ಸೇನೆಗೆ ಚಿನೂಕ್ ಬಲ
Team Udayavani, Mar 26, 2019, 6:00 AM IST
ಚಿನೂಕ್ ಹೆಲಿಕಾಪ್ಟರ್ನಲ್ಲಿ ಏರ್ಚೀಫ್ ಮಾರ್ಷಲ್ ಬೀರೇಂದ್ರ ಸಿಂಗ್ ಧನೋವಾ.
ಚಂಡಿಗಢ: ಅಮೆರಿಕದ ಬೋಯಿಂಗ್ ನಿರ್ಮಿಸಿದ ನಾಲ್ಕು ಚಿನೂಕ್ ಹೆಲಿಕಾಪ್ಟರ್ಗಳನ್ನು ವಾಯು ಪಡೆಗೆ ಸೋಮವಾರ ನಿಯೋಜನೆ ಮಾಡಲಾಗಿದೆ. ರಫೇಲ್ ಯುದ್ಧವಿಮಾನ ಗಳಂತೆಯೇ ಇದು ಕೂಡ ಸೇನೆ ಯಲ್ಲಿ ಮಹತ್ವದ ನಿಯೋಜನೆ ಎಂದು ವಾಯು ಪಡೆ ಮುಖ್ಯಸ್ಥ ಬಿ.ಎಸ್. ಧನೋವಾ ಹೇಳಿದ್ದಾರೆ. 2015 ಸೆಪ್ಟಂಬರ್ನಲ್ಲಿ ಒಟ್ಟು 126 ಕಾಪ್ಟರ್ ಗಳನ್ನು ಖರೀದಿಸಲು ನಿರ್ಧರಿಸಲಾಗಿತ್ತು. ಈ ಪೈಕಿ ಮೊದಲ ನಾಲ್ಕು ಕಾಪ್ಟರ್ಗಳು ವಾಯುಪಡೆಗೆ ಈಗ ಲಭ್ಯವಾಗಿವೆ.
ಎರಡು ಎಂಜಿನ್ ಹಾಗೂ ರೋಟರ್ ಹೊಂದಿ ರುವ ಈ ಕಾಪ್ಟರ್ಗಳು ಅಡ್ಡಲಾಗಿರುವ ಪ್ಲಾಟ್ಫಾರಂನಿಂದಲೂ ಹಾರಬಲ್ಲವು. ಹೀಗಾಗಿ ಇದನ್ನು ಸೇನೆ ಸಿಬಂದಿ, ಶಸ್ತ್ರಾಸ್ತ್ರ ಮತ್ತು ಇಂಧನ ಸಾಗಣೆಗೆ ಬಳಸಬಹುದಾಗಿದೆ. ಅಷ್ಟೇ ಅಲ್ಲ, ರಾತ್ರಿಯಲ್ಲೂ ಈ ಚಿನೂಕ್ ಕಾಪ್ಟರ್ಗಳ ಮೂಲಕ ಸೇನಾ ಕಾರ್ಯಾಚರಣೆ ನಡೆಸಬಹುದಾಗಿದೆ. ನಮ್ಮಲ್ಲಿ ವಿವಿಧ ರೀತಿಯ ಭೂಭಾಗಗಳಿವೆ. ಹೀಗಾಗಿ ನಮಗೆ ಅಡ್ಡಲಾಗಿರುವ ಪ್ಲಾಟ್ಫಾರಂನಿಂದಲೂ ಹಾರಾಟ ನಡೆಸಬಹುದಾದ ಕಾಪ್ಟರ್ಗಳ ಅಗತ್ಯವಿತ್ತು. ಈ ಕಾಪ್ಟರ್ನಿಂದಾಗಿ ಸೇನೆಗೆ ಅತ್ಯಂತ ಸಂಕಷ್ಟದ ಸಮಯದಲ್ಲೂ ಸಿಬಂದಿ ಹಾಗೂ ಶಸ್ತ್ರಾಸ್ತ್ರಗಳನ್ನು ಸಾಗಿಸಲು ಮತ್ತು ತುರ್ತು ರಕ್ಷಣಾ ಕಾರ್ಯಾಚರಣೆಗೆ ಸಹಾಯವಾಗಲಿದೆ.
ಇದು ಭಾರಿ ತೂಕವನ್ನು ಸಾಗಿಸಬಹುದಾದ ಸಾಮರ್ಥ್ಯ ಹೊಂದಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಈ ಹಿಂದೆ ಉತ್ತರಾ ಖಂಡ ಮತ್ತು ಇತರ ಭಾಗಗಳಲ್ಲಿ ನೈಸರ್ಗಿಕ ವಿಪತ್ತು ಸಂಭವಿಸಿದಾಗ ಭಾರಿ ಪ್ರಮಾಣದ ರಕ್ಷಣಾ ಸಾಮಗ್ರಿ ಗಳನ್ನು ಸಾಗಿಸುವ ಅಗತ್ಯವಿತ್ತು. ಇದಕ್ಕಾಗಿ ನಾವು ರಸ್ತೆಗಳನ್ನೇ ಅವಲಂಬಿಸಬೇಕಾಗಿತ್ತು. ಆದರೆ ಚಿನೂಕ್ನಿಂದಾಗಿ ವಿಪತ್ತಿನ ಸನ್ನಿವೇಶದಲ್ಲಿ ರಸ್ತೆಯ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಚಿನೂಕ್ ಕಾಪ್ಟರು ಗಳು ಕೇವಲ ಸೇನೆಗೆ ಮಾತ್ರವಲ್ಲ ಇಡೀ ದೇಶಕ್ಕೆ ಬಲ ನೀಡುತ್ತದೆ ಎಂದು ಧನೋವಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election; ವೋಟಿಗಾಗಿ ತಮಿಳರಿಗೆ ಮೋದಿ ಅವಹೇಳನ: ಸಿಎಂ ಸ್ಟಾಲಿನ್ ಕಿಡಿ
Sambit Patra; ಜಗನ್ನಾಥನೇ ಮೋದಿ ಭಕ್ತ ಎಂದಿದ್ದಕ್ಕೆ 3 ದಿನ ಉಪವಾಸ ಪ್ರಾಯಶ್ಚಿತ್ತ: ಪಾತ್ರಾ
Loksabha: ಈ ಬಾರಿ 2004ರ ರಿಸಲ್ಟ್ ಮರುಕಳಿಸಲಿದೆ: ಜೈರಾಂ ರಮೇಶ್
CPM ನಾಯಕನ ಹತ್ಯೆ ಸಂಚು: ಕಾಂಗ್ರೆಸ್ನ ಸುಧಾಕರನ್ಗೆ ರಿಲೀಫ್
BJP: ಪ್ರಚಾರಕ್ಕೆ ಬರದ, ವೋಟ್ ಮಾಡದ ಕೇಂದ್ರ ಸಚಿವ ಸಿನ್ಹಾಗೆ ಬಿಜೆಪಿ ನೋಟಿಸ್
MUST WATCH
ಹೊಸ ಸೇರ್ಪಡೆ
Yelimale ಶಾಲೆಯ ತಡೆಗೋಡೆ ಕುಸಿತ; 20ಕ್ಕೂ ಅಧಿಕ ಕೋಳಿಗಳ ಸಾವು
Vasantha ಬಂಗೇರರಿಲ್ಲದೆ ರಾಜ್ಯ ರಾಜಕಾರಣಕ್ಕೆ ನಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ
Election; ವೋಟಿಗಾಗಿ ತಮಿಳರಿಗೆ ಮೋದಿ ಅವಹೇಳನ: ಸಿಎಂ ಸ್ಟಾಲಿನ್ ಕಿಡಿ
Sambit Patra; ಜಗನ್ನಾಥನೇ ಮೋದಿ ಭಕ್ತ ಎಂದಿದ್ದಕ್ಕೆ 3 ದಿನ ಉಪವಾಸ ಪ್ರಾಯಶ್ಚಿತ್ತ: ಪಾತ್ರಾ
Kasaragod ಜಿಲ್ಲೆಯಾದ್ಯಂತ ಮಳೆ; ಹೆದ್ದಾರಿಯಲ್ಲಿ ಸಂಚಾರ ದುಸ್ತರ