ಆಹಾ! ಉಪ್ಪಿನಕಾಯಿ


Team Udayavani, May 29, 2019, 11:44 AM IST

q-18

ಗಂಜಿಯೂಟಕ್ಕೆ ಸವಿಯಲು ಉಪ್ಪಿನಕಾಯಿ ಇರಲೇಬೇಕು. ನಮ್ಮ ದಕ್ಷಿಣ ಕನ್ನಡದ ಕುಚ್ಚಲಕ್ಕಿ ಗಂಜಿಗೆ ಉಪ್ಪಿನಕಾಯಿ ಇದ್ದರೆ ಸವಿಯಲು ಬಲು ರುಚಿ.

ಕಣಿಲೆ ಉಪ್ಪಿನಕಾಯಿ
ಬೇಕಾಗುವ ಸಾಮಗ್ರಿ: 2 ಕಪ್‌ ಕಣಿಲೆ ಹೋಳು, ನೆಲ್ಲಿಕಾಯಿ ಗಾತ್ರದ ಹುಳಿ, 3/4 ಚಮಚ ಅರಸಿನಪುಡಿ, 1 ಕಪ್‌ ಉಪ್ಪುನೀರು, 2 ಕಪ್‌ ಉಪ್ಪಿನಕಾಯಿ ಮೆಣಸು, 1/2 ಕಪ್‌ ಸಾಸಿವೆ, ಚಿಟಿಕೆ ಇಂಗು.

ತಯಾರಿಸುವ ವಿಧಾನ: ಎಳೆ ಕಣಿಲೆಯನ್ನು 1/2 ಅಂಗುಲ ಹೋಳುಗಳನ್ನಾಗಿ ಹೆಚ್ಚಿ ನೀರಲ್ಲಿ ಹಾಕಿಡಿ. ಮಾರನೆ ದಿನ ನೀರು ಬಸಿದು ತೊಳೆದು ಬೇರೆ 1/2 ಲೀಟರ್‌ ನೀರು ಹಾಕಿ ಚೆನ್ನಾಗಿ ಕುದಿಸಿ ನೀರು ಬಸಿದಿಡಿ. ನಂತರ ಕಣಿಲೆ ಹೋಳಿಗೆ ಹುಳಿ, 1 ಹಿಡಿ ಉಪ್ಪು, 2 ಕಪ್‌ ನೀರು ಹಾಕಿ ಚೆನ್ನಾಗಿ ಕುದಿಸಿ. ಹೋಳನ್ನು ಆರಿಸಿ ತೆಗೆಯಿರಿ. ಆರಲು ಬಿಡಿ. ಉಪ್ಪು ನೀರಲ್ಲಿ ಮೆಣಸು, ಸಾಸಿವೆ, ಇಂಗು, ಅರಸಿನ ಪುಡಿ ಸೇರಿಸಿ ನುಣ್ಣಗೆ ರುಬ್ಬಿ. ತಣಿದ ಹೋಳಿಗೆ ಬೆರೆಸಿ ಬಾಟಲಿಗೆ ತುಂಬಿಸಿ. 6 ತಿಂಗಳು ತನಕ ಕೆಡದೆ ಉಳಿಯುತ್ತದೆ.

ಮುಂಡಿಗಡ್ಡೆ ಉಪ್ಪಿನಕಾಯಿ
ಬೇಕಾಗುವ ಸಾಮಗ್ರಿ: 1 ಕಪ್‌ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿದ ಮುಂಡಿಗಡ್ಡೆ , 1/4 ಕಪ್‌ ಉಪ್ಪು , 2 ಚಮಚ ಹುಳಿರಸ, 1/2 ಕಪ್‌ ಉಪ್ಪಿನಕಾಯಿ ಹುರಿದ ಹಿಟ್ಟು.

ತಯಾರಿಸುವ ವಿಧಾನ: ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿದ ಮುಂಡಿಗಡ್ಡೆ ಚೆನ್ನಾಗಿ ತೊಳೆದು, ಬೇಯಿಸಿ. ಉಪ್ಪು , ಹುಳಿರಸ ಹಾಕಿ ಕುದಿದ ನಂತರ ಇಳಿಸಿ. ಆರಿದ ನಂತರ ಉಪ್ಪಿನಕಾಯಿ ಹುರಿದ ಹಿಟ್ಟು ಬೆರೆಸಿ ಇಡಿ. ಕೂಡಲೇ ಉಪಯೋಗಿಸಬಹುದು. ಇದು 2-3 ದಿನಗಳಿಗೆ ಮಾತ್ರ ರುಚಿ.

ಬಾಳೆದಿಂಡು ಉಪ್ಪಿನಕಾಯಿ
ಬೇಕಾಗುವ ಸಾಮಗ್ರಿ: 1 ಕಪ್‌ ಸಣ್ಣಗೆ ಹೆಚ್ಚಿದ ಬಾಳೆದಿಂಡು, 1/2 ಕಪ್‌ ಉಪ್ಪಿನಕಾಯಿ ಹುರಿದ ಹಿಟ್ಟು ಯಾ ಹಸಿಹಿಟ್ಟು, 1/4 ಕಪ್‌ ಉಪ್ಪು , 1 ಚಮಚ ಹುಳಿರಸ.

ತಯಾರಿಸುವ ವಿಧಾನ: ಬಾಳೆದಿಂಡಿನ ಹೊರಗಿನ ಸಿಪ್ಪೆ ತೆಗೆದು, ಒಳಗಿನ ಮೃದು ಭಾಗವನ್ನು ಸಣ್ಣಗೆ ಹೆಚ್ಚಿ. ಬಾಳೆದಿಂಡಿಗೆ ಉಪ್ಪು, ಹುಳಿರಸ ಹಾಕಿ ಬೇಯಿಸಿ. ನಂತರ ಹುರಿದ ಯಾ ಹಸಿಹಿಟ್ಟು ಹಾಕಿ ಬೆರೆಸಿ. ಈಗ ಬಾಳೆದಿಂಡಿನ ಉಪ್ಪಿನಕಾಯಿ ಸವಿಯಲು ಸಿದ್ಧ. ಪ್ರಿಜ್‌ನಲ್ಲಿಟ್ಟರೆ ಒಂದು ವಾರ ಬಾಳಿಕೆ ಬರುತ್ತದೆ.

ಉಪ್ಪಿನಕಾಯಿ ಹಸಿಹಿಟ್ಟು
ಬೇಕಾಗುವ ಸಾಮಗ್ರಿ: 2 ಕಪ್‌ ಕೆಂಪುಮೆಣಸಿನಕಾಯಿ (ಒಣಮೆಣಸು), 1 ಕಪ್‌ ಸಾಸಿವೆ, 1/3 ಕಪ್‌ ಅರಸಿನ, ಒಂದೂವರೆ ಕಪ್‌ ಉಪ್ಪು .

ತಯಾರಿಸುವ ವಿಧಾನ: ಸಾಸಿವೆಯನ್ನು ಶುದ್ಧೀಕರಿಸಿ ತೊಳೆದು ಬಿಸಿಲಿನಲ್ಲಿ ಒಣಗಿಸಿ. ಒಣಮೆಣಸನ್ನು ಒಣಗಿಸಿ. 1 ಪಾತ್ರೆಗೆ ಉಪ್ಪು ಹಾಕಿ 1 ಕಪ್‌ ನೀರು ಹಾಕಿ ಚೆನ್ನಾಗಿ ಕುದಿಸಿ. ಉಪ್ಪು ಕರಗಿ, ಮತ್ತೆ ಕೆನೆಯಾಗಿ ಗಟ್ಟಿಯಾಗುತ್ತಾ ಬರುವವರೆಗೆ ಕುದಿಸಿ. ಮೆಣಸು ಮತ್ತು ಸಾಸಿವೆಗೆ ಉಪ್ಪು ನೀರು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಅರಸಿನ ಪುಡಿ ಬೆರೆಸಿ. ಬಾಟಲಿಯಲ್ಲಿ ತುಂಬಿಸಿ ಭದ್ರವಾಗಿ ಮುಚ್ಚಿಡಿ. ಬೇಕಾದಾಗ ಮಾವು, ಕಣಿಲೆ, ನೆಲ್ಲಿಕಾಯಿ, ಅಂಬಟೆ, ಬಾಳೆದಂಡು, ಮುಂಡಿಗಡ್ಡೆ ಇತ್ಯಾದಿಗಳೊಂದಿಗೆ ಸೇರಿಸಿ ಉಪ್ಪಿನಕಾಯಿ ಮಾಡಬಹುದು. ನೀರು ತಾಗದಂತೆ ಜಾಗ್ರತೆ ವಹಿಸುವುದು ಬಹಳ ಮುಖ್ಯ.

ಉಪ್ಪಿನಕಾಯಿ ಹುರಿದ ಹಿಟ್ಟು
ಬೇಕಾಗುವ ಸಾಮಗ್ರಿ: 2 ಕಪ್‌ ಒಣಮೆಣಸು, 1/2 ಕಪ್‌ ಸಾಸಿವೆ, 4 ಚಮಚ ಅರಸಿನ, 2 ಚಮಚ ಮೆಂತೆ, ಚಿಟಿಕೆ ಇಂಗು, 4 ಚಮಚ ಎಣ್ಣೆ.

ತಯಾರಿಸುವ ವಿಧಾನ: ಒಂದು ಬಾಣಲೆ ಒಲೆಯ ಮೇಲಿಟ್ಟು ಸ್ವಲ್ಪ ಎಣ್ಣೆ ಹಾಕಿ ಬಿಸಿಮಾಡಿ. ಸಾಸಿವೆ, ಮೆಣಸು, ಮೆಂತೆ ಹಾಕಿ ಸ್ವಲ್ಪ ಹುರಿಯಿರಿ. ಚಟಪಟ ಸಿಡಿಯಲು ಪ್ರಾರಂಭವಾದಾಗ, ಅರಸಿನ, ಇಂಗು ಹಾಕಿ ಕೆಳಗಿಳಿಸಿ. ನಂತರ ಎಲ್ಲವನ್ನು ಒಟ್ಟಿಗೆ ಮಿಕ್ಸಿಗೆ ಹಾಕಿ ಪುಡಿ ಮಾಡಿ. ಆರಿದ ಮೇಲೆ ಬಾಟಲಿಗೆ ತುಂಬಿಸಿ ಇಡಿ. ಯಾವುದೇ ಉಪ್ಪಿನಕಾಯಿಗೆ ಈ ಹುರಿದ ಪುಡಿ ಸೇರಿಸಬಹುದು.

ನುಗ್ಗೆಕಾಯಿ ಉಪ್ಪಿನಕಾಯಿ
ಬೇಕಾಗುವ ಸಾಮಗ್ರಿ: 1 ಕಪ್‌ ಉಪ್ಪು ಹಾಕಿ ಬೇಯಿಸಿದ ನುಗ್ಗೆಕಾಯಿ, 1 ಕಪ್‌ ಒಣಮೆಣಸು, 1/4 ಕಪ್‌ ಸಾಸಿವೆ, 1 ಚಮಚ ಮೆಂತೆ, 1/2 ಚಮಚ ಜೀರಿಗೆ, 1/4 ಕಪ್‌ ಉಪ್ಪು , 3-4 ಚಮಚ ಎಣ್ಣೆ , 1/2 ಚಮಚ ಹುಳಿರಸ.

ತಯಾರಿಸುವ ವಿಧಾನ: ಬಾಣಲೆಗೆ ಎಣ್ಣೆ ಹಾಕಿ ಕೆಂಪು ಮೆಣಸು ಹಾಕಿ ಸ್ವಲ್ಪ ಹುರಿಯಿರಿ. ನಂತರ ಕೆಳಗಿಳಿಸಿ. ನಂತರ ಸಾಸಿವೆ, ಮೆಂತೆ, ಜೀರಿಗೆ ಹಾಕಿ ಹುರಿಯಿರಿ. ನಂತರ ಮಿಕ್ಸಿಗೆ ಹಾಕಿ ಪುಡಿ ಮಾಡಿ. ನಂತರ ಬೇಯಿಸಿದ ನುಗ್ಗೆಕಾಯಿಗೆ ಮಾಡಿಟ್ಟ ಪುಡಿ, ಉಪ್ಪು ನೀರು ಸ್ವಲ್ಪ ಹಾಕಿ ಸರಿಯಾಗಿ ಬೆರೆಸಿ. ನಂತರ ಸ್ವಲ್ಪ ಉಪ್ಪು ಹಾಕಿ ಬೆರೆಸಿ. ಈಗ ರುಚಿಯಾದ ನುಗ್ಗೆಕಾಯಿ ಉಪ್ಪಿನಕಾಯಿ ಸವಿಯಲು ಸಿದ್ಧ. ಪ್ರಿಜ್‌ನಲ್ಲಿಟ್ಟರೆ 10 ದಿನ ಬಳಸಬಹುದು.

ಸರಸ್ವತಿ ಎಸ್‌. ಭಟ್‌

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

earrtiyukjhg

ನೋಡಿ ಸ್ವಾಮಿ ದುಬಾರಿ ಮೀನಿನ ಕಥೆ… ಒಂದು ಕೆಜಿಗೆ 5 ಸಾವಿರದಿಂದ 17 ಸಾವಿರ..!

food recipes

ಸಿಂಪಲ್‌ ಬಿಳಿ ಕಡಲೆ ಉಪ್ಪುಕಾರಿ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

holige

ಯುಗಾದಿಯ ವಿಶೇಷ ಖಾದ್ಯ ಹೂರಣದ ಹೋಳಿಗೆ

Jolad-nucchu

ದೇಹಕ್ಕೆ ತಂಪು ಈ ಜೋಳದ ನುಚ್ಚು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.