ಒಟ್ಟಾರೆ ಚೆನ್ನಾಗಿ ಬದುಕಿ!


Team Udayavani, Apr 15, 2019, 6:00 AM IST

AP8_3_2017_000033A

ಆಸ್ಟ್ರೇಲಿಯದ ಒಂದು ವಿಶ್ವ ವಿದ್ಯಾನಿಲಯದಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಒಂದು ಸಂಶೋಧನೆ ಕುತೂಹಲಕಾರಿಯಾಗಿದೆ. ಮನಸ್ಸಿನ ಒತ್ತಡ ವನ್ನು ಕಡಿಮೆ ಮಾಡಿಕೊಳ್ಳು ವುದು ಹೇಗಪ್ಪ ಅಂತ ನಾವೆಲ್ಲ ಮತ್ತದೇ ತಲೆಯನ್ನು ಕೆಡಿಸಿ ಕೊಳ್ಳುವುದುಂಟು.ಈ ಸಂಶೋಧನೆ ಪ್ರಕಾರ ನಮ್ಮ ಸುತ್ತ ಮುತ್ತಲೂ ಇರುವ ಹಸಿರನ್ನು ಪ್ರಜ್ಞಾಪೂರ್ವಕವಾಗಿ ಹೆಚ್ಚು ಹೆಚ್ಚು ವೀಕ್ಷಿಸುತ್ತಾ ಇದ್ದರೆ ಒತ್ತಡ ನೀಗಿಕೊಳ್ಳುವುದಂತೆ. ಅದ ಕ್ಕಾಗಿ ಎಲ್ಲೋ ದಟ್ಟ ಹರಿದ್ವರ್ಣದ ಮಳೆಕಾಡನ್ನು ಹುಡುಕಿ ಹೋಗಬೇಕಾಗಿಲ್ಲ; ಮನೆ ಸುತ್ತಮುತ್ತ ಇರುವ ಮಾವಿನ ಮರವೋ ಬಿದಿರ ಹಿಂಡೋ ಕೊನೆಗೆ ಹಸಿರು ಹುಲ್ಲಾದರೂ ಸಾಕು ಎನ್ನುತ್ತದೆ ಸಂಶೋಧನೆ.

ಆಸ್ಟ್ರೇಲಿಯಾದ ಸಂಶೋಧನೆಗೆ ಪೂರಕವಾಗಿ ನಾವು ಅನು ಸರಿಸಬಹುದಾದ ಒಂದೆರಡು ಹವ್ಯಾಸಗಳು ಒತ್ತಡ ಕಡಿಮೆ ಮಾಡಿಕೊಳ್ಳುವಲ್ಲಿ ಮತ್ತು ತಾಳ್ಮೆ, ಏಕಾಗ್ರತೆ ಗಳಿಸಿಕೊಳ್ಳುವುದಕ್ಕೆ ನಿಮಗೂ ಸಹಕಾರಿ ಆಗಬಹುದು.

ಜೀವ ಜಗತ್ತಿಗೆ ಗಮನ
ಇದು ಪುಟಾಣಿ ನನ್ನ ಮಗಳ ಜತೆಗೂಡಿ ನಾನು ಬೆಳೆಸಿಕೊಂಡ ಹವ್ಯಾಸ. ನಮ್ಮ ಮನೆಯ ಹಿಂಭಾಗದಲ್ಲಿ ಒಂದು ರೆಂಜೆ ಹೂವಿನ ಮರ ಇದೆ. ಅದರಿಂದ ಉದುರಿದ ರೆಂಜೆ ಹೂವುಗಳನ್ನು ಆರಿಸಲು ನಾವಿಬ್ಬರೂ ಹೋಗುವುದಿದೆ. ಆಗ ತರಗೆಲೆಗಳ ಅಡಿಯಲ್ಲಿ, ಹುಲ್ಲಿನಲ್ಲಿ ಇರುವ ಜೀವಿಗಳನ್ನು ಗಮನಿಸುತ್ತೇವೆ. ದಪ್ಪ ಚಿಪ್ಪಿರುವ ಕುರುವಾಯಿ ಜಾತಿಯ ಕೀಟಗಳು, ಹುಳಗಳು, ನೆಲಗುಬ್ಬಿ, ಕಡ್ಡಿಹುಳ ಅಥವಾ ಪ್ರೇಯಿಂಗ್‌ ಮ್ಯಾಂಟಿಸ್‌, ಬಗೆಬಗೆಯ ಜೇಡಗಳು, ಇರುವೆಗಳು- ಓಹ್‌ ಅದೆಷ್ಟು ಜೀವವೈವಿಧ್ಯ ನಮ್ಮ ಸುತ್ತಮುತ್ತ ಇರುತ್ತದೆ! ಕೇವಲ ಒಂದು ಚದರ ಮೀಟರ್‌ ಜಾಗವನ್ನು ದಿಟ್ಟಿಸಿದರೆ ಕಣ್ಣಿಗೆ ಬೀಳುವ ಕ್ರಿಮಿಕೀಟಗಳು ನೂರಾರು. ಇವೆಲ್ಲವೂ ಸೃಷ್ಟಿಯ ಚೆಲುವು, ಅವೆಲ್ಲವುಗಳ ಜತೆಗೆ ನಮ್ಮದು ಸಹಬಾಳ್ವೆ ಎಂಬ ದೃಷ್ಟಿಯಿಂದ ಆ ಜೀವಿಗಳನ್ನು ಗಮನಿಸಿ. ತೊಂದರೆ ಮಾಡದೆ ಏಕಾಗ್ರತೆಯಿಂದ ನೋಡುತ್ತಾ ಇರಿ. ಈ ಅಭ್ಯಾಸ ಏಕಾಗ್ರತೆ, ತಾಳ್ಮೆ, ವಿಶಾಲ ಸೃಷ್ಟಿಯಲ್ಲಿ ಇತರೆಲ್ಲ ಜೀವಿಗಳಂತೆ ನಾವು ಎಂಬುದನ್ನು ಕಲಿಸುತ್ತದೆ.

ತಲೆ ಬಾಚುವುದು
ನಮ್ಮದೇ ತಲೆಯನ್ನಲ್ಲ; ಗಂಡಸರಾದರೆ ಹೆಂಡತಿ, ಮಗಳು, ಅಕ್ಕ ಅಥವಾ ತಂಗಿಯ ತಲೆ ಬಾಚಿ ಜಡೆ ಹೆಣೆಯುವುದು ತಾಳ್ಮೆ ಮತ್ತು ಏಕಾಗ್ರತೆಯನ್ನು ಕಲಿಸುತ್ತದೆ. ನಗಬೇಡಿ; ನಾನು ನನ್ನ ಹೆಂಡತಿಯ ತಲೆ ಬಾಚುವುದುಂಟು. ಮೊದಮೊದಲಿಗೆ ಸಿಕ್ಕು ಬಿಡಿಸುವಾಗ, ಜಡೆ ಹಾಕುವಾಗ ಕಿರಿಕಿರಿ ಆಗುತ್ತಿತ್ತು. ಬಳಿಕ ಈ ಪ್ರಕ್ರಿಯೆ ನನಗೆ ತುಂಬಾ ತಾಳ್ಮೆ,ಅಚ್ಚುಕಟ್ಟುತನವನ್ನು ಕಲಿಸಿತು.

ಇಂತಹ ಸಣ್ಣಸಣ್ಣ ಕ್ರಿಯೆಗಳು, ಚಟುವಟಿಕೆಗಳು ನಮ್ಮಲ್ಲಿ ತಾಳ್ಮೆ, ಏಕಾಗ್ರತೆಗಳನ್ನು ಹುಟ್ಟು ಹಾಕುವುದಲ್ಲದೆ ಲವ ಲವಿಕೆ, ಜೀವಂತಿಕೆಯನ್ನು ತುಂಬುತ್ತವೆ. ಇಂತಹ ನೂರಾರು ಚಟುವಟಿಕೆಗಳಿವೆ. ನನ್ನ ಹವ್ಯಾಸಗಳನ್ನು ನೀವು ಯಥಾವತ್‌ ಅನುಸರಿಸಬೇಕೆಂದಿಲ್ಲ; ಇವು ಆಹಾರಶೈಲಿ, ಉಡುಗೆ ತೊಡುಗೆಯ ಇಷ್ಟಾನಿಷ್ಟಗಳಂತೆ ವ್ಯಕ್ತಿ ನಿರ್ದಿಷ್ಟ. ನಾನೊಂದೆರಡು ಉದಾಹರಣೆಗಳನ್ನು ಕೊಟ್ಟೆನಷ್ಟೆ. ಮಾರ್ಪಾಟುಗಳನ್ನು ಮಾಡಿಕೊಳ್ಳಿ ಅಥವಾ ಹೊಸವನ್ನು ಕಂಡುಕೊಳ್ಳಿ. ಒಟ್ಟಿನಲ್ಲಿ ಚೆನ್ನಾಗಿ ಬದುಕಿ!

–  ಚಾರು

ಟಾಪ್ ನ್ಯೂಸ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

6-

Modi ಒಬ್ಬ ಸುಳ್ಳುಗಾರ: ಸಚಿವ ಸಂತೋಷ್ ಲಾಡ್ ಆರೋಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.