ಟೆರ್ರಾರಿಯಮ್‌ ಗಾರ್ಡನ್‌ ಮನೆಗೆ ಶೋಭೆ


Team Udayavani, May 18, 2019, 6:00 AM IST

22

ಮನೆಯ ಮುಂದೊಂದು ಸುಂದರವಾದ ಗಾರ್ಡನ್‌ ಇರಬೇಕೆಂದು ಪ್ರತಿಯೊಬ್ಬರ ಕನಸು. ಆದರೆ ಹೆಚ್ಚಿನವರಿಗೆ ಜಾಗದ ಸಮಸ್ಯೆಯಿಂದಾಗಿ ಹೂದೋಟವನ್ನು ನಿರ್ಮಿಸಲು ಸಾಧ್ಯವಾಗುವುದಿಲ್ಲ.

ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರಿಗಂತೂ ಇದು ಕನಸಿನ ಮಾತೇ ಸರಿ. ಇದಕ್ಕೆಲ್ಲ ಪರಿಹಾರವಾಗಿ ನಗರಗಳಲ್ಲಿ ಈಗ ಹೊಸ ಟ್ರೆಂಡ್‌ ಶುರುವಾಗಿದೆ. ಟೆರ್ರಾರಿಯಮ್‌ ಗಾರ್ಡನ್‌ ತಯಾರಿಸಿ ಮನೆಯಲ್ಲಿ ಇಡುವುದರಿಂದ ಮನೆಯ ಅಂದ ಹೆಚ್ಚುವುದರ ಜತೆಗೆ ಮನೆಯಲ್ಲೊಂದು ಪ್ರಶಾಂತವಾದ ವಾತಾವಾರಣ ನೆಲೆಸುತ್ತದೆ.

ಏನಿದು ಟೆರ್ರಾರಿಯಂ ಗಾರ್ಡನ್‌
ಮನೆಯಲ್ಲಿ ಉಪಯೋಗ ಶೂನ್ಯವಾದ ಪ್ಲಾಸ್ಟಿಕ್‌ ಅಥವಾ ಗಾಜಿನ ಬಾಟಲ್ಗಳಲ್ಲಿ ಕಲ್ಲು, ಮಣ್ಣು ತುಂಬಿಸಿ ಅದರಲ್ಲಿ ಸಣ್ಣ ಗಿಡ ಅಥವಾ ಹುಲ್ಲುಗಳನ್ನು ನೆಟ್ಟು ಬೆಳೆಸುವುದನ್ನು ಟೆರ್ರಾರಿಯಂ ಗಾರ್ಡನ್‌ ಎನ್ನುತ್ತಾರೆ.

ಬಾಟಲಿಗಳಿಗೆ ಮುಚ್ಚಳವಿರುವುದು ಅಗತ್ಯವಾಗಿರುತ್ತದೆ. ಇದರಿಂದ ಆಕರ್ಷಣೆ ಹೆಚ್ಚಾಗುತ್ತದೆ. ಬಾಟಲಿಗಳಲ್ಲಿ ನೆಡಲು ಅಕ್ವೇರಿಯಂಗಳಲ್ಲಿ ಬಳಸುವಂತಹ ಗಿಡಗಳನ್ನು ಬಳಸಬೇಕು. ಇವುಗಳು ಹೆಚ್ಚು ಬೆಳವಣಿಗೆ ಹೊಂದುವುದಿಲ್ಲವಾದುದರಿಂದ ಹೆಚ್ಚು ಸೂಕ್ತವಾಗುತ್ತದೆ. ಹೀಗೆ ತಯಾರಿಸಿದ ಹೂಕುಂಡಗಳನ್ನು ಸೂರ್ಯನ ಬೆಳಕು ಹೆಚ್ಚು ಬೀಳುವ ಜಾಗದಲ್ಲಿಡಬೇಕು. ಇದು ಗಿಡದ ಬೆಳವಣಿಗೆಗೆ ಸಹಕರಿಸುತ್ತದೆ.

ಗಾರ್ಡನಿಂಗ್‌ ನಲ್ಲಿ ಆಸಕ್ತಿ ಇರುವ ಪ್ರತಿಯೊಬ್ಬರೂ ಇದನ್ನು ತಯಾರಿಸಬಹುದು. ಇಂದು ಇಂತಹ ಟೆರ್ರಾರಿಯಂ ಗಾರ್ಡನ್‌ಗಳು ಮಾರುಕಟ್ಟೆಯಲ್ಲಿ ಧಾರಾಳವಾಗಿ ಲಭಿಸುತ್ತವೆ. ಆದರೆ ಅವುಗಳಿಗಿಂತ ನಮಗೆ ಬೇಕಾಗುವಂತಹ ಗಿಡಗಳನ್ನು ಯಾವುದೇ ಖರ್ಚುವೆಚ್ಚಗಳಿಲ್ಲದೇ ಅಥವಾ ಕಡಿಮೆ ಖರ್ಚಿನಲ್ಲಿ ನಾವೇ ತಯಾರಿಸಬಹುದು.

ತಯಾರಿಸುವ ವಿಧಾನ
ಮನೆಯಲ್ಲಿ ಉಪಯೋಗ ಶೂನ್ಯವಾದ ಗಾಜು ಅಥವಾ ಪ್ಲಾಸ್ಟಿಕ್‌ ಬಾಟಲ್ನ ಒಳಗೆ ಮೊದಲು ಸ್ವಲ್ಪ ಅಲಂಕಾರಯುತವಾದ ಕಲ್ಲುಗಳನ್ನು ಹಾಕಬೇಕು. ಅದರ ಮೇಲೆ ಗಾರ್ಡನ್‌ ಮಣ್ಣು ಅಥವಾ ಫೈಬರ್‌ ಹಸ್ಕ್ನ್ನು ಹಾಕಬೇಕು. ಇದು ಗಿಡಗಳ ಬೆಳವಣಿಗೆಗೆ ತುಂಬಾ ಮುಖ್ಯವಾಗಿದೆ. ಅನಂತರ ಹೆಚ್ಚು ಬೆಳೆಯದ ಗಿಡ ಅಥವಾ ಗಾರ್ಡನ್‌ ಹುಲ್ಲುಗಳನ್ನು ತಂದು ಇದರಲ್ಲಿ ನೆಡಬೇಕು. ಪ್ರತಿದಿನ ನೀರು ಹಾಕಬೇಕು. ಅಲ್ಲಿಗೆ ಟೆರ್ರಾರಿಯಂ ಗಾರ್ಡನ್‌ ಸಿದ್ಧವಾಗುತ್ತದೆ.

ಬಾಟಲಿಗಳ ಆಕಾರಕ್ಕೆ ತಕ್ಕಂತೆ ಅವುಗಳನ್ನು ಮನೆಯ ಕೆಲವು ಸ್ಥಳಗಳಲ್ಲಿ ಜೋಡಿಸಬಹುದು. ಅಗಲವಾದ ಸಣ್ಣ ಗಾಜಿನ ಜಾರಲ್ಲಿ ಗಿಡವಿದ್ದರೆ ಅದನ್ನು ಟೀಪಾಯ್‌ನಲ್ಲಿದ್ದರೆ ಮನೆಯ ಅಂದ ಹೆಚ್ಚುತ್ತದೆ. ಉದ್ದವಾದ ಬಾಟಲಿಗಳಾಗಿದ್ದರೆ ಬಾಲ್ಕನಿಯಲ್ಲಿ ಜೋಡಿಸಬಹುದು.

  • ಸುಶ್ಮಿತಾ ಶೆಟ್ಟಿ. ಸಿರಿಬಾಗಿಲು

ಟಾಪ್ ನ್ಯೂಸ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

6-

Modi ಒಬ್ಬ ಸುಳ್ಳುಗಾರ: ಸಚಿವ ಸಂತೋಷ್ ಲಾಡ್ ಆರೋಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.