ಆರ್‌ಸಿಬಿಗೆ ಪ್ಲೇ-ಆಫ್ ಚಾನ್ಸ್‌ ಇದೆಯೇ?

ಮುಂದಿನ ಮೂರೂ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆಲ್ಲಬೇಕು

Team Udayavani, Apr 26, 2019, 6:05 AM IST

PTI4_24_2019_000270A

ಬೆಂಗಳೂರು: ಪಂಜಾಬ್‌ ವಿರುದ್ಧ ಗೆಲುವಿನ ಓಟ ಮುಂದುವರಿಸಿದ ಆರ್‌ಸಿಬಿ ತನ್ನ 4ನೇ ಜಯವನ್ನು ಒಲಿಸಿಕೊಂಡಿದೆ. ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿ ಏಳಕ್ಕೆ ತಲುಪಿದೆ. ಉಳಿದ ಮೂರೂ ಪಂದ್ಯ ಗೆದ್ದರೆ ಬೆಂಗಳೂರು ತಂಡಕ್ಕೆ ಪ್ಲೇ-ಆಫ್ ಚಾನ್ಸ್‌ ಇದೆಯೇ ಎಂಬುದು ಮುಂದಿನ ಕುತೂಹಲ!

ಬುಧವಾರ ರಾತ್ರಿ ಪಂಜಾಬ್‌ ವಿರುದ್ಧ 17 ರನ್ನಿನಿಂದ ಗೆದ್ದ ಬಳಿಕ ಪ್ರತಿಕ್ರಿಯಿಸಿದ ಕಪ್ತಾನ ವಿರಾಟ್‌ ಕೊಹ್ಲಿ, ಕಳೆದ 5 ಪಂದ್ಯಗಳಲ್ಲಿ ನಾವು ನಾಲ್ಕನ್ನು ಗೆದ್ದಿದ್ದೇವೆ. ಉಳಿದ ಮೂರೂ ಪಂದ್ಯಗಳನ್ನು ಗೆದ್ದರೆ ಮುಂದಿನ ಸುತ್ತು ತಲಪುವ ಅವಕಾಶ ನಮಗೂ ಇದೆ ಎಂದಿದ್ದಾರೆ.

ತವರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ 4 ವಿಕೆಟಿಗೆ 202 ರನ್‌ ಪೇರಿಸಿ ಸವಾಲೊಡ್ಡಿದರೆ, ಪಂಜಾಬ್‌ 7 ವಿಕೆಟಿಗೆ 185 ರನ್‌ಗಳನ್ನಷ್ಟೇ ಗಳಿಸಿತು. ಇದರೊಂದಿಗೆ ಪ್ರಸಕ್ತ ಋತುವಿನಲ್ಲಿ ಆರ್‌ಸಿಬಿ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿ ಅಶ್ವಿ‌ನ್‌ ಪಡೆ ಸೋಲನುಭವಿಸಿತು.

ಸದ್ಯದ ಲೆಕ್ಕಾಚಾರ….
ಆರ್‌ಸಿಬಿ-ಪಂಜಾಬ್‌ ಪಂದ್ಯದ ಬಳಿಕ ಕಂಡುಬಂದ ಬಲಾಬಲದ ಲೆಕ್ಕಾಚಾರದಲ್ಲಿ ಚೆನ್ನೈ (11 ಪಂದ್ಯ, 16 ಅಂಕ) ಮತ್ತು ಡೆಲ್ಲಿ (11 ಪಂದ್ಯ, 14 ಅಂಕ) ತಂಡಗಳ ಮುಂದಿನ ಸುತ್ತಿನ ಪಯಣ ಬಹುತೇಕ ಖಚಿತವಾಗಿದೆ. ಮುಂಬೈ 3ನೇ ಸ್ಥಾನದಲ್ಲಿದೆ (10 ಪಂದ್ಯ, 12 ಅಂಕ). ತಲಾ 10 ಅಂಕ ಹೊಂದಿರುವ ಹೈದರಾಬಾದ್‌ ಮತ್ತು ಪಂಜಾಬ್‌ 3ನೇ ಹಾಗೂ 4ನೇ ಸ್ಥಾನದಲ್ಲಿವೆ. ಕೆಕೆಆರ್‌ 10ರಲ್ಲಿ 4 ಪಂದ್ಯ ಜಯಿಸಿ ಆರರಲ್ಲಿ ಉಳಿದುಕೊಂಡಿದೆ. ಹೀಗಾಗಿ ಕೊನೆಯ 2 ಸ್ಥಾನಗಳ ಪ್ಲೇ-ಆಫ್ ಸ್ಥಾನಕ್ಕಾಗಿ 4 ತಂಡಗಳ ಸ್ಪರ್ಧೆ ಕಂಡುಬಂದಿದೆ. ಈ ತಂಡಗಳನ್ನೆಲ್ಲ ಮೀರಿಸಿ ಆರ್‌ಸಿಬಿ ಮೇಲೆ ಬಂದಿತೇ ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆ!

ಸತತ 6 ಸೋಲು ಹೊಸತಲ್ಲ!
ಸತತ 6 ಪಂದ್ಯಗಳನ್ನು ಸೋತ ಬಳಿಕ ಪ್ಲೇ ಆಫ್ಗೆ ನೆಗೆದ ನಿದರ್ಶನ ಈಗಾಗಲೇ ಆರ್‌ಸಿಬಿ ಮುಂದಿದೆ. 2016ರ ಋತುವಿನಲ್ಲಿ ಆರ್‌ಸಿಬಿ ಇಂಥದೇ ಸಂಕಟದಿಂದ ಪಾರಾಗಿ ಲೀಗ್‌ ಹಂತದಲ್ಲಿ ದ್ವಿತೀಯ ಸ್ಥಾನಿಯಾಗಿತ್ತು. ಇಲ್ಲಿಂದ ಮುಂದುವರಿದು ಫೈನಲಿಗೂ ಲಗ್ಗೆ ಹಾಕಿತ್ತು. ಆದರೆ ಇಲ್ಲಿ ಮಾತ್ರ ಸನ್‌ರೈಸರ್ ಹೈದರಾಬಾದ್‌ಗೆ 8 ರನ್ನುಗಳಿಂದ ಶರಣಾಗಿ ಕಪ್‌ ಕಳೆದುಕೊಂಡಿತ್ತು.

ಈ ಸಲವೂ ಕೊನೆಯ ಹಂತದಲ್ಲಿ ಅದೃಷ್ಟ ಕೈಹಿಡಿದರೆ ಆರ್‌ಸಿಬಿಯಿಂದ ಪವಾಡ ನಡೆಯಬಾರದೆಂದೇನೂ ಇಲ್ಲ. ಉಳಿದ ತಂಡಗಳ ಫ‌ಲಿತಾಂಶವನ್ನು ಗಮನಿಸದೆ, ಮುಂದಿನ ಮೂರೂ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆದ್ದು, ರನ್‌ರೇಟ್‌ ಏರಿಸಿಕೊಂಡರೆ ಕೊಹ್ಲಿ ಪಡೆಗೆ ಪ್ಲೇ ಆಫ್ ಅಸಾಧ್ಯವೇನಲ್ಲ. ಆದರೆ ಈ ಮೂರರಲ್ಲಿ ಒಂದು ಪಂದ್ಯದಲ್ಲಿ ಸೋತರೂ ಆರ್‌ಸಿಬಿ ಹೊರಬೀಳಲಿದೆ!

ನಮ್ಮದು ಒತ್ತಡ ರಹಿತ ಆಟ
ಆರಂಭದಲ್ಲಿ ನಮಗೆ ಅದೃಷ್ಟ ಕೈಕೊಟ್ಟಿತ್ತು. ಗೆಲ್ಲಬಹುದಾಗಿದ್ದ ಪಂದ್ಯಗಳನ್ನೂ ಕಳೆದುಕೊಂಡೆವು. ಸತತ 6 ಪಂದ್ಯಗಳನ್ನು ಸೋತ ನೋವು ಎಲ್ಲರಲ್ಲೂ ಆವರಿಸಿತ್ತು. ಮೊಹಾಲಿಯಲ್ಲಿ ನಮ್ಮ ಲಕ್‌ ತಿರುಗಿತು. ನಾವು ಒತ್ತಡವನ್ನು ಹೇರಿಕೊಳ್ಳದೆ ಪ್ರತಿಯೊಂದು ಪಂದ್ಯವನ್ನೂ ಎಂಜಾಯ್‌ ಮಾಡುತ್ತಲೇ ಆಡುತ್ತಿದ್ದೇವೆ. ನಮ್ಮ ಫೀಲ್ಡಿಂಗ್‌, ಬೌಲಿಂಗ್‌ ಬಹಳಷ್ಟು ಸುಧಾರಣೆ ಆಗಬೇಕಿದೆ ಎಂದು ಕೊಹ್ಲಿ ಹೇಳಿದರು.

ಪಂಜಾಬ್‌ ವಿರುದ್ಧ 175 ರನ್‌ ನಿರೀಕ್ಷೆಯಲ್ಲಿದ್ದೆವು. ಆದರೆ ಎಬಿಡಿ ಮತ್ತು ಸ್ಟೋಯಿನಿಸ್‌ ಅಮೋಘ ಆಟವಾಡಿ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ಇದರಿಂದ ಲಾಭವಾಯಿತು ಎಂದರು.

ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ರವಿವಾರ ಡೆಲ್ಲಿ ವಿರುದ್ಧ ಕೋಟ್ಲಾದಲ್ಲಿ ಆಡಲಿದೆ.

ಸಂಕ್ಷಿಪ್ತ ಸ್ಕೋರ್‌: ಆರ್‌ಸಿಬಿ-4 ವಿಕೆಟಿಗೆ 202. ಪಂಜಾಬ್‌-7 ವಿಕೆಟಿಗೆ 185 (ರಾಹುಲ್‌ 42, ಗೇಲ್‌ 23, ಅಗರ್ವಾಲ್‌ 35, ಮಿಲ್ಲರ್‌ 24, ಪೂರಣ್‌ 46, ಯಾದವ್‌ 36ಕ್ಕೆ 3, ಸೈನಿ 33ಕ್ಕೆ 2, ಸ್ಟೋಯಿನಿಸ್‌ 13ಕ್ಕೆ 1, ಅಲಿ 22ಕ್ಕೆ 1).

ಪಂದ್ಯಶ್ರೇಷ್ಠ: ಎಬಿ ಡಿ ವಿಲಿಯರ್.

ಟಾಪ್ ನ್ಯೂಸ್

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

1-modi

Varanasi; 25000 ಮಹಿಳೆಯರ ಜತೆ ಸ್ವಕ್ಷೇತ್ರದಲ್ಲಿ ಪಿಎಂ ಸಂವಾದ

ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

Mangaluru ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

MOdi (3)

Odisha ರಾಜ್ಯ ಸರಕಾರವು ಭ್ರಷ್ಟರ ಹಿಡಿತಕ್ಕೆ ಸಿಲುಕಿದೆ: ಪಿಎಂ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-fff

Geneva Open ಟೆನಿಸ್‌: ಸುಮಿತ್‌ಗೆ ಸೋಲು

police USA

China ಶಾಲೆಯಲ್ಲಿ ಚಾಕು ಇರಿತ: 5 ಮಂದಿಗೆ ಗಾಯ

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.