ಸುರಕ್ಷತೆಯೇ ಮಂತ್ರ

ಡ್ಯುಎಲ್‌ ಚಾನೆಲ್‌ ಎಬಿಎಸ್‌ ಬೈಕ್‌ಗಳು

Team Udayavani, Jun 24, 2019, 5:00 AM IST

BIKE

ವಾಹನಗಳಿಗೆ ಬ್ರೇಕ್‌ ಇರುವುದು ಸಹಜ. ವೇಗವಾಗಿ ಹೋಗುತ್ತಿರುವ ವಾಹನಕ್ಕೆ ಬ್ರೇಕ್‌ ಹಾಕಿದರೆ, ತನ್ನಿಂದತಾನೇ ಬ್ರೇಕ್‌ ಲಾಕ್‌ ಆಗುತ್ತದೆ (ಹಿಡಿದಿಟ್ಟುಕೊಂಡ ರೀತಿ) ಇದರಿಂದ ಸ್ಕಿಡ್‌ ಆಗಿ ವಾಹನ ನಿಯಂತ್ರಣ ಕಳೆದುಕೊಳ್ಳುತ್ತದೆ. ಇದರಿಂದ ಅಪಘಾತ ಸಾಧ್ಯತೆ ಹೆಚ್ಚು. ಇದನ್ನು ತಪ್ಪಿಸಲು ಆವಿಷ್ಕಾರಗೊಂಡ ಒಂದು ತಾಂತ್ರಿಕ ವಿಧಾನ ಎಬಿಎಸ್‌. ಇದು ಬ್ರೇಕ್‌ ಹಿಡಿದಿಟ್ಟುಕೊಳ್ಳದಂತೆ ನೋಡಿಕೊಳ್ಳುತ್ತದೆ. ಇದಕ್ಕಾಗಿ ಎಲೆಕ್ಟ್ರಾನಿಕ್‌ ಸೆನ್ಸರ್‌ ವ್ಯವಸ್ಥೆ ಇದ್ದು, ಬ್ರೇಕ್‌ ಅನ್ನು ಹಿಡಿದು-ಬಿಟ್ಟು ಎಂಬಂತೆ ಮಾಡುತ್ತದೆ. ಇದರಿಂದ ಚಕ್ರದ ಮೇಲೆ ಒತ್ತಡ ಬೀಳದೆ ಇದ್ದು, ವಾಹನ ಸ್ಕಿಡ್‌ ಆಗುವುದನ್ನು ತಪ್ಪಿಸುತ್ತದೆ.

ರಸ್ತೆ ಅಪಘಾತ ತಡೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಂತ ಹಂತವಾಗಿ ಕಾನೂನುಗಳಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿದೆ. ಅದರಂತೆ, ಈ ಆರ್ಥಿಕ ವರ್ಷದಲ್ಲಿ 150 ಸಿ.ಸಿ. ಮೇಲ್ಪಟ್ಟ ಬೈಕ್‌ಗಳಿಗೆ ಎಬಿಎಸ್‌ (ಆ್ಯಂಟಿ ಲಾಕ್‌ ಬ್ರೇಕಿಂಗ್‌ ಸಿಸ್ಟಂ) ಹೊಂದಿರುವುದು ಕಡ್ಡಾಯವಾಗಿದೆ. ಹಾಗೆಯೇ, 150 ಸಿಸಿ ವರೆಗಿನ ಬೈಕ್‌ಗಳಿಗೆ ಕಾಂಬಿ ಬ್ರೇಕ್‌ ಸಿಸ್ಟಂ (ಒಂದು ಬ್ರೇಕ್‌ ಅದುಮಿದರೆ, ಇನ್ನೊಂದು ಬ್ರೇಕ್‌ ಕಾರ್ಯಾಚರಿಸುವಂತೆ ಇರುವ ವ್ಯವಸ್ಥೆ) ಕಡ್ಡಾಯವಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಇದು ಮಹತ್ವದ್ದು.

ಏನಿದು ಎಬಿಎಸ್‌ ವ್ಯವಸ್ಥೆ?
ವಾಹನಗಳಿಗೆ ಬ್ರೇಕ್‌ ಇರುವುದು ಸಹಜ. ವೇಗವಾಗಿ ಹೋಗುತ್ತಿರುವ ವಾಹನಕ್ಕೆ ಬ್ರೇಕ್‌ ಹಾಕಿದರೆ, ತನ್ನಿಂದತಾನೇ ಬ್ರೇಕ್‌ ಲಾಕ್‌ ಆಗುತ್ತದೆ (ಹಿಡಿದಿಟ್ಟುಕೊಂಡ ರೀತಿ) ಇದರಿಂದ ಸ್ಕಿಡ್‌ ಆಗಿ ವಾಹನ ನಿಯಂತ್ರಣ ಕಳೆದುಕೊಳ್ಳುತ್ತದೆ. ಇದರಿಂದ ಅಪಘಾತ ಸಾಧ್ಯತೆ ಹೆಚ್ಚು. ಇದನ್ನು ತಪ್ಪಿಸಲು ಆವಿಷ್ಕಾರಗೊಂಡ ಒಂದು ತಾಂತ್ರಿಕ ವಿಧಾನ ಎಬಿಎಸ್‌. ಇದು ಬ್ರೇಕ್‌ ಹಿಡಿದಿಟ್ಟುಕೊಳ್ಳದಂತೆ ನೋಡಿಕೊಳ್ಳುತ್ತದೆ. ಇದಕ್ಕಾಗಿ ಎಲೆಕ್ಟ್ರಾನಿಕ್‌ ಸೆನ್ಸರ್‌ ವ್ಯವಸ್ಥೆ ಇದ್ದು, ಬ್ರೇಕ್‌ ಅನ್ನು ಹಿಡಿದು-ಬಿಟ್ಟು ಎಂಬಂತೆ ಮಾಡುತ್ತದೆ. ಇದರಿಂದ ಚಕ್ರದ ಮೇಲೆ ಒತ್ತಡ ಬೀಳದೆ ಇದ್ದು, ವಾಹನ ಸ್ಕಿಡ್‌ ಆಗುವುದನ್ನು ತಪ್ಪಿಸುತ್ತದೆ. ಸದ್ಯ 150 ಸಿಸಿ ವರೆಗಿನ ಬೈಕ್‌ಗಳಲ್ಲಿ ಎಬಿಎಸ್‌ ಇರುವುದಾದರೂ ಸಿಂಗಲ್‌ ಚಾನೆಲ್‌ ಎಬಿಎಸ್‌ (ಒಂದೇ ಚಕ್ರಕ್ಕೆ- ಮುಂಭಾಗ ಮಾತ್ರ) ಅಳವಡಿಸಿರಲಾಗುತ್ತದೆ. ಅದಕ್ಕಿಂತ ಮೇಲ್ಪಟ್ಟ ಸಿಸಿಯ ಬೈಕ್‌ಗಳಲ್ಲಿ , ಕೆಲವುಗಳಲ್ಲಿ ಡ್ಯುಎಲ್‌ ಚಾನೆಲ್‌ ಎಬಿಎಸ್‌ ಅಳವಡಿಸಲಾಗಿದ್ದು, ಸುರಕ್ಷತೆ ದೃಷ್ಟಿಯಿಂದ ಇದು ಹೆಚ್ಚು ಸೂಕ್ತವಾಗಿವೆ.

2 ಲಕ್ಷ ರೂ. ಒಳಗಿನ ಬೈಕ್‌ಗಳು
ಹೋಂಡಾ ಸಿಬಿಆರ್‌ 250 ಆರ್‌
ಫ‌ುಲ್‌ಫೇರಿಂಗ್‌ನ ರೇಸಿಂಗ್‌ ಮಾದರಿಯ ಈ ಬೈಕ್‌ ಸುಧಾರಿತ ಆವೃತ್ತಿಯನ್ನು 2018ರಲ್ಲಿ ಹೋಂಡಾ ಬಿಡುಗಡೆ ಮಾಡಿದ್ದು, ಡ್ಯುಎಲ್‌ ಚಾನೆಲ್‌ ಎಬಿಎಸ್‌ ಹೊಂದಿದೆ. 249.6 ಸಿಸಿಯ ಈ ಬೈಕ್‌ 26.5 ಎಚ್‌ಪಿ 22.9 ಎನ್‌ಎಂ ಟಾರ್ಕ್‌ ಹೊಂದಿದೆ. ಬಿಎಸ್‌-4 ಎಂಜಿನ್‌ ಆವೃತ್ತಿ ಹೊಂದಿದೆ. ಎಲ್ಲ ಎಲ್‌ಇಡಿ ಲೈಟ್‌ಗಳನ್ನು ಹೊಂದಿದೆ. ನ್ಪೋರ್ಟ್ಸ್ ಟೂರಿಂಗ್‌ಗೆ ಈ ಬೈಕ್‌ ಅನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ.

ಬಜಾಜ್‌ ಡಾಮಿನೋರ್‌ 400
ಬಜಾಜ್‌ನ ಅತಿ ಶಕ್ತಿಶಾಲಿ ಬೈಕ್‌. 400 ಸಿಸಿಯ ಎಂಜಿನ್‌ ಹೊಂದಿದ ಡಾಮಿನಾರ್‌, 40 ಎಚ್‌ಪಿ, 35 ಎನ್‌ಎಂ. ಟಾರ್ಕ್‌ ಹೊಂದಿದೆ. ಬಿಎಸ್‌6 ಆವೃತ್ತಿಯ ಎಂಜಿನ್‌ ಹೊಂದಿದೆ. ಸಿಂಗಲ್‌ ಸಿಲಿಂಡರ್‌, ತ್ರಿಪಲ್‌ ಸ್ಪಾರ್ಕ್‌, ಸ್ಲಿಪರಿ ಕ್ಲಚ್‌, ಸಂಪೂರ್ಣ ಎಲ್‌ಇಡಿ ಲೈಟ್‌ಗಳು ಈ ಬೈಕ್‌ನ ಹೆಚ್ಚುಗಾರಿಕೆ. ಟೂರಿಂಗ್‌ ಉದ್ದೇಶಕ್ಕಾಗಿ ಈ ಬೈಕ್‌ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಎನ್‌ಫೀಲ್ಡ್‌ 350
ಅತಿ ಹೆಚ್ಚು ಮಾರಾಟವಾಗುವ ಬೈಕ್‌ ಇದು. ಹಲವಾರು ಜನರ ಕನಸು ಎನ್‌ಫೀಲ್ಡ್‌. 346 ಸಿಸಿ ಯುಸಿಇ ಎಂಜಿನ್‌, ಡ್ಯುಎಲ್‌ ಸ್ಪಾರ್ಕ್‌ ಪ್ಲಗ್‌ ವ್ಯವಸ್ಥೆ ಹೊಂದಿದ ಈ ಬೈಕ್‌ನಲ್ಲೂ ಈಗ ಎಬಿಎಸ್‌ ವ್ಯವಸ್ಥೆ ಇದೆ. ಸದ್ಯ ಎನ್‌ಫೀಲ್ಡ್‌ನ ಸ್ಟಾಂಡರ್ಡ್‌ ಆವೃತ್ತಿ ಹೊರತು ಪಡಿಸಿ ಎಲ್ಲದರಲ್ಲೂ ಡಿಸ್ಕ್ಬ್ರೇಕ್‌ ಮತ್ತು ಎಬಿಎಸ್‌ ವ್ಯವಸ್ಥೆ ಇದೆ. ಎನ್‌ಫೀಲ್ಡ್‌ನ ಇನ್ನೊಂದು ಮಾದರಿ ಥಂಡರ್‌ಬರ್ಡ್‌ ಕೂಡ, ಕಡಿಮೆ ದರಕ್ಕೆ ಡ್ಯುಎಲ್‌ ಚಾನೆಲ್‌ ಎಬಿಎಸ್‌ ಹೊಂದಿರುವ ಬೈಕ್‌ ಆಗಿದೆ.

ಅಪಾಚೆ 200
197 ಸಿಸಿಯ ಈ ಬೈಕ್‌ನಲ್ಲಿ ಟಿವಿಎಸ್‌ ಆರಂಭದಿಂದಲೇ ಡ್ಯುಎಲ್‌ ಚಾನೆಲ್‌ ಎಬಿಎಸ್‌ ಅನ್ನು ನೀಡುತ್ತಿದೆ. 4 ವಾಲ್‌Ìಗಳ ಎಂಜಿನ್‌ ಇದರಲ್ಲಿದ್ದು, 20.2 ಎಚ್‌ಪಿ ಶಕ್ತಿ, 18.1 ಎನ್‌ಎಂ ಟಾರ್ಕ್‌ ಹೊಂದಿದೆ. ಹಿಂಭಾಗ ಎಲ್‌ಇಡಿ, ಮುಂಭಾಗ ಹ್ಯಾಲೋಜನ್‌ ಲ್ಯಾಂಪ್‌ ಅನ್ನು ಇದು ಹೊಂದಿದೆ.

ಅಪಾಚೆ 180
ದೇಶದಲ್ಲಿ ಮೊದಲ ಬಾರಿಗೆ ಡ್ಯುಎಲ್‌ ಚಾನೆಲ್‌ ಎಬಿಎಸ್‌ ಹೊಂದಿದ ಬೈಕ್‌ ತಯಾರಿಸಿದ ಕೀರ್ತಿ ಸಿಕ್ಕಿದ್ದು ಟಿವಿಎಸ್‌ಗೆ. ಅದು ಅಪಾಚೆ 180 ಮೂಲಕ. ಆರಂಭದಿಂದಲೇ ಈ ಬೈಕ್‌ನಲ್ಲಿ ಎಬಿಎಸ್‌ ವ್ಯವಸ್ಥೆ ನೀಡಲಾಗುತ್ತಿತ್ತು. 177ಸಿಸಿಯ 16.6 ಎಚ್‌ಪಿಯ ಶಕ್ತಿ, 15.5 ಎನ್‌ಎಂ ಟಾರ್ಕ್‌ ಅನ್ನು ಇದು ಹೊಂದಿದೆ.

-ಈಶ

ಟಾಪ್ ನ್ಯೂಸ್

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.