ಕಾಂತಾವರ: ಚಿರತೆ ದಾಳಿ,ಸೆರೆ
Team Udayavani, Feb 16, 2019, 12:35 AM IST
ಬೆಳ್ಮಣ್: ಕಾರ್ಕಳ ತಾಲೂಕಿನ ಕಾಂತಾವರ ದೇಗುಲದ ಪಕ್ಕದ ಅಂಬಲಪದವು ಎಂಬಲ್ಲಿ ಶುಕ್ರವಾರ ಚಿರತೆಯೊಂದು
ಇಬ್ಬರ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದು, ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಕೊನೆಗೂ ಚಿರತೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿರತೆಯನ್ನು ಪಿಲಿಕುಳ ನಿಸರ್ಗಧಾಮಕ್ಕೆ ಒಯ್ಯಲಾಗಿದೆ. ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶುಕ್ರವಾರ ಬೆಳಗ್ಗೆ ಸ್ಥಳೀಯ ನಿವಾಸಿ ಸುಂದರ ಪೂಜಾರಿ ಅವರ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದ ಚಿರತೆ ಸುಮಾರು 10 ಗಂಟೆ ಹೊತ್ತಿಗೆ ಮೀನ ಪೂಜಾರಿ¤ ಎಂಬವರ ಮೇಲೂ ದಾಳಿ ನಡೆಸಿತ್ತು. ಈ ಚಿರತೆ ಕಳೆದ ಮೂರು-ನಾಲ್ಕು ದಿನಗಳಿಂದ ಈ ಪರಸರದಲ್ಲಿ ಓಡಾಡುತ್ತಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಹಿಂದೆಯೂ ಚಿರತೆಯ ಬಂಧನಕ್ಕೆ ಬೋನು ಅಳವಡಿಸಿದ್ದರೂ ಯಶಸ್ವಿಯಾಗಿರಲಿಲ್ಲ.
ಅರಣ್ಯ ಇಲಾಖೆಯ ಎಸಿಎಫ್ ಅಜ್ಜಪ್ಪ, ಮೂಡಬಿದ್ರೆ ರೇಂಜ್ ಆಫೀಸರ್ ಪ್ರಕಾಶ್ ಪೂಜಾರಿ, ಇಲಾಖೆಯ ಅಶ್ವಿತ್, ಮಂಜುನಾಥ, ಕಾಂತಾವರ ಗ್ರಾ.ಪಂ. ಅಧ್ಯಕ್ಷ ರಾಜೇಶ್ ಕೋಟ್ಯಾನ್, ಮಾಜಿ ಅಧ್ಯಕ್ಷ ಜಯ ಕೋಟ್ಯಾನ್, ಗ್ರಾಮಸ್ಥರಾದ ಭರತ್, ನಿತೇಶ್, ಲೋಕೇಶ್, ವಾಸು ಶೆಟ್ಟಿ, ಗುರುಪ್ರಸಾದ್ ಸಹಿತ ನೂರಾರು ಮಂದಿ ಚಿರತೆಯ ಬಂಧನಕ್ಕೆ ಸಹಕರಿಸಿದ್ದರು.
ಉರುಳಿಗೆ ಬಿದ್ದ ಚಿರತೆ ಸಾವು
ಮಣಿಪಾಲ: ಪೆರ್ಣಂಕಿಲ ಸಮೀಪದ ಅಂಗಾರಕಟ್ಟೆ ಕೇನೆಕುಂಜದಲ್ಲಿ ಶುಕ್ರವಾರ ಉರುಳಿಗೆ ಬಿದ್ದಿದ್ದ 4 ವರ್ಷ ಪ್ರಾಯದ ಹೆಣ್ಣು ಚಿರತೆಯನ್ನು ಅರಣ್ಯ ಇಲಾಖೆ ಸಿಬಂದಿ ಉರುಳಿನಿಂದ ಬಿಡಿಸಿ ಸೆರೆ ಹಿಡಿಯುವ ಪ್ರಯತ್ನದ ವೇಳೆ ಮೃತಪಟ್ಟಿದೆ. ಚಿರತೆಯ ಸೊಂಟದ ಭಾಗ ಉರುಳಿನಲ್ಲಿ ಸಿಲುಕಿಕೊಂಡಿತ್ತು. ಅರಿವಳಿಕೆ ತಜ್ಞರು ಲಭ್ಯರಾಗದ್ದರಿಂದ ಇಲಾಖೆ ಸಿಬಂದಿಗೆ ಸುಲಭವಾಗಿ ಬಿಡಿಸಲು ಸಾಧ್ಯವಾಗಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.