಿಸಿದ್ದರು. ಸರಕಾರ ಈ ಪ್ರಕರಣವನ್ನು ಸಿಒಡಿಗೆ ವರ್ಗಾಯಿಸಿದ್ದರಿಂದ ಸಿಒಡಿ ಇನ್ಸ್ ಪೆಕ್ಟರ್ ಪರಶಿವಮೂರ್ತಿ ಮತ್ತು ಸುಶೀಲಾ ಅವರು ತನಿಖೆ ನಡೆಸಿ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.
ಮಹೇಂದ್ರಕುಮಾರ್ ಪರ ವಾದಿಸಿದ್ದ ರಾಜೇಶ್ ಅಮಾrಡಿ ಅವರು,”ಆರೋಪಿಗೆ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುವ ಯಾವುದೇ ಉದ್ದೇಶವಿರಲಿಲ್ಲ. ಅವರು ಕೇವಲ ಮತಾಂತರಿಗಳ ಬಗ್ಗೆ ಮಾತ್ರ ಮಾತನಾಡಿದ್ದು,ಕ್ರಿಶ್ಚಿಯನ್ ಧರ್ಮದ ಮೇಲೆ ಹಾಗೂ ಅವರ ಸಮಾ ಜ ಸೇವೆ ಬಗ್ಗೆ ತುಂಬಾ ಗೌರವವಿದೆ ಎಂದು ಹೇಳಿಕೆ ನೀಡಿದ್ದರು’ ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಕಾರು ಅಪಘಾತ; ಅಪಾಯದಿಂದ ಪಾರಾದ ಚನ್ನವೀರ ಶಿವಾಚಾರ್ಯರು
Bidar; ಘಾತುಕ ಶಕ್ತಿಗಳಿಗೆ ಪೊಲೀಸ್ ಠಾಣೆಯಲ್ಲಿ ರಾಜ ಮರ್ಯಾದೆ ಸಿಗುತ್ತಿದೆ: ಬೊಮ್ಮಾಯಿ
Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!
Swindon Borough ಕೌನ್ಸಿಲ್ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ
W.Bengal; ಬಿಜೆಪಿ ಅಭ್ಯರ್ಥಿಗೆ 24 ಗಂಟೆ ಕಾಲ ಪ್ರಚಾರ ಮಾಡದಂತೆ ತಡೆ ನೀಡಿದ ಚುಣಾವಣಾ ಆಯೋಗ