ಸ್ನೇಹ ಪರೀಕ್ಷೆ


Team Udayavani, Feb 14, 2019, 12:30 AM IST

f-5.jpg

ಸುದೀಪ್‌ ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿದ್ದ ಹುಡುಗ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದ. ತನಗೆ ಶಿಕ್ಷಕರಿಂದ ಸಿಗುವ ಗೌರವವನ್ನು ಕಂಡು ಅವನಲ್ಲಿ ಅಹಂ ಮನೆ ಮಾಡಿತು. ಗೆಳೆಯರೆಲ್ಲರೂ ತನಗೆ ಗೌರವ ಕೊಡಬೇಕೆಂದು ಅಪೇಕ್ಷಿಸಿದ. ಕಲಿಕೆಯಲ್ಲಿ ಜಾಣರಾದವರು, ಶ್ರೀಮಂತ ಕುಟುಂಬದಿಂದ ಬಂದವರ ಬಳಿ ಮಾತ್ರ ಅವನು ಸ್ನೇಹದಿಂದಿರುತ್ತಿದ್ದ. ಉಳಿದವರನ್ನೆಲ್ಲಾ ತಾತ್ಸಾರದಿಂದ ನೋಡುತ್ತಿದ್ದ. ಅವರೊಂದಿಗೆ ಮಾತನ್ನೂ ಆಡುತ್ತಿರಲಿಲ್ಲ. ತರಗತಿಯಲ್ಲಿ ಸುದೀಪನಿಗೆ ಸುಮಂತನನ್ನು ಕಂಡರೆ ಆಗುತ್ತಿರಲಿಲ್ಲ, ಸುಮಂತ್‌ ಬಡತನದ ಹಿನ್ನೆಲೆಯಿಂದ ಬಂದವನಾಗಿದ್ದನು. ಕಲಿಕೆಯಲ್ಲೂ ಸಾಮಾನ್ಯನಾಗಿದ್ದ. ಆದರೆ ಸುದೀಪನಿಗಿಂತ ಹೆಚ್ಚಿನ  ಗೆಳೆಯರು ಸುಮಂತನಿಗಿದ್ದರು. ಅವನ ಪರೋಪಕಾರಿ ಗುಣ, ಸ್ನೇಹಕ್ಕೆ ಮಾರು ಹೋದ ಅನೇಕರು ಸುಮಂತನ ಗೆಳೆಯರಾಗಿದ್ದರು. 

ಒಂದು ದಿನ ಮಳೆ ಜೋರಾಗಿ ಸುರಿದಿತ್ತು. ಶಾಲೆಯಿಂದ ಸ್ವಲ್ಪ ದೂರದಲ್ಲಿರುವ ಹಳ್ಳ ತುಂಬಿ ಹರಿಯುತ್ತಿತ್ತು. ಸಂಜೆ ಶಾಲೆ ಬಿಟ್ಟಾಗ ಸುದೀಪ್‌ ಹಾಗೂ ಇನ್ನು ಕೆಲವು ಹುಡುಗರು ನೀರು ನೋಡಲು ಹೋದರು. ನೀರು ನೋಡುವ ಉತ್ಸಾಹದಲ್ಲಿ ಮುಂದಕ್ಕೆ ಬಾಗಿದ ಸುದೀಪ್‌ ಆಯತಪ್ಪಿ ನೀರಿಗೆ ಬಿದ್ದು ಬಿಟ್ಟ. ಅವನ ಗೆಳೆಯರು ಭಯದಿಂದ ಓಟಕಿತ್ತರೇ ವಿನಃ ಯಾರೊಬ್ಬರೂ ಆತನನ್ನು ರಕ್ಷಿಸಲು ಮುಂದಾಗಲಿಲ್ಲ. ಅಷ್ಟರಲ್ಲಿ ಯಾರೋ ಒಬ್ಬರು ಓಡಿ ಬಂದು ನೀರಿಗೆ ಧುಮುಕಿದರು. ಸುದೀಪನನ್ನು ಎಳೆದು ದಡಕ್ಕೆ ತಂದರು. ಅದು ಬೇರಾರೂ ಅಲ್ಲ ಸುಮಂತ್‌. ವಿಜ್ಞಾನ ಶಿಕ್ಷಕರು ತರಗತಿಯಲ್ಲಿ ಹೇಳಿಕೊಟ್ಟಿದ್ದ ಪ್ರಥಮ ಚಿಕಿತ್ಸೆ  ಸುಮಂತ್‌ಗೆ ನೆನಪಿತ್ತು. ಅದರ ಸಹಾಯದಿಂದ ಉಸಿರಾಡಲು ಕಷ್ಟ ಪಡುತ್ತಿದ್ದ ಸುದೀಪನಿಗೆ ಕೃತಕ ಉಸಿರಾಟ ನೀಡಿದ. ನಿಧಾನವಾಗಿ ಸುದೀಪ್‌ ಕಣ್ತೆರೆದ. ಅವನ ಕಣ್ಣಿಂದ ಪಶ್ಚಾತ್ತಾಪದ ಹನಿಗಳು ಉರುಳಿದವು. ಸುಮಂತನನ್ನು ಆತ್ಮೀಯತೆಯಿಂದ ಅಪ್ಪಿಕೊಂಡ. ಗೆಳೆತನಕ್ಕೆ ಯಾವ ಸಂಕೋಲೆಗಳೂ ಇರಬಾರದು ಎನ್ನುವುದು ಸುದೀಪನಿಗೆ ಅರ್ಥವಾಗಿತ್ತು.

ಜೆಸ್ಸಿ ಪಿ.ವಿ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.