ಸಾಂಪ್ಲಾಗೆ ಟಿಕೆಟ್ ಇಲ್ಲ ; ಬಿಜೆಪಿ ಗೋಹತ್ಯೆ ಮಾಡಿತು ಎಂದ ಕೇಂದ್ರ ಸಚಿವ!
Team Udayavani, Apr 24, 2019, 8:54 AM IST
ಹೋಶಿಯಾರ್ಪುರ್ : ಕೇಂದ್ರ ಸಚಿವ ವಿಜಯ್ ಸಾಂಪ್ಲಾ ಅವರಿಗೆ ಬಿಜೆಪಿ ಹೋಶಿಯಾರ್ ಪುರ್ ಎಸ್ಸಿ ಮೀಸಲು ಕ್ಷೇತ್ರದ ಟಿಕೆಟನ್ನು ನೀಡದೆ ಬೇರೆ ಅಭ್ಯರ್ಥಿಗೆ ನೀಡಿದೆ. ಈ ಕ್ರಮದ ಕುರಿತು ತೀವ್ರ ಅಸಮಾಧಾನ ಹೊರ ಹಾಕಿರುವ ವಿಜಯ್ ಸಾಂಪ್ಲಾ ಪಕ್ಷ ಗೋಹತ್ಯೆ ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಹೋಶಿಯಾರ್ ಪುರ್ಗೆ ಹಾಲಿ ಶಾಸಕ, ಮಾಜಿ ನಾಗರಿಕ ಸೇವೆ ಅಧಿಕಾರಿ ಸೋಮ್ ಪ್ರಕಾಶ್ ಅವರಿಗೆ ಟಿಕೆಟ್ ನೀಡಿದೆ.
2014 ರ ಚುನಾವಣೆಯಲ್ಲಿ ಸಾಂಪ್ಲಾ ಅವರು ಹೋಶಿಯಾರ್ಪುರದಿಂದ 13,500 ಮತಗಳ ಅಂತರದಿಂದ ಜಯಗಳಿಸಿದ್ದರು.
ನಾನೇನು ತಪ್ಪು ಮಾಡಿದ್ದೇನೆ? ನನ್ನ ತಪ್ಪು ಏನೆಂದು ಯಾರಾದರು ಹೇಳಲಿ , ನನ್ನ ಮೇಲೆ ಭ್ರಷ್ಟಾಚಾರದ ಆರೋಪವಿಲ್ಲ. ಯಾರೂ ನನ್ನ ಮೇಲೆ ಬೆರಳು ತೋರಿಸಿಲ್ಲ. ನಾನು ನನ್ನ ಕ್ಷೇತ್ರಕ್ಕೆ ವಿಮಾನ ನಿಲ್ದಾಣ, ರೈಲು ನಿಲ್ದಾಣ , ರಸ್ತೆಗಳನ್ನು ಮಾಡಿಸಿದ್ದೇ ತಪ್ಪೇ? , ನನ್ನ ಮುಂದಿನ ಪೀಳಿಗೆಗೆ ಹೀಗಾಗಬಾರದು ಎಂದು ಸಾಂಪ್ಲಾ ಟ್ವೀಟ್ ಮಾಡಿದ್ದಾರೆ.
ಸಾಂಪ್ಲಾ ಅವರು 2016 ರಿಂದ 18 ರ ವರೆಗೆ ಪಂಜಾಬ್ ಬಿಜೆಪಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಶಿರೋಮಣಿ ಆಕಾಲಿದಳದೊಂದಿಗಿನ ಬಿಜೆಪಿ ಮೈತ್ರಿಕೂಟ 2017 ರ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಸಾಂಪ್ಲಾ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ