ಸಾಗರದೊಳಗಿನ ತೆಂಗಿನಕಾಯಿ


Team Udayavani, Feb 28, 2019, 12:30 AM IST

4.jpg

ಹಿಂದೂ ಮಹಾಸಾಗರದ ಆಳದಲ್ಲಿ ಕೈಗೆ ಸಿಕ್ಕಿದ ಇದರ ಗಿಡಗಳನ್ನು ಹಡಗುಗಳ ನಾವಿಕರು ಕಂಡು “ನೀರಿನೊಳಗಿನ ತೆಂಗಿನಕಾಯಿ’ ಅಂದರೆ “ಕೋಕೊ ಡಿ ಮರ್‌’ ಎಂದು ಕರೆದರು.

ಸಸ್ಯ ಪ್ರಪಂಚದಲ್ಲಿ ಇಷ್ಟು ದೊಡ್ಡ ಬೀಜ ಬೇರೊಂದಿಲ್ಲ. ಸಾಮಾನ್ಯವಾಗಿ ಒಂದು ಬೀಜ ಹದಿನೇಳರಿಂದ ಮೂವತ್ತು ಕಿಲೋ ತನಕ ತೂಗುವುದಾದರೆ ಅಪರೂಪವಾಗಿ ದಾಖಲೆ ಮಾಡಿದ ಒಂದು ಬೀಜ 42 ಕಿಲೋ ತೂಕವಾಗಿದ್ದೂ ಉಂಟು. ಇದು ತೆಂಗಿನ ಮರದ ಜಾತಿಗೆ ಸೇರಿದ “ಕೋಕೊ ಡಿ ಮರ್‌’ ಎಂಬ ಮರದ ಬೀಜ. ಹೊರಭಾಗದಲ್ಲಿ ತೆಂಗಿನಕಾಯಿಯ ಹಾಗೆ ಕಾಣುತ್ತದೆ. ಸಿಪ್ಪೆಯನ್ನು ಸುಲಿದರೆ ಒಳಗೆ ವಿಚಿತ್ರ ಆಕೃತಿಯಲ್ಲಿ ಎರಡಾಗಿ ಜೋಡಿಕೊಂಡ ಅಗಾಧ ಗಾತ್ರದ ಬೀಜವಿದೆ. ಹೆಚ್ಚಾಗಿ ಎರಡಾಗಿ ಸೇರಿದ ಒಂದೇ ಬೀಜ ಒಳಗಿರುವುದಾದರೂ ಕೆಲವೊಮ್ಮೆ ನಾಲ್ಕು ಬೀಜಗಳು ಜೋಡಿಕೊಂಡ ಆಕೃತಿಯೂ ಇರುವುದುಂಟು.

ಇದಿರುವುದು ಎಲ್ಲಿ?
ಸೆಶಲ್ಸ್‌ ದ್ವೀಪ ಸಮುದಾಯದ ಪ್ರಸ್ಲಿನ್‌ ಮತ್ತು ಕ್ಯುರಿಯನ್‌ ದ್ವೀಪಗಳಲ್ಲಿ ಕೋಕೊ ಡಿ ಮರ್‌ ಮರಗಳಿವೆ. ಸಸ್ಯ ಶಾಸ್ತ್ರೀಯವಾಗಿ ಲೊಡೊಸೈ ಮಾಲ್ಡಿವಿಕಾ ಎಂದು ಹೆಸರಿರುವ ಈ ಮರ ಗರಿಷ್ಠ ಮೂವತ್ತು ಮೀಟರ್‌ ಎತ್ತರ ಬೆಳೆಯುತ್ತದೆ. ಅದರ ಗರಿಗಳು ಐದು ಮೀಟರ್‌ ಉದ್ದವಿರುತ್ತವೆ. ಹನ್ನೊಂದನೆಯ ವರ್ಷದಲ್ಲಿ ಮರ ಹೂ ಬಿಡುತ್ತದೆ. 

ಈ ವಿಶಿಷ್ಟ ಬೀಜ ನೆಲದಲ್ಲಿ ಹುಟ್ಟುವುದಿಲ್ಲ. ಕಾಯಿಗಳು ಸಮುದ್ರವನ್ನು ಸೇರಿದಾಗ ಭಾರ ಮತ್ತು ಸಾಂದ್ರತೆಯ ಕಾರಣದಿಂದ ತೇಲದೆ ಮುಳುಗುತ್ತವೆ. ನೀರಿನಾಳದಲ್ಲಿ ಸಿಪ್ಪೆಗಳು ಕೊಳೆತು ಬೀಜವು ಮೊಳಕೆಯೊಡೆಯುತ್ತದೆ. ಹಿಂದೂ ಮಹಾಸಾಗರದ ಆಳದಲ್ಲಿ ಕೈಗೆ ಸಿಕ್ಕಿದ ಇದರ ಗಿಡಗಳನ್ನು ಹಡಗುಗಳ ನಾವಿಕರು ಕಂಡು “ನೀರಿನೊಳಗಿನ ತೆಂಗಿನಕಾಯಿ’, ಅಂದರೆ “ಕೋಕೊ ಡಿ ಮರ್‌’ ಎಂದು ಕರೆದರು.

ಅದೃಷ್ಟದ ಮರವೂ ಹೌದು
ಕೋಕೊ ಡಿ ಮರ್‌ ಆಹಾರವಾಗಿ ನಿಷೇಧಿತವಾಗಿದ್ದರೂ ಕಳ್ಳಸಾಗಣೆಯ ಮೂಲಕ ವಿದೇಶಗಳಿಗೆ ಹೋಗಿ ಒಂದೊಂದು ಬೀಜವೂ ಲಕ್ಷಾಂತರ ಹಣ ಗಳಿಸುತ್ತದೆ. ಇದನ್ನು ಆಭರಣದಂತೆ ಕುತ್ತಿಗೆಗೆ ಕಟ್ಟಿಕೊಂಡರೆ ಅದೃಷ್ಟ ಖುಲಾಯಿಸುತ್ತದೆಂಬ ನಂಬಿಕೆಯಿದೆ. ಧನಿಕರು ಸಿರಿತನ ಹೆಚ್ಚಲೆಂದು ಹಣದ ತಿಜೋರಿಗಳಲ್ಲಿಡುತ್ತಾರೆ. ಅಂಥವರಲ್ಲಿ ರೋಮನ್‌ ಚಕ್ರವರ್ತಿ ಎರಡನೆಯ ರುಡಾಲ್ಫ್ ಕೂಡ ಒಬ್ಬ. ಯುನೆಸ್ಕೋ ರಕ್ಷಿಸಲೇಬೇಕಾದ ವಿಶ್ವ ಪರಂಪರೆಯ ಸಸ್ಯವೆಂದು ಕೋಕೊ ಡಿ ಮರ್‌ ಮರವನ್ನು ಗುರುತಿಸಿದ ಕಾರಣ ಅದರ ಬೀಜಗಳನ್ನು ಬೇರೆ ದೇಶಗಳಿಗೆ ಒಯ್ಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇಂತಹ ಅಪರಾಧವೆಸಗುವವರಿಗೆ ಐದು ಸಾವಿರ ಡಾಲರ್‌ ದಂಡ ಮತ್ತು ಐದು ವರ್ಷ ಶಿಕ್ಷೆ ವಿಧಿಸಲಾಗುತ್ತಿದೆ. ಆದರೂ ಈ ಅದ್ಭುತ ಬೀಜದ ವ್ಯಾಮೋಹ ಜನರನ್ನು ಬಿಟ್ಟಿಲ್ಲ.

ಗಂಡು ಹೆಣ್ಣು ಸಸ್ಯಗಳು
ಇದರಲ್ಲಿ ಹೆಣ್ಣು ಮತ್ತು ಗಂಡು ಎಂಬ ಎರಡು ಜಾತಿಗಳಿವೆ. ಗಂಡು ಮರ ಹೂ ಮಾತ್ರ ಬಿಡುತ್ತದೆ. ಹೆಣ್ಣು ಮರದಲ್ಲಿ ಕಾಯಿಗಳಾಗುತ್ತವೆ. ಮಳೆ, ಚಂಡಮಾರುತ, ಸಿಡಿಲು ಮಿಂಚುಗಳ ಮೂಲಕ ಗಂಡುಹೂವಿನ ಪರಾಗಕಣಗಳು ಹೆಣ್ಣು ಹೂವಿನಲ್ಲಿ ಸೇರಿ ಕಾಯಿಗಳಾಗುವಂತೆ ನಿಸರ್ಗ ನಿಯಮವನ್ನು ರೂಪಿಸಿದೆ. ಹೂ ಬಿಟ್ಟು ಮೂರು ವರ್ಷಗಳ ತನಕ ಕಾಯಿ ಬೆಳೆಯಲು ಕಾಯಬೇಕು.

ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.