ಅರಳಿಕೆರೆ ಪುನಶ್ಚೇತನಗೊಂಡರೆ ನೀರಿಗೆ ಬರವಿಲ್ಲ…!
Team Udayavani, May 19, 2019, 6:20 AM IST
ಹೆಮ್ಮಾಡಿ: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಕಟ್ಟುವಿನಲ್ಲಿರುವ ಅರಳಿಕೆರೆಯ ಹೂಳೆತ್ತದೇ ಹಲವು ವರ್ಷಗಳೇ ಆಗಿರುವುದರಿಂದ ಈಗ ಈ ಕೆರೆ ನೀರಿಲ್ಲದೆ ಬತ್ತಿ ಹೋಗಿದೆ. ಪಂಚಾಯತ್ ಈ ಬಾರಿಯಾದರೂ ಪುನಶ್ಚೇತನಗೊಳಿಸಿದಲ್ಲಿ, ಮುಂದಿನ ವರ್ಷಕ್ಕಾದರೂ ಇದರ ಪ್ರಯೋಜನ ಆಗಬಹುದು ಎನ್ನುವುದು ಈ ಭಾಗದ ರೈತರ ಅಭಿಪ್ರಾಯ.
ಹೆಮ್ಮಾಡಿ ಗ್ರಾಮದ ಕಟ್ಟುವಿನಲ್ಲಿರುವ ಈ ಅರಳಿಕೆರೆ ಇಲ್ಲಿನ ಸುಮಾರು 60- 70ಕ್ಕೂ ಹೆಚ್ಚಿನ ರೈತರ ಕೃಷಿ ಚಟುವಟಿಕೆಗಳಿಗೆ ನೀರುಣಿಸುತ್ತಿತ್ತು. ಆದರೆ ಈ ಬಾರಿ ಜನವರಿ- ಫೆಬ್ರವರಿಯಲ್ಲೇ ನೀರಿಲ್ಲದೆ ಬರಿದಾಗಿದೆ.
ಸುಮಾರು 15ರಿಂದ 20 ಎಕ್ರೆ ಕೃಷಿ ಪ್ರದೇಶಕ್ಕೆ ಈ ಕೆರೆಯೇ ವರದಾನ. ಆದರೆ ಕಳೆದ ಹಲವು ವರ್ಷಗಳಿಂದ ಈ ಕೆರೆಯ ಹೂಳೆತ್ತದ ಕಾರಣ, ಈಗ ಬತ್ತಿಯಾಗಿದೆ.
ಪುನಶ್ಚೇತನಕ್ಕೆ ಆಗ್ರಹ
ಕಟ್ಟುವಿನಲ್ಲಿ ತೋಟ, ಸೇವಂತಿಗೆ, ಇನ್ನಿತರ ತರಕಾರಿ ಕೃಷಿಗೆ ಇದೇ ಕೆರೆಯ ನೀರು ಆಧಾರವಾಗಿತ್ತು. ಇದನ್ನೇ ನಂಬಿಕೊಂಡು ಅನೇಕ ರೈತರು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಈ ಕೆರೆಯ ಹೂಳೆತ್ತಿರುವುದು ಸುಮಾರು 10 ವರ್ಷಗಳ ಹಿಂದೆಯಾಗಿದ್ದು, ಕಳೆದ ವರ್ಷ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 1 ಲಕ್ಷ ರೂ. ಅನ್ನು ಹೆಮ್ಮಾಡಿ ಪಂಚಾಯತ್ ವತಿಯಿಂದ ಈ ಕೆರೆಯ ಹೂಳೆತ್ತಲು ಮೀಸಲಿಡಲಾಗಿತ್ತು. ಆದರೆ ಈ ಕೆರೆಯ ಬದು (ತಡೆಗೋಡೆ) ಸರಿಯಿಲ್ಲದ ಕಾರಣ, ಅದನ್ನು ಮೊದಲು ಸರಿ ಮಾಡಿಕೊಂಡು ಅನಂತರ ಹೂಳೆತ್ತುವ ನಿರ್ಧಾರ ಮಾಡಲಾಗಿತ್ತು. ಬದು ನಿರ್ಮಿಸಲು ಸುಮಾರು 4-5 ಲಕ್ಷ ರೂ. ಅಗತ್ಯವಿದ್ದು, ಈ ಕೆರೆಯ ಪುನಶ್ಚೇತನ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ.
ಕೆರೆ ಹೂಳೆತ್ತಲಿ
ಈ ಕೆರೆಯಲ್ಲಿ ನೀರಿದ್ದರೆ ಇಲ್ಲಿನ ಬಾವಿಗಳಲ್ಲಿಯೂ ನೀರು ಬತ್ತಿ ಹೋಗುವುದಿಲ್ಲ. ಆದರೆ ಈಗ ಈ ಕೆರೆಯ ನೀರು ಬತ್ತಿ ಹೋಗಿದ್ದು, ಬಾವಿಯಲ್ಲೂ ನೀರಿಲ್ಲ. ಪಂಚಾಯತ್ಗೆ ಈ ಬಗ್ಗೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಒಂದು ಬಾರಿ ಹೂಳೆತ್ತಿ, ತಡೆಗೋಡೆ ನಿರ್ಮಿಸಿದರೂ, ಅದು ಸಮರ್ಪಕವಾಗಿ ಕಾಮಗಾರಿ ನಡೆಸದ ಕಾರಣ ಕುಸಿದಿದೆ. ಈ ಬಾರಿಯಾದರೂ ಪುನಶ್ಚೇತನ ಮಾಡಲು ಮುಂದಾಗಲಿ
– ಅರುಣ್ ಕಟ್ಟು, ಕೃಷಿಕರು
ಪ್ರಸ್ತಾವನೆಯಿದೆ
ಕೆರೆಯ ಹೂಳೆತ್ತುವ ಕುರಿತು ಈ ಬಗ್ಗೆ ಈಗಾಗಲೇ ಪಂಚಾಯತ್ ವತಿಯಿಂದ ಕ್ರಿಯಾ ಯೋಜನೆಯಲ್ಲಿ ಪಟ್ಟಿ ಮಾಡಿ, ಪ್ರಸ್ತಾವನೆ ಕಳುಹಿಸಲಾಗಿದೆ. ಇನ್ನು ಸರಕಾರದ ಮಟ್ಟದಲ್ಲಿ ಇದು ಮುಂದುವರಿಯಬೇಕಾಗಿದೆ. ಈಗಾಗಲೇ ಕೆಲವು ಕೆರೆಗಳಿಗೆ ಉದ್ಯೋಗ ಖಾತರಿ ಯೋಜನೆಯಡಿ ಹೂಳೆತ್ತಲು ಅನುದಾನ ಮೀಸಲಿರಿಸಲಾಗಿದೆ.
– ಮಂಜಯ್ಯ ಬಿಲ್ಲವ, ಪಿಡಿಒ ಹೆಮ್ಮಾಡಿ ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದೊಡ್ಡಣ್ಣಗುಡ್ಡೆ: ಕ್ಷೇತ್ರದಲ್ಲಿ ಬ್ರಹ್ಮಕಲಾಶೋತ್ಸವದ ಪೂರ್ವಭಾವಿ ಕಾರ್ಯಕ್ರಮ ಸಂಪನ್ನ
ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ
SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ
Madhu Bangarappa ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ಗೆ ಗೆಲುವು
ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್; ಅಧಿಕಾರಿಗಳ ಸಭೆ ಪರಿಹಾರ ಕಾಣದೇ ಮುಂದಕ್ಕೆ
MUST WATCH
ಹೊಸ ಸೇರ್ಪಡೆ
ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಸರ್ಕಾರದ ಪರ ಮೃದು ಧೋರಣೆ ಇಲ್ಲ: ಮೃತ್ಯುಂಜಯ ಸ್ವಾಮೀಜಿ
Hasan: ಲೈಂಗಿಕ ದೌರ್ಜನ್ಯ ಪ್ರಕರಣ; 20 ದಿನಗಳ ನಂತರ ತವರಿಗೆ ಆಗಮಿಸಿದ ಎಚ್.ಡಿ.ರೇವಣ್ಣ
ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿದ್ದ ಪತ್ನಿ ಮೇಲೆ ಬ್ಲೇಡ್ನಿಂದ ಹಲ್ಲೆ ಮಾಡಿ ಪರಾರಿಯಾದ ಪತಿ
ಪತಿಯಿಂದಲೇ ಭೀಕರವಾಗಿ ಹತ್ಯೆಗೀಡಾದ ಸ್ಯಾಂಡಲ್ ವುಡ್ ನಟಿ, ಕಾಂಗ್ರೆಸ್ ಮುಖಂಡೆ
ಬಿಜೆಪಿಯವರು ಬಜೆಟ್ ಓದುವುದಿಲ್ಲ,ಅವರಿಗೆ ಎಕನಾಮಿಕ್ಸ್ ಗೊತ್ತಾಗುವುದಿಲ್ಲ: ಸಿಎಂ ಸಿದ್ದರಾಮಯ್ಯ