ಬಾಳೆ ಎಲೆ ಊಟಕ್ಕೆಬಂಗಾರಪೇಟೆಗೆ ಬನ್ನಿ

ನಮ್ಮೂರ ಹೋಟೆಲ್‌

Team Udayavani, May 13, 2019, 6:30 AM IST

Isiri-oota

ಜಾಗತೀಕರಣದ ಪ್ರಭಾವದ ನಡುವೆಯೂ ಕೆಲವು ಹೋಟೆಲ್‌ಗ‌ಳು ಇಂದಿಗೂ ತಮ್ಮ ಹಳೇ ರುಚಿ, ಸಂಪ್ರದಾಯವನ್ನು ಉಳಿಸಿಕೊಂಡು ಬರುತ್ತಿವೆ. ಅಂಥ ಹೋಟೆಲ್‌ಗ‌ಳಲ್ಲಿ ಬಂಗಾರಪೇಟೆಯ ಸುಜಾತ ಹೋಟೆಲ್‌ ಕೂಡ ಒಂದು. ಈ ಹೋಟೆಲ್‌, ಅದರ ಮಾಲೀಕರು, ಅವರ ಹಿನ್ನೆಲೆ ಹೀಗಿದೆ.

1979ರಲ್ಲಿ ನಾಗರಾಜರಾವ್‌ ಅವರು ಸುಜಾತ ಹೆಸರಿನ ಹೋಟೆಲ್‌ ಆರಂಭಿಸಿದ್ದರು. ಆಂಧ್ರದ ಬಡಿಕಾಯನಪಲ್ಲಿ ಇವರ ಮೂಲ ಸ್ಥಳ. ಇವರ ತಂದೆ ಸೀತರಾಮಯ್ಯ ಬಂಗಾರಪೇಟೆ ತಾಲೂಕಿನ ಹುದುಕುಲ ಸಮೀಪದ ವಟ್ರಾಕುಂಟೆಯ ಗೌರಮ್ಮ ಅವರನ್ನು ಮದುವೆಯಾಗಿ ಇಲ್ಲಿಯೇ ನೆಲೆಸಿದ್ದರು. ಸೀತಾರಾಮಯ್ಯ ಹುದುಕುಲ ರೈಲ್ವೆ ನಿಲ್ದಾಣದ ಬಳಿ ಪುಟ್ಟದಾದ ಹೋಟೆಲ್‌ ಮಾಡಿಕೊಂಡು ಇಡ್ಲಿ, ವಡೆ, ಚಿತ್ರಾನ್ನ ಹೀಗೆ ಎರಡು ಮೂರು ಬಗೆಯ ತಿಂಡಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇವರಿಗೆ ನಾಲ್ವರು ಪುತ್ರರು, ಪುತ್ರಿ ಇದ್ದು, ಇವರಲ್ಲಿ ಸುಜಾತ ಹೋಟೆಲ್‌ ಮಾಲೀಕ ನಾಗರಾಜರಾವ್‌ ಕೂಡ ಒಬ್ಬರು.

ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಇವರನ್ನು ಸೋದರ ಮಾವ ಸುಬ್ಬಣ್ಣ ಸಾಕಿ ಸಲಹಿದರು. ಎಸ್ಸೆಸ್ಸೆಲ್ಸಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ ನಾಗರಾಜರಾವ್‌, ಅಡುಗೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ನಂತರ ಚೂಡನಾಥ್‌ ಎಂಬುವರು ನಡೆಸುತ್ತಿದ್ದ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಮುಂದೆ ವಯಸ್ಸಾಯ್ತು ಎಂಬ ಕಾರಣಕ್ಕೆ ಚೂಡನಾಥ್‌ ಅವರು ಹೋಟೆಲ್‌ ಮುಚ್ಚಲು ಮುಂದಾಗಿದ್ದರು. ಆಗ ನಾಗರಾಜರಾವ್‌ ಅವರೇ ಹೋಟೆಲ್‌ ಅನ್ನು ಖರೀದಿಸಿ ಅದಕ್ಕೆ ತಮ್ಮ ಸಹೋದರಿಯ ಪುತ್ರಿ ಸುಜಾತ ಅವರ ಹೆಸರನ್ನೇ ನಾಮಕರಣ ಮಾಡಿದರು.

ನಂತರ ಮೀನಾಕ್ಷಮ್ಮ ಅವರನ್ನು ಮದುವೆಯಾದ ನಾಗರಾಜರಾವ್‌ಗೆ, ಎನ್‌.ಸೀತಾರಾಮ ಎಂಬ ಪುತ್ರ ಇದ್ದಾರೆ. ಪಿಯುಸಿ ನಂತರ ತಮ್ಮದೇ ಹೋಟೆಲ್‌ನಲ್ಲಿ ಸಪ್ಲೈ ಅಡುಗೆ ಕೆಲಸಕ್ಕೆ ಸೇರಿಕೊಂಡ ಸೀತಾರಾಮ, ಈಗ ಹೋಟೆಲ್‌ನ ಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ. ನಾಗರಾಜರಾವ್‌ಗೆ ವಯಸ್ಸಾಗಿರುವ ಕಾರಣ ಹಳ್ಳಿಯಲ್ಲೇ ವಿಶ್ರಾಂತಿ ಪಡೆಯುತ್ತಾ, ಆಗಾಗ ಹೋಟೆಲ್‌ಗ‌ೂ ಬಂದು ನೋಡಿಕೊಂಡು ಹೋಗುತ್ತಾರೆ.

ಈಗ ಸುಜಾತ ನ್ಯೂ
ಹೋಟೆಲ್‌ನ ಜವಾಬ್ದಾರಿ ವಹಿಸಿಕೊಂಡ ನಂತರ ಎನ್‌.ಸೀತಾರಾಮ, 10 ವರ್ಷ ನಾಮಫ‌ಲಕವಿಲ್ಲದೇ ನಡೆಯುತ್ತಿದ್ದ ಸುಜಾತ ಹೋಟೆಲ್‌ಗೆ “ನ್ಯೂ’ ಅನ್ನು ಸೇರಿಸಿದ್ದಾರೆ. ಆದ್ರೆ, ಕಟ್ಟಡ, ಕುರ್ಚಿ, ಚೇರು, ಅಡುಗೆ ರುಚಿಯನ್ನು ಹಾಗೇ ಉಳಿಸಿಕೊಂಡು ಬರುತ್ತಿದ್ದಾರೆ. ಹೊಸದಾಗಿ ಬರುವ ಗ್ರಾಹಕರಿಗೆ ಗೊತ್ತಾಗಲಿ ಎಂಬ ಕಾರಣಕ್ಕೆ ಹೊಸದಾಗಿ ನೇಮ್‌ ಬೋರ್ಡ್‌ ಬರೆಸಿದ್ದೇನೆ ಎನ್ನುತ್ತಾರೆ ಸೀತಾರಾಮ.

ಈಗಲೂ ಬಾಳೆ ಎಲೆ ಬಳಕೆ
ಸಣ್ಣಪುಟ್ಟ ಹೋಟೆಲ್‌ಗ‌ಳಲ್ಲೂ ಈಗ ಪ್ಲಾಸ್ಟಿಕ್‌ ಬಳಕೆ ಮಾಡ್ತಾರೆ. ಆದರೆ, ಸುಜಾತ ನ್ಯೂ ಹೋಟೆಲ್‌ನಲ್ಲಿ ಬಾಳೆ ಎಲೆಯಲ್ಲೇ ಊಟ ಹಾಕ್ತಾರೆ. ಒಮ್ಮೆಗೆ 20 ಜನ ಕೂತು ಊಟ ಮಾಡುತ್ತಾರೆ. ಒಂದು ರೀತಿಯಲ್ಲಿ ಮದುವೆ ಮನೆಯಲ್ಲಿ ಊಟ ಮಾಡಿದ ಅನುಭವ ಆಗುತ್ತದೆ ಎನ್ನುತ್ತಾರೆ ಗ್ರಾಹಕರು. ಮಧ್ಯಾಹ್ನ 1.30ರಿಂದ 3ಗಂಟೆವರೆಗೂ ಗ್ರಾಹಕರು ಕಾದು ನಿಂತು ಊಟ ಮಾಡುತ್ತಾರೆ.

— ಭೋಗೇಶ ಆರ್‌.ಮೇಲುಕುಂಟೆ / ಎಂ.ಸಿ.ಮಂಜುನಾಥ್‌

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.