ಹೇ ಆರಾಮ್‌ : ಹೆಣ್ಣಿಗೆ ನಿವೃತ್ತಿ ಎನ್ನುವುದೇ ಇಲ್ಲ…


Team Udayavani, Apr 10, 2019, 6:30 AM IST

Avalu-Retire

ರಿಟೈರ್‌ ಆದ ಗಂಡಸಿಗೆ ರೆಕ್ಕೆಗಳು ಮೂಡುತ್ತವೆ. ಎಲ್ಲೆಂದರಲ್ಲಿ ಸುತ್ತಾಡಿ, ಇಷ್ಟಪಟ್ಟಂತೆ, ಸುಖವಾಗಿ ಜೀವನ ಸಾಗಿಸಬಹುದು. ಆದರೆ, ಹೆಣ್ಣಿಗೆ? ಕಚೇರಿಯ ಕೆಲಸ ನಿವೃತ್ತಿ ಕೊಟ್ಟರೂ, ಮನೆಕೆಲಸದಿಂದ ಆಕೆ ವಿಮುಖಳಾಗಲು ಸಾಧ್ಯವೇ ಇಲ್ಲ…

ಸುಮಾ, ಗಡಿಬಿಡಿಯಿಂದ ಆಗಲೇ ಪಾರ್ಕ್‌ನಲ್ಲಿ ವಾಕಿಂಗ್‌ ಶುರು ಮಾಡಿದ್ದ ಸ್ನೇಹಿತೆ ರೇಖಾಗೆ ಜೊತೆಯಾದರು. “ನೀವು ಇಷ್ಟುದಿನ ಕಚೇರಿಗೂ ಸಮಯಕ್ಕೆ ಮುಂಚಿತವಾಗೇ ಹೋಗ್ತಿದ್ರಿ ಅನ್ಸುತ್ತೆ. ಅದಕ್ಕೆ ಈಗಲೂ, ಸಮಯಕ್ಕೆ ಸರಿಯಾಗಿ ವಾಕಿಂಗ್‌ ಶುರು ಮಾಡಿರ್ತೀರಾ. ನಾನು 5 ಗಂಟೆಗೆ ಅಂದ್ರೆ ಐದೂ ಕಾಲಿಗೇ ಬರೋದು’ ಎಂದು ಸುಮಾ ನಗುತ್ತಾ ಹೆಜ್ಜೆ ಹಾಕತೊಡಗಿದರು.

“ನಿಜಾ ರೀ… ಸುಮಾ, ಕಚೇರಿಗೆ ಹೋಗ್ತಾ ಇದ್ದಾಗಲೇ ಲೈಫ‌ು ಚೆನ್ನಾಗಿತ್ತು. ಬೇಗ ಮನೆ ಕೆಲಸಾನೂ ಮುಗೀತಿತ್ತು, ಹೊರಗಡೆ ಹೋಗೋದ್ರಿಂದ ದಿನವಿಡೀ ಉತ್ಸಾಹಾನೂ ಇರ್ತಿತ್ತು’ ಎಂದರು ರೇಖಾ ಕೊಂಚ ಬೇಸರದಿಂದ. “ಅಷ್ಟು ಒಳ್ಳೆ ಬ್ಯಾಂಕ್‌ ಕೆಲಸದಿಂದ ನೀವು ಇಷ್ಟು ಬೇಗ ಏಕೆ ನಿವೃತ್ತಿ ತಗೊಂಡ್ರಿ?’ ಎಂದು ಸುಮಾ ಕೇಳಿದಾಗ, ರೇಖಾ ತನ್ನ ಸ್ವಯಂ ನಿವೃತ್ತಿಯ ಕಾರಣದ ಕತೆ ಹೇಳತೊಡಗಿದರು.


“ನಮ್ಮೆಜಮಾನ್ರು ಕಳೆದ ವರ್ಷ ವಿಆರ್‌ಎಸ್‌ ತಗೊಂಡ್ರು. ಇನ್ನೂ 6 ವರ್ಷ ಸೇವೆ ಇರುವಾಗಲೇ ಸ್ವಯಂ ಇಚ್ಛೆಯಿಂದ ನಿವೃತ್ತಿ ಪಡೆದು ಹಾಯಾಗಿ ಸ್ನೇಹಿತರು, ಇಂಟರ್ನೆಟ್‌, ಸೋಷಿಯಲ್‌ ಮೀಡಿಯಾ, ಪ್ರವಾಸ ಮತ್ತೆ ಮಗನ ಭೇಟಿ ಅಂತ ವಿದೇಶಕ್ಕೂ ಹೋಗಿ ಬಂದರು. ಉದ್ಯೋಗದಲ್ಲಿದ್ದಾಗ ಅವರಿಗೆ ಇದನ್ನೆಲ್ಲಾ ಮಾಡಲು ಸಮಯವೇ ಸಿಗ್ತಾ ಇರಲಿಲ್ಲ. ಅವರೇ ನನಗೆ “ನಿನ್ನದು ಇನ್ನೂ 10 ವರ್ಷ ಸರ್ವಿಸ್‌ ಇದೆ. ಅಷ್ಟು ವರ್ಷ ಕೆಲಸ ಮಾಡಿ ಯಾಕೆ ಕಷ್ಟಪಡ್ತೀಯ? ನಮ್ಮ ಆರ್ಥಿಕ ಸ್ಥಿತಿಯೂ ಚೆನ್ನಾಗಿದೆ. ನೀನೂ ಸ್ವಯಂ ನಿವೃತ್ತಿ ಪಡೆದು ನನ್ನ ಹಾಗೆ ಹಾಯಾಗಿರು’ ಎಂದು ಯಜಮಾನರು ಸಲಹೆ ಕೊಟ್ಟರು. 26 ವರ್ಷಗಳಿಂದ ಬ್ಯಾಂಕಿನ ಉದ್ಯೋಗದಿಂದ ಬೇಸತ್ತಿದ್ದ ನನಗೆ ಯಜಮಾನರ ಮಾತು ಸರಿ ಅನ್ನಿಸಿತು. ಅದೂ ಅಲ್ಲದೆ ಅವರು ರಿಟೈರ್ಡ್ ಆದ್ಮೇಲೆ ಆರಾಮಾಗಿ ಕಾಲ ಕಳೆಯುತ್ತಿದ್ದುದನ್ನು ನೋಡಿ ನಾನೂ ನಿವೃತ್ತಿ ಪಡೆದೆ. ಆಮೇಲಷ್ಟೇ ಗೊತ್ತಾಗಿದ್ದು : ನಿವೃತ್ತಿಯ ನಂತರವೂ ಹೆಂಗಸರಿಗೆ ಕೆಲಸ ಮಾಡೋದು ತಪ್ಪೋದಿಲ್ಲ ಅಂತ’. ಆ ಮಾತು ಕೇಳಿ ಸುಮಾ, “ಯಾಕ್ರೀ ಹಾಗಂತೀರಾ? ನೀವೀಗ ಆರಾಮಾಗಿ ಇಲ್ವಾ?’ ಎಂದು ಕೇಳಿದರು.

“ನಿವೃತ್ತಿಯ ನಂತರ ಅವರ ಲೈಫೇನೋ ಚೆನ್ನಾಗೇ ನಡೀತಿದೆ. ನನ್ನದೇನು ಕೇಳ್ತೀರ? ನನಗೆ ಮೊದಲಿಗಿಂತಲೂ ಎರಡು ಪಟ್ಟು ಕೆಲಸ. ಅವರೂ ಮನೇಲಿ ಇರ್ತಾರೆ, ದಿನಕ್ಕೆ ಮೂರು, ನಾಲ್ಕು ಸಲ “ಟೀ ಮಾಡು, ತಿಂಡಿ ಮಾಡು’ ಅಂತಾರೆ. ನಾನು ಕೆಲಸಕ್ಕೆ ಹೋಗುವಾಗ ಅವರೇ ಟೀ ಮಾಡ್ಕೊಳ್ತಾ ಇದ್ದರು. ಚಿಕ್ಕ ಪುಟ್ಟ ಕೆಲಸಾನೂ ಅವರೇ ಮಾಡೋರು. ಆದ್ರೆ ಈಗ, “ನೀನು ಹೇಗಿದ್ರೂ ಮನೇಲಿ ಇರ್ತೀಯಾ ಅಲ್ವಾ’ ಅಂತ ತಮ್ಮ ವೈಯಕ್ತಿಕ ಕೆಲಸಾನೂ ನನಗೇ ಹೇಳ್ತಾರೆ. ಮೊದಲೆಲ್ಲಾ ದಿನದ ಬಹುಪಾಲು ಸಮಯ ಬ್ಯಾಂಕ್‌ನಲ್ಲೇ ಕಳೆದು ಹೋಗ್ತಿತ್ತು. ಹಾಗಾಗಿ ಮನೆ ಕೆಲಸದವಳು ಹೇಗೇ ಕ್ಲೀನ್‌ ಮಾಡಿದ್ರೂ ಮನೆ ಸ್ವತ್ಛವಾಗಿಯೇ ಕಾಣಾ¤ ಇತ್ತು. ಆದರೆ, ಈಗೀಗ ಅವಳ ಕೆಲಸದಲ್ಲಿ ಬರೀ ಹುಳುಕೇ ಕಾಣಿಸುತ್ತೆ. ಇಲ್ಲಿ ಕಸ ಗುಡಿಸಿಲ್ಲ, ಅಲ್ಲಿ ಧೂಳು ಹಾಗೇ ಇದೆ ಅಂತ ಅವಳು ಹೋದ ನಂತರ ಪೊರಕೆ ಕೈಗೆ ತಗೋತೀನಿ. ಈ ಸ್ವತ್ಛತೆ ಅನ್ನೋದು ಒಂದು ರೋಗ ಕಣ್ರೀ’ ಎಂದು ರೇಖಾ, ನಿವೃತ್ತಿಯ ನಂತರ ಬದಲಾದ ಜೀವನಶೈಲಿಯನ್ನು ಬಿಚ್ಚಿಟ್ಟರು.
“ನಿಮಗೆ ಈ ಸಮಸ್ಯೆಗಳೆಲ್ಲಾ ಇತ್ತೀಚೆಗೆ ಶುರುವಾಗಿವೆ. ನಾನು ಮೊದಲಿನಿಂದಲೂ ಗೃಹಿಣಿ. ಕಚೇರಿಗಾದ್ರೆ ರಜಾ ಇರುತ್ತೆ. ಆದರೆ ನಮ್ಮ ಹೊಟ್ಟೆಗೆಲ್ಲಿ ರಜಾ? ನಂದು ನಿತ್ಯವೂ ಇದೇ ಪಾಡು’ ಎಂದು ಸುಮಾ ನಿಟ್ಟುಸಿರಿಟ್ಟರು.

ಇದು ಬರೀ ರೇಖಾ ಮತ್ತೆ ಸುಮಾರ ದಿನಚರಿ ಅಲ್ಲ. ಪ್ರತಿ ಮಹಿಳೆಯ ದಿನಚರಿ ಇದು. ಆಕೆ ಗೃಹಿಣಿಯೇ ಇರಬಹುದು ಅಥವಾ ಉದ್ಯೋಗಸ್ಥೆಯಾಗಿರಬಹುದು. ಉದ್ಯೋಗದಿಂದ ಇಂತಿಷ್ಟು ವರ್ಷಕ್ಕೆ ನಿವೃತ್ತಿಯೆಂದು ನಿಗದಿ ಮಾಡಿರುತ್ತಾರೆ. ಆನಂತರ ಪುರುಷರು “ನಿವೃತ್ತಿ ಆಯ್ತಪ್ಪಾ. ನನಗಿನ್ನು ಬಿಡುವು’ ಎಂದು ಘೋಷಿಸಿ, ಆರಾಮಾಗಿ ವಿಶ್ರಾಂತಿ ಪಡೆಯುತ್ತಾರೆ. ಆದರೆ, ಉದ್ಯೋಗಸ್ಥ ಮಹಿಳೆಯರಿಗೆ ನಿವೃತ್ತಿ ನಂತರ ಕಚೇರಿಯಿಂದ ಬಿಡುವು ಸಿಗಬಹುದೇ ವಿನಃ ಮನೆಕೆಲಸದಿಂದಲ್ಲ. ಭಾರತೀಯ ಸಮಾಜದಲ್ಲಿ ಹೆಣ್ಣು ಬಾಲ್ಯದಲ್ಲಿ ತಂದೆ, ತಾರುಣ್ಯದಲ್ಲಿ ಗಂಡ, ಮುಪ್ಪಿನಲ್ಲಿ ಮಕ್ಕಳ ಬದುಕಿಗೆ ನೆರವಾಗುತ್ತಾ, ತನ್ನ ವಯಸ್ಸಿಗನುಗುಣವಾಗಿ ಕಾರ್ಯೋನ್ಮುಖವಾಗಿ ಎಂದಿಗೂ, ಯಾರಿಗೂ ಹೊರೆಯಾಗದೆ ಎಲ್ಲರಿಗೂ ಆಸರೆಯಾಗಿರುತ್ತಾಳೆ. ಕುಟುಂಬದ ನಿರ್ವಹಣೆಯಲ್ಲಿ, ತನ್ನವರ ಏಳಿಗೆಗಾಗಿ ಪ್ರತಿಫ‌ಲಾಪೇಕ್ಷೆಯಿಲ್ಲದೆ, ಬಿಡುವಿಲ್ಲದೆ ದುಡಿಯುತ್ತಾಳೆ. ಎಂದಿಗೂ ರಜೆ ತೆಗೆದುಕೊಳ್ಳದೆಯೇ, ನಿವೃತ್ತಿಯನ್ನು ಬಯಸದೆಯೇ.

— ಶಿಲ್ಪಾ ಕುಲಕರ್ಣಿ

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.